WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, July 11, 2020

ಮೂಡಿಗೆರೆಯಲ್ಲಿ ಗಾಂಜಾ ಸಾಗಿಸುತ್ತಿದ್ದವರ ಬಂಧನ; 50 ಕೆ.ಜಿ. ಗಾಂಜಾ ವಶ

ಚಿಕ್ಕಮಗಳೂರು, ಜುಲೈ 11: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಬಳಿಯ ಮೇಲುಪೇಟೆ ಮಸೀದಿ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು 12 ಲಕ್ಷಕ್ಕೂ ಅಧಿಕ ಮೌಲ್ಯದ 50 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮೋಹಿದ್ ಖಾನ್, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಕ್ಬರ್ ಪಾಷಾ, ಶಾಹಿದ್ ಖಾನ್ ಹಾಗೂ ಪ್ರಭಾ ಬಂಧಿತ ಆರೋಪಿಗಳು.
10 ಜನರ ತಂಡ : ಬಂಧಿತ ಆರೋಪಿಗಳಿಂದ 50 ಕೆ.ಜಿ. ಗಾಂಜಾ, ಕಾರು ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಮಾಯಾಜಾಲದಲ್ಲಿ 10ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಂಡದ ಸದಸ್ಯರು ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೇರು ಬಳಿಯ ಶೇಖರ್ ಎಂಬುವರಿಂದ 80 ಕೆ.ಜಿ. ಗಾಂಜಾ ಸೊಪ್ಪನ್ನು ತಂದಿದ್ದಾರೆ. ಅದರಲ್ಲಿ 30 ಕೆ.ಜಿ. ಸೊಪ್ಪನ್ನು ಹಾಸನ ಹಾಗೂ ಸಕಲೇಶಪುರದಲ್ಲಿ ಮಾರಾಟ ಮಾಡಿದ್ದಾರೆ. ಉಳಿದ 50 ಕೆ.ಜಿಯನ್ನು ಮಂಗಳೂರಿನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕೊಂಡೊಯ್ಯುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮಾರುತಿ 800 ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಜಿಲ್ಲೆಯ ಸಿಇಎನ್ ಠಾಣೆ ಇನ್ ಸ್ಪೆಕ್ಟರ್ ರಕ್ಷಿತ್, ಪಿಎಸ್‌ಐ ರಮ್ಯಾ ಹಾಗೂ ಗೋಣಿಬೀಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.
 (ಮಾಹಿತಿOneindiaಕೃಪೆ )  

ಮೂಡಿಗೆರೆಯಲ್ಲಿ ಗಾಂಜಾ ಸಾಗಿಸುತ್ತಿದ್ದವರ ಬಂಧನ; 50 ಕೆ.ಜಿ. ಗಾಂಜಾ ವಶ

ಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರ


ಮುಂಬೈ, ಜುಲೈ 11: ಗಣೇಶ ಉತ್ಸವ ಕುರಿತು ಮಹಾರಾಷ್ಟ್ರ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಗಸ್ಟ್ 22ನೇ ತಾರೀಕು ಗಣೇಶ ಉತ್ಸವ ಇರಲಿದ್ದು, ಮಹಾರಾಷ್ಟ್ರದಲ್ಲಿ ಈ ಹಬ್ಬ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತೆ. ಈ ವರ್ಷ ಕೊರೊನಾ ಭೀತಿಯ ನಡುವೇ ವಿನಾಯಕ ಉತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ.
ಮಹಾರಾಷ್ಟ್ರ ಸರ್ಕಾರ ತಿಳಿಸಿರುವ ಪ್ರಕಾರ ಸಾರ್ವಜನಿಕವಾಗಿ ಕೂರಿಸುವ ಗಣೇಶನ ಎತ್ತರ ಗರಿಷ್ಠ 4 ಅಡಿಗೆ ನಿಗದಿ ಮಾಡಲಾಗಿದೆ. ನಾಲ್ಕು ಅಡಿಗಿಂತ ಎತ್ತರದ ಗಣೇಶ ಕೂರಿಸುವಂತಿಲ್ಲ. ಮನೆಗಳಲ್ಲಿ 2 ಅಡಿ ಗಣೇಶ ಕೂರಿಸಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಭೀಕರ ಪರಿಸ್ಥಿತಿ: ಸೋಂಕಿನಿಂದ ಗುಣಮುಖರಾದವರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವಂತೆ ಒತ್ತಾಯ
ಮಹಾರಾಷ್ಟ್ರದಲ್ಲಿ ವಿನಾಯಕ ಮಹೋತ್ಸವ ಸುಮಾರು 11 ದಿನಗಳವರೆಗೂ ನಡೆಯಲಿದೆ. ಹೀಗಾಗಿ, ತಿಂಗಳ ಮುಂಚೆಯೇ ಮಹಾ ಸರ್ಕಾರ ನಿಯಮಗಳನ್ನು ರೂಪಿಸಿದೆ.
* ಸಾರ್ವಜನಿಕವಾಗಿ ಕೂರಿಸುವ ಗಣಪತಿ ವಿಗ್ರಹವನ್ನು 4 ಅಡಿಗಳಿಗೆ ಸೀಮಿತಗೊಳಿಸಲಾಗಿದೆ. ಮನೆಯಲ್ಲಿ ಕೂರಿಸುವ ಗಣಪತಿ ವಿಗ್ರಹಗಳನ್ನು 2 ಅಡಿಗಳಿಗೆ ಸೀಮಿತಗೊಳಿಸಬೇಕು.
* ಪೆಂಡಲ್‌ ಒಳಗೆ ಹತ್ತು ಜನರು ಮಾತ್ರ ಇರಲು ಅವಕಾಶ ನೀಡಲಾಗಿದೆ. ಅದಕ್ಕಿಂ ಹೆಚ್ಚು ಮಂದಿ ಪ್ರವೇಶಿಸುವಂತಿಲ್ಲ.
* ಗಣೇಶ ವಿಸರ್ಜನೆ ಮಾಡುವ ವೇಳೆ ಹತ್ತಿರ ಕೆರೆ ಅಥವಾ ಸರ್ಕಾರ ಸೂಚಿಸುವ ಸ್ಥಳದಲ್ಲಿ ಮಾತ್ರ ವಿರ್ಸಜನೆ ಮಾಡಬೇಕು. ಅಥವಾ ಮುಂದಿನ ವರ್ಷಕ್ಕೆ ಗಣೇಶ ಉತ್ಸವವನ್ನು ಮುಂದೂಡಬಹುದು.
* ಪೆಂಡಲ್ ಹಾಕುವ ಸ್ಥಳದಲ್ಲಿ ಡೆಂಗ್ಯೂ, ಮಲೇರಿಯಾ, ಕೊವಿಡ್ ಗೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಬೇಕು.
* ಗಣೇಶ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸುವಂತಹ ವ್ಯವಸ್ಥೆ ಮಾಡಬೇಕು
* ಆರತಿ, ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳ ವೇಳೆ ಜನಸಂದಣಿ ಇರದಂತೆ ನೋಡಿಕೊಳ್ಳಬೇಕು
* ಗಣೇಶ ತರುವ ವೇಳೆ, ವಿಸರ್ಜನೆ ವೇಳೆ ಮೆರವಣಿಗೆ ಮಾಡುವಂತಿಲ್ಲ. ವಿಸರ್ಜನೆ ಸ್ಥಳದಲ್ಲಿ ಜನರು ಕಡಿಮೆ ಭಾಗವಹಿಸಬೇಕು
* ಈ ವೇಳೆ ನಗರಸಭೆಗಳು, ಪೊಲೀಸ್, ಸರ್ಕಾರಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳಿಗೆ ಎಲ್ಲರೂ ಸಮುದಾಯಗಳ ಜೊತೆ ಸಂಪರ್ಕ ಹೊಂದಿರಬೇಕು, ನಿಯಮಗಳನ್ನು ಪಾಲಿಸುವಂತೆ ಕ್ರಮ ಜರುಗಿಸಬೇಕು
* ಇನ್ನು ಹೆಚ್ಚಿನ ಮಾರ್ಗಸೂಚಿಗಳನ್ನು ನೀಡಲಾಗುವುದು, ಅದನ್ನು ಅನುಸರಿಸಬೇಕು.
(ಮಾಹಿತಿOneindiaಕೃಪೆ )  

