WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, April 2, 2021

PM Kisan: ರೈತರ ಖಾತೆಗೆ 8ನೇ ಕಂತು, ನಿಮ್ಮ ಖಾತೆಗೆ ಹಣ ಬಂದಿದೆಯೇ ಈ ರೀತಿ ಪರಿಶೀಲಿಸಿ

PM Kisan Samman Nidhi: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ ರೈತರ ಖಾತೆಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ. ವರ್ಗಾಯಿಸಲಾಗುತ್ತದೆ. ಪ್ರತಿ ವರ್ಷ ಸರ್ಕಾರ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ನೀಡುತ್ತದೆ, ಎರಡನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ.


    ನವದೆಹಲಿ : PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 8 ನೇ ಕಂತು ರೈತರ ಖಾತೆಗೆ ಬರಲು ಪ್ರಾರಂಭಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ಆರು ಸಾವಿರ ರೂ.ಗಳನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಇದೀಗ ಸರ್ಕಾರದಿಂದ ಈ ವರ್ಷದ ಮೊದಲ ಕಂತು/ ಪಿಎಂ ಕಿಸಾನ್ ಯೋಜನೆಯ 8 ನೇ ಕಂತು ಬಿಡುಗಡೆಯಾಗಿದ್ದು ಈ ಬಾರಿ ಒಟ್ಟು 11.66 ಕೋಟಿ ರೈತರ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ.

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ 8 ನೇ ಕಂತು ಪ್ರಾರಂಭವಾಗಿದೆ:
    ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯಡಿ ಪ್ರತಿ ವರ್ಷ ರೈತರ ಖಾತೆಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ. ವರ್ಗಾಯಿಸಲಾಗುತ್ತದೆ. ಪ್ರತಿ ವರ್ಷ ಸರ್ಕಾರ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ನೀಡುತ್ತದೆ, ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಮತ್ತು ಮೂರನೇ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ನೀವು ಸಹ ಕೃಷಿಕರಾಗಿದ್ದರೆ ಮತ್ತು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ, ನೀವು ಈ ವರ್ಷದ ಮೊದಲ ಕಂತು 2000 ರೂಪಾಯಿಗಳು ನಿಮ್ಮ ಖಾತೆಯನ್ನು ತಲುಪಿದೆಯೇ ಎಂದು ಈಗಲೇ ಪರಿಶೀಲಿಸಬಹುದು. ವಾಸ್ತವವಾಗಿ ಸರ್ಕಾರ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮ್ಮ ಹಣ ಶೀಘ್ರವೇ ನಿಮ್ಮ ಖಾತೆ ಸೇರಲಿದೆ ಎಂದರ್ಥ. ಆದ್ದರಿಂದ, ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಮೊದಲು ಪರಿಶೀಲಿಸಬೇಕು.

    ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ/ಇಲ್ಲವೇ ಎಂದು ಪರಿಶೀಲಿಸಲು ಇದು ಸುಲಭ ವಿಧಾನ:
    1. ಮೊದಲನೆಯದಾಗಿ, ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಬೇಕು.
    2. ಇಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಆಯ್ಕೆಯನ್ನು ನೋಡುತ್ತೀರಿ.
    3. ಫಾರ್ಮರ್ಸ್ ಕಾರ್ನರ್ ವಿಭಾಗದೊಳಗೆ, ಫಲಾನುಭವಿಗಳ ಪಟ್ಟಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
    4. ನಂತರ ನೀವು ಪಟ್ಟಿಯಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಮಾಹಿತಿಯನ್ನು ಆರಿಸಬೇಕಾಗುತ್ತದೆ.
    5. ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ. ಇದರ ನಂತರ, ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಲಾಗುತ್ತದೆ.

    ಇದನ್ನೂ ಓದಿ - PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ, ತಕ್ಷಣ ಹೀಗೆ ಮಾಡಿ

    ನಿಮ್ಮ ಕಂತಿನ ಸ್ಟೇಟಸ್ ಅನ್ನು ಹುಡುಕಿ :
    ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನೀವು ಕಂತಿನ ಸ್ಟೇಟಸ್ ಅನ್ನು ಸಹ ತಿಳಿಯಬಹುದು.
    > ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ಫಾರ್ಮರ್ಸ್ ಕಾರ್ನರ್ ಕ್ಲಿಕ್ ಮಾಡಿ.
    > ಫಲಾನುಭವಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
    > ಇಲ್ಲಿ ಹೊಸ ಪುಟ ತೆರೆಯುತ್ತದೆ. ಇದರಲ್ಲಿ ಆಧಾರ್ (Aadhaar), ಮೊಬೈಲ್ ಸಂಖ್ಯೆಯನ್ನು ಸೇರಿಸಿ
    > ಇದನ್ನು ಮಾಡುವುದರಿಂದ, ನಿಮ್ಮ ಕಂತಿನ ಸ್ಥಿತಿಯ ಬಗ್ಗೆ ನೀವು ಮಾಹಿತಿಯನ್ನು ಪಡೆಯುತ್ತೀರಿ.

    ಪಿಎಂ ಕಿಸಾನ್‌ಗೆ ನೋಂದಾಯಿಸುವುದು ಹೇಗೆ?
    ಈ ಯೋಜನೆಗೆ ನೀವು ಇನ್ನೂ ನೋಂದಾಯಿಸದಿದ್ದರೆ, ಅದನ್ನು ತಕ್ಷಣವೇ ಮಾಡಿ. ಏಕೆಂದರೆ ನೋಂದಣಿ ಇಲ್ಲದೆ ನಿಮಗೆ 6000 ರೂಪಾಯಿಗಳ ಸಹಾಯ ಮೊತ್ತ ಸಿಗುವುದಿಲ್ಲ. ನೋಂದಣಿ ಪ್ರಕ್ರಿಯೆಯು ತುಂಬಾ ಸುಲಭ. ನೀವು ಮನೆಯಲ್ಲಿಯೇ ಕುಳಿತು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಗಾಗಿ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ನಿಮ್ಮ ಜಮೀನಿನ ಖಾತೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರಬೇಕು. ಈ ಎಲ್ಲಾ ದಾಖಲೆಗಳು ಇದ್ದರೆ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

    ಇದನ್ನೂ ಓದಿ - PM Kisan: ಮುಂದಿನ ಕಂತು ಯಾವಾಗ ಬರಲಿದೆ! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಪರಿಶೀಲಿಸಿ

    ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವುದು ಹೀಗೆ?
    1. ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಿ
    2. ಈಗ ಫಾರ್ಮರ್ಸ್ ಕಾರ್ನರ್ ಗೆ ಹೋಗಿ.
    3. ಇಲ್ಲಿ ನೀವು 'ಹೊಸ ರೈತ ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
    4. ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
    5. ಕ್ಯಾಪ್ಚಾ ಕೋಡ್ ನಮೂದಿಸುವ ಮೂಲಕ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ
    6. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು.
    7. ಅಲ್ಲದೆ, ಬ್ಯಾಂಕ್ ಖಾತೆಯ ವಿವರಗಳು ಮತ್ತು ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
    8. ಇದರ ನಂತರ, ನೀವು ನೀಡಿರುವ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ಬಳಿಕ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
  • (ಮಾಹಿತಿ ಕೃಪೆ zee news India)

114 ನೇ ಜಯಂತ್ಯುತ್ಸವ ಆಚರಣೆ: ಶಿವಕುಮಾರ ಸ್ವಾಮೀಜಿಗೆ ಭಕ್ತಿ ನಮನ

 Prajavani

114 ನೇ ಜಯಂತ್ಯುತ್ಸವ ಆಚರಣೆ: ಶಿವಕುಮಾರ ಸ್ವಾಮೀಜಿಗೆ ಭಕ್ತಿ ನಮನ

ತುಮಕೂರು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಸ್ವಾಮೀಜಿಗಳು ಪೂಜೆ ಸಲ್ಲಿಸಿದರು


ತುಮಕೂರು: ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 114ನೇ ವರ್ಷದ ಜಯಂತಿಯನ್ನು ಸರಳವಾಗಿ ಗುರುವಾರ ಆಚರಿಸಲಾಯಿತು

ಮಠಧೀಶರಾದ ಸಿದ್ದಲಿಂಗ ಸ್ವಾಮಿಜಿ ಬೆಳಗಿನ ಜಾವವೇ ಶಿವಪೂಜೆ ನೆರವೇರಿಸಿ, ನಂತರ ಶವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ತಮ್ಮ ಗುರುವನ್ನು ನೆನೆದು ಕಣ್ಣೀರಾದರು. ಕೆಲ ಸಮಯ ಧ್ಯಾನಸ್ಥ ಸ್ಥಿತಿಯಲ್ಲಿ ನಮಿಸಿದರು. ಸ್ವಾಮೀಜಿ ಪೂಜೆ ಪೂಜೆ ಪೂರ್ಣಗೊಳಿಸಿದ ನಂತರ ಸ್ವಾಮೀಜಿಗಳು, ಭಕ್ತರು ಪೂಜೆ ಮುಂದುವರಿಸಿದರು ವಿವಿಧ ಧಾರ್ಮಿಕ ನೆರವೇರಿದವು.

ಗದ್ದುಗೆ ಪೂಜೆ ನಂತರ ರುದ್ರಾಕ್ಷೀ ಮಂಟಪದಲ್ಲಿ ಶಿವಕುಮಾರ ಸ್ವಾಮೀಜಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಿ, ಮಠದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಮಠದ ವಿದ್ಯಾರ್ಥಿಗಳು, ವಿವಿಧ ಮಠಗಳ ಸ್ವಾಮೀಜಿಗಳು, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಕಲಾ ತಂಡಗಳು ಮೆರುಗು ತಂದವು.


ಬೆಳಿಗ್ಗೆ ಹೆಚ್ಚಿನ ಸಂಖ್ಖೆಯಲ್ಲಿ ಭಕ್ತರು ಕಂಡುಬರಲಿಲ್ಲ. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಾಗತೊಡಗಿತು.ಸಂಜೆ ವೇಳೇಗೆ ಈ ಸಂಖ್ಯೇ ಮತ್ತಷ್ಟು ಹೆಚ್ಚಾಯಿತು. ಭಕ್ತರು. ಅತಿಥಿಗಳಿಗಾಗಿ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು

(ಮಾಹಿತಿ ಕೃಪೆ ಪ್ರಜಾವಾಣಿ)

Wednesday, March 31, 2021

ವೇದಗಳು ಮತ್ತು ವೇದ ಕಾಲದ ನಾಗರಿಕತೆ

 


# ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಪ್ರಚಲಿತವಿದ್ದ ಮತ್ತೊಂದು ಪ್ರಬುದ್ಧ ಜೀವನ ಕ್ರಮವೇ ವೇದಕಾಲದ ನಾಗರಿಕತೆಯಾಗಿದೆ.

