WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, May 9, 2020

ಮಗು ಚಿರತೆಗೆ ಬಲಿ; ಸಂತ್ರಸ್ತ ಕುಟುಂಬ ಭೇಟಿಯಾಗಿ 7.5 ಲಕ್ಷ ರೂ. ಪರಿಹಾರ ನೀಡಿದ ಆನಂದ್ ಸಿಂಗ್

ರಾಮನಗರ: ಚಿರತೆಗೆ ಬಲಿಯಾದ ಮೂರು ವರ್ಷದ ಮಗುವಿನ ಕುಟುಂಬಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಶನಿವಾರ ಘಟನಾ ಸ್ಥಳಕ್ಕೆ ಭೇಟಿ‌ ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಮಗುವನ್ನು ಚಿರತೆ ಎಳೆದೊಯ್ದು ಕೊಂದುಹಾಕಿದ ಹಿನ್ನೆಲೆಯಲ್ಲಿ ಬೇಜವಾಬ್ದಾರಿ‌ತನ ತೋರಿದ ಅರಣ್ಯ ಇಲಾಖೆ ಸಿಬ್ಬಂದಿ‌‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಂತಹ ‌ಘಟನೆ‌ ಜರುಗಬಾರದಿತ್ತು. ಇದು ಅತ್ಯಂತ ದುಃಖದ ಸಂಗತಿ ಎಂದರು. ಲಾಕ್​ಡೌನ್​​ ಹಿನ್ನೆಲೆಯಲ್ಲಿ ಜನ ಸಂಚಾರ ಕಡಿಮೆಯಾಗಿದ್ದರಿಂದ ಕಾಡು ಪ್ರಾಣಿಗಳು ನಾಡಿನತ್ತ ಧಾವಿಸುತ್ತಿವೆ. ನಾಳೆಯೇ ಕ್ಯೂಬಿಂಗ್ ಕೆಲಸ ಆರಂಭಿಸಿ ಚಿರತೆ ಸೆರೆ ಹಿಡಿಯಲಾಗುವುದು ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಎ.ಮಂಜುನಾಥ್ ಉಪಸ್ಥಿತರಿದ್ದರು. ಮನೆಯಲ್ಲಿ ಮಲಗಿದ್ದ 3 ವರ್ಷದ ಗಂಡು ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಚಂದ್ರಣ್ಣ ಹಾಗೂ ಮಂಗಳ ಗೌರಮ್ಮ ದಂಪತಿಯ ಮಗನಾದ ಹೇಮಂತ್ ಚಿರತೆ ದಾಳಿಗೆ ಬಲಿಯಾಗಿದ್ದನು. (ಮಾಹಿತಿ ಕೃಪ ಕನ್ನಡ ಪ್ರಭ )

Thursday, May 7, 2020

ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸೋರಿಕೆಯಿಂದ ಭಾರೀ ದುರಂತ: 10ಕ್ಕೂ ಹೆಚ್ಚು ಸಾವು, ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥ,..!


ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸಿಲೆಂಡರ್ ಲೀಕ್ ಆಗಿದ್ದು, 1000ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, 10ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅಲ್ಲದೇ, ಜನರೆಲ್ಲ ರಸ್ತೆಯಲ್ಲೇ ಉಸಿರಾಟದ ಸಮಸ್ಯೆಯಿಂದ ಒದ್ದಾಡುವ ದೃಶ್ಯ ಕಂಡುಬಂದಿದೆ.
300ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುತ್ತಮುತ್ತಲಿನ ಐದಕ್ಕೂ ಹೆಚ್ಚು ಗ್ರಾಮಗಳಿಗೆ ತೊಂದರೆಯುಂಟಾಗಿದೆ. ಜನರಿಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದ್ದು, ಬಟ್ಟೆಯನ್ನು ಒದ್ದೆ ಮಾಡಿ, ಮುಖಕ್ಕೆ ಮಾಸ್ಕ್‌ನಂತೆ ಕಟ್ಟಿಕೊಳ್ಳಲು ಸೂಚಿಸಲಾಗಿದೆ.
ಇನ್ನು ಅಲ್ಲಿನ ಸಿಎಂ ಜಗನ್‌ಮೋಹನ್ ರೆಡ್ಡಿ, ಪ್ರಧಾನಿ ಮೋದಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.ಘಟನೆ ಬಗ್ಗೆ ಜೂನಿಯರ್ ಎನ್‌ಟಿಆರ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ವೈಜಾಗ್ ಗ್ಯಾಸ್ ಲೀಕ್ ಸುದ್ದಿ ನನ್ನನ್ನ ತೀವ್ರವಾಗಿ ಆತಂಕಕ್ಕೀಡು ಮಾಡಿದೆ, ಸ್ಟೇ ಸ್ಟ್ರಾಂಗ್ ವೈಜಾಗ್ ಎಂದು ಸಾಮಾಜಿಕ ಜಾಲತಾಣದ ಮೂಲಕ ಧೈರ್ಯ ತುಂಬಿದ್ದಾರೆ.

Wednesday, May 6, 2020

ಕನ್ನಡಕ್ಕೆ ಡಬ್ ಆದ ʼಮಹಾಭಾರತʼ ಪ್ರಸಾರಕ್ಕೆ ದಿನಾಂಕ ಫಿಕ್ಸ್..!

ಮಹಾಭಾರತ ಹಾಗೂ ರಾಮಾಯಣ ಕಥೆಗಳನ್ನು ಎಷ್ಟು ಬಾರೀ ಕೇಳಿದರೂ ಎಷ್ಟು ಬಾರಿ ತೆರೆಯ ಮೇಲೆ ನೋಡಿದರೂ ಬೇಸರವಾಗುವುದಿಲ್ಲ. ಪೂರ್ವಜರಿಂದ ಇಂದಿನ ಪೀಳಿಗೆಯವರೆಗೂ ಬೋರ್ ಆಗದೇ ಇರುವ ಕಥೆಗಳು, ಧಾರಾವಾಹಿಗಳು ಅಂದರೆ ಇವೆರಡು ಅಂದರೆ ತಪ್ಪಾಗಲ್ಲ. ರಾಮಾಯಣ ಒಂದು ರೀತಿ ಕಥೆಯಾದರೆ ಮಹಾಭಾರತ ಮತ್ತೊಂದು ರೀತಿಯ ಕಥೆ.
ರಾಮಾಯಣ ನೋಡಿದ್ದ ಜನತೆ ಇದೀಗ ಮಹಾಭಾರತವನ್ನೂ ಹಿಂದಿಯಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿ ಇದೀಗ ಕನ್ನಡದಲ್ಲೂ ಪ್ರಸಾರವಾಗಲು ಪ್ರಾರಂಭವಾಗುತ್ತಿದೆ. ಅದೆಷ್ಟೋ ಮಂದಿ ಕನ್ನಡದಲ್ಲಿ ಈ ಧಾರಾವಾಹಿ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.
ಮೇ 11ರಿಂದ ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 8ಗಂಟೆಗೆ ಮಹಾಭಾರತ ಪ್ರಸಾರಕ್ಕೆ ರೆಡಿಯಾಗಿದೆ. ಮಹಾಭಾರತವನ್ನು ಕನ್ನಡಕ್ಕೆ ಡಬ್ ಮಾಡಲಾಗಿದ್ದು, ಈ ಧಾರಾವಾಹಿಯಲ್ಲಿ ಸೌರಭ್ ರಾಜ್ ಜೈನ್, ಶಾಹೀರ್ ಶೇಕ್, ಪೂಜಾ ಶರ್ಮಾ, ಆರವ್ ಚೌಧರಿ, ಪ್ರಣೀತ್ ಭಟ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಒಟ್ನಲ್ಲಿ ಕನ್ನಡದಲ್ಲಿ ಮಹಾಭಾರತ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

3 ನೇ ದಿನವೂ ಭರ್ಜರಿ ಕಲೆಕ್ಷನ್: 2 ದಿನದ ದಾಖಲೆ ಹಿಂದಿಕ್ಕಿದ ಮದ್ಯ ಮಾರಾಟ

ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟ ಆರಂಭವಾದ 3 ನೇ ದಿನ 216 ಕೋಟಿ ರೂಪಾಯಿಯಷ್ಟ ಮದ್ಯ ಮಾರಾಟವಾಗಿದೆ.
ಮೇ 4ರ ಸೋಮವಾರದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಆರಂಭವಾಗಿದ್ದು, ಮೊದಲ ದಿನಕ್ಕಿಂತ ಎರಡನೇ ದಿನ ಮತ್ತು ಎರಡನೇ ದಿನಕ್ಕಿಂತ ಮೂರನೇ ದಿನ ಹೆಚ್ಚು ಮದ್ಯ ಮಾರಾಟ ಆಗಿದೆ.
ಕರ್ನಾಟಕ ಪಾನೀಯ ನಿಗಮ ಮೂರನೇ ದಿನ 230 ಕೋಟಿ ರೂಪಾಯಿ ವಹಿವಾಟು ನಡೆಸಿದೆ. 216 ಕೋಟಿ ರೂಪಾಯಿ ಮೌಲ್ಯದ 39 ಲಕ್ಷ ಲೀಟರ್ ಭಾರತೀಯ ಮದ್ಯ, 15.6 ಕೋಟಿ ರೂಪಾಯಿ ಮೌಲ್ಯದ 7 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಮೊದಲ ದಿನ 45 ಕೋಟಿ ರೂಪಾಯಿ ಹಾಗೂ ಎರಡನೇ ದಿನ 197 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಈ ಎರಡು ದಿನದ ದಾಖಲೆಗಳನ್ನು ಮೂರನೇ ದಿನದ ವಹಿವಾಟು ಹಿಂದಿಕ್ಕಿದೆ ಎಂದು ಹೇಳಲಾಗಿದೆ. ಇನ್ನು ರಾಜ್ಯ ಸರ್ಕಾರ ಮದ್ಯದ ಮೇಲೆ ಶೇಕಡ 6 ರಷ್ಟು ಹಾಗೂ ಶೇಕಡ 11 ರಷ್ಟು ಸೇರಿ ಒಟ್ಟು ಶೇಕಡ 17 ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದೆ ಎನ್ನಲಾಗಿದೆ.

