WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, June 12, 2021

ಶ್ರೀಕೃಷ್ಣ ಮಠದಿಂದ ಜಿಲ್ಲಾಸ್ಪತ್ರೆಗೆ ಅಯಂಬುಲೆನ್ಸ್ ಕೊಡುಗೆ

 

ಉಡುಪಿ, ಜೂ.12: ಕೋವಿಡ್ ಸಂದರ್ಭದಲ್ಲಿ ಸೋಂಕಿತರ ಬಳಕೆಗೆ ಉಪಯೋಗಿಸಲು ಸುಮಾರು 20 ಲಕ್ಷರೂ.ವೆಚ್ಚದ ಸುಸಜ್ಜಿತ ಆಯಂಬುಲೆನ್ಸ್ ಒಂದನ್ನು ಉಡುಪಿ ಶ್ರೀಕೃಷ್ಣ ಮಠದ ಪರವಾಗಿ ಅಷ್ಟ ಮಠಾಧೀಶರು ಶುಕ್ರವಾರ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿದರು.
ಶ್ರೀಕೃಷ್ಣಮಠದ ರಾಜಾಂಗಣ ಬಳಿ ಅಷ್ಟ ಮಠಾಧೀಶರು ಶ್ರೀಕೃಷ್ಣ ಮುಖ್ಯಪ್ರಾಣ ಪ್ರಾಣರಕ್ಷಾ ವಾಹನವನ್ನು ಅಷ್ಟಮಠಾಧೀಶರು ಜಿಲ್ಲಾಧಿಕಾರಿ ಜಿ.ಜಗದೀಶ್‌ಗೆ ಚಾಲನಾ ಕೀ ನಿೀಡುವ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ, ಶಿರೂರು ಮಠದ ಶ್ರೀವೇದವರ್ಧನತೀರ್ಥ ಹಾಗೂ ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ಮೊದಲಾದವರು ಉಪಸ್ಥಿತರಿದ್ದರು.
(ಮಾಹಿತಿ ಕೃಪೆ ವಾರ್ತಾಭಾರತಿ)

'ಸಿಎಂ ಯಡಿಯೂರಪ್ಪ' ರಾಜೀನಾಮೆ ವಿಚಾರದ ಕುರಿತು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದೇನು..?

 


ಬೆಂಗಳೂರು: ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಸಾಕಷ್ಟು ವಿಚಾರ ಚರ್ಚೆಯಾಗುತ್ತಿದೆ. ಇದೀಗ ಈ ಕುರಿತು ಡಿ ವಿ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದು, ಮುಂದಿನ ಎರಡು ವರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಎಂಬುದರಲ್ಲಿ ಯಾವುದೇ ಸಂಶಯ ಬೇಡವೆಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿದ್ದು, ವರಿಷ್ಠರು ಚರ್ಚೆ ಮಾಡಿಯೇ ಈ ಮಾತನ್ನು ಹೇಳಿಸಿದ್ದಾರೆ. ಹೀಗಾಗಿ ಯಾವುದೇ ಸಂಶಯ ಬೇಡ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಪ್ರತಿ ರಾಜ್ಯಕ್ಕೆ ಒಬ್ಬೊಬ್ಬ ಉಸ್ತುವಾರಿ ಇರುತ್ತಾರೆ. ಕೇಂದ್ರದ ವರಿಷ್ಠರು ನೀಡಿದ ಮಾಹಿತಿಯನ್ನು ರಾಜ್ಯಗಳಿಗೆ ಉಸ್ತುವಾರಿಗಳು ನೀಡುತ್ತಾರೆ. ಹಾಗಾಗಿಯೇ, ಉಸ್ತುವಾರಿ ಅರುಣ್ ಸಿಂಗ್ ಕೂಡ ಇರಲಿದ್ದಾರೆ ಎಂದರು. ಮುಂದಿನ ಎರಡು ವರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಎಂಬುದರಲ್ಲಿ ಯಾವುದೇ ಸಂಶಯ ಬೇಡ, ಸುಖಾ ಸುಮ್ಮನೆ ಹೇಳಿಕೆ ನೀಡುವುದು ಬೇಡ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
(ಮಾಹಿತಿ ಕೃಪೆ Kannada News Now)

'ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ':ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

 


ಬಳ್ಳಾರಿ : ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಬಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ಮಾಡಿರುವ ಘಟನೆ ಸಂಡೂರು ತಾಲೂಕಿನ ಹಳೆದರೋಜಿ, ಕುರೇಕುಪ್ಪ ಗ್ರಾಮದಲ್ಲಿ ನಡೆದಿದೆ.
ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದ ಆರೋಗ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು, ವ್ಯಾಕ್ಸಿನ್ ಹಾಕಿಸಿಕೊಂಡರೆ ನಮ್ಮ ಪುರುಷತ್ವ ಹೋಗುತ್ತದೆ, ಜ್ವರ ಬರುತ್ತದೆ, ಕೈ ಕಾಲು ಸ್ವಾದೀನ ಕಳೆದುಕೊಳುತ್ತದೆ ಎಂದು ವಾಗ್ವಾದ ಮಾಡಿದ್ದಾರೆ.

ನಮಗೆ ಏನಾದರು ಆಗಲಿ ಪರವಾಗಿಲ್ಲ. ನೀವು ನಮ್ಮನ್ನು ಬಂದು ಕರೆಯಬೇಡಿ. ನಾವು ಸತ್ತರು ನಡೆಯುತ್ತೆ ಆದ್ರೆ ಲಸಿಕೆ ಬೇಡ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮಸ್ಥರ ತಪ್ಪು ಭಾವನೆಯಿಂದ ಆರೋಗ್ಯ ಸಿಬ್ಬಂದಿಗಳು ಲಸಿಕೆ ಹಾಕಿಸಲು ಹರಸಾಹಸ ಪಡುತ್ತಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ)

'ಸಿಂಡಿಕೇಟ್ ಬ್ಯಾಂಕ್ ಗ್ರಾಹಕ'ರಾಗಿದ್ದವರಿಗೆ ಬಹುಮುಖ್ಯ ಮಾಹಿತಿ : 'ಜು.1ರಿಂದ ಈ ಎಲ್ಲವೂ ಚೇಂಜ್, ತಪ್ಪದೇ ಬ್ಯಾಂಕ್ ನಿಂದ ಮಾಹಿತಿ ಪಡೆಯಿರಿ.

ನವದೆಹಲಿ : ಈ ಮೊದಲು ಸಿಂಡಿಕೇಟ್ ಬ್ಯಾಂಕ್ ಆಗಿದ್ದು, ಈಗ ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಂಡಿದೆ. ಹೀಗೆ ವಿಲೀನಗೊಂಡಿರುವಂತ ಬ್ಯಾಂಕ್ ಗ್ರಾಹಕರಿಗೆ ಸಿಂಡಿಕೇಟ್ ಬ್ಯಾಂಕ್ ನಿಂದ ನೀಡಿದ್ದಂತ ಚೆಕ್ ಬುಕ್ ಜುಲೈ.1ಕ್ಕೆ ಅಮಾನ್ಯವಾಗಲಿದ್ದು, ಜುಲೈ 1ರಿಂದ ಹೊಸ ಚೆಕ್ ಬುಕ್ ಪಡೆಯುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕೆನರಾ ಬ್ಯಾಂಕ್, ತನ್ನ ಬ್ಯಾಂಕ್ ಜೊತೆಗೆ ವಿಲೀನಗೊಂಡಿರುವಂತ ಸಿಂಡಿಕೇಟ್ ಬ್ಯಾಂಕ್ ನ ಗ್ರಾಹಕರಿಗೆ ಜುಲೈ.1ರಿಂದ ಹೊಸ ಐಎಫ್‌ಎಸ್ ಸಿ ಕೋಡ್ ನೀಡಲಿದೆ. ಈ ಹಿಂದೆ ಬಳಕೆ ಮಾಡಲಾಗುತ್ತಿದ್ದಂತ SYNB ಬದಲಾಗಿ, CNRB ಲೆಟರ್ ನಿಂದ ಜುಲೈ.1ರಿಂದ ಐಎಫ್‌ಎಸ್ ಸಿ ಕೋಡ್ ಶುರುವಾಗಲಿದೆ ಎಂಬುದಾಗಿ ತಿಳಿಸಿದೆ.
ಈ ತಿಂಗಳ ಅಂತ್ಯದವರೆಗೆ ಮಾತ್ರವೇ ಹಳೆಯ ಸಿಂಡಿಕೇಟ್ ಬ್ಯಾಂಕ್ ನಿಂದ ನೀಡಲಾಗಿದ್ದಂತ ಚೆಕ್ ಮಾನ್ಯವಿರಲಿದೆ. ಜುಲೈ.1ರಿಂದ ಹೊಸ ಚೆಕ್ ಬುಕ್ ವಿತರಿಸಲಾಗುತ್ತಿದ್ದು, ಗ್ರಾಹಕರು ಹೊಸ ಚೆಕ್ ಬುಕ್ ಪಡೆಯಬೇಕು. ಅಲ್ಲದೇ ಸಿಂಡಿಕೇಟ್ ಬ್ಯಾಂಕ್ ನಿಂದ ನೀಡಲಾಗಿರುವಂತ ಕಸ್ಟಮರ್ ಐಡಿ ಕೂಡ ಬದಲಾಗಲಿದ್ದು, ಬ್ಯಾಂಕ್ ಗ್ರಾಹಕರು ಹೊಸ ಕಸ್ಟಮರ್ ಐಡಿ ಕೂಡ ಪಡೆಯುವಂತೆ ಮನವಿ ಮಾಡಿದೆ.
(ಮಾಹಿತಿ ಕೃಪೆ Kannada News Now)

ಬೆಳಗಾವಿ: ಹಲವು ಅಪರಾಧ ಪ್ರಕರಣಗಳ 'ಸುಳಿವು' ನೀಡಿದ್ದ ರ‍್ಯಾಂಬೋ ನಿಧನ

 