# ಇದರ ಕರ್ತೃಗಳು “ಆರ್ಯರು” ಎಂದು ಹೇಳಲಾಗಿದೆ. ಆದರೆ ಆರ್ಯರು ಎಂಬುದು ಜನಾಂಗವಾಚಕ ಶಬ್ದವಲ್ಲ. ಕೇವಲ ಗೌರವ ಸೂಚಕ ಶಬ್ದ ಎಂಬ ಅಭಿಪ್ರಾಯವು ಇದೆ.
# ಇವರು ‘ಮಧ್ಯ ಏಷ್ಯಾ’ದಿಂದ ಭಾರತಕ್ಕೆ ವಲಸೆ ಬಂದವರೆಂದೂ ಹೇಳಲಾಗಿದೆ.
# ಅವರು ‘ಕೃಷಿ’ ಪ್ರಧಾನ ಕುಸುಬು ಹೊಂದಿದವರೆಂದೂ ಹೇಳಲಾಗಿದೆ.
# ವೇದಕಾಲದ ನಾಗರಿಕತೆಯ ಪೂರ್ಣ ವಿವರಣೆಯನ್ನು ‘ವೇದ’ಗಳ ಆಧಾರದಿಂದ ತಿಳಿಯಲಾಗಿದೆ. ಇವು ಪ್ರಪಂಚದ ಪ್ರಾಚೀನ ಗ್ರಂಥಗಳಾಗಿವೆ.
# ವೇದ ಎಂದರೆ”ಜ್ಞಾನ” ಎಂದರ್ಥ.
# ಒಟ್ಟು ನಾಲ್ಕು ವೇದಗಳಿವೆ. ಋಗ್ವೇದ, ಯಜುರ್ವೇದ , ಸಾಮವೇದ, ಅಥರ್ವಣವೇದ.
# ವೇದಗಳು ‘ಸಂಸ್ಕøತ’ ಭಾಷೆಯಲ್ಲಿ ರಚಿಸಲ್ಪಟ್ಟಿವೆ.

# ವೇದಕಾಲದ ಇತಿಹಾಸದ ಆಕರಗಳು
1. ಸಾಹಿತ್ಯಕ
# ಸಾಹಿತ್ಯಕ ಆಧಾರಗಳಲ್ಲಿ ಚತುರ್ ವೇದಗಳು ಬರುತ್ತವೆ.
# ವೇದ ಎಂಬುದು “ವಿದ್” ಎಂಬ ಧಾತುವಿನಿಂದ ಬಂದಿದೆ. “ವಿದ್” ಎಂದರೆ ತಿಳಿ ಎಂದರ್ಥ.
# ವೇದಗಳು ಪ್ರಾರ್ಥನೆಗಳ ಹಾಗೂ ಸ್ತೋತ್ರಗಳ ಸಮುಚ್ಚಯವಾಗಿದೆ.
# ಮೌಖಿಕವಾಗಿ ಬೆಳೆದು ಬಂದದ್ದರಿಂದ ‘ಶ್ರುತಿ’ಯೆಂದು ಕರೆಯುವರು. ನಾಲ್ಕು ವೇದಗಳನ್ನು “ಸಂಹಿತಗಳೆಂದು” ಕರೆಯುವರು.

# ನಾಲ್ಕು ವೇದಗಳು
1. ಋಗ್ವೇದ
* ಋಗ್ವೇದ 1028 ಸ್ತ್ರೋತ್ರಗಳನ್ನು ಒಳಗೊಂಡಿದೆ.
* ಹೋತ್ರಿ ಎಂಬ ಪುರೋಹಿತ ಇದನ್ನು ಹಾಡುತ್ತಿದ್ದ.
* ‘ ಗಾಯತ್ರಿ ಮಂತ್ರ’ ಋಗ್ವೇದದ ಪ್ರಮುಖ ಮಂತ್ರ.
* ಋಗ್ವೇದವನ್ನು ಪ್ರಥಮ ವೈದಿಕ ಸಾಹಿತ್ಯ ಎಂದು ಪರಿಗಣಿಸಲಾಗಿದೆ.
2. ಯಜುರ್ವೇದ
• ಇದು ಸಂಸ್ಕಾರ ವೇದವಾಗಿ ಯಜ್ಞದ ಸಮಯದಲ್ಲಿ ಉಚ್ಛರಿಸಬೇಕಾದ ಹಲವು ಮಂತ್ರಗಳನ್ನು ಹೊಂದಿತ್ತು.
• “ಅದ್ವರ್ಯ” ಎಂಬ ಪುರೋಹಿತ ಇದನ್ನು ಹಾಡುತ್ತಿದ್ದನು.
3. ಸಾಮವೇದ
• “ಸಮನ್” ಎಂಬ ಮೂಲ ಧಾತುವಿನಿಂದ ಬಂದಿದೆ.
• “ಸಮನ್” ಎಂದರೆ ಸುಮುಧರ ಗಾಯನವಾಗಿದೆ.
• ಒಟ್ಟು 1603 ಸ್ತ್ರೋತ್ರಗಳಿದ್ದವು.
• ಇದನ್ನು “ ಉದ್ಗಾತ್ರಿ” ಎಂಬ ಪುರೋಹಿತನು ಹಾಡುತ್ತಿದ್ದನು.
4. ಅಥರ್ವಣವೇದ
• ಅಥರ್ವಣವೇದ ಅಂದರೆ ‘ರುಕ್ಮಿಣ’Â ಅಥವಾ ‘ಇಂದ್ರಜಾಲದ ಜ್ಞಾನ’
• ಇದು 20 ಖಂಡಗಳಾಗಿ ಭಾಗಗೊಂಡಿದ್ದು, 711 ಸ್ತ್ರೋತ್ರಗಳನ್ನೊಳಗೊಂಡಿದೆ.

2. ಪ್ರಾಕ್ತನ ಆಧಾರಗಳು
# ಪಂಜಾಬ್, ಉತ್ತರಪ್ರದೇಶ, ಉತ್ತರ ರಾಜಸ್ಥಾನ, ಹಾಗೂ ಸಿಂಧೂ ನದಿಗಳ ದಂಡೆಗಳ ಮೇಲೆ ದೊರೆತ ಉತ್ಖನನ ಆಧಾರಗಳು ಆ ಕಾಲದ ವಸತಿಗಳನ್ನು ಹೊಂದಿವೆ.
# ನಾಲ್ಕು ವೇದಗಳ ಜೊತೆಗೆ ಇಲ್ಲಿ ಅನೇಕ ಇನ್ನಿತರ ಸಾಹಿತ್ಯಗಳು ದೊರೆತಿವೆ. ಬ್ರಾಹ್ಮಣಗಳು, ಉಪನಿಷತ್‍ಗಳು, ಅರಣ್ಯಗಳು, ಸ್ಮøತಿಗಳು, ವೇದಾಂಗಗಳು, ದರ್ಶನಗಳು, ಮತ್ತು ಉಪವೇದಗಳು
# ಪ್ರಾರಂಭದ ವೇದಕಾಲವನ್ನು “ಪೂರ್ವ ವೇದಕಾಲ” ಅಥವಾ “ಋಗ್ವೇದ ಕಾಲ “ ಎಂದು ಕರೆಯಲಾಗುತ್ತದೆ. ಅನಂತರದ ವೇದಕಾಲವನ್ನು “ ಉತ್ತರ ವೇದಕಾಲ“ ಎನ್ನುವರು.

