WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, December 25, 2020

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ


 ➤ ಪಂಪ :

• ಕನ್ನಡದ ಆದಿ ಕವಿ ಪಂಪ.
• ಪಂಪನ " ಆದಿಪುರಾಣ" ಕನ್ನಡದ ಮೊದಲ ಕಾವ್ಯವಾಗಿದೆ.
• ಪಂಪನ ತಾಯಿ ಕನ್ನಡನಾಡಿನ ಅಣ್ಣೀಗೇರಿಯ ಜೋಯಿಸ ಸಿಂಘನ ಮಗಳು ಅಬ್ಬಣ್ಣಬ್ಬೆ.
• ಪಂಪನ ತಂದೆ ಭೀಮಪ್ಪಯ್ಯ ತಮ್ಮ ಜಿನವಲ್ಲಭ.
• ಪಂಪನ ಆಶ್ರಯಧಾತ ಚಾಳುಕ್ಯ ಚಕ್ರವರ್ತಿ ಅರಿಕೇಸರಿ.
• ಪಂಪನ ಎರಡು ಪ್ರಮುಖ ಕೃತಿಗಳು-
*' ಆದಿ ಪುರಾಣ' : ಇದು ಪಂಪ ಮಹಾಕವಿಯ ಮೊದಲ ಕಾವ್ಯ. ಇದೊಂದು ಧಾರ್ಮಿಕ ಗ್ರಂಥವಾಗಿದೆ. ಇದರ ವಸ್ತು ಜೈನರ ಮೊದಲ ತೀರ್ಥಂಕರ ಆದಿನಾಥ ಮತ್ತು ಮೊದಲ ಚಕ್ರವರ್ತಿ ಭರತನನ್ನು ಕುರಿತಿ ಬರೆದ ಕೃತಿಯಾಗಿದೆ. ಇದು ಕನ್ನಡದ ಮೊದಲ ಜೈನ ಪುರಾತನವೂ ಆಗಿದೆ. ಕಾವ್ಯಧರ್ಮ ಮತ್ತು ಧರ್ಮದ ಸಾಮರಸ್ಯತೆ ಇದರಲ್ಲಿದೆ.
* ' ವಿಕ್ರಮಾರ್ಜುನ ವಿಜಯ' : ಇದು ಸಾಮಾಜಿಕ ಕೃತಿಯಾಗಿದೆ.

ಇದು ವ್ಯಾಸ ಮಹರ್ಷಿ ವಿರಚಿತ ಮಹಾಭಾರತದಿಂದ ಆನುವಾದಿಸಲಾಗಿದೆ. ಅರ್ಜುನನ್ನು ಇಲ್ಲಿ ತನ್ನ ಆಶ್ರಯಧಾ ಅರಿಕೇಸರಿಯೊಂದಿಗೆ ಹೋಲಿಸಿ ವಿಕ್ರಮಾರ್ಜುನ ವಿಜಯ ಕೃತಿಯನ್ನು ರಚಿಸಿದ್ದಾರೆ.
• ಪಂಪ, ಪೊನ್ನ, ರನ್ನರು "ರತ್ನಾತ್ರಯ"ರು ಎಂಬ ಬಿರುದನ್ನು ಹೊಂದಿದ್ದಾರೆ.

➤ ರನ್ನ
• ರತ್ನತ್ರಯರಲ್ಲಿ ಮೂರನೇಯವರೇ ರನ್ನ.
• ಇವನ ಕಾಲ 949
• ಇವರ ತಂದೆ : ಜೀನೇಂದ್ರವಲ್ಲಭ, ತಾಯಿ : ಅಬ್ಬಲಬ್ಬೆ.
• ಈತ ಮುಧೋಳದ ಜೈನ ಕುಟುಂಬಕ್ಕೆ ಸೇರಿದವನು.
• ಇವನು ಮೊದಲು ಚಾವುಂಡರಾಯರಲ್ಲಿ ಆಶ್ರಯ ಪಡೆದಿದ್ದನು. ನಂತರ ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯ ಬಳಿ ಆಶ್ರಯ ಪಡೆದಿದ್ದನು.
• ಈತ ತನ್ನ ಮಗನಿಗೆ ರಾಯ ಎಂದು ಚಾವುಂಡರಾಯ ನೆನಪಿಗಾಗಿ, ಅತ್ತಿಮಬ್ಬೆ ಎಂದು ಮಗಳಿಗೆ ಅತ್ತಿಮಬ್ಬೆ ನೆನಪಿಗಾಗಿ ಹೆಸರಿಟ್ಟನು.
• ಕೃತಿಗಳು :
* ಗದಾಯುದ್ಧ ( ಸಾಹಸ ಭೀಮ ವಿಜಯ)
ಗದಾಯುದ್ದವನ್ನು ತನ್ನ ಆಶ್ರಯಧಾತ ಸತ್ಯಾಶ್ರಯ ಇರುವ ಬಂಡಗನನ್ನು ಭೀನೊಂದಿಗೆ ಅಮೀಕರಿಸಿ ಬರೆದಿದ್ದಾನೆ. ಇದು ಸಿಂಹಾವಲೋಕನ ಕ್ರಮದಲ್ಲಿದೆ. ನಾಯಕ ಭೀಮ, ದುರಂತ ನಾಯಕ ಕರ್ಣನಾಗಿದ್ದಾನೆ.
* ಅಜಿತನಾಥ ಪುರಾಣ ( ಅಜಿತ ತೀರ್ಥಂಕರ ಪುರಾಣ ತಿಲಕಂ) : ಅಜಿತನಾಥ ಪುರಾಣವನ್ನು ಮಹಾಪುರಾಣದಿಂದ ಅನುವಾದಿಸಲಾಗಿದೆ. ಇದರ ವಸ್ತು ಜೈನರ ಎರಡನೇ ತೀರ್ಥಂಕರ ಅಜಿತನಾಥ ಎರಡನೇ ಚಕ್ರವರ್ತಿ ಅಡಗನ ವಿಚಾರವನ್ನು ಹೊಂದಿದೆ.
* ಚಕ್ರೇಶ್ವರ ಚರಿತೆ
* ಪರಶುರಾಮ ಚರಿತ
* ರನ್ನ ಕಂದ