ಬೆಳಗಾವಿ: ಹಲವು ಅಪರಾಧ ಪ್ರಕರಣಗಳಲ್ಲಿ ಮಹತ್ವದ ಸುಳಿವು ನೀಡಿದ್ದ ಹಾಗೂ ತನಿಖಾಧಿಕಾರಿಗೆ ಉತ್ತಮ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದ ಇಲ್ಲಿನ ಪೊಲೀಸ್ ಶ್ವಾನ 'ರ‍್ಯಾಂಬೋ' ಶನಿವಾರ ಮೃತಪಟ್ಟಿತು. ನಗರ ಪೊಲೀಸ್ ಕಮಿಷನರೇಟ್‌ನ ಅಧಿಕಾರಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
'ಜರ್ಮನ್ ಶೆಪರ್ಡ್‌ ತಳಿಯ ಈ ಶ್ವಾನ 2009ರ ಅ. 2ರಂದು ಜನಿಸಿತ್ತು. ಈ ತಳಿಯ ಶ್ವಾನಗಳ ಜೀವಿತಾವಧಿ 11 ವರ್ಷ 9 ತಿಂಗಳಾಗಿದೆ. 2010ರ ಮೇ 25ರಿಂದ 2011ರ ಏ. 4ರವರೆಗೆ ಬೆಂಗಳೂರಿನ ಆಡುಗೋಡಿಯ ಸಿಎಆರ್‌ (ದಕ್ಷಿಣ) ರಾಜ್ಯ ಪೊಲೀಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ರ‍್ಯಾಂಬೊಗೆ ತರಬೇತಿ ನೀಡಲಾಗಿತ್ತು. ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಅದು ಉತ್ತಮವಾಗಿ ಕಾರ್ಯನಿರ್ವಹಿಸಿದೆ' ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
'2016-17 ಹಾಗೂ 2017-18ನೇ ಸಾಲಿನಲ್ಲಿ ನಡೆದ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಅಪರಾಧ ವಿಭಾಗದಲ್ಲಿ ಪಾಲ್ಗೊಂಡು ಸತತ 2ನೇ ಸ್ಥಾನ ಗಳಿಸಿತ್ತು. ರಾಜ್ಯಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ, ಕ್ಯಾಂಪ್, ಮಾರಿಹಾಳ, ಉದ್ಯಮಬಾಗ, ಕಾಕತಿ ಮೊದಲಾದ ಠಾಣೆಗಳ ವ್ಯಾಪ್ತಿಯಲ್ಲಿನ ಹಲವು ಅಪರಾಧ ಪ್ರಕರಣಗಳಲ್ಲಿ ಮಹತ್ವದ ಸುಳಿವು ಕೊಟ್ಟಿತ್ತು' ಎಂದು ಮಾಹಿತಿ ನೀಡಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ)

ಕಲಾಗ್ರಾಮದಲ್ಲಿ ಕವಿ ಸಿದ್ದಲಿಂಗಯ್ಯ ಅಂತಿಮ ಯಾನ

 


ಬೆಂಗಳೂರು, ಜೂನ್ 12: ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ (67) ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ನೆರವೇರಿತು.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಸಾಹಿತಿ ಸಿದ್ದಲಿಂಗಯ್ಯ ಅವರು ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದ ಅವರನ್ನು ಮೇ 2ರಂದು ರಂಗಾದೊರೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸುಮಾರು ಒಂದು ತಿಂಗಳ ಅವಧಿ ಆಸ್ಪತ್ರೆಯಲ್ಲಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ನಿಧನರಾದರು.


ಸಿದ್ದಲಿಂಗಯ್ಯ ಅವರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ.
ಶನಿವಾರ ಬೆಳಿಗ್ಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ ನಾರಾಯಣ್ ಅವರನ್ನೊಳಗೊಂಡಂತೆ ಹಲವು ರಾಜಕೀಯ ಮುಖಂಡರು ಹಾಗೂ ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು.
ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ನೆರವೇರಿಸಲಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದರು.
ಸಿದ್ದಲಿಂಗಯ್ಯ ಅವರು ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಭಾಷಣಕಾರರಾಗಿದ್ದ ಅವರು ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದರು. ಕರ್ನಾಟಕದ ದಲಿತ ಚಳವಳಿಗೆ ಹೊಸ ಸಂಚಲನ ನೀಡಿದ್ದ ಅಪರೂಪದ ಸಾಹಿತಿಯಾಗಿದ್ದು, ಸದಾಕಾಲ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ತೊಡಗಿಕೊಂಡವರು.
ಸಿದ್ದಲಿಂಗಯ್ಯ ಅವರು ಎರಡು ಬಾರಿ ವಿಧಾನಪರಿಷತ್ ಸದಸ್ಯರು ಕೂಡ ಆಗಿದ್ದರು.
(ಮಾಹಿತಿ ಕೃಪೆ Oneindia)

ಲಾಕ್ ಡೌನ್ : 5 ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು 90 ಕಿ.ಮೀ ನಡೆದ ತಾಯಿ.!

 


ದಾವಣಗೆರೆ: ಕೋವಿಡ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಸ್ ಇಲ್ಲದೇ ತಾಯಿಯೋರ್ವಳು ತನ್ನ ಐದು ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು ಬರೋಬರಿ 90 ಕಿಮೀ ನಡೆದು ಮನೆ ಸೇರಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಐದು ವರ್ಷದ ಮಗನನ್ನು ಎತ್ತಿಕೊಂಡು ಅಂದಾಜು 90 ಕಿಮೀ ನಡೆದುಕೊಂಡು ಬಂದ ಆ ಮಹಾತಾಯಿಯ ಹೆಸರು ನಾಗರತ್ನಾ. ಈಕೆ ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದಿಂದ ದಾವಣಗೆರೆವರೆಗೆ ಮಗು ಎತ್ತಿಕೊಂಡು ಕಾಲ್ನಡಿಗೆಯಲ್ಲಿ ಬಂದಿದ್ದಾಳೆ. ಕುಟುಂಬದಲ್ಲಿ‌ ನಡೆದ ಜಗಳವೇ ಈಕೆ ಮನೆ ಬಿಟ್ಟು ಬರಲು ಕಾರಣ ಎನ್ನಲಾಗಿದೆ.
ಪತಿಯೊಂದಿಗೆ ಜಗಳ‌ಮಾಡಿಕೊಂಡು ಮಗು ಹಾಗೂ ಬಟ್ಟೆ ಚೀಲದೊಂದಿಗೆ ಬೆಳಿಗ್ಗೆಯೇ ಮನೆಯಿಂದ ಹೊರಟ ನಾಗರತ್ನ, ಶಿವಮೊಗ್ಗದಿಂದ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆಯಲ್ಲಿರುವ ಅಕ್ಕನ‌ ಮನೆಗೆ ಹೋಗುತ್ತಿದ್ದಳು. ರಾತ್ರಿ 9.30 ವೇಳೆಗೆ ನಗರದ ಎಸ್ ಎಸ್ ಆಸ್ಪತ್ರೆ ಬಳಿ ನಗರದ ಪೋಲೀಸರು ಆಕೆಯನ್ನು ವಿಚಾರಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಆಕೆಯನ್ನು ಪೊಲೀಸ್ ವಾಹನದಲ್ಲಿ ತುಂಬಿಕೆರೆ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ)

ಕೋವಿಡ್ ಸಂಕಷ್ಟದಲ್ಲೂ ತೆರವು : ನಗರಸಭೆ ವಿರುದ್ದ ಆಕ್ರೋಶ

 



ಬಾಗಲಕೋಟೆ: ನಗರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು ಕೇಳಿ ಬಂದಿದ್ದು, ನಗರದ ಮುಳಗಡೆ ಪ್ರದೇಶದಲ್ಲಿನ ಶೆಡ್ಗಳನ್ನು ತೆರವುಗೊಳಿಸಲಾಯಿತು.

ಕೋವಿಡ್ ಲಾಕಡೌನ್ ಹಿನ್ನೆಯಲ್ಲಿ ಜನರು ತೀವ್ರ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭಗಳಲ್ಲಿ ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ ಹಾಗೂ ಬಿಟಿಡಿಎ ಕಾರ್ಯಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹಳೆಯ ಅಂಜುಮನ್ ಏರಿಯಾ, ಕಿಲ್ಲಾ ಪ್ರದೇಶಗಳಲ್ಲಿ ಇದ್ದ ಶೆಡ್ ಗಳನ್ನು ನಗರಸಭೆ, ಬಿಟಿಡಿಎ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು. ಈ ವೇಳೆ ಶೆಡನಲ್ಲಿದ್ದ ಮಹಿಳೆಯರು, ಅಧಿಕಾರಿಗಳಿಗೆ ಕೈ ಮುಗಿದು, ಶೆಡ್ ನಾವು ತೆಗೆದುಕೊಳ್ಳುತ್ತೇವೆ. ಜೆಸಿಬಿ ಮೂಲಕ ಹಾಳು ಮಾಡಬೇಡಿ ಎಂದು ಕೇಳಿಕೊಂಡರು. ಕೈ ಮುಗಿದು ಕೇಳಿಕೊಂಡರೂ ಕರಗದ ಅಧಿಕಾರಿಗಳು, ಹಲವು ಶೆಡ್ ಗಳನ್ನು ನೆಲಸಮಗೊಳಿಸಿದರು. ಈ ವೇಳೆ ಕೆಲ ಮಹಿಳೆಯರು ಕಣ್ಣೀರು ಹಾಕಿದರು. ಅಲ್ಲದೇ ಕೊರೊನಾ‌ ಸಂಕಷ್ಟದಲ್ಲಿರುವ ಬಡ ಜನರಿಗೆ ಅಧಿಕಾರಿಗಳು ಈ ರೀತಿ ತೊಂದರೆ ಕೊಡುತ್ತಿರುವುದಕ್ಕೆ ಹಿಡಿಶಾಪ ಹಾಕಿದರು.