ಕುಡಿದು ಮನೆಗೆ ಬಂದ ಮದ್ಯವ್ಯಸನಿಯಿಂದ ಘೋರ ಕೃತ್ಯ

ರಾಯ್ಪುರ್: ಛತ್ತೀಸ್ಗಡದ ಜಂಜಗಿರ್ ಚಂಪಾ ಜಿಲ್ಲೆಯಲ್ಲಿ ಮದ್ಯ ಸೇವಿಸಿದ ವ್ಯಕ್ತಿ ದೊಣ್ಣೆಯಿಂದ ಹೊಡೆದು ತಾಯಿಯನ್ನೇ ಕೊಲೆ ಮಾಡಿದ್ದಾನೆ.
ಅಮೃತ್ ಲಾಲ್ ಗಡವಾಲ್ ಎಂಬಾತನೇ ಇಂತಹ ಕೃತ್ಯ ಎಸಗಿದ ಆರೋಪಿ. ಮದ್ಯವ್ಯಸನಿಯಾಗಿದ್ದ ಅಮೃತ್ ಲಾಲ್ ಸೋಮವಾರದಿಂದ ಮದ್ಯದ ಅಂಗಡಿ ಓಪನ್ ಆಗುತ್ತಿದ್ದಂತೆ ಕಂಠಪೂರ್ತಿ ಕುಡಿದು ಊರಿನ ಕಡೆ ಹೆಜ್ಜೆ ಹಾಕಿದ್ದಾನೆ.
ಗ್ರಾಮಕ್ಕೆ ಬಂದ ಆತ ಮದ್ಯದ ನಶೆಯಲ್ಲಿ ರಸ್ತೆಯಲ್ಲಿ ಓಡಾಡುವವರೊಂದಿಗೆ ಜಗಳವಾಡಿದ್ದಾನೆ. ಆತನ ಮನವೊಲಿಸಿದ ಗ್ರಾಮಸ್ಥರು ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದ ಅಮೃತ್ ಲಾಲ್ ಗಲಾಟೆ ಮಾಡಿದ್ದು ಪತ್ನಿ ಮತ್ತು ತಾಯಿಯನ್ನು ದೊಣ್ಣೆಯಿಂದ ಥಳಿಸಿದ್ದಾನೆ. ಆತನ ಹೊಡೆತದಿಂದ ತಪ್ಪಿಸಿಕೊಂಡು ಪತ್ನಿ ಓಡಿ ಹೋಗಿದ್ದು ದೊಣ್ಣೆ ಹೊಡೆತಕ್ಕೆ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Cm Bs ಯಡಿಯೂರಪ್ಪ ತಿಳಿಸಿದ ಡಿಕೆ ಶಿವಕುಮಾರ್


BIG NEWS : ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿದ ಇಟಲಿ!

ದುಬೈ : ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯಲು ಅನೇಕ ರಾಷ್ಟ್ರಗಳ ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಈ ನಡುವೆ ಕೊರೊನಾ ವೈರಸ್ ವಿಶ್ವದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಇಟಲಿ ಹೇಳಿದೆ.
ರೋಮ್ ನಲ್ಲಿರುವ ಲಜ್ವಾರೋ ಸ್ವಾಲಾಂಜಾನಿ ಸಾಂಕ್ರಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆಯಲ್ಲಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಅದನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಆಯಂಟಿಬಾಡಿಗಳನ್ನು ಇಲಿಯಲ್ಲಿ ಸೃಷ್ಟಿಸಿದೆ. ಮಾನವನ ಜೀವಕೋಶಗಳಲ್ಲೂ ಅದು ಕೆಲಸ ಮಾಡಿದೆ ಎಂದು ಇಟಲಿ ಹೇಳಿಕೊಂಡಿದೆ.
ಇನ್ನು ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 35,73,864 ರಷ್ಟಿದ್ದು, 2,50,687 ಜನರು ಮೃತಪಟ್ಟಿದ್ದಾರೆ.ಅಮೆರಿಕಾದಲ್ಲಿ ಈವರೆಗೆ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಅತಿಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಈವರೆಗೆ 1,161,805 ಜನ ಸೋಂಕಿತರಾಗಿದ್ದು, ಮೃತರ ಸಂಖ್ಯೆ 67,798 ಕ್ಕೆ ಏರಿಕೆಯಾಗಿದೆ.

Tuesday, May 5, 2020

ಇಂದು 22 ಜನರಲ್ಲಿ ಕೊರೊನಾ ಪಾಸಿಟಿವ್; ದಾವಣಗೆರೆಯಲ್ಲೇ 12 ಕೇಸ್​​​​

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಮತ್ತೆ 22 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆ ಕಂಡಿದೆ. ಇಂದು ಬೆಣ್ಣೆ ನಗರಿ ದಾವಣಗೆರೆ ಮತ್ತೆ ಶಾಕ್​ ನೀಡಿದ್ದು ಇಂದು 12 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನು ಬೆಂಗಳೂರಿನಲ್ಲಿ 3 ಹೊಸ ಕೇಸ್​ಗಳು ಪತ್ತೆಯಾಗಿದ್ದು, ಬಾಗಲಕೋಟೆಯಲ್ಲಿ 2 ಹಾಗೂ ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಹಾವೇರಿ, ಧಾರವಾಡದ ಭಟ್ಕಳದಲ್ಲಿ ತಲಾ ಒಂದು ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ.
ಇಂದು 10 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದನ್ನು ಸೇರಿ, ರಾಜ್ಯದಲ್ಲಿ ಒಟ್ಟು 331 ಜನರು ಕೊರೊನಾ ಸೋಂಕು ಮುಕ್ತವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ವಿಜಯಪುರದಲ್ಲಿ ಇಂದು ಒಬ್ಬ ಹಾಗೂ ದಾವಣಗೆರೆಯಲ್ಲಿ ಮತ್ತೊಬ್ಬ ಸೋಂಕಿತ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಕಾರಣದಿಂದಾಗಿ ಒಟ್ಟು 29 ಜನರು ಸಾವನ್ನಪ್ಪಿದ್ದರೆ, ಆತ್ಮಹತ್ಯೆ ಮಾಡಿಕೊಂಡ ಒಬ್ಬ ಸೋಂಕಿತನೂ ಸೇರಿ ಒಟ್ಟು 30 ಸೋಂಕಿತರು ಸಾವನ್ನಪ್ಪಿದಂತಾಗಿದೆ.
ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್​ ಪತ್ತೆ?
  1. ದಾವಣಗೆರೆ-12
  2. ಬೆಂಗಳೂರು -03
  3. ಬಾಗಲಕೋಟೆ-02
  4. ಬಳ್ಳಾರಿ -01
  5. ದಕ್ಷಿಣಕನ್ನಡ -01
  6. ಉತ್ತರ ಕನ್ನಡ (ಭಟ್ಕಳ) -01
  7. ಧಾರವಾಡ -01
  8. ಹಾವೇರಿ -01
ಇಂದು ಒಟ್ಟು 10 ಮಂದಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲಾವಾರು ಅಂಕಿ ಅಂಶ ಹೀಗಿದೆ..
ಬಾಗಲಕೋಟೆ- 3
ವಿಜಯಪುರ- 3
ಮೈಸೂರು- 3
ಕಲಬುರ್ಗಿ- 1


ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಮತ್ತೊಂದು ಕೋವಿಡ್-19 ಸೋಂಕು ಪತ್ತೆ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ 8 ಜನರು ಗುಣಮುಖರಾಗಿ ಮನೆ ಸೇರಿದ ಬೆನ್ನಲ್ಲೇ ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಮತ್ತೊಂದು ಕೋವಿಡ್-19 ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೌಲ್ ಬಜಾರ್ ನ ಪ್ರದೇಶದ 14, ನೆರೆಯ ಆಂಧ್ರದ ಅನಂತಪುರ ಜಿಲ್ಲೆಯ ಕಣೇಕಲ್ ಗ್ರಾಮದ 4 ಜನರು ಸೇರಿ ಒಟ್ಟು 18 ಜನರು ಕಳೆದ ಮಾರ್ಚ್ 16 ರಂದು ತೀರ್ಥ ಕ್ಷೇತ್ರಗಳಿಗೆ ಹೋಗಿದ್ದು, ಉತ್ತರಾಖಂಡ್ ರಾಜ್ಯದ ಲುಡಿಕಿಯಲ್ಲಿ ಲಾಕ್ ಡೌನ್ ಆಗಿದ್ದರು. ಎರಡು ದಿನಗಳ ಹಿಂದೆ ನಗರಕ್ಕೆ ಬಂದಿದ್ದು, ಇವರನ್ನು ತಪಾಸಣೆ ಮಾಡಿ, ಸ್ವಾಬ್ ಪಡೆದು ಹೋಂ ಕ್ವಾರಂಟೈನ್ ಗೆ ಮಾಡಲಾಗಿತ್ತು. ಈ ಪೈಕಿ ಕೌಲ್ ಬಜಾರ್ ನ ಒಬ್ಬರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ ಎಂದು ಅವರು ವಿವರಿಸಿದರು.ಕೋವಿಡ್-19 ಸೋಂಕು ಪತ್ತೆಯಾದವರನ್ನು ಈಗಾಗಲೇ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಸೋಂಕಿತರ ಮಗಳು, ಅಳಿಯ ಸೇರಿ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 22 ಜನರನ್ನು ಸಹ ಸಾಂಸ್ಥಿಕ ಪ್ರತ್ಯೇಕವಾಸದಲ್ಲಿ ಇಡಲಾಗಿದೆ ಎಂದವರು ತಿಳಿಸಿದ್ದಾರೆ.
ಅಂತರ್ ರಾಜ್ಯದಿಂದ ಬಂದರೆ ಕ್ವಾರಂಟೈನ್; ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಯಾರೇ ಬಂದರೂ ಅಂತಹವರನ್ನು 14 ದಿನಗಳ ಕಾಲ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿ ಇಡುವುದು ಕಡ್ಡಾಯ. ಒಂದು ವೇಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಗೆ ಬರುವವರು ಅಲ್ಲಿನ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಆಂಬ್ಯುಲೆನ್ಸ್ ನಲ್ಲಿ ಮಾತ್ರ ಬರುವವರಿಗೆ ಅವಕಾಶ ನೀಡಲಾಗುವುದು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಜಿಲ್ಲೆಗೆ ಬಂದರೆ ಅಂತಹವರನ್ನು 14 ದಿನಗಳ ಕಾಲ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿ ಇಡಲಾಗುವುದು ಎಂದವರು ಎಚ್ಚರಿಸಿದರು.
ಎಸ್ ಪಿ ಸಿ.ಕೆ.ಬಾ ಮಾತನಾಡಿ, ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಅಂತರಾಜ್ಯ ಗಡಿಯಲ್ಲಿನ 21 ಹಳ್ಳಿಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗುವುದು. ಇಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, ಕಾಲುದಾರಿ ಸೇರಿ ಇತರೆ ಮಾರ್ಗಗಳ ಮೂಲಕ ಬರುವವರ ಮೇಲೆ ನಿಗಾವಹಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಇಒ ಕೆ. ನಿತೀಶ್, ಎಡಿಸಿ ಮಂಜುನಾಥ್ ಇದ್ದರು.