Breaking: ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!

ಬೆಂಗಳೂರು, ಜುಲೈ 11: ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣ ತಪ್ಪಿರುವ ಹಿನ್ನೆಲೆ ಒಂದು ವಾರ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.
14.07.2020ರ ಮಂಗಳವಾರ ರಾತ್ರಿ 8.00 ಗಂಟೆಯಿಂದ ಏಳು ದಿನಗಳ ಕಾಲ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದಾರೆ..
ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷದಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ. ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ.
ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸರ್ಕಾರ ಹೊರಡಿಸುವ ಲಾಕ್ ಡೌನ್ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಿ. ತಾವು ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವ ಮೂಲಕ ಕೋವಿಡ್-19ರ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೊವಿಡ್ ನಿಯಂತ್ರಣ ಮಾಡಲು ಒಂದು ವಾರ ಲಾಕ್‌ಡೌನ್‌ ಅಗತ್ಯ ಎಂದು ತಜ್ಞರು ಸಿಎಂಗೆ ಸಲಹೆ ನೀಡಿದ್ದರು. ತಜ್ಞರ ಸಲಹೆ ಸಮ್ಮತಿಸಿರುವ ಯಡಿಯೂರಪ್ಪ ಬೆಂಗಳೂರು ಲಾಕ್‌ಡೌನ್ ಮಾಡಲು ಒಪ್ಪಿದ್ದಾರೆ.
(ಮಾಹಿತಿOneindiaಕೃಪೆ ) 

ಪ್ರವಾಸೋದ್ಯಮ ಸಚಿವ ಸಿಟಿ ರವಿಗೆ ಕೊರೋನಾ ಪಾಸಿಟಿವ್

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಶನಿವಾರ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿಟಿ ರವಿ ಅವರು, ''ನಾನು ಕ್ಷೇಮವಗಿದ್ದೇನೆ. ಕೊರೋನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ'' ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಹಲವು ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ವಕ್ಕರಿಸಿದ್ದ ಕೊರೋನಾ ಇದೀಗ ಸಚಿವರಿಗೂ ತಗುಲಿದೆ.
ಇತ್ತೀಚಿಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಮಾಜಿ ಉಪ ಸಭಾಪತಿ ಪುಟ್ಟಣ್ಣ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಕುಣಿಗಲ್ ಶಾಸಕ ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯ, ಚಿಕ್ಕಮಗಳೂರಿನ ಪ್ರಾಣೇಶ್ ಎಂ.ಕೆ, ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಜೇವರ್ಗಿ ಶಾಸಕ ಅಜಯ್ ಸಿಂಗ್, ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೋರೋನಾ ಸೋಂಕು ದೃಢಪಟ್ಟಿದೆ.
ನಾನು ಕ್ಷೇಮವಾಗಿದ್ದೇನೆ. ಕೋರೋನಾ ಲಕ್ಷಣಗಳಿಲ್ಲ. ಈಗ ಹೋಮ್ ಕ್ವಾರಂಟೈನ್-ನಲ್ಲಿ ಇದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲೇ ವಾಕ್ ಮಾಡುತ್ತಿದ್ದೇನೆ.
— C T Ravi 
(ಮಾಹಿತಿ ಕನ್ನಡ ಪ್ರಭ ಕೃಪೆ )     

ತುಮಕೂರು: 4 ವರ್ಷದ ಮಗು ಕೊಂದ ಚಿರತೆ; ಆರೇ ತಿಂಗಳಲ್ಲಿ ಮೂರನೇ ಘಟನೆ

ತುಮಕೂರು: ತುಮಕೂರಿನಲ್ಲಿ ಹುಳಿ ದಾಳಿ ಪ್ರಕರಣ ಮುಂದುವರೆದಿದ್ದು, ಇಂದು ನಾಲ್ಕು ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿರುವ ಘಟನೆ ವರದಿಯಾಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯ ಹಸೀಗೆ ಹೊಬಳಿಯ ರಾಜೇಂದ್ರಪುರ ಎಂಬ ಕುಗ್ರಾಮದಲ್ಲಿ ಇಂದು ಘಟನೆ ನಡೆದಿದೆ, ಮೃತ ಬಾಲಕನನ್ನು ಗ್ರಾಮದ ನಿವಾಸಿ ಮುನಿರಾಜು ಮತ್ತು ದೊಡ್ಡೀರಮ್ಮ ಎಂಬ ದಂಪತಿಯ ಅವರ ಪುತ್ರ ಚಂದು ಎಂದು ಗುರುತಿಸಲಾಗಿದೆ.
ತಾಯಿ ದೊಡ್ಡೀರಮ್ಮ ಬಟ್ಟೆ ಒಗೆಯಲು ತಮ್ಮ ಮಗನನ್ನೂ ಕರೆದು ಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಿದ್ದಾಗ ಮಗು ಮೇಲೆ ದಾಳಿ ಮಾಡಿದ ಚಿರತೆ ಮಗುವನ್ನು ಎಳೆದೊಯ್ದಿದೆ. ಈ ವೇಳೆ ಇದನ್ನು ಕಂಡ ದಾರಿ ಹೋಕರು ಚಿರತೆಯನ್ನು ಬೆದರಿಸಿ ಮಗುವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಆದರೆ ಜನರು ಆಗಮಿಸುತ್ತಿದ್ದಂತೆಯೇ ಚಿರತೆ ಮಗುವನ್ನು ಅಲ್ಲಿಂದ ಹೊತ್ತೊಯ್ದಿದೆ. ಈ ವೇಳೆ ಸುದ್ದಿತಿಳಿದ ಆರಣ್ಯ ಸಿಬ್ಬಂದಿ ಕೂಡಲೇ ಶೋಧ ನಡೆಸಿದ್ದು, ಅರಣ್ಯದೊಳಗೆ ಮಗುವಿನ ದೇಹ ಪತ್ತೆಯಾಗಿದೆ ಎಂದು ಆರ್ ಎಫ್ ಒ ಮಂಜುನಾಥ್ ಹೇಳಿದ್ದಾರೆ.
ಮೂಲಗಳ ಪ್ರಕಾರ ಮೃತ ಬಾಲಕ ಚಂದು ಮುನಿರಾಜು ಮತ್ತು ದೊಡ್ಡೀಮ್ಮ ಅವರ ಏಕೈಕ ಪುತ್ರ ಎಂದು ತಿಳಿದುಬಂದಿದೆ. ತೀರಾ ಕುಡುಬಡತನದ ಕುಟುಂಬವಾಗಿದ್ದು, ದಂಪತಿಗೆ ಬ್ಯಾಂಕ್ ಖಾತೆ ಕೂಡ ಇಲ್ಲ ಎನ್ನಲಾಗಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಗಿರೀಶ್ ಅವರು ಹೇಳಿದ್ದಾರೆ. ಅಂತೆಯೇ ಪರಿಹಾರವಾಗಿ 7.5 ಲಕ್ಷ ರೂಗಳನ್ನು ಇಲಾಖೆ ವತಿಯಿಂದ ನೀಡಲಾಗುತ್ತಿದ್ದು, ಮಂಗಳವಾರ ಅವರಿಗೆ ಬ್ಯಾಂಕ್ ಖಾತೆ ತೆರೆದು ಚೆಕ್ ಮೂಲಕ ನೀಡಲಾಗುತ್ತದೆ ಎಂದು ಹೇಳಿದರು.
ಇನ್ನು ತುಮಕೂರಿನಲ್ಲಿ ಚಿರತೆ ದಾಳಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಕಳೆದ ಆರು ತಿಂಗಳ ಅವಧಿಯಲ್ಲಿ ಇದು ಮೂರನೇ ಘಟನೆಯಾಗಿದೆ.
(ಮಾಹಿತಿ ಕನ್ನಡ ಪ್ರಭ ಕೃಪೆ )   