ಅಗತ್ಯವೇನಿದೆ :

ಜನರು ಕೋವಿಡ್ ಸಂಕಷ್ಟದಲ್ಲಿದ್ದಾರೆ. ಇಂದು ತೆರವುಗೊಳಿಸದ ಶೆಡ್ ಗಳು ಮುಳುಗಡೆ ಪ್ರದೇಶಗಳಲ್ಲಿ ಇವೆ. ಈ ಶೆಡ್ ಗಳಿಂದ ಯಾರಿಗೂ ತೊಂದರೆ ಇಲ್ಲ. ಆದರೂ, ಶೆಡನಲ್ಲಿ ವಾಸಿಸುವ ಬಡ ಜನರಿಗೆ ತೊಂದರೆ ತೊಂದರೆ ಕೊಡುತ್ತಿದ್ದಾರೆ. ಮುಳುಗಡೆ ಪ್ರದೇಶ ಈ ಶೆಡಗಳನ್ನು ಇಂತಹ ಸಂಕಷ್ಟದಲ್ಲಿ, ಅದರಲ್ಲೂ ಮಳೆಗಾಲ ಶುರುವಾಗುವ ವೇಳೆ ತೀವ್ರ ತೊಂದರೆ ಕೊಡುತ್ತಿರುವುದು ಸರಿಯಲ್ಲ. ಈ ತೊಂದರೆ ಕೊಡುವ ಅಧಿಕಾರಿಗಳಿಗೆ, ಬಡ ಜನರಿಗೆ ಇಷ್ಟೊಂದು ತೊಂದರೆ ಕೊಡುತ್ತಿದ್ದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ಸುಮ್ಮನೆ ಕುಳಿತಿರುತ್ತಿದು ಬಡ ಜನರ ಶಾಪ ತಟ್ಟಲಿದೆ ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ನಾಗರಾಜ ಹದ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ)

ಕಲಾಗ್ರಾಮದಲ್ಲಿ ಕವಿ ಡಾ. ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ

 


ಬೆಂಗಳೂರು, ಜೂ.12- ಕೋವಿಡ್‌ನಿಂದ ಶುಕ್ರವಾರ ನಿಧನರಾದ ಕವಿ ಡಾ.ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಿತು. ಸರಕಾರಿ ಗೌರವಗಳೊಂದಿಗೆ ಸಿದ್ದಲಿಂಗಯ್ಯ ಅವರಿಗೆ ಅಂತಿಮ ವಿದಾಯ ಹೇಳಲಾಯಿತಲ್ಲದೆ, ಸರಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಅಂತಿಮ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು. ಅವರ ಜತೆಯಲ್ಲಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅಗಲಿದ ಚೇತನಕ್ಕೆ ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, "ರಾಜ್ಯ ಕಂಡ ಶ್ರೇಷ್ಠ ಸಾಹಿತಿ. ದಮನಿತರ ದನಿಯಾಗಿದ್ದವರು ಡಾ.ಸಿದ್ದಲಿಂಗಯ್ಯ. ಅವರ ನಿಧನ ಬಹಳ ನೋವಿನ ಸಂಗತಿ. ತಮ್ಮ ಬದುಕು, ನೋವುಗಳನ್ನೇ ಸಾಹಿತ್ಯವಾಗಿ ಬರೆದವರು ಅವರು. ಎರಡು ಅವಧಿಗಳಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಸದನದಲ್ಲಿ ವಿಚಾರ ಮಂಡನೆ, ಚರ್ಚೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದರು.
ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ನೆರವೇರಿಸಲಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ಡಿಸಿಎಂ ಹೇಳಿದರು.
(ಮಾಹಿತಿ ಕೃಪೆ ಈ ಸಂಜೆ)

ಬೆಲೆ ಏರಿಕೆ ಬಗ್ಗೆ ಮೋದಿ ಬಾಯಿ ಬಿಡುತ್ತಿಲ್ಲ: ಡಿ ಕೆ ಶಿವಕುಮಾರ್

 


ತುಮಕೂರು, ಜೂ.12- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಂಗ್ರಹವಾಗಿರುವ 20 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ತೆರಿಗೆ ಹಣದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಒಂದಿಷ್ಟು ನೆರವಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಚಿತ್ರದುರ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಶಿರಾದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಹಣ್ಣು, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್, ದಿನಸಿ, ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.
ಮಧ್ಯಮ ವರ್ಗ, ಸಣ್ಣ ವ್ಯಾಪಾರಿಗಳು ನಷ್ಟು ಅನುಭವಿಸಿದ್ದಾರೆ. ಇಂಧನ ಬೆಲೆ ಹೆಚ್ಚಳದಿಂದ ಕೇಂದ್ರ ಸರ್ಕಾರ ಲಕ್ಷಾಂತರ ಲಾಭ ಮಾಡಿಕೊಂಡಿದೆ. ಅದರಲ್ಲಿ ನಷ್ಟ ಅನುಭವಿಸಿದ ಸಣ್ಯ ವ್ಯಾಪಾರೋದ್ಯಮಗಳಿಗೆ, ಜನರಿಗೆ ಲಾಭಾಂಶದಲ್ಲಿ ಸ್ವಲ್ಪ ಹಂಚಿ. ಬ್ಯಾಂಕ್ ಸಾಲಗಳ ಬಡ್ಡಿ ಮನ್ನಾ ಮಾಡಿ, ಸಾಲದ ಕಂತು ಮನ್ನಾ ಮಾಡಿ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಸಂಕಷ್ಟ ಕಾಲದಲ್ಲೂ 30 ಪೈಸೆ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ. ನಾನು ಇಂಧನ ಖಾತೆ ಸಚಿವನಾಗಿದ್ದೆ ಪಾವಗಡದಲ್ಲಿ ಸೋಲಾರ್ ಪವರ್ ಪಾರ್ಕ್ ಮಾಡಿ ಬಳಕೆಗಿಂತಲೂ ಹೆಚ್ಚು ವಿದ್ಯುತ್ ಉತ್ಪಾದಿಸಿದ್ದೇವೆ. ಈ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ. ಜನ ಸಾಮಾನ್ಯರ, ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿಲ್ಲ. ಗೊಬ್ಬರದ ಬೆಲೆ ಹೆಚ್ಚಳ ಮಾಡಿ ರೈತರಿಗೆ ಬರೆ ಹಾಕಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಜಮೀನಿನಲ್ಲೇ ನಾಶ ಮಾಡುತ್ತಿದ್ದಾರೆ. ಕಷ್ಟ ಪಟ್ಟು ಮಾರುಕಟ್ಟೆಗೆ ತಂದರೂ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಕೊರೊನಾ ಸಂದರ್ಭದಲ್ಲಿ ಲಸಿಕೆಗೆ, ಬೆಡ್ ಗೆ, ಆಮ್ಲಜನಕಕ್ಕೆ, ಕೊನೆಗೆ ಸ್ಮಶಾನದಲ್ಲೂ ಜನ ಸರದಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದರು. ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಜನ ಸಾಮಾನ್ಯರ ಬದುಕಿಗೆ ಕೂಳ್ಳಿ ಇಟ್ಟಿದ್ದಾರೆ. ದೇಶದಲ್ಲಿ ತೈಲ ದರ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಅದರೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಬಾಯಿ ಬಿಡುತ್ತಿಲ್ಲ. ಈ ದೇಶದಲ್ಲಿ ಜನ ಸಾಮಾನ್ಯರು ಬದಕ ಬೇಕು ಎಂದರೆ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಇಲ್ಲದೆ ಇದ್ದರೆ ಜನ ಸಾಮಾನ್ಯರ ಬದುಕಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
ಸಚಿವ ಟಿ ಬಿ ಜಯಚಂದ್ರ ಮಾತನಾಡಿ, ಕಳೆದ ಏಳು ವರ್ಷಗಳಿಂದ ಜನರಿಗೆ ಬರಿ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಜನರಿಗೆ ಈಗ ಅರ್ಥವಾಗಿದೆ ಬಿಜೆಪಿ ಅಧಿಕಾರ ನೀಡಿ ತಪ್ಪು ಮಾಡಿದ್ದೇವೆ ಎಂದು ಪ್ರತಿ ನಿತ್ಯ ಪರಿತಪಿಸುತ್ತಿದ್ದಾರೆ. ದಿನಸಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಅದರೆ ಯಾರು ಬಾಯಿ ಬಿಡುತ್ತಿಲ್ಲ. ಡೀಸಲ್, ಪೆಟ್ರೋಲ್ ಬೆಲೆ 100 ಗಡಿ ದಾಟಿದೆ. ಇದರಿಂದ ಎಲ್ಲಾರ ಜೋಬಿಗೆ ಕತ್ತರಿ ಹಾಕಿದ್ದಾರೆ.
ಇನ್ನಾದರೂ ಜನರು ಬಿಜೆಪಿ ಭಟ್ಟಂಗಿತನ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವರಾದ ಸುಧಾಕರ್, ಆಂಜನೇಯ್ಯ, ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ಕಾಂಗ್ರೆಸ್ ನ ಮುಖಂಡರು ಉಪಸ್ಥಿತರಿದ್ದರು.
(ಮಾಹಿತಿ ಕೃಪೆ ಈ ಸಂಜೆ)

ಆಸ್ಪತ್ರೆಗೆ ಬಂದು ರೋಗಿಗೆ ಬೆಂಕಿ ಹಚ್ಚಿದ ವ್ಯಕ್ತಿಯ ಬಂಧನ

 