ಪ್ರಥಮ ಪಿಯು ಫಲಿತಾಂಶ ಪ್ರಕಟ

ಬೆಂಗಳೂರು: ಕಳೆದ ಫೆಬ್ರುವರಿ ಯಲ್ಲಿ ನಡೆದ ಪ್ರಥಮ ಪಿಯು ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಯಿತು.
ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಪಿಯು ಉಪನಿರ್ದೇಶಕ ಕಚೇರಿಯಿಂದಲೇ ನೇರವಾಗಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.
ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ಫಲಿತಾಂಶ ನೋಡಲು ಕಾಲೇಜಿಗೆ ಬರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಯಾರೂ ಕಾಲೇಜುಗಳತ್ತ ಬರಲಿಲ್ಲ.

ರಾಜ್ಯದಲ್ಲಿ ಮತ್ತೆ 8 ಹೊಸ ಕೊರೋನಾ ಪ್ರಕರಣ: 659ಕ್ಕೇರಿದ ಸೋಂಕಿತರ ಸಂಖ್ಯೆ, ವಿಜಯಪುರದಲ್ಲಿ ವೃದ್ಧೆ ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಭಾವ ಹೆಚ್ಚಾಗುತ್ತಲೇ ಇದ್ದು, ಮಂಗಳವಾರ ಮತ್ತೆ 8 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 659ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸೋಂಕು ಕಾಣಿಸಿಕೊಂಡಿರುವ 659 ಮಂದಿಯ ಪೈಕಿ 28 ಮಂದಿ ಸಾವಿಗೀಡಾಗಿದ್ದು, 324 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರಲ್ಲಿ ಬೆಂಗಳೂರು ನಗರದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದಂತೆ ಬಾಗಕೋಟೆಯಲ್ಲಿ 2, ಬಳ್ಳಾರಿ 1, ದಕ್ಷಿಣ ಕನ್ನಡದಲ್ಲಿ 1 ಮತ್ತು ಉತ್ತರ ಕನ್ನಡದ ಭಟ್ಕಳದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

Monday, May 4, 2020

ಲಾಕ್‌ಡೌನ್: ಗ್ರಾಮ ಪಂಚಾಯತ್​ ಎಲೆಕ್ಷನ್ ಡೌಟ್, ಬೇರೆ ತೀರ್ಮಾನ ಕೈಗೊಂಡ ಸರ್ಕಾರ

ಬೆಂಗಳುರು, (ಮೇ.04): ಲಾಕ್‌ಡೌನ್‌ ಪರಿಣಾಮ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯೋದು ಅನುಮಾನವಾಗಿದೆ.
ರಾಜ್ಯದ 6021 ಗ್ರಾಮ ಪಂಚಾಯತ್‌ಗಳ ಅವಧಿ ಇದೇ ಮೇ/ಜೂನ್ ತಿಂಗಳಿನಲ್ಲಿ ಅವಧಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಚುನಾವಣೆ ನಡೆಸಬೇಕಿತ್ತು. ಆದರೆ, ಇದೀಗ ಕೊರೋನಾ ಇರುವುದರಿಂದ ಎಲೆಕ್ಷನ್‌ ನಡೆಸುವುದು ಅಸಾಧ್ಯ ಮಾತು.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
'ಕೆಎಸ್‌ಆರ್‌ಟಿಸಿಗೆ ಕಾಂಗ್ರೆಸ್ ಕೊಟ್ಟ 1 ಕೋಟಿ ರೂ. ಚೆಕ್ ನಕಲಿ'
ಇದೀಗ ಸರ್ಕಾರ, ಆಡಳಿತ ಸಮಿತಿ ರಚನೆಗೆ ಚಿಂತನೆ ನಡೆಸಿದ್ದು, ಸಿಎಂ ಸೂಚನೆ ನೀಡಿರುವ ಮೇರೆಗೆ ನಾಳೆ (ಮಂಗಳವಾರ) ಸಚಿವರ ಸಮಿತಿಯ ಸಭೆ ನಡೆಯಲಿದೆ.ಯಾವ ರೀತಿಯಾಗಿ ಆಡಳಿತ ಸಮಿತಿಯನ್ನು ರಚನೆ ಮಾಡಬೇಕು? ಆಡಳಿತ ಸಮಿತಿ ರಚನೆ ಮಾಡಿದ ಸಂದರ್ಭದಲ್ಲಿ ಯಾರಿಗೆ ನೇತೃತ್ವ ವಹಿಸಬೇಕು? ಎನ್ನುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಬೇಕಿದೆ.
ಗ್ರಾಮ ಪಂಚಾಯಿತಿ PDOಗೆ ವಹಿಸಬೇಕೋ ಅಥವಾ ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿಗೆ ವಹಿಸಬೇಕೋ ಎನ್ನುವ ಬಗ್ಗೆ ಚರ್ಚೆಗಳು ನಡೆಯಲಿವೆ.

ಮುಖ್ಯಮಂತ್ರಿ ಶ್ರೀ ಅವರು, ಕೊರೊನ ಯೋಧರಿಗೆ ಧನ್ಯವಾದ ಹೇಳುವ ವಿಡಿಯೋ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ:

ಜನರ ಬೇಜವಾಬ್ದಾರಿ, ಪೌರಕಾರ್ಮಿಕರಿಗೆ ಸೋಂಕಿನ ಭೀತಿ!

ಬೆಂಗಳೂರು(ಮೇ.04): ಕೊರೋನಾ ಸೋಂಕು ಭೀತಿಯಿಂದ ನಗರದಲ್ಲಿ ಲಕ್ಷಾಂ​ತರ ಮಂದಿ ಮಾಸ್ಕ್‌ ಬಳಸುತ್ತಿದ್ದು, ಸಾರ್ವಜನಿಕರು ಬಳಕೆ ಮಾಡಿದ ಮಾಸ್ಕ್‌ಗಳನ್ನು ರಸ್ತೆಯಲ್ಲಿ ಎಸೆಯುವ, ತ್ಯಾಜ್ಯದಲ್ಲಿ ಮಿಶ್ರಣ ಮಾಡುತ್ತಿರುವ ಪರಿಣಾಮ ಬಿಬಿಎಂಪಿ ಪೌರ ಕಾರ್ಮಿಕರಿಗೆ ಇದೀಗ ಕೊರೋನಾ ಸೋಂಕು ತಗುಲುವ ಆತಂಕ ಎದುರಾಗಿದೆ.
ಬಿಬಿಎಂಪಿಯ 39 ವಾರ್ಡ್‌ಗಳಲ್ಲಿ ಈವರೆಗೆ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಅದ​ರಲ್ಲಿ ಈಗಾಗಲೇ 16 ವಾರ್ಡ್‌ಗಳಲ್ಲಿ ಕಳೆದ 28 ದಿನ​ಗಳಿಂದ ಹೊಸದಾಗಿ ಸೋಂಕು ಪ್ರಕರಣ ಪತ್ತೆಯಾ​ಗಿಲ್ಲ. ಇನ್ನು 23 ವಾರ್ಡ್‌ಗಳನ್ನು ಕಂಟೈನ್ಮೆಂಟ್‌ ಮಾಡಿ​ಲಾಗಿದೆ. ಈ ಎಲ್ಲ ವಾರ್ಡ್‌ಗಳು ಸೇರಿದಂತೆ 198 ವಾರ್ಡ್‌ಗಳಲ್ಲಿ ಇರುವ ಸಾರ್ವಜನಿಕರು ಕೊರೋನಾ ಸೋಂಕಿನಿಂತ ಬಚಾವ್‌ ಆಗುವುದಕ್ಕೆ ಮಾಸ್ಕ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.
ಆದರೆ, ಬಳಕೆ ಮಾಡಿದ ಮಾಸ್ಕ್‌ಗಳನ್ನು ಸಾರ್ವಜನಿಕರು ರಸ್ತೆಯಲ್ಲಿ ಎಸೆಯುವುದು, ಹಸಿ ಮತ್ತು ಒಣ ಕಸದಲ್ಲಿ ಮಿಶ್ರಣ ಮಾಡಿ ಪೌರಕಾರ್ಮಿಕರಿಗೆ ನೀಡುತ್ತಿದ್ದಾರೆ.ಪೌರಕಾರ್ಮಿಕರು ಈ ಮಾಸ್ಕ್‌ಗಳನ್ನು ತ್ಯಾಜ್ಯದಿಂದ ಪ್ರತ್ಯೇಕ ಮಾಡಬೇಕಾಗಿದೆ. ಹೀಗಾಗಿ ಪೌರಕಾರ್ಮಿಕರಿಗೂ ಕೊರೋನಾ ಸೋಂಕು ಹರಡುವ ಭೀತಿ ಇದೀಗ ಎದುರಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌, ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತುಕೊಂಡು ಕಸ ನೀಡಬೇಕು. ಇಂತಹ ಕಠಿಣ ಸಂದರ್ಭದಲ್ಲೂ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರ ಆರೋಗ್ಯ ಕಾಳಜಿಯ ಬಗ್ಗೆ ಬಿಬಿಎಂಪಿಯೊಂದಿಗೆ ಸಾರ್ವಜನಿಕರು ಚಿಂತಿಸಬೇಕು ಎಂದಿದ್ದಾರೆ.
ಕಂಟೈನ್ಮೆಂಟ್‌ ಪ್ರದೇಶದಲ್ಲಿ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಸಂಪೂರ್ಣ ರಕ್ಷಣಾ ಕವಚ ನೀಡುವ ಕೆಲಸವನ್ನು ಪ್ರಾರಂಭಿಸಿದ್ದೇವೆ. ಪ್ರತ್ಯೇಕವಾಗಿ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗದೆ ಇರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ.
-ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ).