# ಪೂರ್ವ ವೇದಕಾಲ ಅಥವಾ ಋಗ್ವೇದ ಕಾಲ
* ಋಗ್ವೇದದ ಪ್ರಕಾರ ಆರ್ಯರು ವಾಸವಾಗಿದ್ದ ಪ್ರದೇಶವನ್ನು “ಸಪ್ತ-ಸಿಂಧೂ” ಅಥವಾ ‘ಏಳು ನದಿಗಳ ನಾಡೆಂದೂ’ ಕರೆಯುತ್ತಿದ್ದರು.
* ಋಗ್ವೇದದ ಪ್ರಕಾರ ಆರ್ಯ ಎಂದರೆ “ಶ್ರೇಷ್ಠ” ಅಥವಾ ಸುಸಂಸ್ಕøತಿಯುಳ್ಳ ವಿಚಾರಯುತ ಜನ ಎಂದರ್ಥ.
* ಆರ್ಯರಿಗೆ “ಸುರ” ಮತ್ತು ಸೋಮ ಎಂಬ ಪಾನೀಯಗಳ ಪರಿಚಯವಿತ್ತು.
* ವೇದ ಕಾಲದಲ್ಲಿ ಅನೇಕ ದೇವ – ದೇವಿಯರ ಪೂಜೆಯ ಉಲ್ಲೇಖವಿದ್ದರೂ, ಮೂರ್ತಿಯಾಗಲಿ ದೇವಾಲಯವಾಗಲಿ ದೊರೆತಿಲ್ಲ.
* ಇವರ ಕಾಲದಲ್ಲಿ ಪ್ರಕೃತಿಗೆ ಸಂಬಂಧಿಸಿದ ದೇವರುಗಳ ಆರಾಧಕರಾಗಿದ್ದರು.
* “ನಿಷ್ಕಾ” ಎಂಬ ಬಂಗಾರದ ನಾಣ್ಯ ರೂಡಿಯಲ್ಲಿತ್ತು..
* ಋಗ್ವೇದದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖವಾಗಿರುವ ನದಿ “ಸರಸ್ವತಿ”.
* ಋಗ್ವೇದ ಯುಗದ ಪ್ರಮುಖ ದೇವತೆ “ಇಂದ್ರ” ಮತ್ತು “ಅಗ್ನಿ”.
* ಅದರ ಜೊತೆಗೆ ಅವರು ಸೂರ್ಯ,( ಬೆಳಕಿನ ದೇವತೆ) ಸೋಮ( ಸಸ್ಯ ದೇವತೆ) ವರುಣ( ಜಲದೇವತೆ) ಮಿತ್ರ, ಯಮ (ಮೃತ್ಯು ದೇವತೆ), ರುದ್ರ( ಉಗ್ರ ಬಿರುಗಾಳಿ ದೇವತೆ), ಪ್ರಷನ್(ವಿವಾಹ ದೇವತೆ), ದಿಶಾನ( ವೃಕ್ಷ ದೇವತೆ), ಅರಣ್ಮನಿ( ವನ ದೇವತೆ), ಇಲಾ( ಕಾಣಿಕೆ ದೇವತೆ), ದ್ಯುಹಸ್( ಸ್ವರ್ಗದ ಅಧಿದೇವತೆ), ಅಶ್ವಿನಿ ಮುಂತಾದವನ್ನು ಆರಾಧಿಸುತ್ತಿದ್ದರು.
* ಋಗ್ವೇದ ಕಾಲದ ರಾಜ್ಯದ ಮುಖ್ಯಸ್ಥ – “ರಾಜನ್”
* ಋಗ್ವೇದ ಕಾಲದಲ್ಲಿ ಆಡಳಿತದ ಭಾಗಗಳು- ಸಭಾ ಮತ್ತು ಸಮಿತಿ, ವಿಧಾತಾ ಮತ್ತು ಗಣ. ಇವುಗಳಲ್ಲಿ ಸಭಾ ಮತ್ತು ಸಮಿತಿ ಪ್ರಮುಖ ಆಡಳಿತ ಭಾಗಗಳು.
* ಋಗ್ವೇದ ಕಾಲದ ತೆರಿಗೆಯ ಹೆಸರು –“ ಬಲಿ”
* ಋಗ್ವೇದ ಕಾಲದಲ್ಲಿ ಬೇಸಾಯ ಪ್ರಮುಖ ವೃತ್ತಿಯಾಗಿತ್ತು. “ ಪಶು ಸಂಗೋಪನೆ” ಪೂರಕ ವೃತ್ತಿಯಾಗಿತ್ತು.
* ಅವರ ಆಹಾರ ಬಾರ್ಲಿ, ಅಕ್ಕಿ, ಮೀನು ಮಾಂಸಗಳನ್ನು ಒಳಗೊಂಡಿತ್ತು.
* ಕಬ್ಬಿಣ ಮುಂತಾದ ಲೋಹಗಳ ಉಪಯೋಗವನ್ನು ಅವರು ಅರಿತಿದ್ದರು.
* ವೃತ್ತಿಗಳಲ್ಲಿ ವೈದ್ಯಕೀಯ ಮತ್ತು ಪುರೋಹಿತ ವೃತ್ತಿಗಳು ಮುಖ್ಯವಾಗಿದ್ದವು. ಯಾರು ಯಾವ ವೃತ್ತಿಯನ್ನಾದರೂ ಮಾಡಬಹುದಿತ್ತು.
* ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಲಾಗಿತ್ತು.
* ಹಸುಗಳ (ಗೋಧನ)ಸಂಖ್ಯೆಯ ಆಧಾರದ ಮೇಲೆ ಆ ಕಾಲದ ಸಂಪತ್ತನ್ನು ಅಳೆಯಲಾಗುತ್ತಿತ್ತು. ಗೋವುಗಳನ್ನು ಕೊಲ್ಲಬಾರದು ಎಂಬ ನಂಬಿಕೆಯಿತ್ತು.
* ಗೋವುಗಳ ನಂತರ ಕುದುರೆಗೆ ಪ್ರಾಶಸ್ತ್ಯವಿತ್ತು. ರಥವನ್ನು ಎಳೆಯಲು ಕುದುರೆಗಳನ್ನು ಬಳಸುತ್ತಿದ್ದರು.
* ಈ ಕಾಲದಲ್ಲಿ ಯಜ್ಞಗಳ ಆಚರಣೆ ಸರಳವಾಗಿತ್ತು.
# ಸೃಷ್ಟಿಕರ್ತನ ವಿವಿಧ ಅಂಗಗಳಿಂದ ಉಗಮಿಸಿದವರು
* ಬಾಯಿಂದ- ಬ್ರಾಹ್ಣಣ
* ತೋಳುಗಳಿಂದ – ಕ್ಷತ್ರಿಯ
* ತೊಡೆಗಳಿಂದ -ವೈಶ್ಯ
* ಪಾದಗಳಿಂದ – ಶೂದ್ರ
 *ಉತ್ತರ ವೇದಕಾಲ ಅಥವಾ ಋಗ್ವೇದದ ನಂತರದ ವೇದಗಳ ಕಾಲ

* ಋಗ್ವೇದದ ನಂತರದ ತ್ರಿವೇದಗಳು ಭಾರತದ ಮೂರು ಪ್ರದೇಶದ ಮುಖ್ಯ ವಿಭಾಗಗಳನ್ನು ಹೇಳಿದೆ. ಅವುಗಳುಸ ಉತ್ತರ ಭಾರತ, ಮಧ್ಯ ಬಾರತ, ದಕ್ಷಿಣ ಭಾರತ.
* ಉತ್ತರ ವೇದಕಾಲದಲ್ಲಿ ಜೀವನ ಕ್ರಮದಲ್ಲಿ ಬದಲಾವಣೆಗಳಾದವು. ವೇದಕಾಲದ ಪಂಗಡಗಳು ಹಂತಹಂತವಾಗಿ ಗಂಗಾ ಯಮುನಾ ನದಿ ಬಯಲಿಗೆ ವಲಸೆಹೋದವು. ಅವರು ಪೂರ್ವ ರಾಜಸ್ಥಾನ, ಪೂರ್ವ ಉತ್ತರಪ್ರದೇಶ, ಉತ್ತರ ಬಿಹಾರಕ್ಕೆ ವಿಸ್ತರಣಗೊಂಡರು.
* ಉತ್ತರ ವೇದಕಾಲದ ರಾಜರು ತಮ್ಮ ರಾಜ್ಯವನ್ನು ವಿಸ್ತರಿಸಲು ಬಯಸಿದರು. ಅವರು ‘ಸಾಮ್ರಾಟ್’, ಚಕ್ರವರ್ತಿಗಳೆಂಬ ಬಿರುದುಗಳನ್ನು ಧರಿಸತೊಡಗಿದರು.
* ಕಾಲಕ್ರಮೇಣದಲ್ಲಿ ಸಮಾಜದಲ್ಲಿ ವೃತ್ತಿ ಆಧಾರಿತ ಬ್ರಾಹ್ಮಣ (ಪುರೋಹಿತ), ಕ್ಷತ್ರಿಯ( ರಾಜ ಮತ್ತು ಸೈನಿಕ), ವೈಶ್ಯ( ವ್ಯಾಪಾರಿ ಮತ್ತು ಕೃಷಿಕ), ಶೂದ್ರ( ಊಳಿಗದವರು). ಎಂಬ ನಾಲ್ಕು ವರ್ಣಗಳಿದ್ದವು. ಇದನ್ನು “ ವರ್ಣವ್ಯವಸ್ಥೆ” ಎನ್ನುವರು. ವರ್ಣವ್ಯವಸ್ಥೆ ಋಗ್ವೇದ ಕಾಲಕ್ಕಿಂತ ಕಟ್ಟುನಿಟ್ಟಾಗಿತ್ತು.
* ಕಾಲಾಂತರದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ ಕಡಿಮೆಯಾಯಿತು. ಸ್ತ್ರೀಯರಿಗೆ ಅಷ್ಟೋಂದು ಸ್ವಾತಂತ್ರರವಿರಲಿಲ್ಲ. ಗಂಡು ಸಂತಾನವೇ ತಮ್ಮ ಉನ್ನತಿಗೆ ಸಾಧನವೆಂಬ ಭಾವನೆ ಅವರಲ್ಲಿತ್ತು.
* ಕುಟುಂಬ ಅಥವಾ ಕುಲ ಸಾಮಾಜಿಕ ವ್ಯವಸ್ಥೆಯ ಮೂಲವಾಗಿತ್ತು.
* ಉತ್ತರ ವೈದಿಕ ಕಾಲದಲ್ಲಿ “ಪ್ರಜಾಪತಿ” (ಸೃಷ್ಟಿಕರ್ತ) ಆರಾಧಿಸುತ್ತಿದ್ದರು. ರುದ್ರ (ಶಿವ), ವಿಷ್ಣು ( ವಿಶ್ವರಕ್ಷಕ)ಅವರು ಆರಾಧಿಸುವ ಪ್ರಮುಖ ದೇವತೆಗಳಾಗಿದ್ದವು.
* ಪಶು ಸಂಗೋಪನೆ ಪ್ರಮುಖ ಕಸುಬಾಗಿತ್ತು.
* ಕುಶಲ ಕಸುಬುಗಳಾದ ಮರಗೆಲಸ, ಲೋಹಗಾರಿಕೆ, ನೇಯ್ಗೇ, ಮಡಕೆ ತಯಾರಿಕೆ, ಋಗ್ವೇದ ಕಾಲದಿಂದ ಬಳಕೆಯಲ್ಲಿತ್ತು.
* ಕಮ್ಮಾರ- ಆಯಾಸ್, ಅಕ್ಕಸಾಲಿಕ -ಹಿರಣ್ಯಕಾರ, ಕ್ಷೌರಿಕ- ವ್ಯಾಪ್ತ್ರಿ, ವೈದ್ಯ – ಬೀಷಿಕ ಎಂದು ಕರೆಯುತ್ತಿದ್ದರು.
* ಸಂಪತ್ತಿನ ಮೌಲ್ಯವಾದ ದನಗಳು ವ್ಯಾಪಾರ ವಿನಿಮಯದ ಮೂಲವಾಗಿದ್ದವು.
* ವಸ್ತು ವಿನಿಮಯ ವ್ಯಾಪರವೇ ಹೆಚ್ಚು ಪ್ರಚಲಿತದಲ್ಲಿತ್ತು.
* ಭತ್ತ ( ವ್ರಿಹಿ), ಬಾರ್ಲಿ( ಯವ), ದ್ವಿದಳ ಧಾನ್ಯಗಳು, ಎಳ್ಳು(ತಿಲ) ಮತ್ತು ಗೋಧಿಯನ್ನು ( ಗೋದಾಮ) ಬೆಳೆಯುತ್ತಿದ್ದರು. ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿತ್ತು.
* ಗಾರ್ಗಿ ಮತ್ತು ಮೈತ್ರೇಯಿ ಈ ಕಾಲದ ಶ್ರೇಷ್ಠ ವಿದ್ವಾಂಸರಾಗಿದ್ದರು..
* ಆಶ್ರಮ ಅಥವಾ ಜೀವನದ ಹಂತಗಳು-
1. ಬ್ರಹ್ಮಚರ್ಯ
2. ಗೃಹಸ್ಥ
3. ವಾನಪ್ರಸ್ಥ
4. ಸನ್ಯಾಸ
* ನಾಲ್ಕನೇ ಆಶ್ರಮ “ ಸನ್ಯಾಸ” ಉತ್ತರ ವೈದಿಕ ಕಾಲದಲ್ಲಿ ಹೆಚ್ಚು ಪ್ರಚಲಿತವಾಯಿತು.