ತಾಯಿಗೆ ಕೋವಿಡ್-19 ನೆಗೆಟೀವ್ ನವಜಾತ ಶಿಶುವಿಗೆ ಸೋಂಕು ದೃಢ!: ಭ್ರೂಣದಲ್ಲೇ ಸೋಂಕು ತಗುಲಿದ ವಿಶ್ವದ ಮೊದಲ ಪ್ರಕರಣ!

ದೆಹಲಿ: ತಾಯಿಗೆ ಕೋವಿಡ್-19 ಸೋಂಕು ಪರೀಕ್ಷೆ ನೆಗೆಟೀವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಮಗುವಿನ ತಾಯಿಗೆ ಹೆರಿಗೆಗೂ ಮುನ್ನ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಈ ವರದಿಯಲ್ಲಿ ಆಕೆಗೆ ಕೋವಿಡ್-19 ನೆಗೆಟೀವ್ ಬಂದಿತ್ತು. ಆದರೆ ಹೆರಿಗೆಯಾದ 6 ಗಂಟೆಗಳ ನಂತರ ಮಗುವಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿದೆ.
ವೈದ್ಯರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು ಭ್ರೂಣದಲ್ಲಿ ಕೋವಿಡ್-19 ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ಹೇಳಿದ್ದಾರೆ. ಕೋವಿಡ್-19 ಸೋಂಕು ತಗುಲಿದ್ದರೂ ನವಜಾತ ಶಿಶುವಿಗೆ ರೋಗಲಕ್ಷಣಗಳು ಕಂಡಿಬಂದಿಲ್ಲ. ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮಗುವಿನ ತಾಯಿಗೆ ಜೂ.11 ರಂದು ಕೋವಿಡ್-19 ಸೋಂಕು ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಜೂ.27 ರಂದು ಎರಡನೇ ಬಾರಿಗೂ ಸೋಂಕು ದೃಢಪಟ್ಟಿತ್ತು. ಆದರೆ ಜು.7 ರಂದು ಆಕೆಗೆ ಕೊರೋನಾ ಸೋಂಕು ಪರೀಕ್ಷೆ ವರದಿ ನೆಗೆಟೀವ್ ಬಂದಿದ್ದು ಜು.08 ರಂದು ಹೆರಿಗೆಯಾಗಿತ್ತು, ಮಗುವಿಗೆ 48 ಗಂಟೆಗಳ ನಂತರ ಮತ್ತೊಂದು ಬಾರಿ ಟೆಸ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್ ಚೌಧರಿ ತಿಳಿಸಿದ್ದಾರೆ. 
(ಮಾಹಿತಿ ಕನ್ನಡ ಪ್ರಭ ಕೃಪೆ )  

Friday, July 10, 2020

ರಾಜ್ಯದಲ್ಲಿ ಇಂದು 2313 ಹೊಸ ಸೋಂಕು ಪ್ರಕರಣ ; ಒಂದೇ ದಿನ 57 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಒಂದೇ ದಿನದಲ್ಲಿ 2313 ಕೋವಿಡ್ 19 ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿವೆ.
ಮಾತ್ರವಲ್ಲದೇ ಇಂದು ರಾಜ್ಯದಲ್ಲಿ ಕೋವಿಡ್ 19 ಸೋಂಕು ಸಂಬಂಧಿತ ಪ್ರಕರಣಗಳಲ್ಲಿ ಒಟ್ಟು 57 ಜನರು ಮೃತಪಟ್ಟಿದ್ದಾರೆ.
ಇಂದೂ ಸಹ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಮತ್ತು ಇಲ್ಲಿ ಇಂದು ಒಟ್ಟು 1447 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ಇಂದು ರಾಜ್ಯದಲ್ಲಿ ಕೋವಿಡ್ 19 ಸೋಂಕಿಗೆ ಒಟ್ಟು 57 ಜನ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ 543ಕ್ಕೆ ಏರಿಕೆ ಆಗಿದೆ.
ರಾಜ್ಯ ರಾಜಧಾನಿಯನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತೀ ಹೆಚ್ಚಿನ 1447 ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿದ್ದು ರಾಜಧಾನಿಯಲ್ಲಿ ಸೋಂಕಿನ ಆರ್ಭಟ ಮಿತಿ ಮೀರುತ್ತಿದೆ. ಉಳಿದಂತೆ ದಕ್ಷಿಣ ಕನ್ನಡ, ವಿಜಯಪುರ, ಬಳ್ಳಾರಿ, ಕಲಬುರಗಿ, ಯಾದಗಿರಿ, ಮೈಸೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಇಂದು ಅತೀ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗಿವೆ.
ಇಂದು ರಾಜ್ಯಾದ್ಯಂತ ಒಟ್ಟು 1003 ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 33418 ಕೋವಿಡ್ 19 ಸೋಂಕು ಪ್ರಕರಣಗಳು ದಾಖಲುಗೊಂಡಿದೆ. ಮತ್ತು ಇವರಲ್ಲಿ 13836 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19035 ಇದೆ.
(ಮಾಹಿತಿ
ಉದಯವಾಣಿ ಕೃಪೆ ) 
 

Tuesday, July 7, 2020

ಹೋಮ್ ಕ್ವಾರಂಟೈನ್ ನಲ್ಲಿ ಸಿದ್ದರಾಮಯ್ಯ ?: ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಮಾಜಿ ಸಿಎಂ ವಾಸ್ತವ್ಯ!