ಇಂದಿನಿಂದ ಲಾಕ್‌ಡೌನ್‌ 3.0 ಶುರು: ಏನ್ ಇರುತ್ತೆ.ಏನ್ ಇರೋದಿಲ್ಲ.? ಇಲ್ಲಿದೆ ಮಾಹಿತಿ

ನವದೆಹಲಿ : ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಘೋಷಿಸಿದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಎರಡು ವಾರಗಳ ವಿಸ್ತರಣೆಯನ್ನು ಗೃಹ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಎಂಹೆಚ್‌ಎ ಹೇಳಿಕೆಯ ಪ್ರಕಾರ, ವಿಸ್ತೃತ ಲಾಕ್‌ಡೌನ್‌ ಕಟ್ಟು ನಿಟ್ಟು ಆಯಾ ಜಿಲ್ಲೆಗಳಲ್ಲಿನ ಕೋವಿಡ್ -19 ಮಟ್ಟವನ್ನು ಅವಲಂಬಿಸಿರುತ್ತದೆ ಅಂತ ತಿಳಿಸಿದೆ. ದೇಶಾದ್ಯಂತ ಮೂರನೇ ಹಂತದ ಲಾಕ್ಡೌನ್ ಇಂದಿನಿಂದ ಆರಂಭವಾಗಲಿದೆ. ಮೇ 17 ರ ವರೆಗೆ ಜಾರಿಯಲ್ಲಿರುತ್ತದೆ. ಇಂದಿನಿಂದ ಮದ್ಯ ಮಾರಾಟ, ಬಸ್ ಸಂಚಾರ ಆರಂಭವಾಗಲಿದೆ. ಸರ್ಕಾರಿ ಕಚೇರಿಗಳು ಕೂಡ ಶುರುವಾಗಲಿದ್ದಾವೆ. ಇದಲ್ಲದೇ ಕೆಲವು ಆರೆಂಜ್‌ ವಲಯದಲ್ಲಿ ಸಲೂನ್‌ ಶಾಪ್‌ಗಳನ್ನು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿ ತೆರೆಯಲು ಅನುಮತಿ ನೀಡಲಾಗಿದೆ.ಹಾಗಾದ್ರೇ ಲಾಕ್‌ಡೌನ್ 3.0 ನಲ್ಲಿ ಅನ್ನೋದನ್ನು ನೋಡುವುದಾದ್ರೆ.
ಕೆಂಪು ವಲಯ
  • MNREGA ಕೆಲಸಗಳು
  • ಆಹಾರ ಸಂಸ್ಕರಣಾ ಘಟಕಗಳು ಮತ್ತು ಇಟ್ಟಿಗೆ-ಗೂಡುಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಕೈಗಾರಿಕಾ ಮತ್ತು ನಿರ್ಮಾಣ ಚಟುವಟಿಕೆಗಳನ್ನು ಅನುಮತಿಸಲಾಗಿದೆ
  • ಗ್ರಾಮೀಣ ಪ್ರದೇಶಗಳಲ್ಲಿ, ಸರಕುಗಳ ಸ್ವರೂಪಕ್ಕೆ ಯಾವುದೇ ವ್ಯತ್ಯಾಸವಿಲ್ಲದೆ, ಶಾಪಿಂಗ್ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ.
  • ಎಲ್ಲಾ ಕೃಷಿ ಚಟುವಟಿಕೆಗಳು, ಉದಾ., ಕೃಷಿ ಸರಬರಾಜು ಸರಪಳಿಯಲ್ಲಿ ಬಿತ್ತನೆ, ಕೊಯ್ಲು, ಸಂಗ್ರಹಣೆ ಮತ್ತು ಮಾರುಕಟ್ಟೆ ಕಾರ್ಯಾಚರಣೆಗಳನ್ನು ಅನುಮತಿಸಲಾಗಿದೆ.
  • ಒಳನಾಡು ಮತ್ತು ಸಮುದ್ರ ಮೀನುಗಾರಿಕೆ ಸೇರಿದಂತೆ ಪಶುಸಂಗೋಪನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಅನುಮತಿಸಲಾಗಿದೆ
  • ಸಂಸ್ಕರಣೆ ಮತ್ತು ಮಾರುಕಟ್ಟೆ ಸೇರಿದಂತೆ ಎಲ್ಲಾ ತೋಟ ಚಟುವಟಿಕೆಗಳನ್ನು ಅನುಮತಿಸಲಾಗಿದೆ.
  • ಎಲ್ಲಾ ಆರೋಗ್ಯ ಸೇವೆಗಳು (ಆಯುಷ್ ಸೇರಿದಂತೆ) ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳನ್ನು ಏರ್ ಆಂಬುಲೆನ್ಸ್‌ಗಳ ಮೂಲಕ ಸಾಗಿಸುವುದನ್ನು ಒಳಗೊಂಡಂತೆ ಕ್ರಿಯಾತ್ಮಕವಾಗಿರುತ್ತವೆ.
  • ಹಣಕಾಸು ಕ್ಷೇತ್ರದ ಬಹುಪಾಲು ಭಾಗವು ಮುಕ್ತವಾಗಿ ಉಳಿದಿದೆ, ಇದರಲ್ಲಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ವಿಮೆ ಮತ್ತು ಬಂಡವಾಳ ಮಾರುಕಟ್ಟೆ ಚಟುವಟಿಕೆಗಳು ಮತ್ತು ಸಾಲ ಸಹಕಾರ ಸಂಘಗಳು ಸೇರಿವೆ.
  • ಮಕ್ಕಳು, ಹಿರಿಯ ನಾಗರಿಕರು, ನಿರ್ಗತಿಕರು, ಮಹಿಳೆಯರು ಮತ್ತು ವಿಧವೆಯರಿಗೆ ಮನೆಗಳ ಕಾರ್ಯಾಚರಣೆ; ಮತ್ತು ಅಂಗನವಾಡಿಗಳ ಕಾರ್ಯಾಚರಣೆಯನ್ನು ಸಹ ಅನುಮತಿಸಲಾಗಿದೆ.
  • ಸಾರ್ವಜನಿಕ ಉಪಯುಕ್ತತೆಗಳು, ಉದಾ., ವಿದ್ಯುತ್, ನೀರು, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ದೂರಸಂಪರ್ಕ ಮತ್ತು ಅಂತರ್ಜಾಲದಲ್ಲಿನ ಉಪಯುಕ್ತತೆಗಳು ಮುಕ್ತವಾಗಿರುತ್ತವೆ ಮತ್ತು ಕೊರಿಯರ್ ಮತ್ತು ಅಂಚೆ ಸೇವೆಗಳನ್ನು ನಿರ್ವಹಿಸಲು ಅನುಮತಿಸಲಾಗುತ್ತದೆ.
  • ಕೆಂಪು ಮತ್ತು ವಲಯಗಳಲ್ಲಿ ಹೆಚ್ಚಿನ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಇವುಗಳಲ್ಲಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು, ಐಟಿ ಮತ್ತು ಐಟಿ ಶಕ್ತಗೊಂಡ ಸೇವೆಗಳು, ಡೇಟಾ ಮತ್ತು ಕಾಲ್ ಸೆಂಟರ್, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳು, ಖಾಸಗಿ ಭದ್ರತೆ ಮತ್ತು ಸೌಲಭ್ಯ ನಿರ್ವಹಣಾ ಸೇವೆಗಳು ಮತ್ತು ಕ್ಷೌರಿಕರನ್ನು ಹೊರತುಪಡಿಸಿ ಸ್ವಯಂ ಉದ್ಯೋಗಿ ವ್ಯಕ್ತಿಗಳು ಒದಗಿಸುವ ಸೇವೆಗಳು ಸೇರಿವೆ.
  • ಔಷಧಗಳು, ವೈದ್ಯಕೀಯ ಸಾಧನಗಳು, ಅವುಗಳ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳು ಸೇರಿದಂತೆ ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು; ಸೆಣಬಿನ ಉದ್ಯಮ; ಮತ್ತು ಐಟಿ ಹಾರ್ಡ್‌ವೇರ್ ತಯಾರಿಕೆ ಮತ್ತು ಪ್ಯಾಕೇಜಿಂಗ್ ವಸ್ತುಗಳ ಉತ್ಪಾದನಾ ಘಟಕಗಳನ್ನು ಅನುಮತಿಸಲಾಗಿದೆ.
ಕಿತ್ತಳೆ ವಲಯಗಳು
  • ಕಿತ್ತಳೆ ವಲಯಗಳಲ್ಲಿ, ಕೆಂಪು ವಲಯದಲ್ಲಿ ಅನುಮತಿಸಲಾದ ಚಟುವಟಿಕೆಗಳ ಜೊತೆಗೆ, ಟ್ಯಾಕ್ಸಿಗಳು ಮತ್ತು ಕ್ಯಾಬ್ ಅಗ್ರಿಗೇಟರ್‌ಗಳಿಗೆ 1 ಚಾಲಕ ಮತ್ತು 1 ಪ್ರಯಾಣಿಕರೊಂದಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.
  • ವ್ಯಕ್ತಿಗಳು ಮತ್ತು ವಾಹನಗಳ ಅಂತರ-ಜಿಲ್ಲಾ ಚಲನೆಯನ್ನು ಅನುಮತಿಸಲಾದ ಚಟುವಟಿಕೆಗಳಿಗೆ ಮಾತ್ರ ಅನುಮತಿಸಲಾಗುತ್ತದೆ.
  • ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕನಲ್ಲದೆ ಗರಿಷ್ಠ ಇಬ್ಬರು ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗೆ ಅವಕಾಶ ನೀಡಲಾಗಿದೆ.
ಹಸಿರು ವಲಯಗಳು
  • ಹಸಿರು ವಲಯಗಳಲ್ಲಿ, ದೇಶಾದ್ಯಂತ ನಿಷೇಧಿಸಲಾದ ಸೀಮಿತ ಸಂಖ್ಯೆಯ ಚಟುವಟಿಕೆಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ಇದೆ. ಆದಾಗ್ಯೂ, ಬಸ್ಸುಗಳು 50 ಪ್ರತಿಶತದಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಲ್ಲವು ಮತ್ತು
  • ಬಸ್ ಡಿಪೋಗಳು 50 ಪ್ರತಿಶತದಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಲ್ಲವು. ಇದಲ್ಲದೇ ಯಾವುದೇ ರೀತಿಯ ಪ್ರತ್ಯೇಕ ಪಾಸ್ ಅಗತ್ಯವಿಲ್ಲ, ಇದು ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಸರಕು ಮತ್ತು ಸೇವೆಗಳ ಪೂರೈಕೆಗೆ ಸಹಕಾರಿಯಾಗಿದೆ.

Sunday, May 3, 2020

ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕೆಪಿಸಿಸಿ ವತಿಯಿಂದ 1 ಕೋಟಿ ನೆರವು

ಬೆಂಗಳೂರು,ಮೇ 3- ವಲಸೆ ಕಾರ್ಮಿಕರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ವತಿಯಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಒಂದು ಕೋಟಿ ರೂ. ಚೆಕ್ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಸದೆ ಇರುವುದರಿಂದ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲಾಗದೆ ಪರದಾಡುತ್ತಿದ್ದಾರೆ.
ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಅನೇಕ ಮಂದಿ ಊಟ, ತಿಂಡಿ ವ್ಯವಸ್ಥೆ ಬಸ್ ಇಲ್ಲದೆ ಬಸ್ ನಿಲ್ದಾಣದಲ್ಲಿ ಅನಾಥರಾಗಿ ಬಳಲುತ್ತಿದ್ದಾರೆ. ರಾಜಸ್ಥಾನ, ತೆಲಂಗಾಣ, ದೆಹಲಿ, ಉತ್ತರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಅನೇಕ ರಾಜ್ಯಗಳು ಪ್ರಯಾಣಿಕರು ತಮ್ಮ ಊರು ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿವೆ.ಆದರೆ ನಮ್ಮ ಸರ್ಕಾರ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಪ್ರಯಾಣಿಕರ ಯೋಗಕ್ಷೇಮದ ಬಗ್ಗೆ ಚಿಂತಿಸಿಲ್ಲ. ಸರ್ಕಾರಕ್ಕೆ ತೀವ್ರ ಹಣಕಾಸಿನ ತೊಂದರೆ ಇರಬಹುದು. ಹೀಗಾಗಿ ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಅನೇಕ ಮುಖಂಡರು ಕೊರೊನಾ ಕಾಂಗ್ರೆಸ್ ಪರಿಹಾರ ನಿಧಿಗೆ ನೀಡಿರುವ ಹಣದಲ್ಲಿ ಒಂದು ಕೋಟಿ ರೂ.ಗಳ ಚೆಕ್‍ನ್ನು ಸಾರಿಗೆ ಸಂಸ್ಥೆಗೆ ನೀಡುತ್ತಿದ್ದೇವೆ.
ಇದರಲ್ಲಿ ಪ್ರಯಾಣಿಕರನ್ನು ಉಚಿತವಾಗಿ ಊರಿಗೆ ತಲುಪಿಸುವ ವ್ಯವಸ್ಥೆ ಇನ್ನು ಅಗತ್ಯಬಿದ್ದರೆ ಹೇಳಿ ಕೆಪಿಸಿಸಿ ಭರಿಸುತ್ತದೆ. ಪ್ರಜೆಗಳ ಕ್ಷೇಮವೇ ನಮ್ಮ ಕರ್ತವ್ಯ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಎಚ್ಚರಿಕೆ : ಎಣ್ಣೆ ಮಾರೋರಿಗೂ, ಕುಡಿಯೋರಿಗೂ Conditions Apply, ಯಾಮಾರಿದರೆ ತೆರಬೇಕಾಗುತ್ತೆ ದಂಡ..!