➤ ಪೊನ್ನ :
• ರತ್ನತ್ರಯರಲ್ಲಿ ಎರಡನೇಯವನು ಪೊನ್ನ.
• ಪಂಪನ ವೆಂಗಿ ಮಂಡಲವೇ ಈತನ ಜನ್ಮ ಸ್ಥಳವಾದಂತೆ ತೋರುತ್ತದೆ.
• ಈತ ರಾಷ್ಟ್ರಕೂಟರ ದೊರೆ ಮೂರನೆ ಕೃಷ್ಣನಲ್ಲಿ ಆಶ್ರಯ ಪಡೆದಿದ್ದನು.
• ಇವನಿಗೆ " ಉಭಯ ಚಕ್ರವರ್ತಿ" " ಕೆರುಳ್ಗಳ ಸವಣ" ಎಂಬ ಬಿರುದ್ದುಗಳಿದ್ದವು.
• ಕೃತಿಗಳು :
* ಶಾಂತಿಪುರಾಣ
* ಭುವನೈಕ್ಯ ರಾಮಾಭ್ಯುದಯ
* ಜಿನಾಕ್ಷರ ಮಾಲೆ

➤ ಜನ್ನ :
• ಜನ್ನನ ಕಾಲ 1225
• ಜೈನ ಪರಂಪರೆಗೆ ಸೇರಿದ ಮಾರ್ಗದ ಕವಿ
• ಹೊಯ್ಸಳ ನರಸಿಂಹನಲ್ಲಿ ಕಟಕೋಪಾಧ್ಯಾಯ.
• ಸುಮನೋಬಾಣ ಎಂದು ಪ್ರಸಿದ್ದವಾಗಿದ್ದ ಶಂಕರ ಜನ್ನನ ತಂದೆ, ಗಂಗಾದೇವಿ ತಾಯಿ.
• ಎರಡನೇ ನಾಗವರ್ಮ ಈತನ ಗುರು.
• ಕೃತಿಗಳು :
*ಯಶೋಧರ ಚರಿತೆ: ಯಶೋಧರ ಚರಿತೆಯನ್ನು 1209 ರಲ್ಲಿ ಬರೆದನು. ವಾದಿರಾಜಕೃತ ಸಂಸ್ಕøತದ ಯಶೋಧರ ಚರಿತೆಯ ಆಧಾರದ ಮೇಲೆ ರಚನೆಗೊಂಡಿದೆ. ಈ ಕೃತಿ ಸಂಪೂರ್ಣ ಕಂದ ಪದ್ಯದಿಂದ ಕೂಡಿದೆ.

* ಅನಂತನಾಥ ಪುರಾಣ : ಅನಂತನಾಥ ಪುರಾಣವನ್ನು ಸಂಸ್ಕøತದ ಉತ್ತರ ಪುರಾಣದ ಆಧಾರದ ಮೇಲೆ ರಚಿಸಳಾಗಿದೆ. ಇದು ಜೈನರ 14 ನೇ ತೀರ್ಥಂಕರ ಜೀವನ ಚರಿತ್ರೆಯನ್ನು ಒಳಗೊಂಡಿದೆ.
* ಅನುಭವ ಮುಕುರ
* ಸ್ವರತಂತ್ರ

➤ ಶಿವಕೋಟ್ಯಾಚಾರ್ಯ :
• ಶಿವಕೋಟ್ಯಾಚಾರ್ಯರ ಕಾಲವನ್ನು ಕವಿ ಚರಿತಕಾರರು 1180 ಎಂದು ಗುರುತಿಸಿದ್ದಾರೆ.
• ಶಿವಕೋಟ್ಯಾಚಾರ್ಯರು ಬರೆದ " ವಡ್ಡಾರಾಧನೆ" ಕನ್ನಡದ ಮೊಟ್ಟಮೊದಲ ಗದ್ಯ ಗ್ರಂಥವಾಗಿದೆ.
• ವಡ್ಡಾರಾಧನೆಯನ್ನು ಪ್ರಾಕೃತ ಗ್ರಂಥ ಭಗವತೀ ಆರಾಧನಾದಿಂದ ಅನುವಾದಿಸಲಾಗಿದೆ.
• ವಡ್ಡಾರಾಧನೆಯಲ್ಲಿ 19 ಕಥೆಗಳಿವೆ.
• ಇದಕ್ಕೆ ಉಪಸರ್ಗ ಕೇವಲಿಗಳ ಕಥೆ ಎಂಬ ಮತ್ತೊಂದು ಹೆಸರಿತ್ತು.