ಭೊಪಾಲ್ : ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಆಸ್ಪತ್ರೆಯಲ್ಲಿ ರೋಗಿಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಈ ಹಿಂದೆ ವ್ಯಕ್ತಿಯನ್ನು ಗಾಯಗೊಳಿಸಿದ್ದನು, ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.
ಗುರುವಾರ ಈ ಘಟನೆ ನಡೆದಿದೆ ಮತ್ತು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಿಂದ ಸೆರೆಹಿಡಿಯಲಾಗಿದೆ. ಎನ್ ಡಿಟಿವಿ ವರದಿಯ ಪ್ರಕಾರ, ಸಂತ್ರಸ್ತ ದಾಮೋದರ್ ಕೋರಿ ಈಗ ಸಾಗರ ಜಿಲ್ಲೆಯ ಬುಂದೇಲ್ ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವನ ಸ್ಥಿತಿ ಸ್ಥಿರವಾಗಿದೆ.
ಮಿಲನ್ ರಾಜಕ್ ಎಂದು ಗುರುತಿಸಲಾದ ಆರೋಪಿಯನ್ನು ಲೈಟರ್ ಹಿಡಿದು ಆಸ್ಪತ್ರೆಯ ಲಾಬಿಯ ಸುತ್ತಲೂ ಚಲಿಸುತ್ತಿರುವುದನ್ನು ದೃಶ್ಯಾವಳಿಗಳು ಸೆರೆಯಾಗಿದೆ. ನಂತರ ಅವನು ಕೋರಿಯ ಕಡೆಗೆ ಚಲಿಸಿ ಅವನಿಗೆ ಬೆಂಕಿ ಹಚ್ಚುವುದನ್ನು ತೋರಿಸಲಾಗಿದೆ. ಬೆಂಕಿಯಿಂದ ಆವೃತವಾದ ರೋಗಿಯು ಆ ಪ್ರದೇಶದಿಂದ ತಪ್ಪಿಸಿಕೊಳ್ಳುವ ದಾಳಿಕೋರನನ್ನು ಅನುಸರಿಸಿ ನಿರ್ಗಮನದ ಕಡೆಗೆ ಓಡುತ್ತಾನೆ.
ಮಿಲನ್ ರಾಜಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೭ ರ ಅಡಿಯಲ್ಲಿ ಗೋಪಾಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಬೆಂಕಿ ಹಚ್ಚಲು ಪೆಟ್ರೋಲ್ ಬಳಸಿದ್ದರು ಎಂದು ಸಾಗರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕ್ರಮ್ ಕುಶ್ವಾಹ್ ಎನ್ ಡಿಟಿವಿಗೆ ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಂತ್ರಸ್ತನ ಹೇಳಿಕೆಯು ಮಿಲನ್ ಮಾಚೆ ರಾಜಕ್ ಅವರಿಗೆ ಬೆಂಕಿ ಹಚ್ಚಿದೆ ಎಂದು ದೃಢಪಡಿಸುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
(ಮಾಹಿತಿ ಕೃಪೆ Kannada News Now)

ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭ, 1 ರಿಂದ 10ನೇ ತರಗತಿ ಮಕ್ಕಳ ಪಠ್ಯದ ಹೊಸ ಮಾರ್ಗಸೂಚಿ ಬಿಡುಗಡೆ

 


ಬೆಂಗಳೂರು- ಪ್ರಸಕ್ತ ವರ್ಷದ (2021-22) ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿ ಬದಲು ಆನ್'ಲೈನ್ ಮತ್ತು ಆಫ್'ಲೈನ್ ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕಳೆದ ವರ್ಷದಂತೆ ಈ ವರ್ಷವೂ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವೇದನಾ ಕಾರ್ಯಕ್ರಮದ ಮೂಲಕ 1662 ವಿಡಿಯೋ ಪಾಠ ಬೋಧನಾ ನಡೆಯಲಿದೆ. ಎಫ್‌ಎಂ ರೇಡಿಯೋದಲ್ಲಿ ಆಡಿಯೋ ಪಾಠಗಳ ಪ್ರಸಾರ ನಡೆಯಲಿದೆ.

ಕೇಂದ್ರ ಸರ್ಕಾರದ ದೀಕ್ಷಾ ಆಯಪ್ ನಲ್ಲಿ 1 ರಿಂದ 10ನೇ ತರಗತಿ ಮಕ್ಕಳ ಪಠ್ಯಕ್ಕೆ ಸಂಬಂಧಿಸಿದ 22 ಸಾವಿರಕ್ಕೂ ಹೆಚ್ಚು ಕಂಟೆಂಟ್ ಗಳನ್ನು ಆಪ್ ಲೋಡ್ ಮಾಡಲಾಗಿದೆ. ಈ ಆಯಪ್ ನಲ್ಲಿ ಮೌಲ್ಯವರ್ಧಿತ ಪಠ್ಯಪುಸ್ತಕಗಳೂ ದೊರೆಯಲಿವೆ. ಅವುಗಳೆಲ್ಲವನ್ನೂ ಡೌನ್ ಲೋಡ್ ಮಾಡಿಕೊಂಡು ಪಾಠ ಅಭ್ಯಾಸ ಮಾಡಬಹುದಾಗಿದೆ.

ಜೊತೆಗೆ ಶಿಕ್ಷಕರು ಪಠ್ಯ ಬೋಧನೆಯ ಪುಟ್ಟ ವಿಡಿಯೋ ಮಾಡಿ ಮಕ್ಕಳ ಪೋಷಕರಿಗೆ ಹಂಚಿಕೊಳ್ಳಬಹುದು. ತರಗತಿವಾರು ಮಕ್ಕಳ ಪೋಷಕರ ವಾಟ್ಸ್ ಆಯಪ್ ಗುಂಪುಗಳನ್ನು ಮಾಡಿ ಅವರನ್ನು ನಿಗದಿತವಾಗಿ ಸಂಪರ್ಕಿಸಿ ಮಕ್ಕಳ ಕಲಿಕೆಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ದೂರದರ್ಶನ ರೇಡಿಯೋ ಪಾಠ ಬೋಧನಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಪರ್ಕಿಸಿ ಮೊಬೈಲ್ ಫೋನ್, ಇಂಟರ್ನೆಟ್, ರೇಡಿಯೋ ದೂರದರ್ಶನ ಸೇರಿದಂತೆ ಮತ್ತಿತರ ತಾಂತ್ರಿಕ ಸೌಲಭ್ಯ ಮಾಹಿತಿ ಪಡೆದು, ಅವುಗಳ ಮೂಲಕ ಹೇಗೆ ಶಿಕ್ಷಣ ಪಡೆಯಬೇಕು ಎಂಬ ಗ್ಗೆ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಶಿಕ್ಷಕರಿಗೆ ಇಲಾಖೆ ಸೂಚಿಸಿದೆ.

ಯಾವುದೇ ತಾಂತ್ರಿಕ ಸೌಲಭ್ಯವಿಲ್ಲದ ವಿದ್ಯಾರ್ಥಿಗಳ ಮನೆಯ ಸಮೀಪದ ಸಹೃದಯಿ ವ್ಯಕ್ತಿ ಗುರ್ತಿರಿ ಅವರ ಬಳಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವಾಗುವಂತೆ ಶಿಕ್ಷಕರು ಮನವೊಲಿಸುವಂತೆಯೂ ಇಲಾಖೆ ಶಿಕ್ಷಕರಿಸೆ ಸೂಚಿಸಿದೆ.

ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಶಾಲೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದ್ದು, ಈ ವೇಳೆ ಪ್ರಾಕ್ಟೀಸ್ ಶೀಟ್ ಗಳನ್ನು ನೀಡುವ ಶಿಕ್ಷಕರು, ಅವುಗಳನ್ನು ಯಾವ ರೀತಿ ಬರೆಯಬೇಕೆಂಬುದನ್ನು ಮಕ್ಕಳಿಗೆ ವಿವರಿಸಬೇಕು. ಮಕ್ಕಳು ಅಭ್ಯಾಸ ಮಾಡಿದ ಈ ಹಾಳೆಗಳು ಮುಂದಿನ ದಿನಗಳಲ್ಲಿ ಮೌಲ್ಯಮಾಪನಕ್ಕೆ ಬಳಕೆಯಾಗಲಿದೆ. ಪ್ರತೀ ಶಿಕ್ಷಕರು 10-15 ಮಕ್ಕಳಿಗೆ ಬೋಧನೆ ಮಾಡುವ ಜವಾಬ್ದಾರಿ ತೆರೆದುಕೊಳ್ಳಬೇಕು. ಮನೆಗಳಲ್ಲಿ ಟಿವಿ ಸೌಲಭ್ಯ ಇರುವ ಮಕ್ಕಳೂ ಕೂಡ ಈ ಅಭ್ಯಾಸವನ್ನು ಮಾಡಬೇಕು.

ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಹಿಂದಿನ ವರ್ಷದ ಪಠ್ಯ ಕೂಡ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ 30 ದಿನಗಳ ಕಾಲ ಸೇತುಬಂಧ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಸೇತುಬಂಧ ಕಾರ್ಯಕ್ರಮದ ಅಂತಿಮ ದಿನಗಳಲ್ಲಿ ಈ ಸಂಬಂಧ ಮಕ್ಕಳಿಗೆ ಆನ್'ಲೈನ್ ಹಾಗೂ ಆಫ್'ಲೈನ್ ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಹಿಂದಿನ ವರ್ಷದಂತೆಯೇ ವಿದ್ಯಾರ್ಥಿಗಳೂ ಈ ಬಾರಿಯು ಸಿದ್ಧತೆಗಳನ್ನು ನಡೆಸಬೇಕು.

ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ವೇಳಾಪಟ್ಟಿಯನ್ನು ಸಿದ್ಧಪಡಿಸಿ ವಾರಕ್ಕೊಮ್ಮೆ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಭೇಟಿ ನೀಡುವಂತೆ ಮಾಡಿ, ವಿದ್ಯಾರ್ಥಿಯ ಕಾರ್ಯಕ್ಷಮತೆ ಕುರಿತು ಮಾತುಕತೆ ನಡೆಸಬೇಕು.
ಪ್ರತಿ ವಿದ್ಯಾರ್ಥಿಯ ವಿಷಯವಾರು ಕೃತಿ ಸಂಪುಟ ನಿರ್ವಹಣೆ ಮಾಡಿ ಮೌಲ್ಯಮಾಪನ ಮಾಡಬೇಕು. ಇದರ ವಿವರವನ್ನು ಕಡ್ಡಾಯವಾಗಿ ವಿದ್ಯಾರ್ಥಿ ಸಾಮರ್ಥ್ಯ ಟ್ರಾಕಿಂಗ್ ವ್ಯವಸ್ಥೆ ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
(ಮಾಹಿತಿ ಕೃಪೆ ಈ ಸಂಜೆ)

Friday, June 11, 2021

BIG BREAKING NEWS : ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ

 


ಬೆಂಗಳೂರು : ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ(67) ಚಿಕಿತ್ಸೆ ಫಲಕಾರಿಯಾಗದೇ, ಸಾವನ್ನಪ್ಪಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತೆ ಆಗಿದೆ.
ಮೇ.2ರಂದು ಕೆಮ್ಮ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಂತ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಹೀಗಾಗಿ ಚಿಕಿತ್ಸೆಗಾಗಿ ರಂಗದೊರೆ ಆಸ್ಪತ್ರೆ, ಅಪೋಲೋ ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳಿಗೆ ಸುತ್ತಾಡಿದ್ದರೂ ಬೆಡ್ ಸಿಕ್ಕಿರಲಿಲ್ಲ. ಅಂತಿಮವಾಗಿ ಡಿಸಿಎಂ ಡಾ.ಸಿಎನ್ ಅಶ್ವತ್ಥ್ ನಾರಾಯಣಗೆ ವಿಷಯ ತಿಳಿಯುತ್ತಿದ್ದಂತೆ ಕರೆ ಮಾಡಿ, ಬೆಡ್ ವ್ಯವಸ್ಥೆ ಮಾಡಿದ್ದರಿಂದಾಗಿ ಮೇ.3ರಂದು ರಂಗದೊರೆ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ಬೆಡ್ ದೊರೆತು ಚಿಕಿತ್ಸೆ ಪಡೆಯುತ್ತಿದ್ದರು.
ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ರಂಗದೊರೆ ಆಸ್ಪತ್ರೆಯಿಂದ ಕಳೆದ ಸೋಮವಾರದಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಅವರು ಇಂದು ಚಿಕಿತ್ಸೆ ಫಲಕಾರಿಯಾಗೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೋಟ
ಸಿದ್ಧಲಿಂಗಯ್ಯನವರು ಕನ್ನಡದ ಲೇಖಕರಲ್ಲೊಬ್ಬರು. 'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.
ಜನನ, ಜೀವನ
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ 'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಕೃತಿಗಳು
ಪಿ.ಎಚ್ ಡಿ ಸಂಶೋಧನಾಪ್ರಬಂಧ - ಗ್ರಾಮ ದೇವತೆಗಳು, 1997

ಕವನ ಸಂಕಲನಗಳು
ಹೊಲೆ ಮಾದಿಗರ ಹಾಡು, 1975
ಮೆರವಣಿಗೆ, 2000
ಸಾವಿರಾರು ನದಿಗಳು, 1979
ಕಪ್ಪು ಕಾಡಿನ ಹಾಡು, 1983
ಆಯ್ದಕವಿತೆಗಳು, 1997
ಅಲ್ಲೆಕುಂತವರೆ
ನನ್ನ ಜನಗಳು ಮತ್ತು ಇತರ ಕವಿತೆಗಳು, 2005
ಸಮಕಾಲೀನ ಕನ್ನಡ ಕವಿತೆ ಭಾಗ-3, 4 (ಸಂಪಾದನೆ ಇತರರೊಂದಿಗೆ), 2003
ವಿಮರ್ಶನಾ ಕೃತಿಗಳು
ಹಕ್ಕಿ ನೋಟ, 1991
ರಸಗಳಿಗೆಗಳು
ಎಡಬಲ
ಉರಿಕಂಡಾಯ, 2009

ಲೇಖನಗಳ ಸಂಕಲನ
ಅವತಾರಗಳು, 1991
ಸದನದಲ್ಲಿ ಸಿದ್ದಲಿಂಗಯ್ಯ ಭಾಗ -1, 1996
ಸದನದಲ್ಲಿ ಸಿದ್ದಲಿಂಗಯ್ಯ ಭಾಗ -2, 2004
ಜನಸಂಸ್ಕೃತಿ, 2007
ನಾಟಕಗಳು
ಏಕಲವ್ಯ, 1986
ನೆಲಸಮ, 1980
ಪಂಚಮ, 1980
ಆತ್ಮಕಥೆ
ಊರುಕೇರಿ- ಭಾಗ-1, 1997
ಊರುಕೇರಿ- ಭಾಗ-2, 2006
ಗೌರವ, ಪ್ರಶಸ್ತಿಗಳು
ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರ್ಕಾರ ಪ್ರಶಸ್ತಿ-1984
ರಾಜ್ಯೋತ್ಸವ ಪ್ರಶಸ್ತಿ -ಕರ್ನಾಟಕ ಸರ್ಕಾರ-1986
ಡಾ.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ -1992
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ -1996
ಜಾನಪದ ತಜ್ಞ ಪ್ರಶಸ್ತಿ -2001
2 ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ.
ಸಂದೇಶ್ ಪ್ರಶಸ್ತಿ -2001
ಡಾ.ಅಂಬೇಡ್ಕರ್ ಪ್ರಶಸ್ತಿ -2002
ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ -2002
ಬಾಬುಜಗಜೀವನರಾಮ್ ಪ್ರಶಸ್ತಿ -2005
ನಾಡೋಜ ಪ್ರಶಸ್ತಿ -2007
ಪ್ರೆಸಿಡೆನ್ಸಿ ಇನ್ಷಿಟ್ಯೂಷನ್ ಪ್ರಶಸ್ತಿ -2012
ಆಳ್ವಾಸ್ ನುಡಿಸಿರಿ ಪ್ರಶಸ್ತಿ -2012
ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.
ನೃಪತುಂಗ ಪ್ರಶಸ್ತಿ -2018
ಪಂಪ ಪ್ರಶಸ್ತಿ - 2019
(ಮಾಹಿತಿ ಕೃಪೆ Kannada News Now)

ರಾಜ್ಯ ಸರ್ಕಾರದ ವಿವಿಧ ಫಲಾನುಭವಿಗಳಿಗೆ ಮಹತ್ವದ ಮಾಹಿತಿ : ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಿ, ಇನ್ಮುಂದೆ ನಿಮ್ಮ ಖಾತೆಗೆ ನೇರ ಹಣ ಪಡೆಯಿರಿ.!

 


ಬೆಂಗಳೂರು : ರಾಜ್ಯ ಸರ್ಕಾರದಿಂದ ಈಗ ಸರ್ಕಾರದ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ದೊರೆತಿದೆ. ಇದುವರೆಗೆ ಸರ್ಕಾರದಿಂದ ವಿವಿಧ ಫಲಾನುಭವಿಗಳಿಗೆ ನೀಡಲಾಗುತ್ತಿದ್ದಂತ ಹಣವನ್ನು ಮತ್ತಷ್ಟು ಪಾರದರ್ಶಕವಾಗಿ ತಲುಪುವ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ವಿವಿಧ ಫಲಾನುಭವಿಗಳು, ಜಸ್ಟ್ ಈ ಒಂದು ಆಪ್ ಡೌನ್ ಲೋಡ್ ಮಾಡಿಕೊಂಡ್ರೇ ಸಾಕು, ಇನ್ಮುಂದೆ ನಿಮ್ಮ ಖಾತೆಗೆ ಸರ್ಕಾರದ ಹಣ ಜಮೆ ಆಗಲಿದೆ. ಹಾಗಾದ್ರೇ.. ಅದೇಗೆ..? ಅದೇನು ಅನ್ನುವ ಸಂಪೂರ್ಣ ಮಾಹಿತಿ, ಮುಂದೆ ಓದಿ..
ಹೌದು.. ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ನೇರವಾಗಿ ವರ್ಗಾವಣೆ ಮಾಡಲು, ಇಂದು ನೇರ ನಗದು ವರ್ಗಾವಣೆ (DBT) ಮೊಬೈಲ್ ಆಪ್ ಅನ್ನು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಈ ಆಪ್ ಅನ್ನು ರಾಜ್ಯದ ವಿವಿಧ ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು, ಫಲಾನುಭವದ ಮಾಹಿತಿ ದಾಖಲಿಸಿದ್ರೇ.. ನೇರವಾಗಿಯೇ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಈ ಆಪ್ ಬಿಡುಗಡೆಗೊಳಿಸಿದ ನಂತ್ರ ಮಾತನಾಡಿದಂತ ಸಿಎಂ ಯಡಿಯೂರಪ್ಪ ಅವರು, ಸರ್ಕಾರದ 120 ಯೋಜನೆಗಳನ್ನು ಡಿಬಿಟಿ ಆಪ್ ನೊಂದಿಗೆ ಜೋಡಣೆ ಮಾಡಲಾಗಿದ್ದು, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿರುವಂತ ಫಲಾನುಭವಿಗಳಿಗೆ, ಈ ಪದ್ದತಿಯ ಮೂಲಕ ನೇರವಾಗಿಯೇ ಅವರ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದರು.
ಅಂದಹಾಗೇ, ಕಳೆದ 2 ವರ್ಷಗಳಲ್ಲಿ 12 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಇದೀಗ ಇಂದು ಬಿಡುಗಡೆಗೊಳಿಸಲಾಗಿರುವಂತ ಡಿಬಿಟಿ ಆಪ್ ವ್ಯವಸ್ಥೆ ಮೂಲಕ, ವಿವಿಧ ಯೋಜನೆಗಳಲ್ಲಿ ಹಣದ ಸೋರಿಕೆ ತಡೆಗಟ್ಟಲು ಹೆಚ್ಚು ಅನುಕೂಲ ಆಗಲಿದೆ ಎಂದರು.