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಧುಮೇಹದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರು ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಸಂಪರ್ಕದಿಂದ ದೂರವಿರಲು ಸಿದ್ದರಾಮಯ್ಯ ಮೈಸೂರು ಸಮೀಪವಿರುವ ಫಾರ್ಮ್ ಹೌಸ್ ಗೆ ತೆರಳಿದ್ದಾರೆ,
ತಮ್ಮ ಪುತ್ರ ಡಾ,ಯತೀಂದ್ರ ಅವರ ಸಲಹೆಯ ಮೇರೆಗೆ ಸಾರ್ವಜನಿಕ ಸಂಪರ್ಕದಿಂದ ದೂರ ಉಳಿದಿದ್ದಾರೆ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಸಿದ್ದರಾಮಯ್ಯ ಸಕ್ರಿಯವಾಗಿದ್ದಾರೆ, ಕೊರೋನಾ ವಿರುದ್ಧ ಹೋರಾಡಲು ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೈಗೊಂಡ ಕ್ರಮಗಳನ್ನು ತಿಳಿಯಲು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರಾದ ಎಚ್,ಸಿ ಮಹಾದೇವಪ್ಪ, ಕೆ.ವೆಂಕಟೇಶ್, ಎಚ್ ಪಿ ಮಂಜುನಾಥ್ ಮತ್ತು ಶಾಸಕ ಬದರಹಳ್ಳಿ ಹಂಪನಗೌಡ ಸಿದ್ದರಾಮಯ್ಯ ಅವರ ಜೊತೆ ನಂದಿನ ರಾಜಕೀಯದ ಬಗ್ಗೆ ಚರ್ಚಿಸುತ್ತಾರೆ.ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಇತ್ತೀಚೆಗೆ ಟಿ.ಕತೂರ್ ನಲ್ಲಿರುವ ಫಾರ್ಮ್ ಹೌಸ್ ಗೆ ತೆರಳಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
ಬೆಳಗ್ಗಿನ ಜಾವ ವಾಕಿಂಗ್ ನಿಂದ ದಿನ ಆರಂಭಿಸುವ ಸಿದ್ದರಾಮಯ್ಯ ತಮ್ಮ 10 ಎಕರೆ ವಿಸ್ತೀರ್ಣವಿರುವ ಫಾರ್ಮ್ ಹೌಸ್ ನಲ್ಲಿ ಯೋಗ ಮತ್ತು ಉಸಿರಾಟದ ವ್ಯಾಯಾಮ ಮಾಡುತ್ತಾರೆ.
ಸಿದ್ದರಾಮಯ್ಯ ಹೋಮ್ ಕ್ವಾರಂಟೈನ್ ನಲ್ಲಿಲ್ಲ ಅವರು ಆರೋಗ್ಯವಾಗಿದ್ದಾರೆ ಎಂದು ಸಿದ್ದರಾಮಯ್ಯ ಸೆಕ್ರೆಟರಿ ರಾಮಯ್ಯ ತಿಳಿಸಿದ್ದಾರೆ, ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಿದ್ದು ಮುಂದಿನ ಕೆಲ ದಿನಗಳಲ್ಲಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಶಾಸಕ ಯತೀಂದ್ರ ಅವರು ಸ್ವಯಂ ಕ್ವಾರಂಟೈನ್ ನಲ್ಲಿದ್ದು ಅವರು ಟೆಸ್ಟ್ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.
(ಮಾಹಿತಿ ಕನ್ನಡ ಪ್ರಭ ಕೃಪೆ ) 

Sunday, July 5, 2020

ಲಾಕ್ ಡೌನ್ ನಡುವೆ ಅಂತರ: ಮುರುಘಾ ಮಠದಲ್ಲಿ ಸಾಮೂಹಿಕ ಮದುವೆ

ಚಿತ್ರದುರ್ಗ: ಸೂರ್ಯ-ಚಂದ್ರನಿಗೆ ಗ್ರಹಣ ಹಿಡಿದರೆ ಬಿಟ್ಟು ಹೋಗುತ್ತದೆ. ಆದರೆ ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ. ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಇವು ಮಾನವ ಬದುಕನ್ನು ಕಾಡುವ ಗ್ರಹಣಗಳಾಗಿವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮೂವತ್ತನೇ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಇಂದು ಗುರುಪೂರ್ಣಿಮೆ ಹಾಗು ಚಂದ್ರಗ್ರಹಣ ಬೆಳಗ್ಗೆ ನಡೆಯುತ್ತಿದೆ. ಈ ಅವಧಿಯಲ್ಲಿ ವಿವಾಹ ಮಹೋತ್ಸವ ಮಾಡುತ್ತಿರುವುದು ನಮಗೆ ಎಲ್ಲ ರೀತಿಯಲ್ಲು ಅಮಂಗಲ ಅಲ್ಲ. ಅದು ಶುಭಮಂಗಲ. ಬ್ರಹ್ಮಾಂಡದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಆಗಾಗ ಸಂಭವಿಸುತ್ತವೆ. ಗ್ರಹಣ ಇದೊಂದು ವಿಸ್ಮಯ. ಸೂರ್ಯ ಮತ್ತು ಚಂದ್ರರು ಗ್ರಹಣದ ಬಗ್ಗೆ ಯೋಚಿಸುವುದಿಲ್ಲ. ಕಿರಣಗಳಿಗೆ ಮಾತ್ರ ಗ್ರಹಣ. ಈ ಗ್ರಹಣ ವಿಮೋಚನೆ ಆಗುತ್ತದೆ. ವ್ಯಕ್ತಿಯ ಜೀವನದಲ್ಲಿ ಶೋಷಣೆ ಎನ್ನುವ ಗ್ರಹಣ. ಅದರಲ್ಲಿ ವೇದನೆ ಮತ್ತು ಯಾತನೆ. ಮಾನವ ದೇವಸ್ಥಾನಕ್ಕೆ ಹೋದರೂ ದೇವರಂತಿರುವುದಿಲ್ಲ ಅಲ್ಲಿಯೂ ಕಿರುಕುಳ ಕೊಡುತ್ತಾನೆ ಎಂದರು.
ಭೂಮಿಯ ಮೇಲೆ ಜನ್ಮ ತಾಳಿದಾಗಿನಿಂದ ಇಂದಿನವರೆಗೂ ಜನಾಂಗೀಯ ತರತಮಗಳಿವೆ. ಬುದ್ಧ, ಬಸವಣ್ಣ, ದಾಸರು, ಗಾಂಧೀಜಿ, ಅಂಬೇಡ್ಕರ್ ಮೊದಲಾದವರು ಸಾಮಾಜಿಕ ಅಸಮಾನತೆಯನ್ನು ದೂರ ಮಾಡಲು ಪ್ರಯತ್ನಿಸಿದ್ದಾರೆ. ಆಧುನಿಕ ಮಾನವನಲ್ಲಿ ಎಲ್ಲಿಲ್ಲದ ಅಸಮಾನತೆ ಕಾಡುತ್ತಿದೆ. ಮೂರ್ಖತನದ ನಡವಳಿಕೆಗಳು, ಅಪ್ರಬುದ್ಧವಾದ ಅಪಕ್ವವಾದ ಚಿಂತನೆಗಳಿಂದ ನಡೆಯುತ್ತಿದೆ. ಭಾರತ ದೇಶ ಶಾಂತಿಪ್ರಧಾನ ದೇಶ. ಆದರೆ ದೇಶದ ಶಾಂತಿಯನ್ನು ಕದಡುವ ಕೆಲಸವನ್ನು ಚೀನಾ ಮಾಡುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರದ ಪ್ರಧಾನಿಗಳು ಗಡಿಭಾಗಕ್ಕೆ ಹೋಗಿ ಸೈನಿಕರಿಗೆ ಧೈರ್ಯ ತುಂಬಿದ್ದಾರೆ. ಇದು ಚೀನಾಕ್ಕೆ ಹಿಡಿದಿರುವ ಗ್ರಹಣ. ಆ ದೇಶ ನಮ್ಮ ಮೇಲೆ ವಿನಾಕಾರಣ ಹಿಂಸಾತ್ಮಕವಾದ ದಾರಿ ತುಳಿದಿದ್ದು ಅದನ್ನು ನಾವೆಲ್ಲ ಖಂಡಿಸಬೇಕೆಂದರು.
ಈ ಸಂದರ್ಭದಲ್ಲಿ ವಿಜಯಕುಮಾರ್ (ವೈಶ್ಯ) ಮತ್ತು ಮೌನಿಕ (ಭೋವಿ) ಅಂತರ್ಜಾತಿ ವಿವಾಹ ಸೇರಿದಂತೆ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮಾಜಿಕ ಅಂತರದೊಂದಿಗೆ ಪ್ರತಿಯೊಬ್ಬರಿಗು ಮಾಸ್ಕ್ ಧರಿಸಿದ್ದರು. ಸ್ವಾನಿಟೈಸರ್ ಹಾಕಿಕೊಳ್ಳಲು ಸೂಚಿಸಲಾಯಿತು. ವಧು-ವರರನ್ನು ಹೊರತುಪಡಿಸಿದರೆ ಕೇವಲ ಮೂವತ್ತು ಜನರು ಭಾಗವಹಿಸಿದ್ದರು. ಕಾನೂನು ಉಲ್ಲಂಘನೆಯಾಗದಂತೆ ಕ್ರಮ ವಹಿಸಲಾಗಿತ್ತು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪ್ರೊ.ಸಿ.ಎಂ. ಚಂದ್ರಪ್ಪ, ಪ್ರೊ. ಜ್ಞಾನಮೂರ್ತಿ, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವನಕಲ್ ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ಸ್ವಾಗತಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.