➤ ದುರ್ಗಸಿಂಹ :
• ಇವನು ಕರ್ನಾಟಕದ ಕಿಸುನಾಡಿನ ಸೈಯಡಿಯ ಅಗ್ರಹಾರದವನು.
• ಈಶ್ವರಾರ್ಯ ಮತ್ತು ರೇವಕಬ್ಬೆಯರ ಮಗನಾಗಿ ದುರ್ಗಸಿಂಹ ಜನಿಸಿದ.
• ದುರ್ಗಸಿಂಹ ಒಂದನೇ ಜಯಸಿಂಹ ಜಗದೇಕ ಮಲ್ಲನಲ್ಲಿ ಸಂಧಿ ವಿಗ್ರಹಿಯಾಗಿದ್ದನು.
• ಸುಮಾರು 1031 ಈತನ ಗ್ರಂಥ ರಚನಾ ಕಾಲ.
• ವಸುಭಾಗಭಟ್ಟ ಮತ್ತು ಇತರರ ಪಂಚತಂತ್ರಗಳನ್ನು ಆಧಾರವಾಗಿಟ್ಟುಕೊಂಡು ದುರ್ಗಸಿಂಹ ಕನ್ನಡದಲ್ಲಿ "ಪಂಚತಂತ್ರ" ಕೃತಿಯನ್ನು ರಚಿಸಿದ್ದಾನೆ. ಇದೊಂದು ಚಂಪೂ ಗ್ರಂಥವಾಗಿದೆ.

➤ ಚಾವುಂಡರಾಯ :
• ಗಂಗರ ಅರಸ ನಾಲ್ವಡಿ ರಾಚಮಲ್ಲನಲ್ಲಿ ಮಂತ್ರಿಯಾಗಿದ್ದನು.
• ಇವನು ತನ್ನ ಶೌರ್ಯಗಳಿಂದ ಸಮರ ಪರಶುರಾಮ, ವೀರಮಾರ್ತಾಂಡ, ಪ್ರತಿಪಕ್ಷ ರಾಕ್ಷಸ ಎಂಬ ಬಿರುದುಗಳನ್ನು ಹೊಂದಿದ್ದನು.
• ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದ ಕೀರ್ತಿ ಇವನದಾಗಿದೆ. ಆದ್ದರಿಂದ ಇವನಿಗೆ " ಗೋಮ್ಮಟರಾಯ" ಎಂಬ ಬಿರುದು ಇತ್ತು.
• ಕೃತಿಗಳು :
*ಚಾವುಂಡರಾಯ ಪುರಾಣ
ಚಾವುಂಡರಾಯ ಪುರಾಣಕ್ಕೆ ಕವಿ ಪರಮೇಷ್ಟ್ರಿಯ ವಾಗಾರ್ಥ ಸಂಗ್ರಹದ ಪ್ರೇರಣೆಯಿದೆ. ಈ ಕೃತಿಗೆ ತ್ರಿಷಷ್ಠ ಲಕ್ಷಣ ಮಹಾಪುರುಷ ಎಂಬ ಹೆಸರು ಇದೆ.

➤ 1 ನೇ ನಾಗವರ್ಮ :
• ಈತ ಸುಮಾರು 10 ನೆ ಶತಮಾನದ ಅಂತ್ಯದಲ್ಲಿದ್ದನು.
• ಈತನ ಊರು ವೆಂಗಿಪಳುವು ಈತ ಜೈನ ಬ್ರಾಹ್ಮಣ.
• ಕೃತಿಗಳು :
* ಛಂಧೋಬುದ್ದಿ :
ಛಂಧೋಬುದ್ದಿ ಇದು ಕನ್ನಡದ ಮೊದಲ ಛಂಧೋಗ್ರಂಥ. ಈ ಕೃತಿಯಲ್ಲಿ ಅಕ್ಕರ, ಗೀತಿಕೆ, ಏಳೇ ತ್ರಿಪದಿ ಉತ್ಸಾಹ, ಷಟ್ಪದಿ
ಅಕ್ಕರಿಕೆಗಳನ್ನು ಕನ್ನಡದ ಛಂಧೊಜಾತಿ ಎಂದಿದ್ದಾನೆ.
*ಕಾದಂಬರಿ : ಕಾದಂಬರಿ ಇವನ ಮತ್ತೊಂದು ಕೃತಿಯಾಗಿದೆ. ಬಾಣ ಕವಿ ಸಂಸ್ಕøತದಲ್ಲಿ ಬರೆದಿರುವ ಕಾದಂಬರಿಯನ್ನು ನಾಗವರ್ಮ ಅನುವಾದಿಸಿದ್ದಾನೆ. ಆ ಮೂಲಕ ಕನ್ನಡದ ಮೊಟ್ಟ ನೊದಲ ಅನುವಾದಿತ ಕೃತಿ ಕಾದಂಬರಿಯಾಗಿದೆ. ಕಾದಂಬರಿ ಕಾವ್ಯದ ನಾಯಕಿಯ ಹೆಸರೂ ಕಾದಂಬರಿ ಎಂದೇ.