ಲಾಲಿ ಸುವ್ವಾಲಿ ಹಾಡೆನ್ನ ಲಾಲಿ

 


           👉
ಹೋ ಹೋ ಹೋ ಹೋ ಹೋಹೋ
ಹೊಹೋ ಹೊಹೋ ಹೋಹೋಹೊ
ರೆ ರೆ ರೇ ನಾ
ರೆ ರೆ ರೆ ರೇ ನಾ
ರೆ ರೆ ರಾ
ರೆರೇ ನಾ...
ಲಾಲಿ ಸುವ್ವಾಲಿ
ಹಾಡೆನ್ನ ಲಾಲಿ
ನನ್ನಾ ಚೆಲುವಿಗೆ
ಸೊಗಸಾದ ಲಾಲಿ
ಮನಕೆ ಮುಗಿಲಿನ ---
ರಾಜಾ ಕುಮಾರಿ
ಕನಸಾಗೆ ಬರುವೆನ--
ಕೇಳೇ ಚಿಂಗಾರಿ
ಲಾಲಿ ಸುವ್ವಾಲಿ
ಹಾಡೆನ್ನ ಲಾಲಿ
ನನ್ನಾ ಚೆಲುವಿಗೆ
ಸೊಗಸಾದ ಲಾಲಿ
***** 
ಒಂದೂ ಮಾತಾಡೋ
ಹೂವಕಂಡೆ ನಾನೂ
ಬಾಡದಂತ ಪ್ರೀತಿಯ
ಕೊಡು ನೀನು...
ನಿನ್ನ ಮನಸಾಗೆ
ಎಲ್ಲಾ ಬರಿ ಜೇನು
ಇನ್ನು ಇದಕಿನ್ನ
ದೊಡ್ಡದಲ್ಲ ಏನು
ನನ್ನ ಬಾಳ
ಸಂತೋಷವೆಲ್ಲ ನೀನೆ
ನನ್ನ ಹಾಡು
ಸಂಗೀತವೆಲ್ಲ ನೀನೆ
ನನ್ನೂಸಿರು ಪ್ರಾಣ ಬದುಕು
ಎಲ್ಲಾ ನೀನಮ್ಮ
ನನ್ನಾಸೆ ಕನಸ ಉಳಿಸೊ
ಜೀವ ನೀನಮ್ಮ
ನಿದಿರೆಯ ದೇವಿ
ಹಾಡ್ಯಳೇ ಲಾಲಿ
ಹಾಯಾಗಿ ಮಲಗೆ
ಜೋಗುಳ ಕೇಳಿ
*
ಯಾವ ಜನುಮದ
ಬಂಧ ನಮ್ಮ ಜೋಡಿ
ನಾನು ನಿನ್ನಾ
ನಿ ನನ್ನಾ ಜೀವ ನಾಡಿ
ಹೋ" ಮೇಲೆ ಮುಕ್ಕೋಟಿ ದೈವ
ಒಮ್ಮೆ ನೋಡಿ
ತುಂಬು ಹರೈಸಿವರೂ
ಶುಭಾ ಹಾಡಿ
ಕಣ್ಣಾ ಮುಂದೆ ಸೌಭಾಗ್ಯ
ಅಂದ್ರೆ ನೀನೇ
ಪ್ರೀತಿ ಧಾರೆ ದೇವತೆ
ನಂಗೆ ನೀನೆ
ಕೊನೆವರೆಗೂ ಉಳಿಯೋ ಆಸ್ತಿ
ಪ್ರೀತಿ ಒಂದೆನೇ
ಅದನೆಂದೂ ಕಾಯಬೇಕು
ನಿತ್ಯಾ ಹಿಂಗೇನೆ
ಲಾಲಿ ಸುವ್ವಾಲಿ ಹಾಡೆನ್ನ
ಲಾಲಿ
ನನ್ನಾ ಚೆಲುವಿಗೆ
ಸೊಗಸಾದ ಲಾಲಿ
ಮನಕೆ ಮುಗಿಲಿನ
ರಾಜಾ ಕುಮಾರಿ
ಕನಸಾಗೆ ಬರುವೆನ
ಕೇಳೇ ಚಿಂಗಾರಿ
ಲಾಲಿ ಸುವ್ವಾಲಿ
ಹಾಡೆನ್ನ ಲಾಲಿ
ನನ್ನಾ ಚೆಲುವಿಗೆ
ಸೊಗಸಾದ ಲಾಲಿ
*****

ಇನ್​ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿ ಮದ್ವೆ ಬಳಿಕ ಆತ್ಮಹತ್ಯೆಯಲ್ಲಿ ಅಂತ್ಯ! ಇದು ಯುವತಿಯ ಕಣ್ಣೀರ ಕತೆ

 

ಹೈದರಾಬಾದ್​: ಪ್ರೀತಿ ಮತ್ತು ಮದುವೆ ಹೆಸರಿನಲ್ಲಿ ಪ್ರಿಯಕರನಿಂದ ಮೋಸ ಹೋದ ಯುವತಿ ತಂದೆಗೆ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಐಶ್ವರ್ಯಾ (25) ಮೃತ ಯುವತಿ. ಸೂರ್ಯಪೇಟ್​ ಮೂಲದ ಐಶ್ವರ್ಯಾ, ಖಾಸಗಿ ಕಂಪನಿಯೊಂದರ ಉದ್ಯೋಗಿ ಆಗಿದ್ದಳು. ಇನ್​ಸ್ಟಾಗ್ರಾಂ ಮೂಲಕ ಮಿಯಾಪುರ್​ ಮೂಲದ ಆಶಿರ್​ ಕುಮಾರ್​ (26) ಎಂಬಾತನ ಪರಿಚಯ ಆಗಿತ್ತು. ಆಶಿರ್​ ಖೈರಾತಬಾದ್​ನ ಖಾಸಗಿ ಕಂಪನಿಯ ಉದ್ಯೋಗಿ.

ಸ್ನೇಹದ ಹೆಸರಿನಲ್ಲಿ ಐಶ್ವರ್ಯಾಳನ್ನು ಆಶಿರ್​ ಪರಿಚಯ ಮಾಡಿಕೊಂಡಿದ್ದಾನೆ. ನಂತರದ ದಿನಗಳಲ್ಲಿ ಇಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಅಲ್ಲದೆ, ಪಾಲಕರಿಗೆ ತಿಳಿಸದೇ ಇಬ್ಬರು ಕಳೆದ ವರ್ಷ (2020) ದೇವಸ್ಥಾನವೊಂದರಲ್ಲಿ ಮದುವೆ ಸಹ ಆಗಿದ್ದರು. ಬಳಿಕ ಇಬ್ಬರು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

ಹೀಗಿರುವಾಗ ಇಬ್ಬರ ಮದುವೆ ವಿಚಾರ ಮನೆಯವರಿಗೆ ತಿಳಿದಿದೆ. ಮೊದಲು ಜೀವನದಲ್ಲಿ ಸಶಕ್ತರಾಗಿ ಎಂದು ಇಬ್ಬರಿಗು ಬುದ್ಧಿವಾದ ಹೇಳಿ ತಮ್ಮ ತಮ್ಮ ಮನೆಗೆ ಕರೆದೊಯ್ದಿದ್ದರು. ಇತ್ತ ಆಶಿರ್​ ಮನೆಯಲ್ಲಿ ಮನವೊಲಿಸಿಬಿಡುತ್ತಾರೆ ಎಂಬ ಭಯದಲ್ಲೇ ಐಶ್ವರ್ಯಾ ಇದ್ದಳು. ಇತ್ತ ತನ್ನ ಮತ್ತೊಂದು ಮುಖವಾಡ ತೋರಿದ ಆಶಿರ್​ ಕೆಲಸವನ್ನು ಬಿಟ್ಟು ಆಕೆಯನ್ನು ನಿರ್ಲಕ್ಷಿಸಲು ಶುರು ಮಾಡಿದ.

ಅನೇಕ ದಿನಗಳವರೆಗೆ ಐಶ್ವರ್ಯಾಳನ್ನು ಆಶೀರ್​ ನಿರ್ಲಕ್ಷಿಸಿದ್ದಾನೆ. ಈ ಮಧ್ಯೆ ಗರ್ಭಿಣಿಯಾಗಿದ್ದ ಐಶ್ವರ್ಯಾಳಿಗೆ ಗರ್ಭಪಾತವಾಗಿ ತೀವ್ರವಾಗಿ ನೊಂದಿದ್ದಳು. ಈ ವಿಚಾರ ಆಶೀರ್​ಗೂ ತಿಳಿದಿತ್ತು. ಬಂಜಾರ ಹಿಲ್ಸ್​ನ ರಸ್ತೆ ನಂಬರ್​ 5ರ ಪಿಜಿಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಸುಮಾರು 20 ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಐಶ್ವರ್ಯಾ, ಆಶೀರ್​ಗೆ ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದಳು. ಮಾರ್ಚ್​ 28ರ ಭಾನುವಾರ ಆಕೆ ಮಿಯಾಪುರ್​ನಲ್ಲಿರುವ ಆಶೀರ್​ ಮನೆಗೆ ತೆರಳಿದಳು. ಆದರೆ, ಆಶೀರ್​ ತಾಯಿ ಎಲ್ಲವನ್ನು ಇತ್ಯರ್ಥಗೊಳಿಸಲು ಬಲವಂತ ಮಾಡಿದಳು. ಅಲ್ಲದೆ, ಐಶ್ವರ್ಯಾಗೆ ಕಿರುಕುಳ ನೀಡಿದರು. ತುಂಬಾ ನೋವಿನಿಂದ ಪಿಜಿಗೆ ಮರಳಿದ ಐಶ್ವರ್ಯಾ, ದುಡುಕಿನ ನಿರ್ಧಾರ ತೆಗೆದುಕೊಂಡಳು.

ಮಾರ್ಚ್​ 30ರ ಸೋಮವಾರ ರಾತ್ರಿ ಐಶ್ವರ್ಯಾ ಪಿಜಿಯ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಅದಕ್ಕೂ ಮುನ್ನ ತನ್ನ ತಂದೆ, ಸಹೋದರ ಮತ್ತು ಪತಿ ಆಶೀರ್​ಗೂ ಪ್ರತ್ಯೇಕವಾಗಿ ಸೆಲ್ಫಿ ವಿಡಿಯೋ ರೆಕಾರ್ಡ್​ ಮಾಡಿ ಕಳುಹಿಸಿದ್ದಾಳೆ. ವಿಡಿಯೋ ನೋಡಿ ಶಾಕ್​ ಆದ ತಂದೆ, ತಕ್ಷಣ ಮಗಳಿಗೆ ಕರೆ ಮಾಡಿದ್ದಾರೆ. ಸ್ವೀಕರಿಸದಿದ್ದಾಗ ಕೊನೆ ಅವಳಿದ್ದ ಕೋಣೆಗೆ ತೆರಳಿ ನೋಡಿದಾಗ ಎಲ್ಲವು ಬಹಿರಂಗವಾಗಿದೆ.

