WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, February 12, 2021

ಸತ್ಯ ಮಾತನಾಡುವುದು ಕ್ರಾಂತಿಕಾರಿ ಕೃತ್ಯವಾಗಿದೆ: ಮೊಯಿತ್ರಾ

ಹೊಸದಿಲ್ಲಿ: ರಾಷ್ಟ್ರೀಯ ಚರ್ಚೆಯ ಮಾನದಂಡದಲ್ಲಿ ಸತ್ಯ ಮಾತನಾಡುವುದು 'ಕ್ರಾಂತಿಕಾರಿ ಕೃತ್ಯ''ವಾಗಿದೆ ಎಂದು ಇತ್ತೀಚೆಗೆ ಲೋಕಸಭೆಯಲ್ಲಿ ಬಿರುಸಿನ ಭಾಷಣದ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ NDTV ಗೆ ತಿಳಿಸಿದ್ದಾರೆ.

ಭಾರತದ ಮಾಜಿ ಮುಖ್ಯ ನ್ಯಾಯಾಧೀಶರ ಕುರಿತು ಸಂಸತ್ತಿನಲ್ಲಿ ಮಾತನಾಡಿದ್ದಕ್ಕೆ ಬಿಜೆಪಿಯ ಇಬ್ಬರು ಸಂಸದರು ತನ್ನ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮೊಯಿತ್ರಾ, ಇದು ಬಿಜೆಪಿಯ ಕೊಳಕು ಹಾಗೂ ಅಪಪ್ರಚಾರದ ತಂತ್ರವಾಗಿದೆ ಎಂದರು.

ಇದು ಬಿಜೆಪಿಯ ಸಾಮಾನ್ಯ ತಂತ್ರವಾಗಿದೆ. ನೀವು ಸಿಬಿಐ ಅಥವಾ ಈಡಿಯ ಮೂಲಕ ಸಿಲುಕದಿದ್ದರೆ ಇಂತಹ ಕೊಳಕು ತಂತ್ರಗಳು ಅವರಲ್ಲಿ ಇರುತ್ತವೆ. 2019ರ ಜೂನ್ ನಲ್ಲಿ ನಾನು ಮೊದಲ ಬಾರಿ ಸಂಸತ್ತಿನಲ್ಲಿ ಭಾಷಣ ಮಾಡಿದ್ದಾಗ ಅದು ವೈರಲ್ ಆದಾಗ ಮೊದಲಿಗೆ ಬಿಜೆಪಿಯವರಿಗೆ ಅರ್ಥವಾಗಿರಲಿಲ್ಲ.

ಒಂದೆರಡು ದಿನಗಳ ಬಳಿಕ ನನ್ನ ಭಾಷಣ ಅರ್ಥವಾದಾಗ ತಕ್ಷಣವೇ ತಮ್ಮ ನೆಚ್ಚಿನ ಚಾನೆಲ್ ಗಳ ಮೂಲಕ ನನ್ನ ವಿರುದ್ಧ ಅಪಪ್ರಚಾರ ಮಾಡಲು ಆರಂಭಿಸಿದ್ದವು. ನನ್ನ ಈ ಭಾಷಣವೂ ಕೂಡ ಅವರಿಗೆ ಅರ್ಥವಾಗಲು 48 ಗಂಟೆಗಳು ಬೇಕಾದವು. ಇದೀಗ ಅವರು ಪ್ರಚಾರದ ಯಂತ್ರಗಳು, ಕೊಳಕು ತಂತ್ರಗಾರಿಕೆಯ ಮೂಲಕ ಆಟ ಆಡಲು ಆರಂಭಿಸಿದ್ದಾರೆ. ಇದೀಗ ಇಬ್ಬರು ಸದಸ್ಯರು ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ ಎಂದು ಮೊಯಿತ್ರಾ ಹೇಳಿದ್ದಾರೆ.

(ಮಾಹಿತಿ ಕೃಪೆ ವಾರ್ತಾಭಾರತಿ)

 

ಕನ್ನಡ ಸಂಸ್ಕೃತಿ ಪುಸ್ತಕಗಳಿಗೆ ನೆಲವೇ ಆಸರೆ, ಎಲ್ಲೆಂದರಲ್ಲಿ ಬಿದ್ದ ಕೃತಿಗಳು

 

ಯಾದಗಿರಿ: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ 2,500ಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ನೆಲದ ಮೇಲೆ ಬಿದ್ದು, ಧೂಳುಮಯವಾಗಿವೆ. ಇದು ಪುಸ್ತಕ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿವರ್ಷ ಸಾವಿರಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತದೆ. ಅಂಥ ಪುಸ್ತಕಗಳನ್ನು ಆಯಾ ಜಿಲ್ಲೆಗಳ ಇಲಾಖೆಗೆ ಕಳಿಸಿಕೊಡುತ್ತದೆ. ಆ ಜಿಲ್ಲೆಯವರು ಆ ಪುಸ್ತಕಗಳ ಮಾರಾಟ ಮಾಡಬೇಕಿದೆ. ಸಾವಿರಾರು ಪುಸ್ತಕಗಳನ್ನು ಕಳಿಸುವ ಇಲಾಖೆ ಅವುಗಳನ್ನು ಶಿಸ್ತುಬದ್ಧವಾಗಿ ಇಡಲು ರ್‍ಯಾಕ್‌ ಕಳಿಸಿಲ್ಲ ಎನ್ನುವುದು ಇಲಾಖೆ ಅಧಿಕಾರಿಗಳ ಅಸಹಾಯಕತೆಯಾಗಿದೆ.