➤ ನಾಗಚಂದ್ರ :
• ನಾಗಚಂದ್ರ 11 ನೇ ಶತಂಆನದ ಕೊನೆ 12 ನೇ ಶತಮಾನದ ಆರಂಭದಲ್ಲಿ ಬದುಕಿದ್ದನು.
• ಕೃತಿಗಳು :
* ರಾಮಚಂದ್ರ ಚರಿತ ಪುರಾಣ : ರಾಮಚಂದ್ರ ಚರಿತ ಪುರಾಣ ಇದು ಕನ್ನಡದ ಮೊಟ್ಟಮೊದಲ ಜೈನ ರಾಮಾಯಣವಾಗಿದೆ. ಪ್ರಾಕೃತಕವಿ ವಿಮಲಸೂರಿಯ ಪಲುಮಚರಿಯ ಕೃತಿಯನ್ನು ಅನುಕರಿಸಿ ಬರೆದಿದ್ದಾನೆ. ಇದು ಧಾರ್ಮಿಕ ಕೃತಿಯಾಗಿದೆ.
* ಮಲ್ಲಿನಾಥ ಪುರಾಣ : ಮಲ್ಲಿನಾಥ ಪುರಾಣದ ವಸ್ತು ಜೈನರ 19ನೇ ತೀರ್ಥಂಕರ ಮಲ್ಲಿನಾಥನನ್ನು ಕುರಿತಾಗಿದೆ.ಇದು ಕೂಡ ಧಾರ್ಮಿಕ ಕೃತಿಯಾಗಿದೆ.

➤ ಶಾಂತಿನಾಥ :
• ಕ್ರಿ.ಶ 1068 ಇವನ ಕಾಲ.
• ಇವನು ಚಾಲಿಕ್ಯ ಚಕ್ರವರ್ತಿ ಭುವನೈಕ್ಯ ಮಲ್ಲಿಚಾಸಾಯಿಸ ದೇವನಾದ ಲಕ್ಷಣ ರಾಜನಲ್ಲಿ ಮಂತ್ರಿಯಾಗಿದ್ದನು.
• ಈತನ ಏಕೈಕ ಗ್ರಂಥ " ಸುಕುಮಾರ ಚರಿತೆ".

➤ ನಯಸೇನ :
• ಕ್ರಿ.ಶ 1112 ರ ಕಾಲಾವಧಿಯಲ್ಲಿ ಮುಳಗುಂದದಲ್ಲಿದ್ದ ಜೈನ ಕವಿ ನಯಸೇನನಾಗಿದ್ದಾನೆ.
• ಈತನ ಕೃತಿ " ಧರ್ಮಾಮೃತ". ಇದು ಜನತೆಗಾಗಿ ಬರೆದ ಮೊದಲ ಜೈನ ಪುರಾಣವಾಗಿದೆ. ಆನಪದ ಕತೆಗಾರನ ವಿಡಂಬನ ಹಾಸ್ಯ ಜನಜೀವನ ಪ್ರಜ್ಞೆ ಇದರಲ್ಲಿ ಅಗಾಧವಾಗಿದೆ.
• ಜನತೆಯ ಕವಿಗಳೆಂದು ಹೆಸರಾದ ಕನ್ನಡದ ಕವಿಗಳಲ್ಲಿ ನಯಸೇನ ಮೊದಲ ಸ್ಥಾನದಲ್ಲಿ ನಿಲ್ಲುತ್ತಾನೆ.

➤ ಬ್ರಹ್ಮಶಿವ :
• ಇವನ ಕಾಲ 1100
• ಇವನು ಜೈನ ಕವಿಯಾಗಿದ್ದನು.
• ಇವನ ಗುರು ವೀರನಂದಿ ಆಚಾರಸಾರ.
• ಕೃತಿಗಳು :
*ಸಮಯ ಪರೀಕ್ಷೆ : ತಾತ್ವಿಕ ಪದ್ಯ ಗ್ರಂಥವಾಗಿದೆ. ಕಂದ ವೃತ್ತದಲ್ಲಿ ಕೇವಲ ಪದ್ಯರೂಪದಲ್ಲಿರುವ ಕೃತಿಯಾಗಿದೆ.
* ತ್ರೈಲೋಕ್ಯ ಚೂಡಾಮಣಿ : ಇದರಲ್ಲಿ 36 ಸ್ತೋತ್ರಗಳಿವೆ. ಇದಕ್ಕೆ ಛತೀಸರತ್ನಮಾಲಾ ಎಂಬ ಮತ್ತೊಂದು ಹೆಸರಿದೆ.

➤ 2 ನೇ ನಾಗವರ್ಮ :
• ಇವರ ಕಾಲ- 1042
• ಇವರ ಗುರು ವೀರಭಟ್ಟಾರಕ.
• 2 ನೇ ನಾಗವರ್ಮ ಕನ್ನಡದಲ್ಲಿ ವ್ಯಾಕರಣ ಬರೆದ ಮೊದಲಿಗನಾಗಿದ್ದಾನೆ.
• ಕೃತಿಗಳು :
* ಕವ್ಯಾವಲೋಕನ : ಇದೊಂದು ಅಲಂಕಾರ ಗ್ರಂಥವಾಘಿದ್ದು. ಸೂತ್ರಗಳು ಕಂದ ಪದ್ಯದಲ್ಲಿದೆ.
* ವರ್ಧಮಾನ ಪುರಾಣ : ಇದಕ್ಕೆ ಮಹಾವೀರಚರಿತೆ ಎಂಬ ಮತ್ತೊಂದು ಹೆಸರಿದೆ.
* ಕರ್ನಾಟಕ ಭಾಷಾಭೂಷಣ : ಇದು ಕನ್ನಡದ ಮೊದಲ ವ್ಯಾಕರಣ ಗ್ರಂಥವಾಗಿದೆ.
* ಅಭಿಧಾನ ವಸ್ತುಕೋಶ : ಇದರಲ್ಲಿ ಸಂಸ್ಕøತ ಪದಗಳನ್ನು ಕನ್ನಡದಲ್ಲಿ ವಿವರಿಸಲಾಗಿದೆ.ಸ