ಬೆಂಗಳೂರು : ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಿದ್ದ ಮಧ್ಯದ ಅಂಗಡಿಗಳು ನಾಳೆ ರಾಜ್ಯಾದ್ಯಂತ ( ಕಂಟೋನ್ಮೆಂಟ್ ಹೊರತುಪಡಿಸಿ) ತೆರೆಯಲಿದ್ದು, ಭಾನುವಾರದಿಂದಲೇ ಎಣ್ಣೆ ಪ್ರಿಯರು ದಾಂಗುಡಿ ಇಟ್ಟಿದ್ದಾರೆ. ಇದರ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯ ಜನರಿಗೂ ಎಣ್ಣೆ ಬೇಕು ಅಂದರೆ ಸರಿಯಾಗಿ ಲಾಕ್‍ಡೌನ್ ನಿಯಮ ಪಾಲಿಸಿ ಸೋಂಕು ಮುಕ್ತ ಝೋನ್ ಆಗಬೇಕಿದೆ. ಸರಿಯಾಗಿ ನಿಯಮ ಪಾಲಿಸದಿದ್ದರೆ, ನೂಕು ನುಗ್ಗಲು ಉಂಟಾದರೆ ತಕ್ಷಣ ಮದ್ಯದಂಗಡಿ ಮುಚ್ಚುವುದಾಗಿ ಅಬಕಾರಿ ಸಚಿವ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮದ್ಯದಂಗಡಿ ತೆರೆಯುವ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಸನ್ನದುದಾರರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.ಅಲ್ಲದೇ ಒಬ್ಬರಿಗೆ ಎಷ್ಟು ಲೀಟರ್ ಮದ್ಯ ನೀಡಬೇಕು ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.
ಪ್ರತಿ ಮದ್ಯದಂಗಡಿ ಮುಂಭಾಗ ಬ್ಯಾರಿಕೇಡ್ ಅಳವಡಿಸಬೇಕು, ಬ್ಯಾರಿಕೇಡ್ ನ ಒಳಭಾಗದಲ್ಲಿ ಕೇವಲ ಐದು ಜನ ಮಾತ್ರ ಇರಲು ಅವಕಾಶ ನೀಡಬೇಕು. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಂಗಡಿ ತೆರೆಯಲು ಅನುಮತಿ ನೀಡಬೇಕು, ಪೊಲೀಸರು ಇದ್ದರೂ, ಸ್ವಂತ ಖರ್ಚಿನಲ್ಲಿ ಭದ್ರತಾ ಸಿಬ್ಭಂಧಿಗಳನ್ನು ನೇಮಿಸಿಕೊಳ್ಳಬೇಕೆಂದು ಎಂದು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಲಾಯಿತು.
ಒಬ್ಬರಿಗೆ 4 ಫುಲ್ ಬಾಟಲ್ ಬಿಯರ್, 6 ಪಿಂಟ್ ಬಾಟಲಿ, 2.3 ಲೀ. (6 ಕ್ವಾಟರ್ ಅಥವಾ ಒಂದುವರೆ ಬಾಟಲ್) ಮಾತ್ರ ನೀಡುವಂತೆ ಆದೇಶ ನೀಡಲಾಗಿದೆ. ಮದ್ಯ ಹೊರತುಪಡಿಸಿ, ಕೌಂಟರ್ ನಲ್ಲಿ ಬೇರೆ ಪದಾರ್ಥ ಅಥವಾ ನೀರು ಕೂಡ ನೀಡುವಂತಿಲ್ಲ.ಮದ್ಯದಂಗಡಿ ಪಕ್ಕದ ಗೂಡಂಗಡಿಗಳಲ್ಲಿಯೂ ಮದ್ಯ ಸೇವನೆ ಮಾಡುವಂತಿಲ್ಲ. ಮದ್ಯ ಮಾರಾಟ ವೇಳೆ ಕೈಗವಸು ಮತ್ತು ಮಾಸ್ಕ್ ಬಳಸಲು ಸೂಚನೆ ನೀಡಲಾಗಿದೆ.
ಮದ್ಯದಂಗಡಿ ಮುಂಭಾಗ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದು, ಎಲ್ಲಾ ಮದ್ಯದಂಗಡಿ ಮುಂಭಾಗ ದಲ್ಲಿ ಸಿಸಿ ಟಿವಿ ಅಳವಡಿಕೆ ಕಡ್ಡಾಯವಾಗಿದೆ. ಜಿಲ್ಲೆಯಲ್ಲಿನ 260 ಅಂಗಡಿಗಳ ಪೈಕಿ, ಕೇವಲ 155 ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ.
ರಾಜ್ಯದ ಮೂರು ಜಿಲ್ಲೆಗಳು (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು) ಕೆಂಪು ವಲಯಕ್ಕೆ ಸೇರಿವೆ. ಕಿತ್ತಲೆ ವಲಯದಲ್ಲಿ 13 ಜಿಲ್ಲೆಗಳಿದ್ದು, ಹಸಿರು ವಲಯದಲ್ಲಿ 14 ಜಿಲ್ಲೆಗಳಿವೆ. ಈ ಮೂರು ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೆಂಪು ವಲಯದಲ್ಲಿ ಕೆಲ ನಿಯಮಗಳು ಅನ್ವಯವಾಗಲಿದೆ.
ಹಸಿರು ಮತ್ತು ಹಳದಿ ವಲಯದಲ್ಲಿ ಎಲ್ಲ ಸೇವೆಗಳು ನಾಳೆಯಿಂದ ಆರಂಭವಾಗಲಿದೆ. ಅದರಂತೆ ಮದ್ಯ ಮತ್ತು ಪಾನ್​ ಶಾಪ್​ಗಳು ತೆರೆಯಲಿವೆ. ಆದರೆ, ಬಾರ್​ ಆಯಂಡ್ ರೆಸ್ಟೋರೆಂಟ್​ಗಳನ್ನು ತೆರೆಯಲು ಅವಕಾಶವಿಲ್ಲ. ಕೇವಲ ಎಂಎಸ್​ಐಎಲ್ ಮತ್ತು ವೈನ್​ ಶಾಪ್​ ತೆರೆಯಲು ಅವಕಾಶ ನೀಡಲಾಗಿದೆ.
ಇಲ್ಲೂ ಸಹ ಒಬ್ಬರಿಂದ ಒಬ್ಬರಿಗೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಐದಕ್ಕಿಂತ ಹೆಚ್ಚು ಜನರು ಸ್ಥಳದಲ್ಲಿ ಇರುವಂತಿಲ್ಲ. ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಕೆಂಪು ವಲಯದ ಜಿಲ್ಲೆಗಳಲ್ಲಿ ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದ್ದು, ಕಂಟೈನ್​ಮೆಂಟ್ ಮತ್ತು ರೆಡ್​ ಜೋನ್​ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ.
ಆಯಾ ನಗರ ಪಾಲಿಕೆ ವಲಯವಾರು ವಿಂಗಡಣೆ ಮಾಡಿದ್ದು, ಅದರಂತೆ ಹಸಿರು ಮತ್ತು ಕಿತ್ತಲೆ ವಲಯದಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.ಕೊನೆಯ 21 ದಿನದಿಂದ ಪ್ರಕರಣ ಪತ್ತೆ ಆಗದ ಸ್ಥಳಗಳು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ.
ಗ್ರೀನ್ ಹಾಗೂ ರೆಡ್ ಝೋನ್ ಬೈಫರಿಕೇಟ್ ಮಾಡಲಾಗದ ಸ್ಥಳ ಅರೆಂಜ್ ಝೋನ್ ಪಟ್ಟಿಯಲ್ಲಿರಲಿವೆ. ರಾಜ್ಯ ಸರ್ಕಾರ ಬಹುತೇಕ ಕೇಂದ್ರದ ಮಾರ್ಗಸೂಚಿಗಳನ್ನು ಯಥಾವತ್ತು ಪಾಲಿಸಿದೆ. ಮೂರು ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
# ಸರದಿಯಲ್ಲಿ ನಿಂತ ಜನ
ಬೆಂಗಳೂರಿನಲ್ಲಿ ಲಾಕ್ ಡೌನ್ ನಿಂದಾಗಿ 40 ದಿನಗಳಿಂದ ಮದ್ಯ ಇಲ್ಲದೆ ತತ್ತರಿಸಿದ್ದ ಮದ್ಯಪ್ರಿಯರು ನಾಳೆಯಿಂದ ಬೆಳಗ್ಗೆಯಿಂದ ಮದ್ಯ ಸಿಗುತ್ತದೆ ಅಂತಾ ಇಂದಿನಿಂದಲೇ ಬೆಂಗಳೂರಿನಲ್ಲಿ ಕ್ಯೂ ನಿಂತಿದ್ದಾರೆ.
ನಗರದ ಬಳೆಪೇಟೆಯಲ್ಲಿರುವ ಬೆಲ್ ವೈನ್ಸ್ ಮುಂದೆ ನೂರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ಸಾಲು ಗಟ್ಟಿ ನಿಂತಿದ್ದಾರೆ. ಇದೇ ವೇಳೆ ಸಾಮಾಜಿಕ ಅಂತವನ್ನು ಕುಡುಕರು ಪಾಲಿಸುತ್ತಿದ್ದಾರೆ. ಇದೇ ವೇಳೆ ಬೂದಿಕೋಟೆ ಗ್ರಾಮದಲ್ಲಿ ಮದ್ಯದಂಗಡಿಗೆ ಪೂಜೆ ಸಹ ಮಾಡಿದ್ದಾರೆ. ಇನ್ನು ಹಲವು ಮದ್ಯದಂಗಡಿ ಮಾಲೀಕರು ಅಂಗಡಿಗಳಿಗೆ ಸಿರಿಯಲ್ ಸೆಟ್ ಅನ್ನು ಹಾಕಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ರೆಡ್, ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಮೇ 17ರವರೆಗೂ ಲಾಕ್​​ಡೌನ್​​ ವಿಸ್ತರಣೆಯಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಸರ್ಕಾರ ಶನಿವಾರ ಹೊಸ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರದ ಹೊಸ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲನೆ ಮಾಡಲು ಸಿಎಂ ಸಮ್ಮತಿ ನೀಡಿದ್ದಾರೆ. ಇದರ ಪ್ರಕಾರ ರೈಲು ಪ್ರಯಾಣ ಮತ್ತು ಅಂತರ್‌ರಾಜ್ಯ ಪ್ರಯಾಣಕ್ಕೆ ಅವಕಾಶ ಇಲ್ಲ. ಮೆಟ್ರೋ ರೈಲು ಸಂಚಾರ, ಶಾಲಾ-ಕಾಲೇಜುಗಳು, ಚಲನಚಿತ್ರ ಮಂದಿರಗಳು, ಮಾಲ್‌ಗಳು, ಜಿಮ್, ಸ್ವಿಮ್ಮಿಂಗ್ ಪೂಲ್ಸ್, ಎಂಟರ್ಟೈನ್ಮೆಂಟ್ ಪಾರ್ಕ್ಸ್ ತೆರೆಯಲು ಅನುಮತಿ ನೀಡಿಲ್ಲ.
# ಷರತ್ತುಗಳು ಏನು..,?
1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
2. ವೈನ್‍ಶಾಪ್, ಎಂಆರ್‌ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
7. ಮದ್ಯ ಕೊಂಡುಕೊಳ್ಳುವ ಗ್ರಾಹಕರಿಗೆ ಮಾಸ್ಕ್ ಕಡ್ಡಾಯ
8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
10. 6 ಅಡಿ ಸಾಮಾಜಿಕ ಅಂತರ ಇರಬೇಕು.