₹50ರಿಂದ ₹600 ಬೆಲೆ ಇರುವ ಪುಸ್ತಕಗಳು: ಇಲಾಖೆ ಪ್ರಕಟಿಸುವ ಪುಸ್ತಕಗಳು ನೂರಾರು ರೂಪಾಯಿ ಮೌಲ್ಯವುಳ್ಳದ್ದಾಗಿವೆ.

₹50ರಿಂದ ₹600ರ ತನಕ ಬೆಲೆ ಬಾಳುವ ಪುಸ್ತಕಗಳಿವೆ. ಆದರೆ, ಅವುಗಳನ್ನು ಸರಿಯಾಗಿಡಲು ಜಾಗದ ಕೊರತೆ ಇದೆ.

ಎಲ್ಲೆಂದರಲ್ಲೇ ಬಿದ್ದ ಪುಸ್ತಕಗಳು: ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಒಂದು ಕೋಣೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಇಲ್ಲಿ ಕೂಡ ಎಲ್ಲೆಂದರಲ್ಲೇ ಪುಸ್ತಕಗಳನ್ನು ಇಡಲಾಗಿದೆ. ಒಂದರ ಮೇಲೆ ಒಂದು ಪೇರಿಸಿಡಲಾಗಿದೆ. ಇದರಿಂದ ಓದುಗರು ಯಾವ ಪುಸ್ತಕ ಖರೀದಿ ಮಾಡಬೇಕಾದರೂ ತಡಕಾಡಬೇಕಾಗುತ್ತದೆ.

ನೆಲದ ಮೇಲೆ ಬಿದ್ದ ಮೌಲಿಕ ಕೃತಿಗಳು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಲವಾರು ಪ್ರಕಟಣೆಗಳನ್ನು ಹೊರ ತಂದಿದೆ. ಆದರೆ, ಅವುಗಳನ್ನು ಸರಿಯಾಗಿ ಸಂರಕ್ಷಣೆ ಮಾಡುವ ಕೆಲಸ ಆಗುತ್ತಿಲ್ಲ. ಕೆಲವು ಬಾಕ್ಸ್‌ಗಳಲ್ಲಿದ್ದರೆ ಇನ್ನೂ ಕೆಲವು ನೆಲದ ಮೇಲೆ ಹರಡಲಾಗಿದೆ. ರ‍್ಯಾಕ್‌ ಇದ್ದರೆ ನೇರವಾಗಿ ಕೃತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ಯಾವ್ಯಾವ ಪುಸ್ತಕ ಇವೆ?: ಬಸವಯುಗದ ವಚನ ಮಹಾಸಂಪುಟ: ಒಂದು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಇತಿಹಾಸದಲ್ಲಿ ವಿಜ್ಞಾನ ಸೇರಿದಂತೆ ಇನ್ನಿತರ ಸಾವಿರಾರು ಪುಸ್ತಕಗಳು ನೆಲದ ಮೇಲೆ
ಬಿದ್ದಿವೆ.

ಸಿಬ್ಬಂದಿ ಕೊರತೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಸಹಾಯಕ ನಿರ್ದೇಶಕ, ಎಫ್‌ಡಿಎ, ಕಚೇರಿ ಸಹಾಯಕರು ಸೇರಿದಂತೆ ಮೂವರು ಕರ್ತವ್ಯದಲ್ಲಿದ್ದಾರೆ. ಇದರಲ್ಲಿ ಕಚೇರಿ ಸಹಾಯಕರು ಎರವಲು ಮೇಲೆ ಬಂದಿದ್ದಾರೆ. ಇದರಿಂದಲೂ ಪುಸ್ತಕಗಳನ್ನು ಸಂರಕ್ಷಣೆ ಮಾಡಲು ಆಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಳಲಾಗಿದೆ.

ವಿವಿಧ ಜಯಂತಿ, ಕಲೆ ಮತ್ತು ಸಂಸ್ಕೃತಿ ಸಂರಕ್ಷಣೆ ಹೊಣೆ ಒತ್ತಿರುವ ಇಲಾಖೆಯಲ್ಲಿ ಸಿಬ್ಬಂದಿಯಿಲ್ಲದೆ ಪರದಾಡುವುದು ಸಾಮಾನ್ಯವಾಗಿದೆ. ಜೊತೆಗೆ ಸಮನ್ವಯ ಕೊರತೆಯೂ ಇಲ್ಲಿದೆ. ಇದರಿಂದಲೂ ಪುಸ್ತಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ
ಎನ್ನಲಾಗುತ್ತಿದೆ.

'ನೆಲೆದ ಮೇಲೆ ಪುಸ್ತಕಗಳನ್ನು ಇಟ್ಟಿರುವುದರಿಂದ ನಮಗೂ ಬೇಸರ ಇದೆ. ಆದರೆ, ಯಾವುದೇ ವಿಧಿಯಿಲ್ಲದೆ ಇಟ್ಟಿದ್ದೇವೆ. ಸರ್ಕಾರ ರ್‍ಯಾಕ್‌ ಒದಗಿಸಿದರೆ ನೀಟಾಗಿ ಇಡಲು ಸಾಧ್ಯವಾಗುತ್ತದೆ' ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೋಶ ಮರಬನಳ್ಳಿ.