ಅಪ್ಪ ನನ್ನನ್ನು ಕ್ಷಮಿಸಿ.. ನಾನು ತುಂಬಾ ಕಲ್ಪನೆ ಮಾಡಿಕೊಂಡಿದ್ದೆ… ಆತ ನನಗೆ ಮೋಸ ಮಾಡಿದ.. ಇದನ್ನು ನನ್ನಿಂದ ತಡೆದುಕೊಳ್ಳಲು ಆಗಲಿಲ್ಲ…ನಾನು ನಿಮ್ಮಿಂದ ಬಹು ದೂರ ಹೋಗುತ್ತಿದ್ದೇನೆಂದು ಸೆಲ್ಫಿ ವಿಡಿಯೋ ಮಾಡಿ ಐಶ್ವರ್ಯಾ ತಂದೆಗೆ ಕಳುಹಿಸಿದ್ದಾಳೆ.

ಮಗಳನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಪ್ರೀತಿಸಿ ಮದುವೆಯಾಗಿ ಬಳಿಕ ಮೋಸ ಮಾಡಿ ಮಗಳಿಗೆ ಮೋಸ ಮಾಡಿದ ಆಶೀರ್​ ಮೇಲೆ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)


(ಮಾಹಿತಿ ಕೃಪೆ ವಿಜಯವಾಣಿ)

ಸಿಡಿ ಲೇಡಿಗೆ ವೈದ್ಯಕೀಯ ತಪಾಸಣೆಗೆ ಸಿದ್ಧತೆ

 

ಬೆಂಗಳೂರು: ಸಿಡಿ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ವಿಚಾರಣೆಗೆ ಹಾಜರಾದ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಎಲ್ಲ ಸಿದ್ಧತೆಗಳೂ ನಡೆದಿದೆ.

ಮೊದಲು ಯುವತಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಗೆ ಒಳಪಡಿಸಬಹುದು. ನಂತರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲು ವಿಕ್ಟೋರಿಯಾ ಆಸ್ಪತ್ರೆ‌ಗೆ ಕರೆತರುವ ಸಾಧ್ಯತೆಗಳಿವೆ. ಜತೆಗೆ ಯುವತಿಯ ಧ್ವನಿ ಪರೀಕ್ಷೆ ನಡೆಸಲು ಎಸ್‌ಐಟಿ ಮುಂದಾಗಿದೆ. ಇದೀಗ ಯುವತಿ 11.30ಕ್ಕೆ ಆಡುಗೋಡಿ ಟೆಕ್ನಿಕಲ್ ‌ವಿಭಾಗಕ್ಕೆ ವಿಚಾರಣೆಗೆ ಹಾಜರಾದ ಬಳಿಕ ಎಸ್‌ಐಟಿ ಮುಂದಿನ ನಡೆ ಏನು ಎಂಬುದು ಗೊತ್ತಾಗಲಿದೆ.

ಮಂಗಳವಾರ ಸಂತ್ರಸ್ತೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿದ್ದು, ನಂತರ ಎಸ್​ಐಟಿ ಅಧಿಕಾರಿಗಳು ಯುವತಿಯನ್ನ ಆಡುಗೋಡಿಯ ಟೆಕ್ನಿಕಲ್ ಸೆಲ್​ಗೆ ಕರೆದೊಯ್ದು ಸಿಆರ್​ಪಿಸಿ 161 ಅಡಿ ಹೇಳಿಕೆಗಳನ್ನ ಪಡೆದಿದ್ದರು.

ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತೆಗೆ ನೋಟಿಸ್ ನೀಡಲಾಗಿದೆ. ಮಂಗಳವಾರ ಯುವತಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಿರಲಿಲ್ಲ.

28 ದಿನಗಳ ಬಳಿಕ ಅಜ್ಞಾತವಾಸದಿಂದ ಯುವತಿ ಹೊರ ಬಂದಿದ್ದಾಳೆ. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ಸೌಮೇಂದು ಮುಖರ್ಜಿ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿ ಕುಮಾರ್ ಸಮ್ಮುಖದಲ್ಲಿ ಪ್ರಕರಣದ ತನಿಖಾಧಿಕಾರಿ ಕವಿತಾ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

(ಮಾಹಿತಿ ಕೃಪೆ ವಿಜಯವಾಣಿ)           

BIG NEWS: ಏರ್ ಪೋರ್ಟ್ ನಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನ- ಚಾಲಕ ಸಾವು

 

ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಟ್ಯಾಕ್ಸಿ ಚಾಲಕನೊಬ್ಬ ಮನನೊಂದು ಏರ್ ಪೋರ್ಟ್ ನಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೊರೊನಾ ಲಾಕ್ ಡೌನ್ ಬಳಿಕ ದಿನಕ್ಕೆ 300 ರೂಪಾಯಿ ಸಂಪಾದನೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕೂಡ ಅಸಾಧ್ಯವಾಗಿತ್ತು. ತೀವ್ರವಾಗಿ ಮನನೊಂದ ಚಾಲಕ ಏರ್ ಪೋರ್ಟ್ ಪಿಕ್ ಅಪ್ ಪಾಯಿಂಟ್ ನಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಕ್ಷಣ ಆತನನ್ನು ತಡೆದ ಏರ್ ಪೋರ್ಟ್ ಸಿಬ್ಬದಿಗಳು ಆಸ್ಪತ್ರೆಗೆ ದಾಖಲಿಸಿದ್ದರು.

ದೇಹದ ಶೇ.70ರಷ್ಟು ಭಾಗ ಸುಟ್ಟು ಹೋಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇದೀಗ ಚಾಲಕ ಸಾವನ್ನಪ್ಪಿದ್ದಾನೆ. ಮೃತನನ್ನು ಪ್ರತಾಪ್ ಎಂದು ಗುರುತಿಸಲಾಗಿದೆ. ಪ್ರತಾಪ್ ಕಳೆದ 10 ವರ್ಷಗಳಿಂದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಏರ್ ಪೋರ್ಟ್ ನ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.

(ಮಾಹಿತಿ ಕೃಪೆ ಕನ್ನಡ ದುನಿಯಾ)

ಕರಡಿ ದಾಳಿ: ಏಳು ಜನರಿಗೆ ಗಾಯ - ಸೆರೆ ಹಿಡಿಯಲು ಹರಸಾಹಸ

 

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಭಾನುವಾರ ತಪ್ಪಿಸಿಕೊಂಡಿದ್ದ ಕರಡಿ ಮಂಗಳವಾರ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು, ಏಳಕ್ಕೂ ಹೆಚ್ಚು ಜನರನ್ನು ಪರಚಿ ಗಾಯಗೊಳಿಸಿದೆ.

ಮಹಿಳೆ, ವೃದ್ಧ, ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್‌ ಸೇರಿದಂತೆ ಏಳು ಜನರು ಗಾಯಗೊಂಡಿದ್ದು, ಬನ್ನೇರುಘಟ್ಟದ ಉದ್ಯಾನದ ಸುತ್ತಮುತ್ತ ಕರಡಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಮಂಗಳವಾರ ಬೆಳಗಿನ ಜಾವ 3ಗಂಟೆಗೆ ಕಾಚನಾಯಕನಹಳ್ಳಿ ಕಾರ್ಖಾನೆಯೊಂದರ ಬಳಿ ಕಾಣಿಸಿಕೊಂಡ ಕರಡಿ ಅಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಿದೆ. ಕರಡಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರಾಷ್ಟ್ರೀಯ ಹೆದ್ದಾರಿ ದಾಟಿ ಚಂದಾಪುರದ ಕೆಇಬಿ ಕಚೇರಿ ಬಳಿ ಕೆಲಹೊತ್ತು ಸುತ್ತಾಡಿದ ಬಳಿಕ ಶೆಟ್ಟಿಹಳ್ಳಿಯಲ್ಲಿ ನಾಲ್ವರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.

ಬೆಳಗಿನ ಜಾವ ತಟ್ನಹಳ್ಳಿಯಲ್ಲಿ ನಾರಾಯಣರೆಡ್ಡಿ ಎಂಬ ವೃದ್ಧ ಮತ್ತು ಬಿಹಾರ ಮೂಲದ ಸುಹಾಲ್‌ ಎಂಬುವರನ್ನು ಕಚ್ಚಿ ಗಾಯಗೊಳಿಸಿದೆ. ಇಲ್ಲಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕರಡಿ ಕಾಣಿಸಿಕೊಂಡಿದೆ. ತಕ್ಷಣ ಇಲಾಖೆಯ ಆರು ತಂಡ ತಟ್ನಹಳ್ಳಿ, ಮಾಯಸಂದ್ರ, ಸಮಂದೂರು, ಶೆಟ್ಟಿಹಳ್ಳಿ ಸೇರಿದಂತೆ ವಿವಿಧ ಕಡೆ ಕರಡಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿವೆ. ವಲಯ ಅರಣ್ಯಾಧಿಕಾರಿಗಳಾದ ಕೃಷ್ಣ, ಗಣೇಶ್‌, ವೈದ್ಯಾಧಿಕಾರಿ ಡಾ.ಉಮಾಶಂಕರ್‌, ಡಾ.ಮಂಜುನಾಥ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ತುಮಕೂರು ಸಿದ್ಧಗಂಗಾ ಮಠದ ಬಳಿ ಸಂರಕ್ಷಿಸಿ ಕರಡಿಯನ್ನು ಭಾನುವಾರ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿತ್ತು. ಬೋನಿನಿಂದ ಸ್ಥಳಾಂತರಿಸುವ ವೇಳೆ ಚಾಲಾಕಿ ಕರಡಿ ತಪ್ಪಿಸಿಕೊಂಡಿತ್ತು.

ಉದ್ಯಾನದ ಸಿಬ್ಬಂದಿ ಸುತ್ತಮುತ್ತ ಕರಡಿಯನ್ನು ಹುಡುಕುವ ಪ್ರಯತ್ನ ನಡೆಸಿದ್ದರು. ಆದರೆ, ಕರಡಿಯ ಸುಳಿವು ದೊರೆತಿರಲಿಲ್ಲ. ಬನ್ನೇರುಘಟ್ಟ ಸುತ್ತಮುತ್ತ ಗ್ರಾಮಗಳಲ್ಲಿ ಸೋಮವಾರ ಕೈಗೊಂಡ ಕರಡಿ ಶೋಧ ಕಾರ್ಯಾಚರಣೆ ಫಲ ನೀಡಿಲ್ಲ. 