ಗಾಯಾಳು ಚಾಲಕನಿಗೆ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿದ ಸಚಿವ ಸವದಿ

ಹೊಸಪೇಟೆ: ಕೂಡ್ಲಿಗಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭಾನುವಾರ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕನಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮಾನವೀಯತೆ ತೋರಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ಸು ಬಾಗಲಕೋಟೆಯಲ್ಲಿ ವಲಸೆ ಕಾರ್ಮಿಕರನ್ನು ಬಿಟ್ಟು ರಾಮನಗರಕ್ಕೆ ಹಿಂತಿರುಗುವಾಗ ಕೂಡ್ಲಿಗಿ ಬಳಿ ಕಂದಕಕ್ಕೆ ಉರುಳಿದೆ. ಈ ವೇಳೆ ಅದರೊಳಗಿದ್ದ ಚಾಲಕ ಶರಣಪ್ಪ ಕಾಲ್ಗುಡಿ ಗಾಯಗೊಂಡಿದ್ದಾರೆ. ಅದೇ ಮಾರ್ಗವಾಗಿ ಲಕ್ಷ್ಮಣ ಸವದಿ ಅವರು ಬೆಂಗಳೂರಿಗೆ ಹೋಗುತ್ತಿದ್ದರು. ಬಸ್‌ ಅಪಘಾತಕ್ಕೀಡಾಗಿರುವುದನ್ನು ಕಂಡು, ಕಾರು ನಿಲ್ಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ ಪೊಲೀಸರಿಗೆ ಕರೆ ಮಾಡಿ, ಸ್ಥಳಕ್ಕೆ ಆಂಬ್ಯುಲೆನ್ಸ್‌ ಕರೆಸಿ ಶರಣಪ್ಪ ಅವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಚಾಲಕ ಸೋಮಣ್ಣ, ಹೆಚ್ಚುವರಿ ಚಾಲಕ ಮೌನೇಶ ಪತ್ತಾರ ಬಸ್ಸಿನಲ್ಲಿದ್ದರು. ಬಾಗಲಕೋಟೆಯವರಾದ ಶರಣಪ್ಪ ಅವರು ಮಾಗಡಿ ಡಿಪೊದಲ್ಲಿ ಕೆಲಸ ಮಾಡುತ್ತಾರೆ. ಕೆಲಸದ ನಿಮಿತ್ತ ಬಸ್ಸಿನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.
'ಬಸ್ಸಿನ ಎದುರು ಏಕಾಏಕಿ ಕರು ಅಡ್ಡ ಬಂದಿತ್ತು. ಚಾಲಕ ಸೋಮಣ್ಣ ಅದನ್ನು ತಪ್ಪಿಸಲು ಹೋದಾಗ ರಸ್ತೆಬದಿಯ ಕಂದಕಕ್ಕೆ ಬಸ್‌ ಇಳಿದಿದೆ. ನನಗೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಚಿವರು ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ' ಎಂದು ಶರಣಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ಹಣ ವಿತ್​ಡ್ರಾ ಮಾಡಲು ಜಾರಿಗೆ ಬಂತು ಹೊಸ ನಿಯಮ!; ನಾಳೆಯಿಂದಲೇ ಅನ್ವಯ

ಲಾಕ್​ಡೌನ್​ ಅವಧಿ ವೇಳೆ ಜನರು ಬ್ಯಾಂಕ್​ಗೆ ಬರುವುದನ್ನು ತಡೆಯಲು ಭಾರತೀಯ ಬ್ಯಾಂಕ್​ಗಳ ಸಂಘ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮ ಸೋಮವಾರದಿಂದ ಜಾರಿಗೆ ಬರಲಿದೆ.
ಹೊಸ ನಿಯಮದ ಅಡಿಯಲ್ಲಿ ಎಲ್ಲರಿಗೂ ಹಣ ತೆಗೆಯಲು ಅವಕಾಶ ಇರುವುದಿಲ್ಲ. ಬ್ಯಾಂಕ್​ ಖಾತೆ ಸಂಖ್ಯೆ ಕೊನೆಯಲ್ಲಿ 0 ಅಥವಾ 1 ಇದ್ದರೆ ಅವರು ಮೇ 4ರಂದು ಬ್ಯಾಂಕ್​ನಲ್ಲಿ ಹಣ ತೆಗೆಯಬಹುದು. 2 ಮತ್ತು 3 ನಂಬರ್​ ಇದ್ದರೆ ಮೇ 5ರಂದು ಹಣ ತೆಗೆಯಬಹುದು. 4 ಮತ್ತು 5 ಸಂಖ್ಯೆ ಇದ್ದರೆ ಮೇ 6ರಂದು ಹಣ ತೆಗೆಯಬಹುದು.
ಇನ್ನು, ಬ್ಯಾಂಕ್ ಖಾತೆಯ ಕೊನೆಯಲ್ಲಿ 6 ಮತ್ತು 7 ಸಂಖ್ಯೆ ಹೊಂದಿರುವವರು ಮೇ 8ರಂದು ಹಣ ತೆಗೆಯಬಹುದು. 8 ಸಂಖ್ಯೆ ಮೇ 9ರಂದು ಹಾಗೂ 9 ನಂಬರ್​ ಹೊಂದಿರುವವರು ಮೇ 11ರಂದು ಹಣ ತೆಗೆಯಬಹುದಾಗಿದೆ.ಇದರ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಮೇ 12ರ ನಂತರ ಎಲ್ಲರೂ ಬ್ಯಾಂಕ್​ಗೆ ತೆರಳಿ ಹಣ ತೆಗೆಯಬಹುದಾಗಿದೆ.
ಕೊರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಆನ್​ಲೈನ್​ ಪೇಮೆಂಟ್​ಗೆ ಹೆಚ್ಚು ಒತ್ತು ನೀಡುವಂತೆ ಸರ್ಕಾರ ಕೇಳಿದೆ.

ಕೊರೊನಾ ವಾರಿಯರ್ಸ್‍ಗೆ ದೇಶದ ವಿವಿಧೆ ಸೇನಾ ಪಡೆ ಗೌರವ, ಪುಷ್ಪವೃಷ್ಟಿ

ನವದೆಹಲಿ, ಮೇ 3-ಪ್ರಾಣವನ್ನೇ ಪಣವಾಗಿಟ್ಟು ಕೊರೊನಾ ವೈರಸ್ ವಿರುದ್ಧ ದೇಶದ ಜನರನ್ನು ರಕ್ಷಿಸುತ್ತಿರುವ ಕೊರೊನಾ ವಾರಿಯರ್ಸ್ (ವೈದ್ಯರು, ನರ್ಸ್‍ಗಳು, ಆರೋಗ್ಯ ರಕ್ಷಕರು, ಪೊಲೀಸರು, ರಕ್ಷಣಾ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು) ಸಮೂಹಕ್ಕೆ ಮೂರು ಸಶಸ್ತ್ರ ಪಡೆಗಳು ಇದೇ ದೇಶದ ವಿವಿಧೆಡೆ ವಿಶೇಷ ಗೌರವ ಸಲ್ಲಿಸುತ್ತಿವೆ.
ಭಾರತೀಯ ಭೂ ಸೇನೆ, ವಾಯು ಪಡೆ ಮತ್ತು ನೌಕಾ ದಳಗಳು ಇಂದು ಬೆಳಗ್ಗೆಯಿಂದ ನವದೆಹಲಿ, ಮುಂಬೈ, ಕೊಲ್ಕತಾ, ಚೆನ್ನೈ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಗೌರವ ಸಲ್ಲಿಸುತ್ತಿವೆ. ಫ್ಲೈ ಫಾಸ್ಟ್ ಹೆಲಿಕಾಪ್ಟರ್‍ಗಳ ಮೂಲಕ ಆಗಸದಿಂದ ಕೊರೊನಾ ಹೋರಾಟಗಾರರ ಮೇಲೆ ಹೂವಿನ ಮಳೆಗರೆಯಲಾಗಿದೆ.
ಯುದ್ಧ ನೌಕೆಗಳಲ್ಲಿ ಇವರ ಗೌರವಾರ್ಥ ದೀಪಗಳನ್ನು ಬೆಳಗಿಸಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಆಸ್ಪತ್ರೆಗಳು ಮತ್ತು ಶುಶ್ರೂಷಾ ಕೇಂದ್ರಗಳ ಮೇಲೆ ಹಾರಾಡಿದ ಹೆಲಿಕಾಪ್ಟರ್‍ಗಳು ಪುಷ್ಪ ವೃಷ್ಟಿಗರೆದಿವೆ.ಅತ್ತ ಸಮುದ್ರದ ತೀರದ ಬಳಿ ಲಂಗರೂ ಹಾಕಿರುವ ಯುದ್ಧ ನೌಕೆಗಳಲ್ಲಿ ದೀಪಗಳು ಬೆಳಗುತ್ತಿವೆ.
ಭೂ ಸೇನಾ ಪಡೆ ಯೋಧರು ಸುಶ್ರಾವ್ಯವಾಗಿ ಮಿಲಿಟರಿ ಬ್ಯಾಂಡ್‍ಗಳನ್ನು ನುಡಿಸಿವೆ. ದೇಶದ ಈ ಮೂರು ಸಶಸ್ತ್ರ ಮೀಸಲು ಪಡೆಗಳು, ಡೆಡ್ಲಿ ಕೊರನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‍ಗಳಾದ ವೈದ್ಯರು, ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ರಕ್ಷಣಾ ಕಾರ್ಯಕರ್ತರು ಮತ್ತು ನೈರ್ಮಲ್ಯ ರಕ್ಷಣೆ ಮಾಡುವ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ. ಇಂದು ಬೆಳಗ್ಗೆಯಿಂದ ಸಂಜೆವರೆಗೂ ದೇಶದ ಉದ್ದಗಲಕ್ಕೂ ಈ ಗೌರವ ಸಮರ್ಪಣೆ ಕಾರ್ಯಗಳು ನಡೆಲಿವೆ.