➤ ನಿರಂತರ ಅಪ್ಡೇಟ್ಸ್ ಗಾಗಿ ನಮ್ಮ ಟೆಲೆಗ್ರಾಮ್ ಗ್ರೂಪ್ ಸೇರಿಕೊಳ್ಳಿ : https://t.me/spardhatimesgroup ➤ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು 8867161317 ನಂಬರ್ಗೆ REQUEST ಕಳಿಸಿ
(ಮಾಹಿತಿ ಕೃಪೆ ಸ್ಪರ್ಧಾ ಟೈಂಸ್)

Monday, December 21, 2020

ರಾಬರ್ಟ್‌ ಸಿನಿಮಾ ನಿರ್ಮಾಪಕರ ಹತ್ಯೆಗೆ ಸಂಚು: ಏಳು ಮಂದಿ ಸೆರೆ

 

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾ ನಿರ್ಮಾಪಕ, ಅವರ ಸಹೋದರ ಹಾಗೂ ಇಬ್ಬರು ರೌಡಿಶೀಟರ್‌ಗಳ ಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆ ರವಿ ತಂಡದ ಏಳು ಮಂದಿ ಭಾನುವಾರ ಮುಂಜಾನೆ ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಗರದ ದರ್ಶನ್‌, ಗಿರೀಶ್‌, ಮೋಹನ್‌, ರಾಜನ್‌ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಪ್ರಮುಖ ಆರೋಪಿ ಬಾಂಬೆ ರವಿ ಮತ್ತು ನೀಲಸಂದ್ರದ ಮಂಜುನಾಥ್‌ ಎಂಬುವರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಆರೋಪಿಗಳು ಜಯನಗರದ ನ್ಯಾಷನಲ್‌ ಕಾಲೇಜು ಸಮೀಪದಲ್ಲಿ ಕಾರೊಂದರಲ್ಲಿ ಕುಳಿತು ರಾಬರ್ಟ್‌ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌, ಅವರ ಸಹೋದರ ದೀಪಕ್‌, ರೌಡಿಶೀಟರ್‌ಗಳಾದ ಸೈಕಲ್‌ ರವಿ, ಬೇಕರಿ ರಘು ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. 
ಈ ಕುರಿತು ಪ್ರತಿಕ್ರಿಯೆ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ, ಭಾನುವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಜಯನಗರ ಇನ್‌ಸ್ಪೆಕ್ಟರ್‌ ಗಸ್ತಿನಲ್ಲಿದ್ದರು. ಆಗ ನ್ಯಾಷನಲ್‌ ಕಾಲೇಜು ಬಳಿ ಕಾರಿನಲ್ಲಿ ಕುಳಿತು ಕೆಲ ವ್ಯಕ್ತಿಗಳು ಕೊಲೆ ಸಂಬಂಧ ಜೋರಾಗಿ ಮಾತನಾಡುತ್ತಿದ್ದಾರೆ ಎಂದು ಬಾತ್ಮೀದಾರರ ಮೂಲಕ ಮಾಹಿತಿವೊಂದು ಸಿಕ್ಕಿದೆ. ಕೂಡಲೇ ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಹೋಗಿ, ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಆರೋಪಿಗಳು ಕಾರು ಚಾಲನೆ ಮಾಡಿ ಪೊಲೀಸ್‌ ಸಿಬ್ಬಂದಿ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಅನಂತರ ಪೊಲೀಸ್‌ ಜೀಪ್‌ನಿಂದ ಕಾರನ್ನು ಅಡ್ಡಗಟ್ಟಿ, ಕಾರಿನಿಂದ ಇಳಿಯುವಂತೆ ಸೂಚಿಸಲಾಗಿದೆ. ಆಗ ಕಾರಿನಲ್ಲಿದ್ದ ಆರೋಪಿಯೊಬ್ಬ ಕಿಟಕಿಯಿಂದಲೇ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಕೂಡಲೇ ಇನ್ನಷ್ಟು ಮಂದಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಕಾರು ಪರಿಶೀಲಿಸಿದಾಗ ಹತ್ತಾರು ಮಾರಕಾಸ್ತ್ರಗಳು ಇರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.
(ಮಾಹಿತಿ ಕೃಪೆಉದಯವಾಣಿ)

ನಿಮಗಿದು ಗೊತ್ತೇ? ನಿಮ್ಮ ಆರೋಗ್ಯ ಹೇಗಿದೆ ಎಂಬುದನ್ನು ನಿಮ್ಮ ಚರ್ಮವೇ ಹೇಳುತ್ತದೆ!

 

ಚರ್ಮವು ನಿಮ್ಮ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದ್ದು, ಒತ್ತಡದ ಬದುಕು ಕೂಡ ಚರ್ಮದ ಸಮಸ್ಯೆಯನ್ನುಂಟು ಮಾಡುತ್ತದೆ. ಕೊರೋನಾ ಸಾಂಕ್ರಾಮಿಕ ಸಂದರ್ಭ ದಲ್ಲಿ ಆರ್ಥಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು, ಸಾಕಷ್ಟು ಜನರು ಒತ್ತಡದಲ್ಲಿಯೇ ಜೀವನ ನಡೆಸುವಂತಾಗಿ ಹೋಗಿದೆ.