(ಮಾಹಿತಿ ಕೃಪೆ ಪ್ರಜಾವಾಣಿ)

ಯುವತಿ ಹೇಳಿಕೆ ದಾಖಲು ; ನ್ಯಾಯಾಧೀಶರ ಮುಂದೆ ಹಾಜರು ಜಾರಕಿಹೊಳಿಗೆ ಬಂಧನ ಭೀತಿ?

 

ಬೆಂಗಳೂರು: ಇಪ್ಪತ್ತೂಂಬತ್ತು ದಿನಗಳಿಂದ ರಾಷ್ಟ್ರಾದ್ಯಂತ ಸುದ್ದಿಯಾಗಿರುವ ರಮೇಶ್‌ ಜಾರಕಿಹೊಳಿ ಅವರ ವಿವಾದಿತ ಸಿ.ಡಿ. ಪ್ರಕರಣದ ಕಣ್ಣಾಮುಚ್ಚಾಲೆ ಆಟಕ್ಕೆ ಮಂಗಳವಾರ ಬಹುತೇಕ ತೆರೆಬಿದ್ದಿದೆ.

ಸಿ.ಡಿ.ಯಲ್ಲಿದ್ದಳು ಎನ್ನಲಾದ ಯುವತಿ ಮಂಗಳವಾರ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಎಸ್‌ಐಟಿ ಸಂಜೆ ವೇಳೆಗೆ ಯುವತಿಯನ್ನು ಆಡುಗೋಡಿಯಲ್ಲಿ ಇರುವ ಟೆಕ್ನಿಕಲ್‌ ಸೆಲ್‌ಗೆ ಕರೆದೊಯ್ದು ವಿಚಾರಣೆ ನಡೆಸಿತು. ಈ ವೇಳೆ ಅವರು ರಮೇಶ್‌ ಜಾರಕಿಹೊಳಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬುಧವಾರ ಬೆಳಗ್ಗೆ 10 ಗಂಟೆಗೆ ಮತ್ತೂಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ವಿಚಾರಣೆ ವೇಳೆ ಪೊಲೀಸರ ಪ್ರತೀ ಪ್ರಶ್ನೆಗೂ ಯುವತಿ ಉತ್ತರ ನೀಡಿದ್ದಾಳೆ ಎನ್ನಲಾಗಿದೆ. ಅಲ್ಲದೆ, ತನ್ನ ಹೆತ್ತವರು ರಮೇಶ್‌ ಜಾರಕಿಹೊಳಿ ಬೆಂಬಲಿಗರ ಒತ್ತಡ ಮತ್ತು ಬೆದರಿಕೆಯಿಂದ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಜೀವ ಭಯದಿಂದ ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ಸುರಕ್ಷಿತವಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ರಮೇಶ್‌ ಜಾರಕಿಹೊಳಿಗೆ ಕಾನೂನು ಕಂಟಕ ಎದುರಾಗಿದ್ದು, ಬಂಧನ ಭೀತಿ ಇದೆ ಎನ್ನಲಾಗಿದೆ.
ನೃಪತುಂಗ ರಸ್ತೆ ಬಳಿಯ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಸಿಎಂಎಂ) ನ್ಯಾಯಾಲಯದಲ್ಲಿ ಆಕೆ ಹೇಳಿಕೆ ದಾಖಲಿಸಬೇಕಿತ್ತು. ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಅಧಿಕ ಜನಸಂದಣಿ ಬೆಳಗ್ಗೆಯಿಂದಲೇ ಸೇರಿತ್ತು. ಅತೀ ಸೂಕ್ಷ್ಮ ಪ್ರಕರಣ ಹಾಗೂ ಸಂತ್ರಸ್ತೆಯ ಭದ್ರತೆಯ ದೃಷ್ಟಿಯಿಂದ ಎಸ್‌ಐಟಿ ತಂಡವು ಸ್ಥಳದ ಬದಲಾಯಿಸುವಂತೆ ನ್ಯಾಯಾಧೀಶರು ಹಾಗೂ ಡೆಪ್ಯೂಟಿ ರಿಜಿಸ್ಟ್ರಾರ್‌ರನ್ನು ಕೋರಿತು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ನಿಯೋಜಿತ ಸ್ಥಳದ ಬದಲು ವಸಂತನಗರದ ಗುರುನಾನಕ್‌ ಭವನದಲ್ಲಿ ಕೋವಿಡ್‌-19 ಹಿನ್ನೆಲೆಯಲ್ಲಿ ರಚಿಸಲಾಗಿದ್ದ ವಿಶೇಷ ಕೋರ್ಟ್‌ ಕೊಠಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ತೆರಳಿದರು.

ಅಪರಾಹ್ನ 3ರ ಸುಮಾರಿಗೆ ತನ್ನ ಪರ ವಕೀಲರ ತಂಡದ ಜತೆ ಆಗಮಿಸಿದ ಸಂತ್ರಸ್ತೆ, ಸಂಜೆ 5.20ರ ವರೆಗೆ ನ್ಯಾಯಾಧೀಶರ
ಎದುರು 20ಕ್ಕೂ ಅಧಿಕ ಪುಟಗಳ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 164 ಅಡಿಯಲ್ಲಿ ಯುವತಿ ಸ್ವ-ಇಚ್ಛೆಯ ಹೇಳಿಕೆ ದಾಖಲಿಸಿದ್ದರಿಂದ ಮತ್ತು ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವಿಧಿಸಿದ ನಿಯಮಗಳಂತೆ ನ್ಯಾಯಾಧೀಶರು, ಬೆರಳಚ್ಚುಗಾರರು ಮತ್ತು ಸಂತ್ರಸ್ತೆ ಮಾತ್ರ ಇದ್ದು, ಹೇಳಿಕೆ ದಾಖಲಿಸಿಕೊಳ್ಳಲಾಯಿತು.

ಆ ಬಳಿಕ ಎಸ್‌ಐಟಿ ತನಿಖಾಧಿಕಾರಿ ಕವಿತಾ ಅವರು ಆಕೆಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಕೋರ್ಟ್‌ ಯುವತಿಯ ಒಪ್ಪಿಗೆ ಕೇಳಿತು. ಯುವತಿ ಒಪ್ಪಿಗೆ ಸೂಚಿಸಿದ್ದರಿಂದ ಕೋರ್ಟ್‌ ಆಕೆಯನ್ನು ಎಸ್‌ಐಟಿ ಗೆ ಒಪ್ಪಿಸಿತು.

ಹೇಳಿಕೆ ದಾಖಲಿಸಲು ಸೂಚನೆ
ಯುವತಿ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಿದ್ದು, ಎಸಿಪಿ ಕವಿತಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಮಂಗಳವಾರ ಬೆಳಗ್ಗೆ 24ನೇ ಎಸಿಎಂಎಎಂ ಕೋರ್ಟ್‌ಗೆ ಎಸಿಪಿ ಕವಿತಾ ಮತ್ತು ಕಬ್ಬನ್‌
ಪಾರ್ಕ್‌ ಠಾಣೆ ಇನ್‌ಸ್ಪೆಕ್ಟರ್‌ ಮಾರುತಿ ಆಗಮಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ಅಪರಾಹ್ನ 3ಕ್ಕೆ ಹೇಳಿಕೆಗೆ ಸಮಯ ನಿಗದಿ ಪಡಿಸಿತ್ತು. ಮೊದಲು ನಮ್ಮ ವಿಚಾರಣೆಗೆ ಅನುಮತಿ ನೀಡ ಬೇಕು ಎಂದು ಎಸ್‌ಐಟಿ ಮನವಿ ಮಾಡಿತು. ಯುವತಿ ಎಸ್‌ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ನಮ್ಮ ಎದುರು ಹೇಳಿಕೆ ದಾಖಲಿಸಲಿ, ಬಳಿಕ ಎಸ್‌ಐಟಿ ವಿಚಾರಣೆ ನಡೆಯಲಿ ಎಂದು ನ್ಯಾಯಾಲಯ ಹೇಳಿತು.

ಏನಿದು 164 ಸಿಆರ್‌ಪಿಸಿ?
ಆರೋಪಿತರು ಅಥವಾ ಎದುರುದಾರರಿಂದ ಬೆದರಿಕೆ ಇದ್ದರೆ ತಾವು ನೀಡಿದ ದೂರಿನ ಆಧಾರದ ಮೇಲೆ ನೇರವಾಗಿ ಮ್ಯಾಜಿಸ್ಟ್ರೇಟ್‌ ಎದುರು ಹಾಜರಾಗಿ ಹೇಳಿಕೆ ದಾಖಲಿಸಲು ಸಿಆರ್‌ಪಿಸಿ 164ರಡಿ ಅವಕಾಶವಿದೆ. ಇದರಡಿ ಪೊಲೀಸರ ಎದುರು ನೀಡಿದ ಹೇಳಿಕೆಯನ್ನು ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿ ನಿರಾಕರಿಸಬಹುದು ಅಥವಾ ತದ್ವಿರುದ್ಧ ಹೇಳಿಕೆ ನೀಡಬಹುದು. ಆದರೆ ಬದಲಾಯಿಸುವಂತಿಲ್ಲ. ರಾಜಿ-ಸಂಧಾನಕ್ಕೂ ಅವಕಾಶವಿಲ್ಲ. ಒಂದೊಮ್ಮೆ ಹೇಳಿಕೆ ನೀಡಿದ ದೂರುದಾರರು ಅಥವಾ ಸಂತ್ರಸ್ತೆ ಅದಕ್ಕೆ ವಿರುದ್ಧ ಹೇಳಿಕೆ ನೀಡಿದರೆ ಇಲ್ಲವೇ ಆ ಹೇಳಿಕೆ ತಪ್ಪು ಎಂದು ಮನವರಿಕೆಯಾದರೆ ನ್ಯಾಯಾಲಯ ಸ್ವಯಂ ಕ್ರಮ ಜರಗಿಸಬಹುದು.