ದ.ಕ.ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣದ ಪಾಸ್ ಬಗ್ಗೆ ಜಿಲ್ಲಾ ಎಸ್ಪಿ ಮಾಹಿತಿ

ಮಂಗಳೂರು, ಮೇ 3: ದ.ಕ.ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣದ ಪಾಸ್ ಪಡೆಯುವ ಬಗ್ಗೆ ದ.ಕ.ಜಿಲ್ಲಾ ಎಸ್ಪಿ ಮಾಹಿತಿ ಪ್ರಕಟಿಸಿದ್ದಾರೆ. ಅದರಂತೆ ಹೊರ ಜಿಲ್ಲೆಗಳಿಗೆ ಪುಯಾಣಿಸಲು ಬಯಸುವ ಸಾರ್ವಜನಿಕರು https://bit.ly/dkdicepass ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಯಾಣದ ಪಾಸ್ ಪಡೆಯಬಹುದಾಗಿದೆ.
*ಒಬ್ಬ ವ್ಯಕ್ತಿ ತನ್ನ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಂದು ಬಾರಿ ಮಾತ್ರ ಅಂತರ್ ಜಿಲ್ಲಾ ಪ್ರಯಾಣದ ಪಾಸ್ ಪಡೆಯಬಹುದು.
*ಈ ಪಾಸ್ ಏಕಮುಖವಾಗಿದೆ. ಇದನ್ನು ಮರುಪ್ರಯಾಣಕ್ಕೆ ಬಳಸುವಂತಿಲ್ಲ.
*ಪಾಸ್‌ಗೆ ಅರ್ಜಿ ಸಲ್ಲಿಸುವಾಗ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಪಾಸ್‌ಗೆ ಸಂಬಂಧಿಸಿದ ಲಿಂಕ್ ಮೆಸೇಜ್ ಮೂಲಕ ಬರಲಿದ್ದು, ಈ ಲಿಂಕ್ ಕ್ಲಿಕ್ ಮಾಡಿ ಪಾಸ್ ಪಡೆಯಬಹುದು.
*ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸುವ ಸಾರ್ವಜನಿಕರ ವಾಹನದ ಚಾಲಕರಿಗೆ ಪ್ರತ್ಯೇಕ ಪಾಸ್ ದೊರೆಯಲಿದೆ.
ಈ ಪಾಸ್ ಮೂಲಕ ವಾಹನದ ಚಾಲಕರು ಸಾರ್ವಜನಿಕರನ್ನು ತಲುಪಿಸಿ ಹಿಂದಿರುಗಲು ಅವಕಾಶವಿದೆ.
*ಹೊರ ಜಿಲ್ಲೆಯಿಂದ ದ.ಕ.ಜಿಲ್ಲೆಗೆ ಬಂದು ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಿಂತಿರುಗಲು ಸಾಧ್ಯವಾಗದಿರುವ ವ್ಯಕ್ತಿಗಳು ಮರಳಿ ತಮ್ಮ ಜಿಲ್ಲೆಗಳಿಗೆ ತೆರಳಲು ಈ ಪಾಸ್ ಮೂಲಕ ಏಕಮುಖ ಪ್ರಯಾಣಕ್ಕೆ ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

BIG NEWS : ದಾವಣಗೆರೆಯಲ್ಲಿ ಇಂದು 21 ಮಂದಿಗೆ ಕೊರೋನಾ..! ರಾಜ್ಯದಲ್ಲಿ ಒಂದೇ ದಿನ ಒಟ್ಟು 34 ಪಾಸಿಟಿವ್ ಕೇಸ್..!

ಬೆಂಗಳೂರು : ಮಧ್ಯ ಕರ್ನಾಟಕದ ರಾಜಧಾನಿ ಹಾಗೂ ಬೆಣ್ಣೆ ನಗರಿ ದಾವಣಗೆರೆ ಒಂದರಲ್ಲೇ 21 ಪ್ರಕರಣ ಸೇರಿದಂತೆ ಭಾನುವಾರ ರಾಜ್ಯದಲ್ಲಿ ಒಟ್ಟು 34 ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿವೆ. ಇದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದು,ಒಂದೇ ದಿನ 21 ಪ್ರಕರಣಗಳು ಕಂಡುಬಂದಿರುವುದರಿಂದ ಜಿಲ್ಲಾಡಳಿತದಿಂದ ತುರ್ತು ಸಭೆ ನಡೆಸಿದ್ದು, ಬೆಣ್ಣೆ ನಗರಿ ರೆಡ್‌ ಝೋನ್‌ಗೆ ಜಾರಿದೆ. ರಾಜ್ಯದಲ್ಲಿ ಇದುವರೆಗೂ 635 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಬೆಂಗಳೂರಿನಲ್ಲಿ 4, ಕಲಬುರ್ಗಿಯಲ್ಲಿ 6 ಮತ್ತು ಬಾಗಲಕೋಟೆಯಲ್ಲಿ 3 ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲೂ ದಾವಣೆಗೆರೆ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 21 ಜನರಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದು ಇದೇ ಮೊದಲು ಎನ್ನಲಾಗಿದೆ.
ವಾರದ ಹಿಂದಷ್ಟೇ ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಮನೆಯಿಂದ ಯಾರೂ ಹೊರಬರದಂತೆ ಶೀಘ್ರದಲ್ಲೇ ಆದೇಶ ಹೊರಡಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಸೋಂಕಿಗೆ ಒಳಗಾದವರ ಪ್ರಾಥಮಿಕ ಸಂಪರ್ಕಕ್ಕೆ ಹೋದವರನ್ನೆಲ್ಲ ಗುರುತಿಸಿ ಕ್ವಾರಂಟೈನ್​ ಮಾಡಲಾಗಿತ್ತು.ಶುಕ್ರವಾರ 94 ಜನರ ಮತ್ತು ನಿನ್ನೆ (ಶನಿವಾರ) 74 ಮಂದಿಯ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳಿಸಲಾಗಿತ್ತು.
ಈಗ 37 ಜನರ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 21 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ದಾವಣಗೆರೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಇನ್ನೂ 296 ಮಂದಿಯ ವೈದ್ಯಕೀಯ ವರದಿ ಬರಬೇಕಿದೆ. ಇದು ಪ್ರಾಥಮಿಕ ವರದಿ. ಎರಡನೇ ರಿಪೋರ್ಟ್ ಬಳಿಕವಷ್ಟೇ ಪೇಷೆಂಟ್ ನಂಬರ್ ನೀಡುತ್ತೇವೆ. ಬಾಷಾ ನಗರ ಮತ್ತು ಜಾಲಿನಗರಗಳು ಸಂಪೂರ್ಣ ಸೀಲ್​ಡೌನ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ಯಾರಿಂದ ಈ 21 ಮಂದಿಗೆ ಸೋಂಕು ತಗುಲಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಪ್ರಕರಣ ಸಂಖ್ಯೆ 533 ಮತ್ತು 556ರಿಂದ ಈ ಪ್ರಕರಣಗಳು ಬೆಳಕಿಗೆ ಬಂದಿದೆ.ಪ್ರಾಥಮಿಕ ಮಾಹಿತಿ ಪ್ರಕಾರ ಹರಿಹರಕ್ಕೂ ಕೊರೋನಾ ವೈರಸ್ ಸೋಂಕು ಹರಡಿರುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.
602ನೇ ರೋಗಿ ಕಲಬುರಗಿಯ 13 ವರ್ಷದ ಬಾಲಕಿಯಾಗಿದ್ದು, 532 ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. 603ನೇ ರೋಗಿ ಕಲಬುರಗಿಯ 54 ವರ್ಷದ ಪುರುಷನಾಗಿದ್ದು, 532 ರೋಗಿಯೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದಾರೆ. 604ನೇ ರೋಗಿ ಕಲಬುರಗಿಯವರಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 605, 606ನೇ ರೋಗಿ ಬಾಗಲಕೋಟೆ ಜಿಲ್ಲೆಯ ಮುದೋಳದವರಾಗಿದ್ದಾರೆ. 607ನೇ ರೋಗಿ ಬಾದಾಮಿಯ ಮಹಿಳೆಯಾಗಿದ್ದಾರೆ.
ಇನ್ನು, 35 ವರ್ಷದ ಮಹಿಳೆ ಹಾಗೂ 78 ವರ್ಷದ ಪುರುಷನಿಗೆ ಐಎಲ್‌ಐ ಹಿನ್ನೆಲೆ ಇದ್ದು, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಇದರ ಜೊತೆ 22 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿದ್ದು, ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಬೆಂಗಳೂರು ನಗರದಲ್ಲಿ ರೋಗಿ ಸಂಖ್ಯೆ 350ರ ಸಂಪರ್ಕದಿಂದ 45 ವರ್ಷದ ಮಹಿಳೆ, 24 ವರ್ಷದ ಮಹಿಳೆ ಹಾಗೂ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇನ್ನು, 24 ವರ್ಷದ ಪುರುಷನಿಗೆ ಬಿಬಿಎಂಪಿ ವಾರ್ಡ್‌ನಲ್ಲಿ ಓಡಾಡಿದ ಹಿನ್ನೆಲೆಯಿಂದ ಸೋಂಕು ಬಂದಿದೆ.
ಬಾಗಲಕೋಟೆಯ ಮುಧೋಳದಲ್ಲಿ ರೋಗಿ ಸಂಖ್ಯೆ 380ರ ದ್ವಿತೀಯ ಸಂಪರ್ಕದ 68 ವರ್ಷದ ಪುರುಷ ಹಾಗೂ 60 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಬಾದಾಮಿಯ 23 ವರ್ಷದ ಮಹಿಳೆಗೆ SಂಖI ಹಿನ್ನೆಲೆಯಿಂದ ಸೋಂಕು ದೃಢವಾಗಿದೆ.
608ನೇ ರೋಗಿ ಬೆಂಗಳೂರಿನ 24 ವರ್ಷದ ಯುವಕನಾಗಿದ್ದಾರೆ. 609, 610 ಮತ್ತು 611ನೇ ರೋಗಿ ಕಲಬುರಗಿಯವರಾಗಿದ್ದಾರೆ. 612, 613 ಮತ್ತು 614ನೇ ರೋಗಿಗಳು ಬೆಂಗಳೂರಿನ ಮಹಿಳೆಯರಾಗಿದ್ದಾರೆ. ಇವರೆಲ್ಲರಿಗೂ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಈವರೆಗೆ 25 ಮಂದಿ ಸಾವನ್ನಪ್ಪಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಆಯಕ್ಟಿವ್ ಕೇಸ್​ಗಳ ಸಂಖ್ಯೆ 295 ಮಾತ್ರ ಇದೆ. ಐಸಿಯುನಲ್ಲಿರುವ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದೀಗ ಮೂವರು ಮಾತ್ರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿ-101, ಪಿ-349 ಮತ್ತು ಪಿ-536 ಅವರು ಐಸಿಯುನಲ್ಲಿರುವ ರೋಗಿಗಳು. ಇನ್ನುಳಿದ 293 ರೋಗಿಗಳ ಆರೋಗ್ಯದಲ್ಲಿ ಅಷ್ಟೇನೂ ಏರುಪೇರಾಗಿಲ್ಲ. ಈ ಎಲ್ಲರೂ ಕೂಡ ವಿವಿಧ ಆಸ್ಪತ್ರೆಗಳಲ್ಲಿ ಐಸೋಲೇಶನ್ ವಾರ್ಡ್​ಗಳಲ್ಲಿ ದಾಖಲಾಗಿದ್ದಾರೆ.
ಮೈಸೂರಿನಲ್ಲಿ ಕೊರೋನಾ ಸೋಂಕಿನಿಂದ ದಾಖಲಾಗಿದ್ದ 88 ರೋಗಿಗಳ ಪೈಕಿ ಈವರೆಗೆ 75 ಮಂದಿ ಡಿಸ್​ಚಾರ್ಜ್ ಆಗಿದ್ಧಾರೆ. ಅಲ್ಲಿ ಕೇವಲ 13 ಆಯಕ್ಟಿವ್ ಕೇಸ್​ಗಳು ಮಾತ್ರ ಉಳಿದಿವೆ. ಈ ಮೂಲಕ ಮೈಸೂರು ಹೆಚ್ಚೂಕಡಿಮೆ ಅಪಾಯದಿಂದ ಪಾರಾಗಿದೆ.
ಆಕ್ಟಿವ್ ಕೇಸ್​ಗಳಲ್ಲಿ ಅತಿ ಹೆಚ್ಚು ಇರುವುದು ಬೆಂಗಳೂರಲ್ಲೇ. ಇಲ್ಲಿ 70 ಮಂದಿ ಸೋಂಕಿತರಿದ್ದಾರೆ. ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ ಜಿಲ್ಲೆಗಳಲ್ಲಿ ಹಾಲಿ ಸೋಂಕಿತರ ಸಂಖ್ಯೆ ಎರಡಂಕಿ ಇದೆ.
ಇದರಲ್ಲಿ 25 ಜನ ಸಾವನ್ನಪ್ಪಿದ್ದರೆ, 293 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರದ ಸಂಜೆಯ ಮಾಧ್ಯಮ ವರದಿಯ ಪ್ರಕಾರ ಕೇವಲ 3 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ವೈರಸ್‌ ಪ್ರಕರಣಗಳು ಕಂಡುಬಂದಿವೆ.