(ಮಾಹಿತಿಬಿಸಿ ಸುದ್ದಿ ಕೃಪೆ )  

ಲವ್ ಇಂಡಿಯಾ : ಡೊನಾಲ್ಡ್ ಟ್ರಂಪ್ ಟ್ವೀಟ್ ವೈರಲ್

ವಾಷಿಂಗ್ಟನ್ : ಭಾರತದ ಮೇಲೆ ನಮಗೆ ವಿಶೇಷವಾದ ಅಭಿಮಾನವಿದೆ ಎಂದು ಈಗಾಗಲೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಈಗ ಮತ್ತೊಮ್ಮೆ ಭಾರತದ ಪರವಾಗಿ ಅವರು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಅಮೇರಿಕಾ ಲವ್ಸ್ ಇಂಡಿಯಾ' ಎಂಬ ಅವರ ಟ್ವೀಟ್ ಪ್ರಪಂಚದಾದ್ಯಂತ ವೈರಲ್ ಆಗಿದೆ.
ಆಮೇರಿಕಾದ 244 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆ ಅಧ್ಯಕ್ಷ ಮತ್ತು ದೇಶದ ಜನರಿಗೆ ಶನಿವಾಯ ಶುಭಾಶಯ ಸಂದೇಶವನ್ನು ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಧನ್ಯವಾದಗಳು ನನ್ನ ಪ್ರಿಯ ಸ್ನೇಹಿತ' ಎಂದು ಟ್ವೀಟ್ ಮಾಡಿದ್ದಾರೆ. ಅಮೇರಿಕಾ ಲವ್ಸ್ ಇಂಡಿಯಾ ಎಂದು ಟ್ವಿಟ್ಟರ್ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನ ತೋರಿಸಿದ್ದಾರೆ. 
(ಮಾಹಿತಿಸುದ್ದಿಒನ್ ಕೃಪೆ )  
 

ಫೇಸ್​ಬುಕ್​ ಪಾಸ್​ವರ್ಡ್​ ಹ್ಯಾಕ್​; ಪ್ಲೇ ಸ್ಟೋರ್​ನಿಂದ 25 ಆಯಪ್​ಗಳನ್ನು ಕಿತ್ತೆಸೆದ ಗೂಗಲ್!

ಗೂಗಲ್​​ ಪ್ಲೇ ಸ್ಟೋರ್​ನಲ್ಲಿರುವ 25 ಆಯಪ್​ಗಳನ್ನು ಕಿತ್ತೆಸೆದಿದೆ. ಫೇಸ್​ಬುಕ್​ ಬಳಕೆದಾರರ ಪಾಸ್​​ವರ್ಡ್​​​​​ ಮತ್ತು ಒಳಕೆದಾರರ ಮಾಹಿತಿಯನ್ನು ಎಗರಿಸುತ್ತಿದೆ ಎಂಬ ಆಧಾರದ ಮೇಲೆ ಗೂಗಲ್​ ಈ ನಿರ್ಣಯ ಕೈಗೊಂಡು 25 ಆಯಪ್​​ಗಳನ್ನು ತೆಗೆದು ಹಾಕಿದೆ.

ಫ್ರೆಂಚ್​​ ಸೈಬರ್​ ಸೆಕ್ಯುರಿಟಿ ಸಂಸ್ಥೆ ಪ್ಲೇ ಸ್ಟೋರ್​ನಲ್ಲಿರುವ ಕೆಲವು ಆಯಪ್​​ಗಳನ್ನು ಪಟ್ಟಿ ಮಾಡಿದ್ದು, ಆ ಆಯಪ್​ಗಳು ಫೇಸ್​ಬುಕ್​ ಬಳಕೆದಾರರ ಪಾಸ್​​​ವರ್ಡ್​ ಮತ್ತು ಇನ್ನಿತರ ಮಾಹಿತಿ ಎಗರಿಸುತ್ತಿದೆ ಎಂಬ ಸಂಗತಿಯನ್ನು ಗೂಗಲ್​​ಗೆ ತಿಳಿಸಿದೆ. ಇದರ ಬೆನ್ನಲ್ಲೇ ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ 25 ಆಯಪ್​​ಗಳನ್ನು ಪರೀಕ್ಷಿಸಿ ತೆಗೆದು ಹಾಕಿದೆ.