ವ್ಯಕ್ತಿಯೊಬ್ಬ ಒತ್ತಡಕ್ಕೊಳಗಾದಾಗ ದೇಹದ ಹಾರ್ಮೋನ್ ನಲ್ಲಿಯೂ ಏರುಪೇರಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಒತ್ತಡದಿಂದ ಮನುಷ್ಯನಿಗೆ ಎದುರಾಗುವ ಚರ್ಮ ಸಮಸ್ಯೆಗಳು ಈ ಕೆಳಕಂಡಂತಿವೆ...

ದದ್ದುಗಳಾಗುವುದು:
ದದ್ದುಗಳ ಲಕ್ಷಣಗಳು ಕೆಲವು ನಿಮಿಷಗಳ ಕಾಲ ಇರಬಹುದು. ದೀರ್ಘಕಾಲದ ದದ್ದುಗಳಾದರೆ ಆಗ ಲಕ್ಷಣಗಳು ತಿಂಗಳುಗಳ ಅಥವಾ ವರ್ಷಗಳ ತನಕ ಇರಬಹುದು.ಕೆಲ ಔಷಧಿಗಳು, ಆಹಾರ, ಹಾಗೂ ಒತ್ತಡದಿಂದಾಗಿ ಚರ್ಮದಲ್ಲಿ ಈ ಸಮಸ್ಯೆಯುಂಟಾಗುತ್ತದೆ. ಈ ದದ್ದು ಸಮಸ್ಯೆಗಳಾದಾಗ ನವೆಯಾಗುವುದು, ದದ್ದಾಗಿರುವ ಭಾಗದಲ್ಲಿ ಚರ್ಮ ಕೆಂಪಗಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯು 24 ಗಂಟೆಗಳಲ್ಲಿ ವಾಸಿಯಾಗುವುದುಂಟು. ಕೆಲವೊಮ್ಮೆ ದದ್ದುಗಳು ಬಣ್ಣ ಹಾಗೂ ಗಾತ್ರಗಳನ್ನು ಬದಲಾಯಿಸುವುದುಂಟು.

ನಿರ್ಜಲೀಕರಣ ಮತ್ತು ಕಾಂತಿಹೀನ ಚರ್ಮ:
ವಿಶ್ರಾಂತಿಯಿಲ್ಲದೆ ಸುದೀರ್ಘವಾಗಿ ಕೆಲಸ ಮಾಡುವುದು, ಸೂಕ್ತ ಸಮಯಕ್ಕೆ ನಿದ್ರೆ ಮಾಡದಿರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೆಲಸದ ಒತ್ತಡದಲ್ಲಿ ದೇಹಕ್ಕೆ ಅಗತ್ಯವಿರುವ ನೀರು, ಆರೋಗ್ಯಕರ ಆಹಾರ ಹಾಗೂ ಆರೋಗ್ಯಕರ ರೀತಿಯಲ್ಲಿ ನಿದ್ರೆ ಮಾಡುವುದನ್ನೇ ಮರೆ ಹೋಗಿದ್ದಾರೆ. ಇದರಿಂದ ಚರ್ಮದ ಕಾಂತಿ ಕೂಡ ಕುಂದುತ್ತಿದೆ.

ಈ ಸಮಸ್ಯೆಯಿಂದ ದೂರ ಉಳಿಯಲು ಹೆಚ್ಚೆಚ್ಚು ನೀರು ಹಾಗೂ ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು. ಸೂಕ್ತ ರೀತಿಯಲ್ಲಿ ಸಮತೋಲಿತ ಆಹಾರ ಸೇವನೆಯಿಂದ ಚರ್ಮದ ಕಾಂತಿಯನ್ನು ಮತ್ತೆ ಪಡೆಯಬಹುದಾಗಿದೆ.

ಪ್ರತಿನಿತ್ಯ 8-10 ಲೀಟರ್ ನೀರನ್ನು ಕುಡಿಯಲು ಪ್ರಯತ್ನಿಸಿ. ಪ್ರತೀ ರಾತ್ರಿ 8 ಗಂಟೆಗಳು ನಿದ್ರೆ ಮಾಡುವುದು ಆರೋಗ್ಯವನ್ನು ಉತ್ತಮವಾಗಿರುವಂತೆ ಮಾಡುತ್ತದೆ.

ರೊಸಾಸಿಯಾ (ಮುಖದಲ್ಲಿ ಮೊಡವೆ ರೀತಿಯ ಗುಳ್ಳೆ):
ಹದಿಹರೆಯದ ವಯಸ್ಸಿನಲ್ಲಿ ಮೊಡವೆ ಸಮಸ್ಯೆಗಳು ಬರುವುದು ಸಾಮನ್ಯ. ಆದರೆ ಕೆಲವರಲ್ಲಿ ಮುಖದಲ್ಲಿ ಕೆಂಪು-ಕೆಂಪು ಗುಳ್ಳೆಗಳು ಏಳುತ್ತವೆ, ಅವುಗಳು ಕೂಡ ನೋಡಲು ಮೊಡವೆ ರೀತಿಯಲ್ಲಿ ಇರುವುದರಿಂದ ನಾವು ಅದನ್ನು ಮೊಡವೆ ಎಂದೇ ಭಾವಿಸುತ್ತೇವೆ. ಆದರೆ ಮೊಡವೆ ರೀತಿಯಲ್ಲಿ ಕಾಣುವ ಅವುಗಳು ಮೊಡವೆಯಲ್ಲ, ಬದಲಿಗೆ ಅವುಗಳು ರೊಸಾಸಿಯಾ(Rosacea) ಆಗಿರುತ್ತವೆ.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು. ಕೆಲವೊಂದು ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಕೆಲ ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು. ಸೂರ್ಯನ ಬೆಳಕಿಗೆ ಹೆಚ್ಚು ಹೋಗದಂತೆ, ಧೂಳು ಬೀಳದಂತೆ ಹಾಗೂ ಸಂಸ್ಕರಿಸಿದ ಆಹಾರ ಸೇವನೆ ಮಾಡದೆ, ಸಾವಯವ ಆಹಾರ ಹೆಚ್ಚಾಗಿ ಸೇವನೆ ಮಾಡುವ ಮೂಲಕ ಹಾಗೂ ದಿನದಲ್ಲಿ 8 ತಾಸು ನಿದ್ದೆ, ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ.