ಮುಂದಿನ ತನಿಖೆ ಹೇಗೆ?
ಸಿಆರ್‌ಪಿಸಿ 164 ಪ್ರಕಾರ ನ್ಯಾಯಾಧೀಶರ ಎದುರು ಯುವತಿ ನೀಡಿರುವ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಗಳಿಗೆ ನೀಡಲಾಗಿದೆ. ಇದನ್ನು ಆಧರಿಸಿ ಬುಧವಾರ ಎಸ್‌ಐಟಿ ವಿಚಾರಣೆ ಆರಂಭಿಸಲಿದೆ. ಒಂದು ವೇಳೆ ಸ್ವಇಚ್ಛೆಯ ಹೇಳಿಕೆಗೂ ಎಸ್‌ಐಟಿ ವಿಚಾರಣೆಯ ಸಂದರ್ಭ ನೀಡಿದ ಹೇಳಿಕೆಗೂ ವ್ಯತ್ಯಾಸ ಕಂಡುಬಂದಲ್ಲಿ ವಿಚಾರಣೆ ತೀವ್ರಗೊಳಿಸಿ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ವೀಡಿಯೋ ಸಂಬಂಧ ಈಗಾಗಲೇ ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ಪೋಷಕರು, ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ರಮೇಶ್‌ ಜಾರಕಿಹೊಳಿ, ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಮೂರು ಪ್ರಕರಣಗಳ ತನಿಖೆ ನಡೆಸಬೇಕಿದೆ. ಯುವತಿ ಹಾಜರಾಗಿರುವುದರಿಂದ ಬೆಳಗಾವಿಯಲ್ಲಿ ದಾಖಲಾದ ಅಪಹರಣ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಬೆಂಗಳೂರಿಗೆ ಬಂದು ಯುವತಿಯ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ಇತ್ಯರ್ಥಪಡಿಸುವ ಸಾಧ್ಯತೆಗಳಿವೆ.

ಅಲ್ಲದೆ ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿರುವ ದೂರಿನಲ್ಲಿ ಅಪರಿಚಿತ ವ್ಯಕ್ತಿಗಳು ಇದ್ದಾರೆ ಆರೋಪಿಸಲಾಗಿದೆ. ಈ ಸಂಬಂಧ ಈಗಾಗಲೇ ಮೂರು ಬಾರಿ ಮಾಜಿ ಸಚಿವರನ್ನು ವಿಚಾರಣೆ ನಡೆಸಲಾಗಿದೆ. ಈ ವೇಳೆ ಯುವತಿಯ ಹೆಸರು ಅಥವಾ ಗುರುತನ್ನು ಮಾಜಿ ಸಚಿವರು ಉಲ್ಲೇಖೀಸಿ, ಈಕೆಯೇ ಬ್ಲಾಕ್‌ ಮೇಲ್‌ ತಂಡದಲ್ಲಿ ಇದ್ದರು ಎಂದು ಹೇಳಿಕೆ ನೀಡಿದ್ದರೆ, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

(ಮಾಹಿತಿ ಕೃಪೆ ಉದಯವಾಣಿ)

ನಾಳೆಯಿಂದ ಯುವರತ್ನನ ದರ್ಬಾರ್ ಶುರು

 

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಎಷ್ಟೋ ದಿನದಿಂದ ಕಾಯುತ್ತಿದ್ದ ಆ ಗಳಿಗೆ ಕೊನೆಗೂ ಬಂದಿದೆ. ನಾಳೆಯಿಂದ ಎಲ್ಲೆಡೆ ಯುವರತ್ನನ ದರ್ಬಾರ್ ಶುರುವಾಗಲಿದೆ.



ಪವರ್ ಸ್ಟಾರ್ ಪುನೀತ್ ಅಭಿನಯದ ಹೊಂಬಾಳೆ ಫಿಲಂಸ್ ನಿರ್ಮಾಣದ ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ‘ಯುವರತ್ನ’ ಸಿನಿಮಾ ನಾಳೆಯಿಂದ ಅದ್ಧೂರಿಯಾಗಿ ತೆರೆ ಕಾಣಲಿದೆ. ಕೊರೋನಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಮೂರನೇ ಬಿಗ್ ಬಜೆಟ್ ಸಿನಿಮಾ ಇದಾಗಿದೆ.

ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಪೊಗರು, ರಾಬರ್ಟ್ ಭರ್ಜರಿ ಗಳಿಕೆ ಮಾಡಿತ್ತು. ಈಗ ಯುವರತ್ನ ಕೂಡಾ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಕನ್ನಡ, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ವಿದೇಶದಲ್ಲೂ ಬಿಡುಗಡೆಯಾಗುತ್ತಿದೆ. ಈಗಾಗಲೇ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಬುಕಿಂಗ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.
                

(ಮಾಹಿತಿ ಕೃಪೆ ವೆಬ್ದುನಿಯಾ)

ಅಣ್ಣಾವ್ರಂತೇ ನೇತ್ರದಾನದ ಪ್ರತಿಜ್ಞೆ ಮಾಡಿದ ಶಿವರಾಜ್‍ಕುಮಾರ್: 'ಅಕ್ಷಿ' ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ ಸೆಂಚುರಿ ಸ್ಟಾರ್

 

ಏಷ್ಯಾದ ಮುಂಚೂಣಿಯ ನೇತ್ರ ಚಿಕಿತ್ಸಾ ಸಂಸ್ಥೆ ನಾರಾಯಣ ನೇತ್ರಾಲಯವು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ಕನ್ನಡ ಚಲನಚಿತ್ರ ಪುರಸ್ಕಾರ ಪಡೆದ ಅಕ್ಷಿ ಚಿತ್ರದ ಪ್ರೇರಶಕ್ತಿಯಾಗಿದೆ. ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಭುಜಂಗ ಶೆಟ್ಟಿ ಇಡೀ ಚಿತ್ರತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ಈ ಕುರಿತು ಚಿತ್ರತಂಡದ ಜತೆ ಇಂದು ಡಾ.ಕೆ. ಭುಜಂಗ ಶೆಟ್ಟಿ ಚೆರ್ಚೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಕ್ಷಿ ನೇತ್ರದಾನಕ್ಕೆ ಉತ್ತೇಜನಕ್ಕೆ ಬೂಸ್ಟರ್ ಡೋಸ್ ಆಗಿದೆ ಮತ್ತು ಹೆಮ್ಮೆ, ವಿನಯಪೂರ್ವಕವಾಗಿ ಇಂದು ನಾನು ಈ ಶ್ರೇಷ್ಠ ಚಲನಚಿತ್ರ `ಅಕ್ಷಿ' ನೀಡಿದ ತಂಡದೊಂದಿಗೆ ಇಲ್ಲಿ ಭಾಗವಹಿಸಿದ್ದೇನೆ. ಈ ಚಲನಚಿತ್ರದ ವಿಷಯವು ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ ಮತ್ತು ನಾರಾಯಣ ನೇತ್ರಾಲಯದ ಧ್ಯೇಯೋದ್ದೇಶವನ್ನು ಪ್ರತಿಪಾದಿಸುತ್ತಿದೆ. ನೇತ್ರದಾನ ಕುರಿತು ಬೆಳ್ಳಿತೆರೆಯ ಮಾಧ್ಯಮದ ಮೂಲಕದ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವ ಈ ಪ್ರಯತ್ನದ ಭಾಗವಾಗಲು ನಾನು ಬಹಳ ಸಂತೋಷಗೊಂಡಿದ್ದೇನೆ' ಎಂದು ಹೇಳಿದರು.

ಅಕ್ಷಿ ಚಲನಚಿತ್ರವು ಖ್ಯಾತ ನಟ ದಿವಂಗತ ಡಾ. ರಾಜ್‍ಕುಮಾರ್ ಅವರ ಹಾಗೂ ಅವರ ಹೆಸರಿನಲ್ಲಿರುವ ನಾರಾಯಣ ನೇತ್ರಾಲಯದ ಡಾ. ರಾಜ್‍ಕುಮಾರ್ ನೇತ್ರ ಬ್ಯಾಂಕ್‍ನ ಧ್ಯೇಯೋದ್ದೇಶವಾದ ನೇತ್ರದಾನವನ್ನು ಪ್ರತಿಪಾದಿಸುತ್ತದೆ. 1994ರಲ್ಲಿ ಡಾ. ರಾಜ್‍ಕುಮಾರ್ ನೇತ್ರ ಬ್ಯಾಂಕ್ ಅನ್ನು ಸ್ವತಃ ಡಾ. ರಾಜ್‍ಕುಮಾರ್ ಉದ್ಘಾಟಿಸಿದ್ದರು. 2006ರಲ್ಲಿ ಅವರು ಮರಣ ಹೊಂದಿದಾಗ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ನೀಡಲಾಯಿತು. ಅವರ ಆದರ್ಶನೀಯ ಮಹೋನ್ನತ ನೇತ್ರದಾನವು ಅಕ್ಷಿಯಲ್ಲಿ ಕಾಣಿಸಿಕೊಂಡಿದೆ. ದಿವಂಗತ ಪಾರ್ವತಮ್ಮ ರಾಜ್‍ಕುಮಾರ್ ಕೂಡಾ ತಮ್ಮ ನೇತ್ರಗಳನ್ನು ದಾನ ಮಾಡಿದರು. ರಾಜ್ಯದ ಶೇ.50ರಷ್ಟು ನೇತ್ರದಾನವನ್ನು ನಾರಾಯಣ ನೇತ್ರಾಲಯದ ಮೂಲಕ ನಡೆಸಲಾಗುತ್ತಿದೆ ಎಂದರು.

ಡಾ. ರಾಜ್‍ ಅವರ ಹಿರಿಯ ಪುತ್ರ ಡಾ. ಶಿವರಾಜ್‍ಕುಮಾರ್ ಅಕ್ಷಿ ಚಲನಚಿತ್ರ ತಂಡವನ್ನು ಸನ್ಮಾನಿಸಿದರು. 'ನನ್ನ ತಂದೆಗೆ ಬಹಳ ಪ್ರೀತಿಪಾತ್ರವಾದ ವಿಷಯ ನೇತ್ರದಾನವು ಒಂದು ಚಲನಚಿತ್ರದಲ್ಲಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿರುವುದು ಬಹಳ ಸಂತಸ ತಂದಿದೆ. ಈ ತಂಡವು ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದೆ. ಇದು ಭಾವನಾತ್ಮಕ ಹಾಗೂ ಸ್ಫೂರ್ತಿದಾಯಕ ಕ್ಷಣವಾಗಿದೆ' ಎಂದರು. ಅವರು ಕೂಡಾ ತಮ್ಮ ನೇತ್ರದಾನ ಮಾಡುವ ಪ್ರತಿಜ್ಞೆಯ ಮೂಲಕ ತಮ್ಮ ತಂದೆಯ ಆಸೆಯನ್ನು ಈಡೇರಿಸಿದರು.

ಅಕ್ಷಿ ಚಲನಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ,'ಅಕ್ಷಿ ಚಲನಚಿತ್ರವು ನೇತ್ರದಾನ ಕುರಿತು ಹೆಚ್ಚು ಗಮನ ನೀಡುವಲ್ಲಿ ಹಾಗೂ ಸಮಾಜ ಈ ವಿಷಯವನ್ನು ಹೇಗೆ ನೋಡುತ್ತದೆ ಎನ್ನುವ ಕುರಿತು ತಿಳಿಸಲು ನಮ್ಮ ಪ್ರಯತ್ನವಾಗಿದೆ. ನೇತ್ರದಾನವು ಹೆಚ್ಚು ಚರ್ಚೆಗೆ ಒಳಪಡಬೇಕಾದ ವಿಷಯವಾಗಿದೆ. ಡಾ. ಭುಜಂಗ ಶೆಟ್ಟಿ ಹಾಗೂ ಅವರ ತಂಡದೊಂದಿಗೆ ನಾವು ಮಾತನಾಡಲು ಪ್ರಾರಂಭಿಸಿದ ನಂತರ ಈ ಕುರಿತು ಅಪಾರವಾಗಿ ತಿಳಿದೆವು' ಎಂದು ಹೇಳಿದರು.