ಪುಸ್ತಕ ಪ್ರೇಮಿಗಳ ಆಕ್ರೋಶ: 'ನೆಲದ ಮೇಲೆ ಪುಸ್ತಕಗಳನ್ನು ಇಟ್ಟು ಇಲಾಖೆ ಕನ್ನಡ ಪುಸ್ತಕಗಳಿಗೆ ಅಗೌರವ ತೋರುತ್ತಿದೆ. ಶೀಘ್ರವೇ ಸರ್ಕಾರ ಪುಸ್ತಕಗಳನ್ನು ಕಳಿಸುವ ಜೊತೆಗೆ ಸಂಗ್ರಹಿಸಿಡಲು ಸೂಕ್ತ ಸಲಕರಣೆಗಳನ್ನು ಒದಗಿಸಿಕೊಡಬೇಕು' ಎಂದು ಪುಸ್ತಕ ಪ್ರೇಮಿಗಳು ಆಗ್ರಹಿಸಿದ್ದಾರೆ.

***

ಪುಸ್ತಕ ಇಡಲು ಜಾಗ ಇದೆ. ಆದರೆ, ಸಾವಿರಾರು ಪುಸ್ತಕಗಳನ್ನು ಒಂದು ಕಡೆ ಸಂಗ್ರಹಿಸಿಡಲು ರ್‍ಯಾಕ್‌ ಇಲ್ಲದಾಗಿದೆ. ಇದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇವೆ

-ಕೊಟ್ರೋಶ ಮರಬನಳ್ಳಿ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

***

ಸರ್ಕಾರ ಶೀಘ್ರವೇ ಪುಸ್ತಕ ಸಂಗ್ರಹಿಸಿಡುವ ರ್‍ಯಾಕ್‌ ಒದಗಿಸಿಕೊಡಬೇಕು. ಇಲ್ಲದಿದ್ದರೆ ಪುಸ್ತಕಗಳು ಧೂಳು ಹಿಡಿದು ಅವಸಾನದತ್ತ ಹೋಗಲಿವೆ

-ಬಸವರಾಜ ಕಲೆಗಾರ, ಪುಸ್ತಕ ಪ್ರೇಮಿ

(ಮಾಹಿತಿ ಕೃಪೆ ಪ್ರಜಾವಾಣಿ)

ಪ್ರಾಂಶುಪಾಲರ ಹುದ್ದೆ ಭರ್ತಿಗೆ ಶೀಘ್ರ ಚಾಲನೆ

 

ಬೆಂಗಳೂರು: 'ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕೂಡಲೇ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರಾಧ್ಯಾಪಕ ಹುದ್ದೆಯ ಪದೋನ್ನತಿ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು' ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಕರ್ನಾಟಕ ಸರ್ಕಾರಿ ಕಾಲೇಜುಗಳ ಬೋಧಕರ ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, '2021ರ ವರ್ಗಾವಣೆ ಕಾಯ್ದೆಯ ಪ್ರಕಾರ ಈಗಾಗಲೇ ಸರ್ಕಾರ ವರ್ಗಾವಣೆ ನೀತಿ ರೂಪಿಸಿದೆ. ಈ ವರ್ಷದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲಾಗುವುದು' ಎಂದರು.

ಪಿಎಚ್‌ಡಿ ಮಾಡಲು ಅರ್ಜಿ ಸಲ್ಲಿಸುವ ವೇಳೆ ನಿರಾಪೇಕ್ಷಣಾ ಪತ್ರ ಕೇಳಬಾರದು. ಬದಲಿಗೆ ಪ್ರವೇಶ ಪಡೆದ ಮೇಲೆಯೇ ಈ ಪತ್ರವನ್ನು ಸಲ್ಲಿಸಿದರೆ ಸಾಕು.

ಈ ಬಗ್ಗೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

'ಪ್ರಾಧ್ಯಾಪಕರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರದ ಪಾಲು ತುಂಬಲಾಗಿಲ್ಲ. ಈ ಮೊತ್ತವನ್ನು ಕೂಡಲೇ ತುಂಬಲಾಗುವುದು. 2006ರ ಯುಜಿಸಿ ವೇತನ ಹಿಂಬಾಕಿ ಮತ್ತು 2019ರ ಏಪ್ರಿಲ್‌ನಿಂದ ಪಾವತಿಯಾಗಬೇಕಿರುವ ವೇತನ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು' ಎಂದೂ ಅವರು ತಿಳಿಸಿದರು.

ಬೋಧಕ ಸಿಬ್ಬಂದಿ ಪದನಾಮ:

'ಕಾಲೇಜುಗಳಲ್ಲಿ ಈವರೆಗೂ ಬೋಧಕೇತರ ಸಿಬ್ಬಂದಿಯಾಗಿದ್ದ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಸಿಬ್ಬಂದಿಗೆ ಪ್ರಾಧ್ಯಾಪಕರ ಸ್ಥಾನಮಾನ ನೀಡುವುದು, ಸರ್ಕಾರಿ ಸ್ವಾಮ್ಯದಲ್ಲಿರುವ 108 ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಪ್ರಾಧ್ಯಾಪಕರಿಗೆ ಪಿಎಚ್‌ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಕೊಡುವ ಬಗ್ಗೆ ಪರಿಶೀಲಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

'2003ರಲ್ಲಿ ನೇಮಕಗೊಂಡ ಅರೆಕಾಲಿಕ ಉಪನ್ಯಾಸಕರಿಗೆ ಮಾನವೀಯತೆಯ ಆಧಾರದ ಮೇಲೆ ಪದೋನ್ನತಿ ನೀಡಲು ಹಾಗೂ ಬಾಕಿ ಇರುವ ಪದೋನ್ನತಿ ಪ್ರಸ್ತಾವಗಳನ್ನು ಕೆಲವೇ ದಿನಗಳಲ್ಲಿ ಮಂಜೂರು ಮಾಡಲಾಗುವುದು' ಎಂದು ಸಚಿವರು ಹೇಳಿದರು.