ಇಸುಬು (ಎಸ್ಜಿಮಾ):
ಮನುಷ್ಯನ ದೇಹದಲ್ಲಿ ಅತಿ ದೊಡ್ಡ ಅವಯವ (ಅಂಗ) ಚರ್ಮ. ಇದು ದೇಹದ ಹೊರ ಭಾಗಗಳನ್ನು ಕಾಪಾಡುವ ರಕ್ಷಣಾ ಕವಚ. ಆದರೆ ಅಂಥ ರಕ್ಷಣಾ ಕವಚಕ್ಕೆ ಅನೇಕ ರೀತಿಯ ಸೋಂಕು ಉಂಟಾಗುವುದು ಸಹಜ. ಇವುಗಳ ಪೈಕಿ ಎಸ್ಜಿಮಾ (ಇಸುಬು) ಕೂಡ ಒಂದು. ಒಂದು ಅಧ್ಯಯನದ ಪ್ರಕಾರ ಪ್ರಪಂಚದಲ್ಲಿ ಅಂದಾಜು 230 ಮಿಲಿಯನ್‌ನಷ್ಟು ಜನರು ಎಸ್ಜಿಮಾದಿಂದ ಬಳಲುತ್ತಿದ್ದಾರೆ.

ಎಸ್ಜಿಮಾ ಅಂದರೆ ಚರ್ಮವು ಉರಿಯೂತಕ್ಕೆ ಗುರಿಯಾಗುವುದರಿಂದ ಆ ಭಾಗದ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿ ನವೆ ಶುರುವಾಗುವುದು. ಅವು ಕ್ರಮೇಣ ನೀರಿನ ಗುಳ್ಳೆಗಳಾಗಿ ಮಾರ್ಪಾಡಾಗಿ ಅವುಗಳಿಂದ ದ್ರವ ಪದಾರ್ಥ ಸೋರುತ್ತದೆ. ಆನಂತರ ಈ ಭಾಗವೆಲ್ಲ ಮಚ್ಚೆಯಾಗಿ ಕಾಣಿಸಿಕೊಳ್ಳುವುದಕ್ಕೆ ಎಸ್ಜಿಮಾ ಎನ್ನುತ್ತಾರೆ. ಎಸ್ಜಿಮಾದಲ್ಲಿ ಎಷ್ಟೋ ವಿಧಗಳಿದ್ದರೂ ಸಾಮಾನ್ಯವಾಗಿ 'ಅಟೊಪಿಕ್‌ ಡರ್ಮಟೈಟಿಸ್‌' ಸಮಸ್ಯೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಚಿಕ್ಕಮಕ್ಕಳಲ್ಲಿ ಶೇ.65 ಮತ್ತು ದೊಡ್ಡವರಲ್ಲಿ ಶೇ.85ರಷ್ಟು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಜೀವನದುದ್ದಕ್ಕೂ ಇರುತ್ತದೆ.

ಮುಖ್ಯವಾಗಿ ಒಣ ಚರ್ಮವಿರುವವರಲ್ಲಿ ಎಸ್ಜಿಮಾ ಹೆಚ್ಚಾಗಿ ಕಂಡುಬರುತ್ತದೆ. ಧೂಳು, ವಾತಾವರಣದಲ್ಲಿ ಬದಲಾವಣೆ, ಹೂವಿನ ಪರಾಗ, ಸೋಪು, ಡಿಟರ್ಜೆಂಟ್‌, ಕೆಲವು ಆಹಾರ ಪದಾರ್ಥ (ಉದಾ: ಕೆಲವು ಹಣ್ಣು, ತರಕಾರಿಗಳು), ಹಾಲಿನ ಉತ್ಪನ್ನಗಳು, ಮೊಟ್ಟೆ, ಸೋಯಾ, ಸೌಂದರ್ಯ ಸಾಧನ ಸಾಮಗ್ರಿ, ಕೈಗಡಿಯಾರಗಳು, ಕೆಲವು ಆಭರಣಗಳು, ಸುಗಂಧ ದ್ರವ್ಯಗಳು, ಬೆವರು, ಉಣ್ಣೆ ಉಡುಪು ಮತ್ತು ಕೆಲವು ನವೆ ಉಂಟು ಮಾಡುವ ವಸ್ತುಗಳು ಕೂಡ ಎಸ್ಜಿಮಾವನ್ನು ಪ್ರೇರೇಪಿಸುತ್ತದೆ. ಕೆಲವು ವಿಧದ ಬ್ಯಾಕ್ಟೀರಿಯಾ, ವೈರಸ್‌, ಫಂಗಸ್‌ನಂತಹ ಅಂಶಗಳು, ಮಾನಸಿಕ ಒತ್ತಡ ಮತ್ತು ಹಾರ್ಮೋನ್‌ ವ್ಯತ್ಯಾಸ ಕೂಡ ಎಸ್ಜಿಮಾ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. ಇಂತಹ ಸಮಸ್ಯೆ ಎದುರಾದಾಗ ಚರ್ಮ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

