WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, February 18, 2022

ಬ್ರೆಜಿಲ್‌ನಲ್ಲಿ ಭೂಕುಸಿತ 117 ಮಂದಿ ಸಾವು

ದಕ್ಷಿಣ ಅಮೆರಿಕ ಖಂಡದಲ್ಲಿರುವ ದೇಶ ಬ್ರೆಜಿಲ್ ಮಹಾಮಳೆಯಿಂದ ತತ್ತರಿಸಿದೆ. ಮಳೆಯಿಂದಾಗಿ ಭೂಕುಸಿತ ಉಂಟಾಗಿ 117 ಮಂದಿ ಮೃತಪಟ್ಟಿದ್ದಾರೆ. ಪೆಟ್ರೋಪೊಲೀಸ್ ನಗರ ವರುಣಾರ್ಭಟಕ್ಕೆ ತತ್ತರಿಸಿದ್ದು, ಅಂದಾಜಿಸಲಾಗದಷ್ಟು ಹಾನಿ ಸಂಭವಿಸಿದೆ.
ರಿಯೊ ಡಿ ಜನೈರೊ ನಗರದ ಉತ್ತರಕ್ಕಿರುವ ಪೆಟ್ರೋಪೊಲಿಸ್‌ನಲ್ಲಿ ಕನಿಷ್ಠ 60 ಮನೆಗಳು ನಾಶಗೊಂಡಿವೆ.
ಮನೆಗಳು ನಾಶಗೊಂಡಿದ್ದು, ಇಲ್ಲಿ ಸಾಕಷ್ಟು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ನಾಗರಿಕ ರಕ್ಷಣಾ ಸೇವೆಯ ಸಿಬ್ಬಂದಿ ಜನರನ್ನು ರಕ್ಷಿಸುವ ಕಾರ್ಯ ಜಾರಿಯಲ್ಲಿದೆ. ನಿನ್ನೆ ಮಧ್ಯಾಹ್ನ ಮಳೆ ಅಬ್ಬರ ತೀವ್ರಗೊಂಡಿದ್ದು, ಪೆಟ್ರೊಪೊಲಿಸ್ ನಗರವೊಂದರಲ್ಲೇ ಆರು ಸೆಂಟಿಮೀರ್ ಮಳೆ ಸುರಿದಿದೆ.
ಸುಮಾರು 700 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದು ಸ್ಥಳೀಯ ಶಾಳೆಗಳು ಮತ್ತು ಸರ್ಕಾರ ಸ್ಥಾಪಿಸಿರುವ ತಾತ್ಕಾಲಿಕ ವಸತಿ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.


kannada/kannadavahini-epaper


 

ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ. ರೇಣುಕಾಚಾರ್ಯರನ್ನು ಮಾತಲ್ಲೇ ಚಿವುಟಿದ ಬಿಎಸ್​ವೈ

ಬೆಂಗಳೂರು: ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಮ್ಮ ಆಪ್ತ ಶಾಸಕ ಎಂ.ಪಿ.ರೇಣುಕಾಚಾರ್ಯರನ್ನು ಕಿಚಾಯಿಸಿದ ಸಂಗತಿ ವಿಧಾನಸಭೆ ಮೊಗಸಾಲೆಯಲ್ಲಿ ನಡೆಯಿತು.
ಬುಧವಾರ ಕಲಾಪದ ನಡುವೆ ಯಡಿಯೂರಪ್ಪ ಮೊಗಸಾಲೆಯಲ್ಲಿ ಕುಳಿತಿದ್ದರು.
ಹಲವು ಶಾಸಕರು ಅಲ್ಲಿಗೆ ಆಗಮಿಸಿ ನಮಸ್ಕರಿಸಿ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ರೇಣುಕಾಚಾರ್ಯ ಕೂಡ ಅಲ್ಲಿಗೆ ಬಂದು ನಮಸ್ಕರಿಸಿದರು.
ರೇಣುಕಾಚಾರ್ಯರನ್ನು ಕಂಡೊಡನೆ, ಸಲುಗೆಯಿಂದ ಏನೋ ನೀನು ದಿನಾ ಒಳ್ಳೆ ಜಮೀರ್​ ಆಡಿದಂಗೆ ಆಡ್ತೀಯಲ್ಲೋ ಎಂದು ಮಾತಲ್ಲೇ ತಿವಿದರು. ರೇಣುಕಾಚಾರ್ಯ ಮಾತ್ರ ದೊಡ್ಡದಾಗಿ ನಗುತ್ತಾ ಪಕ್ಕಕ್ಕೆ ಬಂದು ನಿಂತರು. ಇತ್ತೀಚೆಗೆ ರೇಣುಕಾಚಾರ್ಯರ ಹೇಳಿಕೆ ಮತ್ತು ನಡವಳಿಕೆಯನ್ನು ಜಮೀರ್​ ಅಹ್ಮದ್​ಗೆ ಹೋಲಿಸಿ ಬಿಎಸ್​ವೈ ಚಿವುಟಿದರು.