ಎಲ್ಲ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿಯವರಿಗೆ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ್ ಧನ್ಯವಾದ ಹೇಳಿದರು.

ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

Thursday, February 11, 2021

ಈರುಳ್ಳಿ ಬೆಳೆಗಾರರಿಗೆ ಪರಿಹಾರ ಮರೀಚಿಕೆ

 ಹೂವಿನಹಡಗಲಿ: ತಾಲ್ಲೂಕಿನಲ್ಲಿ ಕಳೆದ ಮುಂಗಾರು ಋತುವಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಗೀಡಾಗಿದ್ದು, ರೈತರಿಗೆ ಪರಿಹಾರ ಮರೀಚಿಕೆಯಾಗಿದೆ.

ತಾಲ್ಲೂಕಿನಲ್ಲಿ ಬಹು ವರ್ಷಗಳಿಂದ ಈರುಳ್ಳಿ ಬೆಳೆಗಾರರ ಬದುಕು ಸಂಕಷ್ಟದಲ್ಲಿದೆ. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇಲ್ಲದ ದುಸ್ಥಿತಿಗೆ ರೋಸಿ ಹೋಗಿರುವ ರೈತರು 'ಈರುಳ್ಳಿಯ ಸಹವಾಸವೇ ಸಾಕು' ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸತತ ಎರಡು ವರ್ಷ ಈರುಳ್ಳಿ ಬೆಳೆಗೆ ಕೊಳೆರೋಗ ಬಾಧಿಸಿದೆ. ಬೆಳೆ ನಿರ್ವಹಣೆಗೆ ಮಾಡಿದ ಖರ್ಚು ಹಿಂತಿರುಗದೇ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಹಿಂದಿನ ವರ್ಷ ಸರ್ಕಾರ ಅಲ್ಪ ಪರಿಹಾರ ನೀಡಿ ರೈತರಿಗೆ ಆಸರೆಯಾಗಿತ್ತು. ಈ ಬಾರಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಆಗಲೇ ಪರಿಹಾರ ವಿತರಣೆಯಾಗಿದ್ದು, ಹೂವಿನಹಡಗಲಿ ತಾಲ್ಲೂಕಿಗೆ ಪರಿಹಾರ ಬಿಡುಗಡೆಗೊಳಿಸದೇ ಸರ್ಕಾರ ತಾರತಮ್ಯ ಮಾಡಿದೆ ಎಂದು ರೈತರು ದೂರುತ್ತಿದ್ದಾರೆ.

ಕಳೆದ ಮುಂಗಾರಿನಲ್ಲಿ ಇಟ್ಟಿಗಿ ಹೋಬಳಿಯ ಇಟ್ಟಿಗಿ, ಉತ್ತಂಗಿ, ತಳಕಲ್ಲು, ಕೆಂಚಮ್ಮನಹಳ್ಳಿ, ಮಹಾಜನದಳ್ಳಿ, ಮುಸುಕಿನ ಕಲ್ಲಹಳ್ಳಿ, ಸೋಗಿಯಲ್ಲಿ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಹಿರೇಹಡಗಲಿ ಹೋಬಳಿಯೂ ಸೇರಿದಂತೆ ತಾಲ್ಲೂಕಿನಲ್ಲಿ ಕಳೆದ ಮುಂಗಾರಿನಲ್ಲಿ ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ನಿರಂತರ ಮಳೆ, ಮೋಡ ಕವಿದ ವಾತಾವರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿ ಈರುಳ್ಳಿಗೆ ಕೊಳೆರೋಗ ವ್ಯಾಪಿಸಿ, ಸಂಪೂರ್ಣ ಬೆಳೆ ಹಾನಿ ಸಂಭವಿಸಿತ್ತು.

ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕಿನಲ್ಲಿ ಜಂಟಿ ಸಮೀಕ್ಷೆ ನಡೆಸಿ 1,221 ಜನ ರೈತರ 961 ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಬೆಳೆಯು ಕೊಳೆರೋಗದಿಂದ ಹಾನಿಗೀಡಾಗಿರುವ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿತ್ತು. ಬೆಳೆಹಾನಿ ಸಂತ್ರಸ್ತರ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿತ್ತು. ಪರಿಹಾರದ ಹಣ ಮಾತ್ರ ರೈತರಿಗೆ ಇನ್ನೂ ವಿತರಣೆ ಆಗಿಲ್ಲ.