DBT ಆಪ್ ಬಗ್ಗೆ ಮಾಹಿತಿ
ಈ ಡಿಬಿಟಿ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು, ಆಧಾರ್ ಇ-ಕೆವೈಸಿ ಮೂಲಕ ನೊಂದಣಿ ಮಾಡಿಕೊಳ್ಳಬೇಕಾಗಿದೆ.
ಈ ಆಪ್ NPCI ( National Payment Corporation of India) ಸಂಪರ್ಕಿಸಿ ಆಧಾರ್ ಬ್ಯಾಂಕ್ ಸೀಡಿಂಗ್ ನ ಪ್ರಸ್ತುತ ಸ್ಥಿತಿಯನ್ನು ನೀಡುತ್ತದೆ.
ಡಿಬಿಟಿ ಮೊಬೈಲ್ ಆಪ್ ನಲ್ಲಿ, ಯೋಜನೆವಾರು ವಿವಿಧ ಕಂತುಗಳಲ್ಲಿ ವರ್ಗಾಹಿಸಿದ ಪಾವತಿ ಮೊತ್ತ, ಪಾವತಿ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಯುಟಿಆರ್ ಸಂಖ್ಯೆ ಮಾಹಿತಿ ಕೂಡ ಲಭ್ಯವಿದೆ.
ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಎಲ್ಲಾ ಯೋಜನೆಗಳನ್ನು ಡಿಬಿಟಿ ವೇದಿಕೆಯಡಿ ತರಗಾಗಿದ್ದು, ಈ ವೇದಿಕೆಯಲ್ಲಿ ಫಲಾನುಭವಿಯನ್ನು ಆಧಾರ್ ಸಂಖ್ಯೆ ಮೂಲಕ ಗುರುತಿಸಿ, ಫಲಾನುಭವಿಯ ಆಧಾರ್ ಅನ್ನು ಆರ್ಥಿಕ ವಿಳಾಸವಾಗಿ ( Financial Address ) ಪರಿಗಣಿಸಿ, ನಗದು ವರ್ಗಾವಣೆಯನ್ನು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ.
(ಮಾಹಿತಿ ಕೃಪೆ Kannada News Now)

ಸಿಎ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

 

ಭಾರತೀಯ ಚಾರ್ಟರ್ಡ್​ ಅಕೌಂಟೆನ್ಸಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಪೋಷಕರಿಂದ ಅನುಮತಿ ಪಡೆದ ಬಳಿಕ ಪರೀಕ್ಷೆಗೆ ಹಾಜರಾಗಿ ಎಂದು ಮನವಿ ಮಾಡಿದೆ.
ಜುಲೈ ತಿಂಗಳಲ್ಲಿ ಪರೀಕ್ಷೆಯ ಪ್ರವೇಶ ಪತ್ರವನ್ನ ಡೌನ್​​ಲೋಡ್​ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರವನ್ನ ಐಸಿಎಐಗೆ ಸಲ್ಲಿಸತಕ್ಕದ್ದು. ಪರೀಕ್ಷೆಯನ್ನ ಮುಂದೂಡುವ ಬಗ್ಗೆ ವಿದ್ಯಾರ್ಥಿಗಳು ಒತ್ತಾಯಿಸಿದ ಬಳಿಕ ಐಸಿಎಐ ಈ ನಿರ್ಧಾರವನ್ನ ಪ್ರಕಟಿಸಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ಪ್ರವೇಶ ಪತ್ರಗಳು ಸಿಗಲಿವೆ. ಆದರೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸರ್ಕಾರ ಹಾಗೂ ಐಸಿಎಐ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನ ಪಾಲನೆ ಮಾಡೋದು ಕಡ್ಡಾಯವಾಗಿ ಇರಲಿದೆ. ಅಲ್ಲದೇ ಪೋಷಕರಿಂದ ಸಂಪೂರ್ಣ ಒಪ್ಪಿಗೆ ಪಡೆದು ಪರೀಕ್ಷೆಗೆ ಹಾಜರಾಗುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಸಾಕ್ಷ್ಯ ಪತ್ರವನ್ನ ನೀಡಲೇಬೇಕು ಎಂದು ಐಸಿಎಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಜ್ವರದ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ಇರೋದಿಲ್ಲ. ಸಾಮಾನ್ಯ ಉಷ್ಣಾಂಶಕ್ಕಿಂತ ಹೆಚ್ಚಿನ ದೇಹ ತಾಪಮಾನ ಹೊಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ನಿರ್ಬಂಧ ಹೇರಿದ್ದೇವೆ ಎಂದು ಐಸಿಎಐ ನೋಟಿಸ್​ನಲ್ಲಿ ತಿಳಿಸಿದೆ.
ಐಸಿಎಐ ಜುಲೈನಲ್ಲಿ ನಡೆಯಲಿರುವ ಸಿಎ ಪರೀಕ್ಷೆಗೆ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ಅಭ್ಯರ್ಥಿಗಳು ಪರೀಕ್ಷೆಗಾಗಿ ಹೆಚ್ಚು ದೂರ ಪ್ರಯಾಣಿಸೋದು ಬೇಡ ಎಂಬ ಕಾರಣಕ್ಕೆ ಐಸಿಎಐ 192 ಜಿಲ್ಲೆಗಳಲ್ಲಿ ಪರೀಕ್ಷೆಯನ್ನ ಆಯೋಸಿದೆ .
(ಮಾಹಿತಿ ಕೃಪೆ ಕನ್ನಡದುನಿಯಾ)

ಸಿಂಡಿಕೇಟ್‌ ಐಎಫ್‌ಎಸ್‌ಸಿ ಕೋಡ್‌ ಬದಲು

 


ಬೆಂಗಳೂರು: ಹಿಂದಿನ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಗಳ ಐಎಫ್‌ಎಸ್‌ಸಿ ಕೋಡ್‌ ಜುಲೈ 1ರಿಂದ ಬದಲಾಗಲಿದೆ. ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಜೊತೆ ಈಗಾಗಲೇ ವಿಲೀನ ಆಗಿದ್ದು, ಎನ್‌ಇಎಫ್‌ಟಿ, ಆರ್‌ಟಿಜಿಎಸ್‌, ಐಎಂಪಿಎಸ್ ವ್ಯವಸ್ಥೆಗಳ ಮೂಲಕ ಹಣ ವರ್ಗಾವಣೆ ಮಾಡುವವರು ಕೆನರಾ ಬ್ಯಾಂಕ್‌ ನೀಡುವ ಹೊಸ ಐಎಫ್‌ಎಸ್‌ಸಿ ಕೋಡ್ ಬಳಕೆ ಮಾಡಬೇಕಿದೆ.

ಹಿಂದೆ ಸಿಂಡಿಕೇಟ್ ಬ್ಯಾಂಕ್‌ ಶಾಖೆಗಳಾಗಿದ್ದ, ಈಗ ಕೆನರಾ ಬ್ಯಾಂಕ್‌ನ ಶಾಖೆಗಳಾಗಿ ಪರಿವರ್ತನೆ ಕಂಡಿರುವ ಶಾಖೆಗಳ ಐಎಫ್‌ಎಸ್‌ಸಿ ಕೋಡ್ ಯಾವುದು ಎಂಬುದನ್ನು canarabank.com/IFSC.html ವಿಳಾಸಕ್ಕೆ ಭೇಟಿ ನೀಡಿ ಕಂಡುಕೊಳ್ಳಬಹುದು ಎಂದು ಕೆನರಾ ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಅಲ್ಲದೆ, ಕೆನರಾ ಬ್ಯಾಂಕ್‌ನ ಯಾವುದೇ ಶಾಖೆಗೆ ಭೇಟಿ ನೀಡಿ ಹೊಸ ಐಎಫ್‌ಎಸ್‌ಸಿ ಕೋಡ್‌ ತಿಳಿದುಕೊಳ್ಳಬಹುದು.
ಸಿಂಡಿಕೇಟ್ ಬ್ಯಾಂಕ್‌ನ ಗ್ರಾಹಕರಾಗಿದ್ದವರು ಬದಲಾಗಿರುವ ಐಎಫ್‌ಎಸ್‌ಸಿ ಹಾಗೂ ಎಂಐಸಿಆರ್‌ ಕೋಡ್ ಇರುವ ಹೊಸ ಚೆಕ್ ಪುಸ್ತಕವನ್ನು ಪಡೆದುಕೊಳ್ಳಬೇಕು.

ವಿದೇಶಿ ವಿನಿಮಯ ವಹಿವಾಟುಗಳಲ್ಲಿ ಬಳಕೆ ಮಾಡುವ ಸ್ವಿಫ್ಟ್‌ ಕೋಡ್‌ ಸಹ ಜುಲೈ 1ರಿಂದ ಬದಲಾಗಲಿದೆ. ವಿದೇಶಿ ವಿನಿಮಯ ವಹಿವಾಟುಗಳಲ್ಲಿ ಗ್ರಾಹಕರು CNRBINBBFD ಕೋಡ್‌ಅನ್ನು ಬಳಕೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಸಿಂಡಿಕೇಟ್ ಬ್ಯಾಂಕ್‌, ಕೆನರಾ ಬ್ಯಾಂಕ್ ಜೊತೆ 2020ರ ಏಪ್ರಿಲ್‌ನಲ್ಲಿ ವಿಲೀನಗೊಂಡಿದೆ. ವಿಲೀನದ ನಂತರ ಕೆನರಾ ಬ್ಯಾಂಕ್ ದೇಶದಲ್ಲಿ, ಸರ್ಕಾರಿ ಸ್ವಾಮ್ಯದ ನಾಲ್ಕನೆಯ ಅತಿದೊಡ್ಡ ಬ್ಯಾಂಕ್ ಆಗಿದೆ.
(ಮಾಹಿತಿ ಕೃಪೆ ಪ್ರಜಾವಾಣಿ)

ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

 