kannada/vijayvani-epaper


 

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ : ಶಿಷ್ಯವೇತನಕ್ಕಾಗಿ ರೈತರ ಮಕ್ಕಳಿಂದ ಅರ್ಜಿ ಆಹ್ವಾನ


ಶಿವಮೊಗ್ಗ: ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, 2021-22 ನೇ ಸಾಲಿಗೆ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‍ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ(ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‍ಫರ್-ಡಿಬಿಟಿ) ಪದ್ಧತಿಯ ಮೂಲಕ ರೂ.2000/- ದಿಂದ ರೂ.11000/- ವರೆಗೆ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನದ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿರುತ್ತದೆ.
ದಿನಾಂಕ:10.12.2021 ಮತ್ತು 31-12-2021 ರ ಸರ್ಕಾರದ ಮಾರ್ಪಾಡು ಆದೇಶ ದನ್ವಯ ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ 'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಪಡೆಯಲು ಅರ್ಹರಾಗಿತ್ತಾರೆ ಮತ್ತು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಪ್ರೌಢಶಿಕ್ಷಣ (8 ರಿಂದ 10 ನೇ ತರಗತಿ ವರೆಗೆ) ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ 2021-22 ನೇ ಆರ್ಥಿಕ ವರ್ಷದಿಂದ ವಾರ್ಷಿಕವಾಗಿ ರೂ.2000/- ಗಳ ವಿಧ್ಯಾರ್ಥಿ ವೇತನ ಸೌಲಭ್ಯ ವಿsಸ್ತರಣೆ ಮಾಡಲಾಗಿದೆ.
2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಡ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಕೋರ್ಸ್‍ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ಯಾಟ್ಸ್ ಐಡಿ ಮತ್ತು ಎಫ್‍ಐಡಿ((Sats ID & FID) ಅನ್ವಯ ಅರ್ಹರನ್ನು ಗುರುತಿಸಿ ಪಾವತಿಸಲಾಗುತ್ತಿದೆ. ಆದರೆ ಇತರೆ ಎಲ್ಲಾ ಕೋರ್ಸ್‍ಗಳ ರೈತರ ಮಕ್ಕಳು ಜಾಲತಾಣ https://ssp.postmatric.karnataka.gov.in ದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೋರಿದೆ.
ವಿದ್ಯಾರ್ಥಿಯು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಿರಬೇಕು ಹಾಗೂ ತಂದೆ ಅಥವಾ ತಾಯಿಯ ರೈತರ ಗುರುತಿನ ಸಂಖ್ಯೆ(ಎಫ್‍ಐಡಿ) ಹೊಂದಿರಬೇಕು. ಎಫ್‍ಐಡಿ ನೊಂದಣಿ ಮಾಡಲು ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೋರಿದೆ.
ವಿದ್ಯಾರ್ಥಿ ವೇತನ ವಿವರ :- ಪ್ರೌಢಶಾಲೆ (8 ರಿಂದ 10 ನೇ ತರಗತಿ) ವಿದ್ಯಾರ್ಥಿನಿಯರಿಗೆ ಮಾತ್ರ ರೂ.2000/. ಪದವಿ ಮುಂಚೆ ಪಿಯುಸಿ/ಐಟಿಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರೂ.2500 ಮತ್ತು ವಿದ್ಯಾರ್ಥಿನಿಯರಿಗೆ ರೂ.3000. ಎಲ್ಲಾ ಪದವಿ ಬಿ.ಎ/ಬಿ.ಎಸ್‍ಸಿ/ಬಿ.ಕಾಂ ಇತ್ಯಾದಿ(ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ರೂ.5000/-, ವಿದ್ಯಾರ್ಥಿನಿಯರಿಗೆ ರೂ.5500/-. ಎಲ್‍ಎಲ್‍ಬಿ, ಪ್ಯಾರಾಮೆಡಿಕಲ್/ಬಿ.ಫಾರ್ಮ್/ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ರೂ.7500/- ವಿದ್ಯಾರ್ಥಿನಿಯರಿಗೆ ರೂ.8000/-. ಎಂಬಿಬಿಎಸ್/ಬಿ.ಇ/ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ರೂ.10000 ಮತ್ತು ವಿದ್ಯಾರ್ಥಿನಿಯರಿಗೆ ರೂ.11000/- ಶಿಷ್ಯವೇತನ ನೀಡಲಾಗುವುದು. ಪುನರಾವರ್ತಿತ ವಿದ್ಯಾರ್ಥಿಗಳು(ರಿಪಿಟರ್ಸ್) ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್‍ಕುಮಾರ್ ತಿಳಿಸಿದ್ದಾರೆ.