'ಮೂರು ಎಕರೆಯಲ್ಲಿ ಈರುಳ್ಳಿ ಬೆಳೆಯಲು ₹1 ಲಕ್ಷ ಖರ್ಚು ಮಾಡಿದ್ದೆವು. ಕೊಳೆರೋಗದಿಂದ ಸಂಪೂರ್ಣ ಬೆಳೆ ಹಾಳಾಗಿ ಒಂದು ರೂಪಾಯಿ ಆದಾಯವೂ ಕೈ ಸೇರಿಲ್ಲ. ಸತತ ಎರಡು ವರ್ಷದಿಂದ ನಷ್ಟ ಅನುಭವಿಸಿದ್ದೇವೆ. ಸರ್ಕಾರದಿಂದ ಪರಿಹಾರವೂ ಸಿಕ್ಕಿಲ್ಲ. ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಆದರೆ, ಕೃಷಿ ಉತ್ಪನ್ನಗಳಿಗೆ ಬೆಲೆಯೇ ಇಲ್ಲವಾಗಿದೆ' ಎಂದು ಇಟ್ಟಿಗಿಯ ರೈತ ರಾಜಶೇಖರ್ ಅಳಲು ತೋಡಿಕೊಂಡರು.

(ಮಾಹಿತಿ ಕೃಪೆ ಪ್ರಜಾವಾಣಿ)

Tuesday, February 9, 2021

ಸೋಫಾ ಮಾರಲು ಹೋಗಿ 34 ಸಾವಿರ ಕಳೆದುಕೊಂಡ ಸಿಎಂ ಕೇಜ್ರಿವಾಲ್ ಮಗಳು: ಏನಿದು QR Code Scam ?

 

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಇತ್ತೀಚೆಗಷ್ಟೇ ಆನ್ ಲೈನ್ ವಂಚನೆಯ ಜಾಲಕ್ಕೆ ಸಿಲುಕಿದ್ದಾರೆ. ಹಳೆಯ ಸೋಫಾ ಒಂದನ್ನು ಮಾರಲು ಹೋಗಿ 34 ಸಾವಿರ ರೂ. ಕಳೆದುಕೊಂಡಿದ್ದಾರೆ.

ದೆಹಲಿ ಮುಖ್ಯಮಂತ್ರಿಗಳ ಮಗಳಾದ ಹರ್ಷಿತಾ ಕೇಜ್ರಿವಾಲ್ ಡೆಲ್ಲಿ ಐಐಟಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಪ್ರಸಿದ್ದ ಇ-ಕಾಮರ್ಸ್ ವೇದಿಕೆಯೊಂದರಲ್ಲಿ ಹಳೆಯ ಸೋಫಾವೊಂದನ್ನು ಮಾರಲು ಮುಂದಾಗಿದ್ದರು. ಈ ವೇಳೆ ಸೋಫಾ ಖರೀದಿಸಲು ಆಸಕ್ತಿ ತೋರಿದ ಗ್ರಾಹಕನೋರ್ವ ಸಣ್ಣ ಮೊತ್ತದ ಹಣವನ್ನು ಹರ್ಷಿತಾ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದ. ನಂತರ ಹೆಚ್ಚಿನ ಪ್ರಮಾಣದಲ್ಲಿನ ಹಣ ಕಳುಹಿಸಬೇಕಾದರೆ ಕ್ಯೂಆರ್ ಕೋಡ್ ಅವಶ್ಯಕತೆಯಿದೆ, ಅದನ್ನು ಸ್ಕ್ಯಾನ್ ಮಾಡಿದ ಕೂಡಲೇ ಉಳಿದ ಹಣ ಜಮೆಯಾಗುತ್ತದೆ ಎಂದು ನಂಬಿಸಿ ಕೋಡ್ ಕಳುಹಿಸಿದ್ದ.

ಇತ್ತ ಹರ್ಷಿತಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಮೊದಲು 20 ಸಾವಿರ ಹಣ ಆಕೆಯ ಬ್ಯಾಂಕಿನಿಂದ ಡ್ರಾ ಆಗಿದೆ. ಮತ್ತೊಮ್ಮೆ ಸ್ಕ್ಯಾನ್ ಮಾಡಿದಾಗ 12 ಸಾವಿರ ರೂ. ಗಳು ಗ್ರಾಹಕನ ಸೋಗಿನ ವಂಚಕನ ಬ್ಯಾಂಕ್ ಅಕೌಂಟ್ ಗೆ ಜಮೆಯಾಗಿದೆ.

ಕೂಡಲೇ ಮೋಸದ ಜಾಲವನ್ನು ಅರಿತ ಹರ್ಷಿತಾ ದೆಹಲಿ ಸಿಎಂ ನಿವಾಸದ ಬಳಿಯಿರುವ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ಆನ್ ಲೈನ್ ವಂಚಕನಿಗಾಗಿ ಬಲೆ ಬೀಸಿದ್ದಾರೆ.