ಪ್ಲೇ ಸ್ಟೋರ್​ 25 ಆಯಪ್​ಗಳನ್ನು ತೆಗೆದು ಹಾಕುವ ಮೊದಲು ಈ ಅಪ್ಲಿಕೇಶನ್​ಗಳು ಒಟ್ಟು 2.34 ಮಿಲಿಯನ್​ ಬಾರಿ ಡೌನ್​ಲೋಡ್​ ಕಂಡಿದೆ. ಅನೇಕರು ಈ ಆಯಪ್​ ಅನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ. ಅಷ್ಟು ಮಾತ್ರವಲ್ಲದೆ, ಈ ಆಯಪ್​ಗಳನ್ನು ಒಂದೇ ಗುಂಪು ಸೇರಿ ರಚಿಸಿದೆ ಎಂಬ ಶಾಕಿಂಗ್​​ ಸುದ್ದಿಯನ್ನು ಹೊರಹಾಕಿದೆ. ಗೂಗಲ್​ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿರುವ ಆಯಪ್​ಗಳ ಪಟ್ಟಿಯಲ್ಲಿ ಫೋಟೋ ಎಡಿಟರ್​, ವಿಡಿಯೋ ಎಡಿಟರ್​​, ವಾಲ್​​ ಪೇಪರ್​​, ಫ್ಲಾಷ್​ಲೈಟ್​​ ಅಪ್ಲಿಕೇಶನ್​, ಫೈಲ್​ ಮ್ಯಾನೇಜರ್​​ ಮತ್ತು ಮೊಬೈಲ್​ ಗೇಮ್​ಗಳಿದ್ದವು. ಈ ಎಲ್ಲಾ ಆಯಪ್​ಗಳ ವೈಶಿಷ್ಟ್ಯತೆ ಮತ್ತು ಫೀಚರ್​ಗಳು ಒಂದೇ ಸಮನಾಗಿದ್ದವು ಎಂದು ತಿಳಿಸಿದೆ.

ಸೂಪರ್ ಫ್ಲ್ಯಾಶ್ ಲೈಟ್, ಸೋಲಿಟೈರ್, ಅಕ್ಯುರೇಟ್ ಸ್ಕ್ಯಾನಿಂಗ್ ಆಫ್ ಕ್ಯೂ ಆರ್ ಕೋಡ್, ಕ್ಲಾಸಿಕ್ ಕಾರ್ಡ್ ಗೇಮ್. ಜಂಕ್ ಫೈಲ್ ಕ್ಲೀನಿಂಗ್, ಸಿಂಥೇಟಿಕ್ ಝಡ್, ಫೈಲ್ ಮೆನೇಜರ್, ಸೂಪರ್ ವಾಲ್ ಪೇಪರ್ ಫ್ಲ್ಯಾಶ್ ಲೈಟ್, ವಾಲ್ ಪೇಪರ್ ಲೆವೆಲ್, ಕಾನ್ ಟೂರ್ ಲೆವೆಲ್ ವಾಲ್ ಪೇಪರ್, ಐ ಪ್ಲೇಯರ್ ಮತ್ತು ಐ ವಾಲ್ ಪೇಪರ್, ವಿಡಿಯೋ ಮೇಕರ್, ಕಲರ್ ವಾಲ್ ಪೇಪರ್ಸ್, ಪೆಡೋಮೀಟರ್. ಪವರ್ ಫುಲ್ ಫ್ಲ್ಯಾಶ್ ಲೈಟ್, ಸೂಪರ್ ಬ್ರೈಟ್ ಫ್ಲ್ಯಾಶ್ ಲೈಟ್, ಕಾಂಪೋಸೈಟ್ ಝಡ್, ಸ್ಕ್ರೀನ್ ಶಾಟ್ ಕ್ಯಾಪ್ಚರ್, ಡೈಲಿ ಹೋರೋಸ್ಕೋಪ್ ವಾಲ್ ಪೇಪರ್ಸ್, ವುಕ್ಸಿಯಾ ರೀಡರ್, ಪ್ಲಸ್ ವೆದರ್, ಎನಿಮ್ ಲೈವ್ ವಾಲ್ ಪೇಪರ್, ಐ ಹೆಲ್ತ್ ಸ್ಟೆಪ್ ಕೌಂಟರ್, ಕಾಮ್ ಟೈಪ್ ಫಿಕ್ಷನ್, ಪಾಡೆನಾಟೆಫ್

ಇನ್ನು ಪ್ಲೇ ಸ್ಟೋರ್​ನಿಂದ ರಿಮೂವ್​ ಆದ ಆಯಪ್​ಗಳು ದುರುದ್ದೇಶಪೂರಿತ ಕೋಡ್​ ಹೊಂದಿದ್ದು, ಬಳಕೆದಾರರ ಫೇಸ್​ಬುಕ್​ ಆಯಪ್​​ಗಳ ಬ್ರೌಸರ್​ ವಿಂಡೋವನ್ನು ನಕಲಿ ಮಾಡಿ ಲೋಡ್​ ಮಾಡುತ್ತದೆ. ಬಳಕೆದಾರರು ಇದು ಅಸಲಿ ಎಂದು ತಿಳಿದು ಕಾರ್ಯ ನಿರ್ವಹಿಸುತ್ತಾರೆ. ಆ ಮೂಲಕ ಆಯಪ್​ಗಳು ಬಳಕೆದಾರರ ಪಾಸ್​​​ವರ್ಡ್​​ ಮತ್ತು ಇತರೆ ಮಾಹಿತಿಯನ್ನು ಹ್ಯಾಕ್​​ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಈ ಆಯಪ್​ ಅನ್ನು ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ರಿಮೂವ್​ ಮಾಡಿದೆ.
(ಮಾಹಿತಿNews18 ಕನ್ನಡ ಕೃಪೆ )  

5ಜಿ ಬಂದಾಗ ಅಂತರ್ಜಾಲ ವೇಗ ಎಷ್ಟಾಗುತ್ತದೆ?