ಸೋರಿಯಾಸಿಸ್ ಮತ್ತು ಸೆಬೊರ್ಹೆಕ್ ಡರ್ಮಟೈಟಿಸ್:
ಸೋರಿಯಾಸಿಸ್‌ ಆಗಾಗ ಉಲ್ಬಣಗೊಳ್ಳುವ ಒಂದು ದೀರ್ಘ‌ಕಾಲಿಕ ಚರ್ಮಕಾಯಿಲೆ. ಜನಸಮೂಹದಲ್ಲಿ ಸುಮಾರು ಶೇ.2ರಷ್ಟು ಮಂದಿಗೆ ಈ ತೊಂದರೆ ಉಂಟಾಗುತ್ತದೆ. ಈ ಕಾಯಿಲೆಯ ಪ್ರತೀ ಉಲ್ಬಣಾವಸ್ಥೆಗೂ ಚಿಕಿತ್ಸೆಯಿದ್ದು, ಕಳವಳಕ್ಕೆ ಕಾರಣವಿಲ್ಲ.

ನಮ್ಮ ಚರ್ಮ, ಅಂಗಾಂಶ ಮತ್ತು ರಕ್ತದಲ್ಲಿ ಬಿಳಿ ರಕ್ತಕಣಗಳು ಎಂಬ ರಕ್ಷಕ ಜೀವಕೋಶಗಳಿವೆ. ಟಿ ಲಿಂಫೊಸೈಟ್ಸ್‌ ಎಂಬ ರಕ್ಷಕ ಜೀವಕೋಶಗಳ ವಿವಿಧ ಉಪ ಗುಂಪುಗಳಲ್ಲಿ ಅಸಮತೋಲನವಿದ್ದಾಗ ಸೋರಿಯಾಸಿಸ್‌ ಉಂಟಾಗುತ್ತದೆ. ಇಂತಹ ಅಸಮತೋಲನ ಉಂಟಾಗುವುದಕ್ಕೆ ಖಚಿತವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸೋರಿಯಾಸಿಸ್‌ ಒಂದು ಸಾಂಕ್ರಾಮಿಕವಲ್ಲ, ಸೋಂಕು ರೋಗವೂ ಅಲ್ಲ. ಹೀಗಾಗಿ ಸೋರಿಯಾಸಿಸ್‌ಗೆ ಚಿಕಿತ್ಸೆಯು ಕೆಲವೊಮ್ಮೆ ದೀರ್ಘಾವಧಿಯದ್ದಾಗಿರುತ್ತದೆ ಹಾಗೂ ಚರ್ಮ ಮತ್ತು ರಕ್ತನಾಳಗಳನ್ನು ಪ್ರಚೋದಿಸಿ ಚರ್ಮ ದಪ್ಪಗಟ್ಟುವಿಕೆಗೆ ಕಾರಣವಾಗುವ ಟಿ ಸೆಲ್‌ ಅಸಮತೋಲನದ ಪ್ರಕ್ರಿಯೆ ಉಂಟಾದಾಗಲೆಲ್ಲ ಸೋರಿಯಾಸಿಸ್‌ ಮರುಕಳಿಸುತ್ತದೆ.

ಒಮ್ಮೆ ಪತ್ತೆಯಾದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ವೈದ್ಯಕೀಯ ನೆರವು, ಜೀವನಶೈಲಿಯಲ್ಲಿ ಬದಲಾವಣೆ, ಉತ್ತಮ ಆಹಾರಾಭ್ಯಾಸದಿಂದ ಇದನ್ನು ನಿಯಂತ್ರಣದಲ್ಲಿ ಇಡಬಹುದು. ಚಿಕಿತ್ಸೆಯಿಂದ ಸೋರಿಯಾಸಿಸ್ ಸಂಪೂರ್ಣವಾಗಿ ಕಡಿಮೆಯಾಗಬಹುದು ಅಥವಾ ಸ್ಥಿತಿ ಉತ್ತಮವಾಗಬಹುದು.

ಚಿಕಿತ್ಸೆಯು ರೋಗದ ಪ್ರಮಾಣ, ರೋಗ ನಿರೋಧಕ ಶಕ್ತಿ ಮತ್ತು ರೋಗದ ಹಂತವನ್ನು ಅವಲಂಬಿಸಿರುತ್ತದೆ. ರೋಗಿಗೆ ಆಪ್ತಸಲಹೆ ನೀಡುವುದು ಮತ್ತು ರೋಗದ ಸ್ವರೂಪ, ಗುಣ, ಹರಡುವಿಕೆ, ಅದು ಮರುಕಳಿಸುವ ಸಾಧ್ಯತೆಗಳು ಮತ್ತು ಅದರ ಉಲ್ಬಣಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ವಿವರಿಸುವುದು ಬಹಳ ಮುಖ್ಯವಾಗುತ್ತದೆ.