ಏನಿದು ಕ್ಯೂಆರ್ ಕೋಡ್ ಸ್ಕ್ಯಾಮ್:

ಈ ಸ್ಕ್ಯಾಮ್ ನಲ್ಲಿ ಗ್ರಾಹಕರ ಸೋಗಿನಲ್ಲಿರುವ ವಂಚಕರು UPI ಪೇಮೆಂಟ್ ವಿಧಾನವನ್ನೆ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಇಂದು ಗೂಗಲ್ ಪೇ, ಪೋನ್ ಪೇ ಮುಂತಾದವುಗಳ ಮೂಲಕ ಹಣವನ್ನು ಸುಲಭವಾಗಿ ವರ್ಗಾಯಿಸಬಹುದು. ಇದರಲ್ಲಿನ ಹಲವಾರು ತಾಂತ್ರಿಕ ಲೋಪದೋಷಗಳು ಅಥವಾ ಬಳಕೆದಾರರ ಅರಿವಿನ ಕೊರತೆಯಿಂದ ಆನ್ ಲೈನ್ ವಂಚಕರು ಸುಲಭವಾಗಿ ಹಣವನ್ನು ಎಗರಿಸುತ್ತಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಸೈಬರ್ ಕ್ರಿಮಿನಲ್ ಗಳು ಮೊದಲಿಗೆ ಯಾವುದಾದರೂ ವಸ್ತುವನ್ನು ಖರೀದಿಸುವ ಆಸಕ್ತಿ ತೋರಿ, ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿಕೊಡುತ್ತಾರೆ. ಅಥವಾ payment accept ಮಾಡುವಂತೆ ಸಂದೇಶವೊಂದನ್ನು ಕಳುಹಿಸುತ್ತಾರೆ. ಈ ಸಮಯದಲ್ಲಿ ಗ್ರಾಹಕರ ಸೋಗಿನ ವಂಚಕರು ಸುಖಾಸುಮ್ಮನೇ ಆತುರತೆಯನ್ನು ತೋರ್ಪಡಿಸುತ್ತಾರೆ. 'ನೀವು ಮಾರಾಟ ಮಾಡಲು ಮುಂದಾಗಿರುವ ವಸ್ತು ನಮಗೆ ತುಂಬಾ ಇಷ್ಟವಾಗಿದೆ. ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳುವುದಿಲ್ಲ' ಎಂಬ ಉತ್ಪ್ರೇಕ್ಷೆಯ ಮಾತುಗಳನ್ನಾಡಲು ಆರಂಭಿಸುತ್ತಾರೆ. ಬಳಿಕ ಕ್ಯೂಆರ್ ಕೋಡ್ ಒಂದನ್ನು ಕಳುಹಿಸಿ ಇದನ್ನು ಸ್ಕ್ಯಾನ್ ಮಾಡಿದಾಕ್ಷಣ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ. ಇಲ್ಲವಾದಲ್ಲಿ Transaction fail ಆಗುವುದು ಎಂದು ನಂಬಿಸುತ್ತಾರೆ.

ಈ ವೇಳೆ ಅರಿವಿನ ಕೊರತೆಯಿಂದ ಬಳಕೆದಾರರು ಕೂಡಲೇ ತಮ್ಮ ವಸ್ತುವನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಮಾತ್ರವಲ್ಲದೆ ಹಣ ಪಡೆಯುವಾಗ ಯಾವುದೇ ಮಾದರಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತಿಲ್ಲ ಎಂಬ ವಿಚಾರವನ್ನೇ ಮರೆತುಬಿಡುತ್ತಾರೆ. ಬಳಿಕ ಕ್ಯೂಆರ್ ಸ್ಕ್ಯಾನ್ ಮಾಡಿದಾಗ ಅಥವಾ reguest accept ಮಾಡಿದಾಗ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಸಂದೇಶ ಬರುತ್ತದೆ.

ಇಂದು ಇ-ಕಾಮರ್ಸ್ ವೇದಿಕೆಗಳು ಸೈಬರ್ ಕ್ರಿಮಿನಲ್ ಗಳಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸುತ್ತಿದೆ. ದೇಶದ ಹಲವೆಡೆಯಿಂದ ಇದೇ ಮಾದರಿಯ ಹಲವು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಈ ಸ್ಕ್ಯಾಮ್ ಅನ್ನು ಹೇಗೆ ತಡೆಗಟ್ಟಬಹುದು ?

ಇ- ಕಾಮರ್ಸ್ ವೇದಿಕೆಗಳಲ್ಲಿ ( ಅಮೇಜಾನ್, ಫ್ಲಿಫ್ ಕಾರ್ಟ್, ಓಎಲ್ ಎಕ್ಸ್ ಮುಂತಾದವು) ಆನ್ ಲೈನ್ ಪೇಮೆಂಟ್ ಮಾಡುವಾಗ ಜಾಗರೂಕರಾಗಿರಬೇಕು. ಪ್ರತಿಯೊಂದು ಅಂಶಗಳನ್ನು ಪರಿಶೀಲಿಸಿದ ನಂತರವೇ Pay ಬಟನ್ ಕ್ಲಿಕ್ ಮಾಡಬೇಕಾಗುತ್ತದೆ. ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೇ UPI ಆಯಪ್ ಗಳು ನಾವು ಇತರರಿಗೆ ಪೇಮೆಂಟ್ ಮಾಡುವಾಗ ಮಾತ್ರ ಪಿನ್ ನಂಬರ್ ಕೇಳುತ್ತವೆ. ಆದರೇ ಇತರರು ನಮ್ಮ ಖಾತೆಗೆ ಹಣ ವರ್ಗಾಯಿಸುವಾಗ ಯಾವುದೇ ಕ್ಯೂಆರ್ ಕೋಡ್ ಸ್ಕ್ಯಾನ್ ಅಥವಾ ಪಿನ್ ನಂಬರ್ ಕಳುಹಿಸಿಕೊಡುವ ಅವಶ್ಯಕತೆ ಇರುವುದಿಲ್ಲ.