ನವದೆಹಲಿ: ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ದೇಶದ ವಿವಿಧೆಡೆ ಪೆಟ್ರೋಲ್ ಬಂಕ್ ಗಳ ಬಳಿ ಪ್ರತಿಭಟನೆ ನಡೆಸಿದರು.
ಪಕ್ಷದ ಮುಖಂಡರಾದ ಕೆ ಸಿ ವೇಣುಗೋಪಾಲ್ ಮತ್ತು ಶಕ್ತಿ ಸಿಂಗ್ ಗೋಹಿಲ್ ಕುದುರೆ ಗಾಡಿಯಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಪೆಟ್ರೋಲ್ ಬಂಕ್ ತಲುಪಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ರೂ.9.20 ಪೈಸೆ ಇದದ್ದು, ಇದೀಗ ರೂ.32 ತಲುಪಿದೆ ಎಂದು ವೇಣುಗೋಪಾಲ್ ಹೇಳಿದರು.
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಶುಂಕ ಹಾಕುವುದನ್ನು ಸರ್ಕಾರ ನಿಲ್ಲಿಸಬೇಕು, ಇದು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಬರಬೇಕು. ಇಂಧನ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಬೇಕೆಂದು ವೇಣುಗೋಪಾಲ್ ಹೇಳಿದರು. ಅಜಯ್ ಮಾಕೆನ್ ನೇತೃತ್ವದಲ್ಲಿ ರಾಜಿಂದರ್ ನಗರ ಮತ್ತು ಜನ ಪಥ್ ನಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಯಿತು.
ಈ ಮಧ್ಯೆ ಬಿಜೆಪಿ ಲೂಟಿಂಗ್ ಇಂಡಿಯಾ ಹ್ಯಾಷ್ ಟಾಗ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಜಿಡಿಪಿ ಕುಸಿತ, ನಿರುದ್ಯೋಗ ಹೆಚ್ಚಳ, ಗಗನಕ್ಕೇರುತ್ತಿರುವ ತೈಲ ಬೆಲೆ, ಬಿಜೆಪಿ ದೇಶದಲ್ಲಿ ಲೂಟಿ ಮಾಡಲು ಇನ್ನೂ ಎಷ್ಟು ಮಾರ್ಗಗಳಿವೆ ಎಂದು ಕೇಳಿದ್ದಾರೆ. ಶುಕ್ರವಾರ ಪೆಟ್ರೋಲ್ ಬೆಲೆ ಮತ್ತೆ 31 ಪೈಸೆ, ಡೀಸೆಲ್ ಬೆಲೆ 28 ಪೈಸೆಗೆ ಹೆಚ್ಚಳವಾಗಿದೆ.
ಅಬಕಾರಿ ಸುಂಕವನ್ನು ಕಡಿತ ಮಾಡುವ ತೈಲ ಬೆಲೆಯಲ್ಲಿ ಕನಿಷ್ಠ 25 ರೂಪಾಯಿಯಾದರೂ ಕಡಿಮೆ ಮಾಡಿ ಎಂದು ಭೂಪಾಲ್ ನಲ್ಲಿ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದರು. ಈ ಮಧ್ಯೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆಎಸ್ ಅಳಗಿರಿ ನೇತೃತ್ವದಲ್ಲಿ ಚೆನ್ನೈನಲ್ಲಿ ಪ್ರತಿಭಟನೆ ನಡೆಯಿತು. ಪಂಜಾಬ್, ರಾಜಸ್ಥಾನ, ಕೇರಳ, ಛತ್ತೀಸ್ ಗಢ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ತೈಲ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
(ಮಾಹಿತಿ ಕೃಪೆ ಕನ್ನಡ ಪ್ರಭ)

'ಚೆಲುವಿನ ಚಿತ್ತಾರ', 'ಉಗ್ರಂ' ಸಿನಿಮಾಗಳ ಖ್ಯಾತಿಯ ಹಿರಿಯ ಪತ್ರಕರ್ತ ಸುರೇಶ್ಚಂದ್ರ ಇನ್ನಿಲ್ಲ

 ಹಿರಿಯ ಪತ್ರಕರ್ತ, ನಟ ಎಲ್.ಎಚ್. ಸುರೇಶ್ಚಂದ್ರ ಅವರು ಶುಕ್ರವಾರ (ಜೂ.11) ಮಧ್ಯಾಹ್ನ ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಕೊನೆಯುಸಿರು ಎಳೆದಿದ್ದಾರೆ. ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದ ಅವರು, ಕೆಲ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿ, ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ಮಾಧ್ಯಮ, ಸಿನಿಮಾರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

ಹಲವು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿರುವ ಸುರೇಶ್ಚಂದ್ರ ಅವರು, ನಾಟಕ, ಸಾಹಿತ್ಯ, ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. 2007ರಲ್ಲಿ ತೆರೆಕಂಡ 'ಚೆಲುವಿನ ಚಿತ್ತಾರ' ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ್ದರು. ನಂತರ 'ಉಗ್ರಂ', 'ಕಿಚ್ಚ ಹುಚ್ಚ', 'ರಣ', 'ಶೈಲೂ', 'ಜಂಗ್ಲೀ' ಮುಂತಾದ ಸಿನಿಮಾಗಳಲ್ಲಿ ಮಹತ್ವದ ಪಾತ್ರಗಳನ್ನು ನಿಭಾಯಿಸಿದ್ದರು. 2019ರಲ್ಲಿ ಅವರು ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದರು.

ದಂತಚೋರ ವೀರಪ್ಪನ್ ಕುರಿತು ಅವರು ಬರೆಯುತ್ತಿದ್ದ ಲೇಖನಗಳು ಬಹಳ ಖ್ಯಾತಿ ಪಡೆದುಕೊಂಡಿದ್ದವು. ಸುರೇಶ್ಚಂದ್ರ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಮಧುಗಿರಿ ತಾಲ್ಲೂಕಿನ ಲಿಂಗೇನಹಳ್ಳಿಯಲ್ಲಿ ನೆರವೇರಿಸಲಾಗುತ್ತದೆ.

(ಮಾಹಿತಿ ಕೃಪೆ vijaykarnataka)

Thursday, June 10, 2021

ನಾಯಕತ್ವ ಬದಲಾವಣೆ ಗೊಂದಲಗಳಿಗೆ ತೆರೆ ಎಳೆದ ಅರುಣ್ ಸಿಂಗ್

 

ನವದೆಹಲಿ : ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಾವಣೆ ಮಾಡುವ ಪ್ರಸ್ತಾವನೆ ವರಿಷ್ಠರ ಮುಂದೆ ಇಲ್ಲ ಎನ್ನುವ ಮೂಲಕ ಉಂಟಾಗಿರುವ ಗೊಂದಲಗಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ತೆರೆಎಳೆದಿದ್ದಾರೆ.

ಇದೇ ವೇಳೆ ನಾಯಕತ್ವದ ಬಗ್ಗೆ ಯಾರೊಬ್ಬರೂ ಹಾದಿ- ಬೀದಿಯಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು ಎಂಬ ಎಚ್ಚರಿಕೆಯ ಸಂದೇಶವನ್ನೂ ಸಹಾ ರವಾನಿಸಿದ್ದಾರೆ.ಇದರಿಂದಾಗಿ ಯಡಿಯೂರಪ್ಪನವರ ಕುರ್ಚಿ ಇನ್ನಷ್ಟು ಗಟ್ಟಿಯಾಗಿದ್ದು, ಸದ್ಯದಲ್ಲೇ ನಾಯಕತ್ವ ಬದಲಾಗಲಿದೆ ಎಂದು ಮನಸ್ಸಿನಲ್ಲೇ ಮಂಡಕ್ಕಿ ಮಿಯುತ್ತಿದ್ದವರಿಗೆ ಮತ್ತೊಮ್ಮೆ ಭಾರೀ ನಿರಾಶೆಯಾಗಿದೆ.
ನನಗೆ ಹೈಕಮಾಂಡ್ ನಾಯಕರು ಸೂಚಿಸಿದ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಯಡಿಯೂರಪ್ಪ ಹೇಳಿದ್ದು ಆಡಳಿತಾರೂಢ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು.ಕೆಲವೇ ದಿನಗಳಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾಗಲಿದ್ದು, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬೇರೊಬ್ಬರು ಆಯ್ಕೆಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.ನವದೆಹಲಿಯಲ್ಲಿ ಈ ಎಲ್ಲಾ ಅಂತೆಕಂತೆಗಳಿಗೆ ತೆರೆಎಳೆದ ಅರುಣ್ ಸಿಂಗ್ ಅವರು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೇವಲ ಉಹಾಪೋಹ ಎಂದು ಸ್ಪಷ್ಟಪಡಿಸಿದರು.ಕೇವಲ ಯಡಿಯೂರಪ್ಪ ಮಾತ್ರವಲ್ಲದೆ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರನ್ನು ಸಹಾ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದರು.
ನಮ್ಮ ಪಕ್ಷದ ವರಿಷ್ಟರು ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಿದ್ದಾರೆ ಎಂಬುದು ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತುಕತೆಯೇ ನಡೆದಿಲ್ಲ ಎಂದು ಗೊಂದಲಗಳಿಗೆ ತೆರೆಎಳೆದರು.
ಕೋವಿಡ್ ನಂತಹ ಕಷ್ಟ ಕಾಲದಲ್ಲೂ ಸಿ.ಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುನ್ನಡೆಸುತ್ತಿರುವಾಗ ನಾಯಕತ್ವ ಬದಲಾವಣೆ ಏಕೆ ಮಾಡಬೇಕೆಂದು ಅರುಣ್ ಸಿಂಗ್ ಪ್ರಶ್ನೆ ಮಾಡಿದರು.
# ಬಾಯಿಗೆ ಬೀಗ ಹಾಕಿ
ಇದೇ ಸಂದರ್ಭದಲ್ಲಿ ಅರುಣ್ ಸಿಂಗ್ ಅವರು ನಾಯಕತ್ವದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವವರಿಗೂ ಬಿಸಿ ಮುಟ್ಟಿಸಿದ್ದಾರೆ.ನಾಯಕತ್ವದ ಕುರಿತಾಗಿ ಯಾರೊಬ್ಬರೂ ಮಾತನಾಡಬೇಕಾದ ಅಗತ್ಯವಿಲ್ಲ. ಏನೇ ಗೊಂದಲಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು ಎಂದು ಸೂಚಿಸಿದರು.
ಒಂದಿಬ್ಬರು ಮಾತನಾಡುತ್ತಿದ್ದಾರೆ.ಅವರಿಗೆ ಈ ರೀತಿ ಮಾತನಾಡಲು ಯಾರು ಅಧಿಕಾರ ಕೊಟ್ಟಿದ್ದಾರೋ ಗೊತ್ತಿಲ್ಲ. ಬಹಿರಂಗವಾದ ಮಾತನಾಡದಂತೆ ಸೂಚನೆ ನೀಡಲಾಗುವುದು ಎಂದರು.ನಿಮ್ಮ ಅಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಿ. ಬೀದಿಯಲ್ಲಿ ಮಾತನಾಡುವುದರಿಂದ ಯಾವ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೀಶ್ವರ್ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಸಿಮುಟ್ಟಿಸಿದರು.
ಇನ್ನು ಮುಂದೆ ಯಾರೊಬ್ಬರೂ ಕೂಡ ಬಹಿರಂಗವಾಗಿ ಪಕ್ಷದ ಆಂತರಿಕ ವಿಚಾರಗಳನ್ನು ಮಾತನಾಡಬಾರದು. ಈ ಬಗ್ಗೆ ರಾಜ್ಯದ ಅಧ್ಯಕ್ಷರಿಂದ ಸೂಚನೆ ಕೊಡಲಾಗುವುದು ಎಂದು ತಿಳಿಸಿದರು. ಜೂನ್ 17 ಅಥವಾ18ರಿಂದ 3 ರಾಜ್ಯ ಪ್ರವಾಸ ಮಾಡುತ್ತೇನೆ.
ಎಲ್ಲ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗುವುದು.ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದರೆ ಚರ್ಚೆಸಿ ಇತ್ಯಾರ್ಥ ಮಾಡಿಕೊಳ್ಳಲಾಗುವುದು ಎಂದು ಅರುಣ್ ಸಿಂಗ್ ಹೇಳಿದರು. ಕಳೆದ ಭಾನುವಾರ ಯಡಿಯೂರಪ್ಪ ಅವರು ನೀಡಿದ್ದ ಆ ಒಂದು ಹೇಳಿಕೆ ಬಿಜೆಪಿಯಲ್ಲಿ ಭಾರೀ ಆವಾಂತರ ಸೃಷ್ಟಿಸಿತ್ತು.
ಎಲ್ಲಿಯವರೆಗೆ ಪಕ್ಷದ ವರಿಷ್ಟರು ಅಧಿಕಾರದಲ್ಲಿ ಮುಂದುವರೆಯಿರಿ ಎಂದು ಹೇಳುತ್ತಾರೋ ಅಲ್ಲಿಯವರೆಗೆ ಇರುತ್ತೇನೆ. ಒಂದು ವೇಳೆ ರಾಜೀನಾಮೆ ನೀಡುವಂತೆ ಸೂಚಿಸಿದರೆ ಪದತ್ಯಾಗ ಮಾಡಲು ಸಿದ್ದ ಎಂದು ಹೇಳಿದ್ದು, ಕಮಲ ಪಾಳಯದಲ್ಲಿ ಮಿಂಚಿನ ಸಂಚಲನವನ್ನು ಸೃಷ್ಟಿಸಿತ್ತು.