ನಿರ್ಮಾಪಕ ಎನ್. ರಮೇಶ್, 'ನಾವು ಯಾವುದೇ ರೀತಿಯಲ್ಲೂ ರಾಷ್ಟ್ರಪ್ರಶಸ್ತಿ ಲಭಿಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಕಥೆಯ ಮಹೋನ್ನತ ಅಂಶ ಹಾಗೂ ತಂಡದ ಪ್ರಾಮಾಣಿಕ ಪ್ರಯತ್ನ ಮತ್ತು ಜನರ ಆಶೀರ್ವಾದ ಈ ಪ್ರಶಸ್ತಿಯನ್ನು ತಂದುಕೊಟ್ಟಿದೆ' ಎಂದರು.

ಮತ್ತೊಬ್ಬ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್, ಈ ಚಲನಚಿತ್ರವು ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವವೂ ಸಲ್ಲಿಸಿದೆ. ಅವರಿಗೆ ನೇತ್ರದಾನ ಕುರಿತು ಸಮಾಜದ ದೃಷ್ಟಿಕೋನ ಬದಲಾಯಿಸುವ ಭಾಗವಾಗುವ ಬಯಕೆ ಇತ್ತು. ಅವರು ಹಾಡಿದ ಕೊನೆಯ ಕೆಲವೇ ಗೀತೆಗಳಲ್ಲಿ ಇದೂ ಒಂದು' ಎಂದು ಹೇಳಿದರು

ಕಾರ್ಯಕ್ರಮದಲ್ಲಿ ನಿರ್ಮಾಪಕ ರವಿ.ಎಚ್.ಎಸ್.(ಹೊಳಲು), ಛಾಯಾಗ್ರಾಹಕ ಮುಕುಲ್ ಗೌಡ, ಚಿತ್ರಕಥೆ ಬರಹಗಾರ ದೇವೇಂದ್ರ ನಾಯ್ಡು, ಸಹ ನಿರ್ದೇಶಕರಾದ ಮೀನಾ ರಘು ಮತ್ತು ಸುನೀಲ್ ರಾಜ್ ಇದ್ದರು. ಈ ಚಿತ್ರದಲ್ಲಿ ಪಾತ್ರ ವಹಿಸಿರುವ ಮಾಸ್ಟರ್ ಮಿಥುನ್ ಎಂ.ಬೈ.., ಬೇಬಿ ಸೌಮ್ಯ ಪ್ರಭು ಮತ್ತು ನಾಗರಾಜ್‍ರಾವ್ ಕೂಡಾ ಉಪಸ್ಥಿತರಿದ್ದರು.

(ಮಾಹಿತಿ ಕೃಪೆ ಕನ್ನಡ ಪ್ರಭ)

Tuesday, March 30, 2021

ಊರ ಕಣ್ಣು ಯಾರ ಕಣ್ಣು

👉

ಹೆಣ್ಣು:-  ಊರ ಕಣ್ಣು ಯಾರ ಕಣ್ಣು

ಮಾರಿ ಕಣ್ಣು ಹೋರಿ ಕಣ್ಣು

ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

 ಗಂಡು:-  ಊರ ಕಣ್ಣು ಯಾರ ಕಣ್ಣು

ಮಾರಿ ಕಣ್ಣು ಹೋರಿ ಕಣ್ಣು

ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ಹೆಣ್ಣು:- ಬದುಕು ಒಂದು rail ಅಣ್ಣಾ

ವಿಧಿ ಅದರ ಯಜಮಾನ

ಅವನು ಹೋಗು ಎಂದ ಕಡೆಗೆ ಹೋಗಬೇಕಣ್ಣ

ಗಂಡು:- ವಿರಹ ಅನ್ನೋ ವಿಷವನ್ನ

ಕುಡಿಸುತಾನೆ ಬ್ರಹ್ಮಣ್ಣಾ

ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ

ಹೆಣ್ಣು:-  ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ

ಕಾಲ ಕಡು ಕೀಚಕ ಪ್ರೀತಿ ಕೊಲೆ ಪಾತಕ

ಊರ ಕಣ್ಣು ಯಾರ ಕಣ್ಣು

ಮಾರಿ ಕಣ್ಣು ಹೋರಿ ಕಣ್ಣು

 ಗಂಡು:-  ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ಹೆಣ್ಣು:-  ಹಣೆ ಬರಹಕೆ ಹೊಣೆ ಯಾರು

ಇಲ್ಲಿ ಬೊಂಬೆ ಎಲ್ಲಾರೂ

ಯಾವ ಮತ್ತು ಇರದಂತ ನೋವು ನೂರಾರು

ಗಂಡು:- ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು

ನಾವು ಚರಿತೆಯಾಗದೆ ಸೇರಲಿ ಈ ಉಸಿರು

ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ

ಕಾಲ ಕಡು ಕೀಚಕ  ಪ್ರೀತಿ ಕೊಲೆ ಪಾತಕ

ಹೆಣ್ಣು:-  ಊರ ಕಣ್ಣು ಯಾರ ಕಣ್ಣು

ಮಾರಿ ಕಣ್ಣು ಹೋರಿ ಕಣ್ಣು

ಇಬ್ರು:- ಯಾವ ಮಸಣಿ ಕಣ್ಣು ಬಿತ್ತಮ್ಮಾ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ




Sunday, March 28, 2021

ಕಣ್ಣು ಹೊಡಿಯಾಕ

👉

ಕಣ್ಣು ಹೊಡಿಯಾಕ
ಮೊನ್ನೆ ಕಲತೀನಿ
ನೀನಾ ಹೇಳಲೇ ಮಗನ

ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? (X2)

ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ

ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? (X2)

ಬಾಳ ಲವ್ ಮಾಡೆನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?

ನೂರು ಮಕ್ಕಳು ಬೇಕು
ಫಿಫ್ಟಿ ನಿನಗಿರಲಿ
ಇನ್ ಫಿಫ್ಟಿ ನನಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳಲಿ..

ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? (X2)

ಸಿರಿಸಿರಿ ಮಂದಾರ
ನನ ಮುಡಿಯಲಿ ಇದುಬಾರ
ನಿಂತು ದೂರ..
ನಗಬ್ಯಾಡ ನನ ನೋಡಿ
ಸರಸರ ಸರದಾರ
ತುಟಿ ಸಕ್ಕರೆ ಕಾಡಿಬಾರಾ
ಯಾಕ ಕೊಲುತಿ..
ಸವಿ ಮುತ್ತಿಗೆ ತಡಮಾಡಿ
ಆಗದಿ ಜಲ್ದಿ.. ಚಳಿಗಾಲ ಬರಲಿ
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ
ಹಿಡದ ತಬಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ..

ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? (X2)

ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು
ಅಗೆತಿ ಶತಮಾನ
ವಿಲಿವಿಲಿ ವದ್ದಾಟ
ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ ಬೆಡ್ ಶೀಟಿಗು ಅನುಮಾನ
ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ ಬ್ಯಾಗೆತಿಕೊಂಡು
ಎಲ್ಲಿಗೆ ಬರಲಿ?

ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ? (X2)


ಚಿತ್ರ: ನಟಸಾರ್ವಭೌಮ (ತಾಜಾ ಸಮಾಚಾರ)

👉

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;
ಹೃದಯದ ಗತಿ ನಾಜೂಕು, ಕೊಡುವೆನು ಕಿವಿಯಲಿ ವರದಿ;
ಗುಣಪಡಿಸಲು ನೀ ಬೇಕು, ಬರುವುದೆ ನನ್ನಯ ಸರದಿ.
ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರೂ.
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;

ಜತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ, ಸಖಿ ನಾನಾಗುವೆ ನಿಪುಣ;
ಕನಸೆಂಬ ಖಜಾನೆ ಇಗೋ ತುಂಬಿದೆ, ತುಸು ದೂರಾದರೂ ಕಠಿಣ
ಘಮಘಮಿಸಿ ಕವಿದ ಹೆರಳಲ್ಲೀಗ ಕಳೆದೋಗೋದೇ ಪರಮಾನಂದ
ಅರೆಬಿರಿದು ನಗುವ ಸಿಹಿ ಹೂವಂತೆ ಪಿಸುಮಾತಾಡು ತುಸು ಜೋರಿಂದ
ಮನ ಈಗಾಗಲೆ ತೆರೆದೋದುತ್ತಿದೆ, ಬರೆಯದಿರುವ ಕಾಗದ

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೋ ನಿನ್ನ ಮುದ್ದಾಗಿರೋ ನಿಲುವು
ಬರಿದಾದಂಥ ಬಾಳಲ್ಲಿ ಬಂದಂತಿದೆ ಬಲು ರೋಮಾಂಚಕ ತಿರುವು
ಗರಿಗೆದರಿ ಸನಿಹ ಕುಣಿದಾಡುತ್ತ, ಮನ ತಂತಾನೇ ನವಿಲಾದಂತೆ
ಅವಿತಿರುವ ಒಲವು ಬಯಲಾಗುತ್ತ, ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ, ಹಠ ಹೆಚ್ಚಾಗಿದೆ, ಎದುರೆ ಇರಲು ದೇವತೆ|

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ,
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ;
ಹೃದಯದ ಗತಿ ನಾಜೂಕು, ಕೊಡುವೆನು ಕಿವಿಯಲಿ ವರದಿ;
ಗುಣಪಡಿಸಲು ನೀ ಬೇಕು, ಬರುವುದೆ ನನ್ನಯ ಸರದಿ.
ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರೂ.

ನೀನೇ ರಾಮ ನೀನೇ ಶಾಮ

👉

ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು
ನೀನೇ ಕರ್ಮ ನೀನೇ ಧರ್ಮ
ನೀನೇ ಮರ್ಮ ನೀನೇ ಪ್ರೇಮ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ
ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ
ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು
ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು
ಅಣು ಅಣು  ಅಣು ಒಳಗೆ  ಕುಳಿತಿರುವೆ
ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ
ಯುಗದಯುಗದ ಮೃಗದ ಖಗದ ಉಸಿರಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು
ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ
ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ
ನೀನೇ ರಾಮ ನೀನೇ ಶಾಮ

ನೀನೇ ಆಲೇ ನೀನೇ ಎಲ್ಲ