ಒಂದು ವೇಳೆ ಯಾರಾದರೂ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಕ್ಷಣ ಪಿನ್ ನಂಬರ್ ಕೇಳುತ್ತದೆಯೆಂದಾದರೆ ಅದು ಮೋಸದ ಜಾಲದ ಮೊದಲನೇ ಹಂತ. ಕೂಡಲೇ ಅನ್ನು ತಿರಸ್ಕರಿಸಿದರೆ ನಿಮ್ಮ ಖಾತೆಯಲ್ಲಿಯೇ ಹಣ ಉಳಿಯುತ್ತದೆ. ಇಲ್ಲವಾದಲ್ಲಿ ವಂಚಕರ ಖಾತೆಗೆ ವರ್ಗಾವಣೆಯಾಗುತ್ತದೆ.

(ಮಾಹಿತಿ ಕೃಪೆಉದಯವಾಣಿ)

ಇನ್ನು ವಾರದಲ್ಲಿ 4 ದಿನ ಕೆಲಸ, 3 ರಜೆ? ಕಾರ್ಮಿಕ ನಿಯಮಾವಳಿ ಬದಲಾವಣೆಗೆ ಮುಂದಾದ ಕೇಂದ್ರ

 

ನವದೆಹಲಿ: ವಾರಕ್ಕೆ ನಾಲ್ಕೇ ದಿನ ಕೆಲಸ! ಮೂರು ದಿನ ರಜೆ! “ಇದೇ ನಪ್ಪಾ ಮೂಗಿನ ಮೇಲೆ ತುಪ್ಪ ಸವರುವ ಮಾತೇ?’- ಖಂಡಿತಾ ಅಲ್ಲ. ಕಾರ್ಮಿಕ ನೀತಿಗಳ ತಿದ್ದುಪಡಿಗೆ ಕೈಹಾಕಿರುವ ಕೇಂದ್ರ ಸರ್ಕಾರ, ಕಾರ್ಮಿಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿದೆ. ಈ ನೀತಿ ಶೀಘ್ರವೇ ಜಾರಿಗೊಳ್ಳುವ ನಿರೀಕ್ಷೆ ಇದೆ.

ಕಾರ್ಮಿಕ ಸಚಿವಾಲಯ ಕಾರ್ಯದರ್ಶಿ ಅಪೂರ್ವ ಚಂದ್ರ, “ಕೆಲಸದ ದಿನಗಳಲ್ಲಿನ ಒತ್ತಡ ಸಡಿಲಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹಲವು ಕಂಪನಿಗಳು ವಾರದಲ್ಲಿ 4 ದಿನಗಳ ಕೆಲಸಕ್ಕೆ ಸಮ್ಮತಿಸಿವೆ. ಮತ್ತೆ ಕೆಲವು ಸಂಸ್ಥೆಗಳು ವಾರದಲ್ಲಿ 5 ದಿನಗಳ ಕರ್ತವ್ಯಕ್ಕೆ ಒಲವು ತೋರಿವೆ’ ಎಂದು ತಿಳಿಸಿದ್ದಾರೆ.

ಒಪ್ಪಂದ ಕಡ್ಡಾಯ: “ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವಾರದಲ್ಲಿ 4, 5 ಅಥವಾ 6 ದಿನಗಳು ಕೆಲಸಕ್ಕೆ ಅನುಮತಿಸ ಬಹುದು. ಆದರೆ, ಸಂಸ್ಥೆ ಮತ್ತು ಉದ್ಯೋಗಿಯ ನಡುವೆ ವಾರದಲ್ಲಿ 4 ದಿನಗಳ ಕೆಲಸಕ್ಕೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯ ’ ಎಂದು ವಿವರಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ 4 ಕಾರ್ಮಿಕ ನಿಯಮಾವಳಿಗಳಿಗೆ ಸಂಸತ್‌ ಅನುಮೋದನೆ ನೀಡಿತ್ತು. 

ಈ ಕುರಿತ ಕರಡಿನ ಕುರಿತು ಜನವರಿಯಲ್ಲಿ ವಿವಿಧ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
“ಕಾರ್ಮಿಕ ನೀತಿಗಳಿಗೆ ಅಂತಿಮರೂಪ ನೀಡುತ್ತಿದ್ದೇವೆ. ವಿವಿಧ ರಾಜ್ಯಗಳೊಂದಿಗೆ ಹೊಸ ನೀತಿಗಳ ಕುರಿತು ಮಾತುಕತೆ ನಡೆಸಿದ್ದೇವೆ. ಬಹುತೇಕ ರಾಜ್ಯಗಳು ನೂತನ ನೀತಿಗಳನ್ನು ದೃಢೀಕರಿಸುತ್ತಿವೆ. ಉತ್ತರ ಪ್ರದೇಶ, ಪಂಜಾಬ್‌, ಮಧ್ಯಪ್ರದೇಶದಂಥ ರಾಜ್ಯಗಳು ಫೆ.10ರೊಳಗೆ ತಮ್ಮ ಅಭಿಪ್ರಾಯ ಸಲ್ಲಿಸಲಿವೆ’ ಎಂದು ವಿವರಿಸಿದ್ದಾರೆ.