ಈ ವರ್ಷದ ಕೊನೆಯ ಭಾಗದಲ್ಲಿ ಅಥವಾ 2021ರ ಆರಂಭದಲ್ಲಿ ಭಾರತದಲ್ಲಿ 5ಜಿ ಮೊಬೈಲ್‌ ಸೇವೆ ಲಭ್ಯವಾಗಬಹುದು ಎಂಬ ನಿರೀಕ್ಷೆ ಕೆಲವು ಸಮಯದ ಹಿಂದೆ ಇತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ತಂದಿತ್ತ ತಲೆನೋವು ಸೇರಿದಂತೆ ಕೆಲವು ಕಾರಣಗಳಿಂದಾಗಿ ದೇಶದಲ್ಲಿ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ಮುಂದಕ್ಕೆ ಹೋಗುವುದು ಖಚಿತವಾಗಿದೆ. ಒಂದು ವರದಿಯ ಪ್ರಕಾರ 2021ರ ಕೊನೆಯ ಭಾಗದಲ್ಲಿ ಅಥವಾ 2022ರಲ್ಲಿ ದೇಶದಲ್ಲಿ 5ಜಿ ಸೇವೆಗಳು ಲಭ್ಯವಾಗಬಹುದು.
ಅದಿರಲಿ, 5ಜಿ ಸೇವೆ ಶುರುವಾದ ನಂತರ ಮೊಬೈಲ್‌ ಮೂಲಕ ಪಡೆಯುವ ಇಂಟರ್ನೆಟ್‌ ಸಂಪರ್ಕದ ವೇಗ ಹೆಚ್ಚಲಿದೆಯೇ? ಹೌದು, ಅದು ಹೆಚ್ಚಾಗಲಿದೆ. ಅದರಲ್ಲಿ ಅನುಮಾನ ಇಲ್ಲ. 1 ಜಿಬಿಪಿಎಸ್‌ ವೇಗದ ಇಂಟರ್ನೆಟ್‌ ಸಂಪರ್ಕ 5ಜಿ ಸೇವೆ ಆರಂಭವಾದ ನಂತರ ಸಿಗಬಹುದು.
ಅಂದರೆ, 5 ಜಿಬಿ ಗಾತ್ರದ ಸಿನಿಮಾವೊಂದನ್ನು ಡೌನ್‌ಲೋಡ್‌ ಮಾಡಿಕೊಳ್ಳಲು 5ಜಿ ಸೇವೆಗಳು ಆರಂಭವಾದ ನಂತರ 40 ಸೆಕೆಂಡುಗಳಷ್ಟು ಕಾಲ ಸಾಕು ಎನ್ನುತ್ತಾರೆ ಕಂಪ್ಯೂಟರ್‌ ಪರಿಣತರು!
ದೇಶದಲ್ಲಿ ಸರಿಸುಮಾರು 2001ನೆಯ ಇಸವಿಯವರೆಗೂ ಚಾಲ್ತಿಯಲ್ಲಿ ಇದ್ದಿದ್ದು 2ಜಿ ಸೇವೆಗಳು. ಆ ಕಾಲದಲ್ಲಿ ಇಷ್ಟೇ ಗಾತ್ರದ ಒಂದು ಸಿನಿಮಾ ಅಥವಾ ಸಾಕ್ಷ್ಯಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ದಿನಗಳ ಕಾಲ ಕಾಯಬೇಕಿತ್ತು! ವಾಸ್ತವದಲ್ಲಿ, ಅಷ್ಟೊಂದು ಗಾತ್ರದ ಕಡತಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಆಗ ಬಹುತೇಕರಿಂದ ಆಗುತ್ತಿರಲಿಲ್ಲ ಕೂಡ.
5ಜಿ ಸೇವೆಗಳನ್ನು ಪಡೆಯಲು, ಅದಕ್ಕೆ ಸೂಕ್ತವಾದ ಸ್ಮಾರ್ಟ್‌ ಫೋನ್‌ ಬೇಕು. ಇಂತಹ ಸ್ಮಾರ್ಟ್‌ ಫೋನ್‌ಗಳು ಭಾರತದ ಮಾರುಕಟ್ಟೆಯನ್ನು ಈಗಾಗಲೇ ಪ್ರವೇಶಿಸಿ ಆಗಿದೆ. ಆದರೆ 5ಜಿ ಸೇವೆಗಳು ಲಭ್ಯವಾಗಬೇಕಷ್ಟೆ. 5ಜಿ ತಂತ್ರಜ್ಞಾನವು ಅಂತರ್ಜಾಲ ಸಂಪರ್ಕದ ವೇಗವನ್ನು ಹೆಚ್ಚಿಸುವ ಕಡೆ ಹೆಚ್ಚು ಗಮನ ನೀಡುತ್ತದೆ, ಕರೆಗಳ ಗುಣಮಟ್ಟವನ್ನು ಸುಧಾರಿಸುವತ್ತ ಹೆಚ್ಚಿನ ಗಮನ ನೀಡಿಲ್ಲ ಎನ್ನುತ್ತಾರೆ ಕೆಲವು ತಜ್ಞರು.
ಹಾಗಾಗಿ, 5ಜಿ ಸೇವೆಗಳು ದೇಶದಲ್ಲಿ ಲಭ್ಯವಾದ ನಂತರವೂ, ಕರೆಗಳ ಕಡಿತದ ಕರಕರೆಗೆ ಪೂರ್ಣ ವಿರಾಮ ಸಿಗಲಿಕ್ಕಿಲ್ಲವೇನೋ... 
(ಮಾಹಿತಿ ಪ್ರಜಾವಾಣಿ ಕೃಪೆ )

ಇಂದು ಮೊದಲ ದೇಶಿ ಆಯಪ್ ಅಲಾಯಿಮೆಂಟ್ಸ್ ಗೆ ಚಾಲನೆ

ನವದೆಹಲಿ : ಚೀನಾ ಆಯಪ್ ಗಳನ್ನು ಬ್ಯಾನ್ ಮಾಡಿದ ಬೆನ್ನಲೇ ಇಂದು ಮೊದಲ ದೇಶಿ ಆಯಪ್ ಅಲಾಯಿಮೆಂಟ್ಸ್ ಗೆ ಚಾಲನೆ ನೀಡಲಾಗುವುದು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಮೊದಲ ದೇಶಿ ಆಯಪ್ ಅಲಾಯಿಮೆಂಟ್ಸ್ ಗೆ ಚಾಲನೆ ನೀಡಲಿದ್ದಾರೆ. ಅಲಾಯಿಮೆಂಟ್ಸ್ ಆಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗಾಗಲೇ ಲಭ್ಯವಿದ್ದು, ಇದು ಎಂಟು ಭಾಷೆಗಳಲ್ಲಿ ಸಿಗಲಿದ್ದು, ಇದರಿಂದ ಆಡಿಯೋ-ವಿಡಿಯೋ ಕಾಲಿಂಗ್ ಮಾಡಬಹುದಾಗಿದೆ. ಈಗಾಗಲೇ ಲಕ್ಷಕ್ಕೂ ಹೆಚ್ಚು ಜನರು ಇದನ್ನು ಡೌನ್ ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. 
(ಮಾಹಿತಿ ಕೃಪೆವೆಬ್ದುನಿಯಾ)

ಇಂದು ವರ್ಷದ ಮೂರನೇ ಚಂದ್ರ ಗ್ರಹಣ

ಬೆಂಗಳೂರು : ಗುರು ಪೌರ್ಣಿಮೆ ದಿನವಾದ ಇಂದು ಈ ವರ್ಷದ ಮೂರನೇ ಚಂದ್ರ ಗ್ರಹಣ ಸಂಭವಿಸಿದೆ.
ಚಂದ್ರ ಗ್ರಹಣ ಇಂದು ಬೆಳಿಗ್ಗೆ 8.37ಕ್ಕೆ ಆರಂಭವಾಗಿದ್ದು, ಬೆಳಿಗ್ಗೆ 9.59ಕ್ಕೆ ಪೂರ್ಣ ಗೋಚರವಾಗಲಿದೆ. ಬೆಳಿಗ್ಗೆ 11.37ಕ್ಕೆ ಗ್ರಹಣ ಮೋಕ್ಷವಾಗಲಿದೆ. ಒಟ್ಟು 2 ಗಂಟೆ 45 ನಿಮಿಷಗಳ ಕಾಲ ಚಂದ್ರ ಗ್ರಹಣ ಸಂಭವಿಸಲಿದೆ.
ಈ ಚಂದ್ರ ಗ್ರಹಣ ಆಫ್ರಿಕಾ, ಉತ್ತರ ಅಮೇರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದ್ದು, ಭಾರತದಲ್ಲಿ ಈ ಚಂದ್ರ ಗ್ರಹಣ ಗೋಚರವಾಗಲ್ಲ ಎನ್ನಲಾಗಿದೆ. 
 (ಮಾಹಿತಿ ಕೃಪೆವೆಬ್ದುನಿಯಾ)