ಸಾಹಿತಿ ಕೆ.ಎಸ್. ನಿಸಾರ್ ಅಹಮದ್ ನಿಧನಕ್ಕೆ ಮುಖ್ಯಮಂತ್ರಿ ಸೇರಿ ಹಲವು ಗಣ್ಯರ ಸಂತಾಪ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ಅತ್ಯುತ್ತಮ ಸಾಹಿತ್ಯ ಸಂಕಲನಗಳನ್ನು ಕನ್ನಡಕ್ಕೆ ನೀಡಿದ ಅವರು, ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆಮಾತಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೆ ಭಾಜನರಾಗಿದ್ದ ಅವರು ಕನ್ನಡದ ಎಲ್ಲ ಪ್ರಾಕಾರಗಳನ್ನು ಶ್ರೀಮಂತಗೊಳಿಸಿದ್ದರು ಎಂದು ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ
ನಿಸಾರ್ ಅಹ್ಮದ್ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಯಾವ ಪಂಥ, ಪಂಗಡಕ್ಕೆ ಕಟ್ಟಿಕೊಳ್ಳದೆ ಸ್ವಚ್ಛಂದವಾಗಿ ಹಕ್ಕಿಯಂತೆ ಕಾವ್ಯ ಕಟ್ಟುತ್ತಾ ಸರ್ವಜನ ಪ್ರಿಯರಾಗಿದ್ದ ನಿಸಾರ್ ಅಹ್ಮದ್ ಅವರ ಕಾಯ ಅಳಿದರೂ ಅವರ ಕಾವ್ಯದ ಮೂಲಕ ನೆಮ್ಮ ನೆನಪಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧಿಯಾಗಿದ್ದ ಕೆಎಸ್ ನಿಸಾರ್ ಅಹಮದ್ ವಿಧಿ ವಶ😓😥


ಮಣಿಪಾಲ: ಕನ್ನಡ ಸಾಂಸ್ಕೃತಿಕ ಲೋಕದ ಶ್ರೇಷ್ಠ ಕವಿ, ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧಿಯಾಗಿದ್ದ ಕೆಎಸ್ ನಿಸಾರ್ ಅಹಮದ್(ಕೊಕ್ಕರೆ ಹೊಸಳ್ಳಿ ಶೇಖಹೈದರ್ ನಿಸಾರ್ ಅಹಮದ್) ಅವರು ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಕೆಎಸ್ ಎನ್ ಅವರು ಜಲಪಾತ ಎಂಬ ಕವನ ಬರೆದು ಪ್ರತಿಭೆಯನ್ನು ತೋರ್ಪಡಿಸಿದ್ದರು.
ಈವರೆಗೆ 21 ಕವನ ಸಂಕಲನಗಳು, 14 ವೈಚಾರಿಕ ಕೃತಿಗಳು, 5 ಅನುವಾದ, 13 ಸಂಪಾದನಾ ಗ್ರಂಥ ಹಾಗೂ 5 ಮಕ್ಕಳ ಸಾಹಿತ್ಯ ಕೃತಿಗಳನ್ನು ಹೊರತಂದಿರುವ ಹೆಗ್ಗಳಿಕೆ ಕೆಎಸ್ ಎನ್ ಅವರದ್ದಾಗಿದೆ.
ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವರ ಪ್ರಸಿದ್ಧ ಕವನ ಸಂಕಲನಗಳಾಗಿವೆ. ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ 1978ರಲ್ಲಿ ಹೊರಬರುವ ಮೂಲಕ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆದಿದ್ದು ಇತಿಹಾಸವಾಗಿದೆ.ಸಂವೇದನಾಶೀಲ ಹಾಗೂ ಜನಪ್ರಿಯ ಕವಿ ನಿಸಾರ್ ಅಹ್ಮದ್ ಅವರ “ಕುರಿಗಳು ಸಾರ್ ಕುರಿಗಳು, ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನಗಳು ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ನೆನದವರ ಮನದಲ್ಲಿ, ನಾನೆಂಬ ಪರಕೀಯ, ಅನಾಮಿಕ ಆಂಗ್ಲರು, ಸುಮಹೂರ್ತ, ಸಂಜೆ ಐದರ ಮಳೆ, ಸ್ವಯಂ ಸೇವೆಯ ಗಿಳಿಗಳು ಕೆಎಸ್ ಎನ್ ಅವರ ಪ್ರಸಿದ್ಧ ಕವನ ಸಂಕಲನಗಳಾಗಿವೆ.
ಇದುವರೆಗೆ ಕೆಎಸ್ ನಿಸಾರ್ ಅಹಮದ್ ಅವರ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಮಿಳಿತವಾಗಿ ಕನ್ನಡ ನಾಡಿನಾದ್ಯಂತ ಜನಪ್ರಿಯಗೊಂಡಿವೆ. ಮೆಚ್ಚಿನ ಕವಿಯಾಗಿ ಗುರುತಿಸಿಕೊಂಡಿದ್ದ ಕೆಎಸ್ ಎನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ, ಗೊರೂರು, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ಪಡೆದಿದ್ದರು.

ಅಕ್ರಮ - ಸಕ್ರಮ: ಸರ್ಕಾರಿ ಜಮೀನು ಸಾಗುವಳಿ ರೈತರಿಗೆ ಸರ್ಕಾರದಿಂದ ಭರ್ಜರಿ 'ಗುಡ್ ನ್ಯೂಸ್'

ಬೆಂಗಳೂರು: ಬಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ತಿರಸ್ಕೃತ ಅರ್ಜಿದಾರರಿಗೆ ಮತ್ತೊಂದು ಸಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಇದರಿಂದ 13 ಲಕ್ಷ ರೈತರಿಗೆ ಅನುಕೂಲವಾಗಲಿದೆ.
ಲಾಕ್ ಡೌನ್ ಮುಗಿದ ಬಳಿಕ ಫಾರಂ ನಂಬರ್ 50, 53 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಜಮೀನಿನ ಬಗರ್ ಹುಕುಂ ಸಾಗುವಳಿಯನ್ನು ಸಕ್ರಮ ಮಾಡಬೇಕೆಂದು ರೈತರು ವರ್ಷಗಳಿಂದ ಮನವಿ ಮಾಡಿದ್ದಾರೆ. ಅವರ ಮನವಿಗೆ ಸರ್ಕಾರ ಸ್ಪಂದಿಸಿದ್ದು ಸಾಗುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಅರ್ಜಿ ಸಲ್ಲಿಕೆ ತಿರಸ್ಕೃತವಾಗಿದ್ದರೂ ಬಹುತೇಕ ರೈತರು ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಿರಸ್ಕೃತಗೊಂಡ ಅರ್ಜಿದಾರರಿಂದ ಮತ್ತೊಮ್ಮೆ ಅರ್ಜಿ ಸ್ವೀಕರಿಸಲು ಅವಕಾಶ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಸಲ್ಲಿಕೆಯಾಗಿದ್ದ ಅಕ್ರಮ ಸಕ್ರಮ ಅರ್ಜಿಗಳು ತಿರಸ್ಕೃತವಾಗಿದೆ. ಅವುಗಳಿಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದು ಎನ್ನಲಾಗಿದೆ.