48 ಗಂಟೆ ಮಾತ್ರವೇ ಕೆಲಸ!
ವಾರದಲ್ಲಿ 4 ದಿನಗಳ ಕೆಲಸವಾದರೂ, ವಾರದಲ್ಲಿ ಒಟ್ಟು ಕರ್ತವ್ಯ ಅವಧಿ 48 ಗಂಟೆ ಮೀರಬಾರದು ಎಂದು ಕೂಡ ಕರಡು ನೀತಿ ಅಭಿಪ್ರಾಯಪಟ್ಟಿದೆ. ಅಂದರೆ, ಪ್ರಸ್ತುತವಿರುವ ನಿತ್ಯದ ಗರಿಷ್ಠ 10.5 ಗಂಟೆ ಕೆಲಸವನ್ನು 12 ಗಂಟೆಗೆ ಏರಿಸುವ ಸಾಧ್ಯತೆಯೂ ನಿಚ್ಚಳವಾಗಿದೆ. 12 ಗಂಟೆ ಅವಧಿಯಲ್ಲಿ ಊಟದ ವಿರಾಮ ಮತ್ತು ಇತರೆ ವಿರಾಮಗಳೂ ಸೇರಿಕೊಳ್ಳಲಿವೆ. ನಿತ್ಯ 12 ಗಂಟೆ ಕೆಲಸ ಮಾಡಿದವರಿಗೆ 4 ದಿನ ಕೆಲಸ, 10 ಗಂಟೆ ಕೆಲಸ ಮಾಡುವವರಿಗೆ 5 ದಿನ ಕೆಲಸ- ಈ ಹಕ್ಕನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ನೌಕರರಿಗೆ ನೀಡಲೂ ಕರಡು ಸಮ್ಮತಿಸಿದೆ.

(ಮಾಹಿತಿ ಕೃಪೆಉದಯವಾಣಿ)

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

 

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಗರದಲ್ಲಿಂದು ಪ್ರತಿಭಟನೆ ನಡೆಸಿತು.

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸೌದೆ ಒಲೆಯಲ್ಲಿ ಅಡುಗೆ ಮಾಡಿ ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳದಲ್ಲಿಯೇ ಎತ್ತಿನಗಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾತನಾಡಿ, "ಮೋದಿ ದಬ್ಬಾಳಿಕೆಯ ಮೂಲಕ‌ ದೇಶ ಆಳುತ್ತಿದ್ದಾರೆ. ಏರಿಕೆ ಮಾಡಿರುವ ಪೆಟ್ರೋಲ್ ಬೆಲೆಯಲ್ಲಿ 33 ರೂ. ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕಡಿಮೆ‌ ಆಗಿದ್ದರೂ ಕೇಂದ್ರ ಸರ್ಕಾರ ತೆರಿಗೆ ಜಾಸ್ತಿ ಮಾಡಿದೆ. ಇದರಿಂದ ಎಲ್ಲಾ ಬೆಲೆ‌ ಜಾಸ್ತಿಯಾಗಿದೆ. ಪ್ರಧಾನಿ ಹಿಟ್ಲರ್ ಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹೆಚ್ಚು ದಿನ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ದೇಶ ತಪ್ಪು ದಾರಿಯಲ್ಲಿ ಹೋಗುತ್ತಿದೆ. ದೇಶ ಒಗ್ಗೂಡಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿ. ಎಲ್ಲರೂ ಸೇರಿ ಒಟ್ಟಾಗಿ ಜನರಿಗೋಸ್ಕರ ಹೋರಾಟ ಮಾಡೋಣ" ಎಂದು ಕರೆ ನೀಡಿದರು.

ಶಿವಾಜಿನಗರ ಶಾಸಕ ರಿಜ್ವಾನ್ ಅರ್ಹದ್ ಮಾತನಾಡಿ, "ಡಿಸೇಲ್ ಕಳ್ಳ ಉಪಮುಖ್ಯಮಂತ್ರಿ ಸವದಿ, ಸರ್ಕಾರಿ ಬಸ್ ಗಳಿಗೆ ಹಾಕಬೇಕಾದ ಡಿಸೇಲ್ ತಮ್ಮ ಕಾರಿಗೆ ಹಾಕಿಸಿಕೊಂಡಿದ್ದಾರೆ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ನೋಡಿಯೇ ಇಲ್ಲ. ರವೀಂದ್ರನಾಥ್ ಟ್ಯಾಗೂರ್ ತರಲು ಕಾಣಲು ಮೋದಿ ದೊಡ್ಡಗಡ್ಡ ಬಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಇದು ಲಾಭವಾಗಬಹುದು ಎಂಬ ದುರಾಲೋಚನೆಯಿಂದ ರೀತಿ ಗಡ್ಡ ಬಿಟ್ಟಿದ್ದಾರೆ. ಮೋದಿ ಬಹಳ ಬಲಿಷ್ಠ ನಾಯಕ ಎಂದು ಹೇಳುತ್ತಾರೆ, 56 ಇಂಚಿನ ಎದೆ ಇರುವ ಮೋದಿ ಎಂದು ಬೊಗಳೆ ಬಿಡುತ್ತಾರೆ. ಆದರೆ ರೈತರ ಬಗ್ಗೆ ಅವರ ಕಾಳಜಿ ಎಲ್ಲಿ ಹೋಯಿತು, ಬಡವರ ಬಗ್ಗೆ ಅವರ ಕಳಕಳಿ ಎಲ್ಲಿ ಹೋಯಿತು?" ಎಂದು ಪ್ರಶ್ನಿಸಿದರು.

(ಮಾಹಿತಿ ಕೃಪೆ ಕನ್ನಡ ಪ್ರಭ)