ಕೊರೋನಾ ತಂದ ಆತಂಕ:ಸಿಲಿಕಾನ್ ಸಿಟಿ ಬೆಂಗಳೂರು ಬಿಟ್ಟು ಊರಿಗೆ ಹೋಗುತ್ತಿರುವ ಉತ್ತರ ಕರ್ನಾಟಕ ಮಂದಿ

ಬಾಗಲಕೋಟೆ/ವಿಜಯಪುರ:ಕೊರೋನಾ ಸೋಂಕು ಕಳೆದ ನಾಲ್ಕೈದು ತಿಂಗಳಲ್ಲಿ ಜನರ ಜೀವನ ವಿಧಾನವನ್ನೇ ಬದಲಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ, ಇಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವಲಸೆ, ಕೂಲಿ ಕಾರ್ಮಿಕರು, ಬಡವರು, ಕೆಳ ಮಧ್ಯಮ ವರ್ಗದವರು ಮಾತ್ರವಲ್ಲದೆ ಕೈ ತುಂಬಾ ಸಂಬಳ ತರುತ್ತಿದ್ದ ಉತ್ತರ ಕರ್ನಾಟಕದ ಹಲವು ಟೆಕ್ಕಿಗಳು ಬೆಂಗಳೂರು ಬಿಟ್ಟು ಊರಿಗೆ ಹೋಗುತ್ತಿದ್ದಾರೆ.
ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 1,172 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಭಯ, ಆತಂಕಗಳಿಂದ ಉತ್ತರ ಕರ್ನಾಟಕಕ್ಕೆ ಹೋಗುವ ಮಂದಿ ಹೆಚ್ಚಾಗಿದ್ದು ಕಳೆದ ಕೆಲ ದಿನಗಳಿಂದ ಬಸ್ಸುಗಳಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರಿನ ಕಮಲಾ ನಗರದಲ್ಲಿ ವಾಸವಿದ್ದ ಸಾಫ್ಟ್ ವೇರ್ ಎಂಜಿನಿಯರ್ ಸಿದ್ದರಾಮಪ್ಪ ನವಲಗುಂದ, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದ ಎಲ್ಲೆಡೆ ಭಯ ಹೆಚ್ಚಾಗುತ್ತಿದೆ. ಹೀಗಾಗಿ ನಾವು ಮನೆಗೆ ಬೀಗ ಹಾಕಿ ನಮ್ಮೂರು ಗದಗಕ್ಕೆ ಹೋಗುತ್ತಿದ್ದೇವೆ, ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಅಲ್ಲಿಯೇ ಇರುತ್ತೇವೆ ಎಂದರು.
ಕಳೆದ ಎರಡು ದಶಕಗಳಿಂದ ಇವರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಕೇಸು ಹೆಚ್ಚಾಗುತ್ತಿರುವುದರಿಂದ ನಾನು ಕೆಲಸ ಮಾಡುವ ಕಂಪೆನಿಯಲ್ಲಿ ಮುಂದಿನ ಎರಡು ತಿಂಗಳು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂದೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿಗಿಂತ ನಮ್ಮ ಊರಿನಲ್ಲಿ ನಮಗೆ ಹೆಚ್ಚು ಸುರಕ್ಷತೆ ಎನಿಸುತ್ತದೆ ಎಂದರು.
ಬಾಗಲಕೋಟೆಯ ಲೋಕಾಪುರದ ನಿವಾಸಿ ಅನಿಲ್ ಮೈಗೇರಿ, ಕೆಂಗೇರಿ, ಬಿಡದಿ ಸುತ್ತಮುತ್ತ ಆಟೋಮೊಬೈಲ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸುತ್ತಮುತ್ತ ಗ್ರಾಮಗಳ ನಾವು 12 ಮಂದಿ ಕಂಪೆನಿಗಳಲ್ಲಿ ಅನುಮತಿ ಕೇಳಿ ಊರಿಗೆ ಹೋಗುತ್ತಿದ್ದೇವೆ, ಇಲ್ಲಿದ್ದರೆ ಊರಿನಲ್ಲಿರುವ ನಮ್ಮ ಮನೆಯವರಿಗೆ ಸುದ್ದಿ ನೋಡಿ ಭಯ, ಆತಂಕವಾಗುತ್ತಿದೆ ಎಂದರು.
ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಲವರು ಊರಿಗೆ ಬರುತ್ತಿದ್ದಾರೆ. ಜಿಲ್ಲೆಯೊಳಗೆ ಸಂಚರಿಸಿ ಬರುವುದರಿಂದ ಹೋಂ ಕ್ವಾರಂಟೈನ್ ನಲ್ಲಿ ಇರಿ ಎಂದು ಅವರಿಗೆ ಹೇಳಲು ಸಾಧ್ಯವಿಲ್ಲ ಎಂದರು.
ಬೆಂಗಳೂರಿನಿಂದ ಬಂದವರ ಬಗ್ಗೆ ದಾಖಲೆಗಳು: ಬೆಂಗಳೂರಿನಿಂದ ಊರಿಗೆ ಬರುವವರ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು ಅವರ ಮಾರ್ಗಸೂಚಿಗೆ ಕಾಯುತ್ತಿದ್ದೇವೆ. ಸರ್ಕಾರ ಮಾಡದಿದ್ದರೆ ಈ ಬಗ್ಗೆ ನಾವು ಗಮನಹರಿಸಬೇಕಾಗುತ್ತದೆ. ಊರಿಗೆ ಬಂದವರಿಂದ ಇಲ್ಲಿ ಹಳ್ಳಿಯಲ್ಲಿ ಸೋಂಕು ತಗಲುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಬಂದವರ ಬಗ್ಗೆ ವಿವರಗಳನ್ನು ಪಡೆದು ಪ್ರತ್ಯೇಕವಾಗಿ ನಿರ್ವಹಿಸಿ ಎಂದು ನಾನು ಎಲ್ಲಾ ಗ್ರಾಮಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೆಂಗಳೂರಿನಿಂದ ಬಂದವರ ಬಗ್ಗೆ ಗ್ರಾಮಸ್ಥರು ಆತಂಕಕ್ಕೊಳಗಾಗಬೇಡಿ ಎಂದು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದು ಗೋವಿಂದ ರೆಡ್ಡಿ ತಿಳಿಸಿದ್ದಾರೆ.