kannadanewsnow-epaper


 

Sunday, February 13, 2022

BIG NEWS: ರಾಜ್ಯಾಧ್ಯಂತ ಎಲ್ಲಾ ಶಾಲೆಗಳಲ್ಲಿ ಜಾರಿಯಾಗಲ್ಲ NEP: ಕೇವಲ 20 ಸಾವಿರ ಶಾಲೆಗಳಲ್ಲಿ ಮಾತ್ರ ಆರಂಭ

ಬೆಂಗಳೂರು: 2022-23ನೇ ಸಾಲಿನಿಂದ ರಾಜ್ಯಾಧ್ಯಂತ ಆಯ್ದ ಕೇವಲ 20 ಸಾವಿರ ಶಾಲೆಗಳಲ್ಲಿ ಮಾತ್ರವೇ ರಾಷ್ಟ್ರೀಯ ಶಿಕ್ಷಣ ನಿತಿ (NEP ) ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( Minister BC Nagesh ), ಮುಂದಿನ ಶೈಕ್ಷಣಿಕ ವರ್ಷ ರಾಜ್ಯಾಧ್ಯಂತ ಆಯ್ಕ ಕೇವಲ 20 ಸಾವಿರ ಶಾಲೆಗಳಲ್ಲಿ ಮಾತ್ರವೇ ಎನ್ ಇ ಪಿ ಜಾರಿಗೆ ತರಲು ನಿರ್ಧರಿದ್ದೇವೆ ಎಂದು ತಿಳಿಸಿದ್ದಾರೆ. ರಾಜ್ಯಾಧಅಯಂತ 60 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಸುಮಾರ್ 6 ಸಾವಿರ ಅಂಗನವಾಡಿಗಳು ಶಾಲಾ ಕೇಂದ್ರಗಳಲ್ಲಿವೆ. ಮೂರು ನಾಲ್ಕು ಸಾವಿರ ಅಂಗನವಾಡಿಗಳು, ನೂರು, ಇನ್ನೂರು ಮೀಟರ್ ದೂರದಲ್ಲಿವೆ. ಇವುಗಳ್ನು ಶಾಲೆಯೊಂದಿಗೆ ಸಂಯೋಜಿಸಿ, ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿರುವ ಖಾಸಗಿ ಶಆಲೆಗಳನ್ನೊಳಗೊಂಡಂತೆ ಎನ್‌ಇಪಿ ಜಾರಿ ಮಾಡಲಾಗುವುದು. ಈ ಬಾರಿಯ ಬಜೆಟ್ ನಲ್ಲಿ ಎನ್ ಇಬಿ ಜಾರಿಗೆ ಅನುದಾನ ನೀಡುವಂತೆಯೂ ಸಿಎಂಗೆ ಮನವಿ ಮಾಡಿರೋದಾಗಿ ತಿಳಿಸಿದರು.

kannadanewsnow-epaper