ಸಚಿವ ಯೋಗೀಶ್ವರ್ ,ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ , ಅರವಿಂದ್ ಬೆಲ್ಲದ್ ಸೇರಿದಂತೆ ಕೆಲವು ಶಾಸಕರು ದೆಹಲಿಗೆ ತೆರಳಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವಂತೆ ತೆರೆಮರೆಯಲ್ಲಿ ಲಾಭಿ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಬಣದ ಶಾಸಕರು ತಮ್ಮ ನಾಯಕನ ಬೆಂಬಲಕ್ಕೀರುವ ಶಾಸಕರ ಸಹಿ ಸಂಗ್ರಹಣೆಗೆ ಮುಂದಾಗಿದ್ದರು. ಕೊನೆಗೆ ವರಿಷ್ಟರು ಮಧ್ಯಪ್ರವೇಶ ಮಾಡಿ ಶಾಸಕರ ಸಹಿ ಸಂಗ್ರಹಣೆ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದರು. ಇದೀಗ ಅರುಣ್ ಸಿಂಗ್ ಎಲ್ಲಾ ವದಂತಿಗಳಿಗೂ ಪೂರ್ಣವಿರಾಮ ಹಾಕಿದ್ದಾರೆ.
(ಮಾಹಿತಿ ಕೃಪೆ ಈ ಸಂಜೆ)

Surya Grahan 2021: ಇಂದು ಕಂಕಣ ಸೂರ್ಯಗ್ರಹಣ; ಎಷ್ಟು ಗಂಟೆಗೆ ಗ್ರಹಣ, ಎಲ್ಲೆಲ್ಲಿ ಸಂಭವಿಸುತ್ತೆ? ಡೀಟೇಲ್ಸ್ ಇಲ್ಲಿದೆ

 

ಬೆಂಗಳೂರು: ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಇಡೀ ಭೂಮಂಡಲವನ್ನೇ ಬೆಳಗುವ ಸೂರ್ಯನಿಗೆ ಮಂಕು ಆವರಿಸಲಿದೆ. ಇಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಕೌತುಕ ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾದು ಕೂತಿದೆ. ಕಂಕಣ ಸೂರ್ಯ ಗ್ರಹಣ ಅಂದ್ರೆ ಸೂರ್ಯನ ಕೇಂದ್ರ ಭಾಗವು ಮುಚ್ಚಿಕೊಂಡು, ಸೂರ್ಯ ಬಳೆ ತೊಟ್ಟಂತೆ ಕಾಣುವುದೇ ವಿಶೇಷ. ಕಂಕಣ ಸೂರ್ಯಗ್ರಹಣ ಅಥವಾ ರಾಹುಗ್ರಸ್ಥ ಸೂರ್ಯಗ್ರಹಣ ಇಂದು ಎಷ್ಟೊತ್ತಿಗೆ ಗೋಚರಿಸುತ್ತೆ ಎಂಬುದನ್ನು ಇಲ್ಲಿ ತಿಳಿಯಿರಿ.

ಸೂರ್ಯ ಗ್ರಹಣ ಸಮಯ!
ಗ್ರಹಣ ಸ್ಪರ್ಶಕಾಲ ಮಧ್ಯಾಹ್ನ 1 ಗಂಟೆ 31 ನಿಮಿಷ
ಗ್ರಹಣ ಮಧ್ಯಕಾಲ ಮಧ್ಯಾಹ್ನ 4.23 ನಿಮಿಷ
ಗ್ರಹಣ ಮೋಕ್ಷಕಾಲ ಸಂಜೆ 6.40 ನಿಮಿಷ
ಇಂದು ಮಧ್ಯಾಹ್ನ 1 ಗಂಟೆ 31 ನಿಮಿಷಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, ಗ್ರಹಣ ಮಧ್ಯಕಾಲ 4.23ಕ್ಕೆ ಇರಲಿದೆ. ಈ ಸಂದರ್ಭದಲ್ಲಿ ಸೂರ್ಯ ಕಂಕಣ ತೊಟ್ಟಂತೆ ಕಾಣುತ್ತಾನೆ.

ಸಂಜೆ 6.40ಕ್ಕೆ ಗ್ರಹಣ ಮುಗಿಯಲಿದೆ.

ಎಲ್ಲೆಲ್ಲಿ ಗೋಚರಿಸುತ್ತೆ ಗ್ರಹಣ!
ಅಂದಾಹಾಗೆ, ಇಂದು ಭಾರತದಲ್ಲಿ ಸೂರ್ಯಗ್ರಹಣ ಕಾಣೋದಿಲ್ಲ. ಕೇವಲ ರಷ್ಯಾ, ಗ್ರೀನ್‌ ಲ್ಯಾಂಡ್, ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಇನ್ನಿತರೇ ಪಾಶ್ಚಾತ್ಯ ದೇಶಗಳಲ್ಲಿ ಗೋಚರಿಸಲಿದೆ. ಕೆಲವು ವಿಜ್ಞಾನಿಗಳು ಹೇಳೋ ಪ್ರಕಾರ ಭಾರತದ ಕೆಲ ಭಾಗಗಳಲ್ಲೂ ಕಾಣಿಸುತ್ತಂತೆ ಎನ್ನಲಾಗಿದೆ.

ಇನ್ನೂ ಪ್ರತಿ ಸಲ ಗ್ರಹಣ ಬಂದಾಗಲು ನಂಬಿಕೆ ಅಪನಂಬಿಕೆ ಬಗ್ಗೆ ಚರ್ಚೆ ಶುರುವಾಗುತ್ವೆ. ವಿಜ್ಞಾನಿಗಳ ಪ್ರಕಾರ ಸೂರ್ಯಗ್ರಹಣ ಎನ್ನುವಂತದ್ದು ಸೌರಮಂಡಲದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ ಹಾಗೂ ಒಂದು ಕೌತುಕ. ಆದ್ರೆ, ಜ್ಯೋತಿಷಿಗಳು ಹೇಳೋ ಪ್ರಕಾರ ಈ ಗ್ರಹಣ ತುಂಬಾ ಅಪಾಯಕಾರಿಯಂತೆ. ಗ್ರಹಣದ ಪ್ರಭಾವದಿಂದ ಪಂಚಭೂತಗಳಲ್ಲಿ ವ್ಯತ್ಯಾಸ ಉಂಟಾಗಿ, ಪ್ರಕೃತಿ ವಿಕೋಪಗಳು ಹೆಚ್ಚಾಗಬಹುದು ಅಂತಾ ವಿಶ್ಲೇಷಿಸ್ತಿದ್ದಾರೆ. ರಾಷ್ಟ್ರ ರಾಜ್ಯ ರಾಜ್ಯಕೀಯದ ಮೇಲು ಪ್ರಭಾವ ಬೀರುತ್ತೆ ಅಂತಾ ಜ್ಯೋತಿಷಿಗಳ ಲೆಕ್ಕಾಚಾರ ಹೇಳ್ತದೆ 

ಮಾಹಿತಿ ಕೃಪೆ tv9kannada

Wednesday, June 9, 2021

ಸೂರ್ಯ ಗ್ರಹಣ ಅನ್ನೋದು ನಿಸರ್ಗ ಸಹಜ ನೆರಳು - ಬೆಳಕಿನ ಆಟ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯ ಮರೆಯಾಗುತ್ತಾನೆ. ಅದನ್ನು ಸೂರ್ಯ ಗ್ರಹಣ ಎನ್ನುತ್ತಾರೆ. ಈ ವೇಳೆ ಏನು ಮಾಡಬೇಕು, ಏನು ಮಾಡಬಾರದು ಅನ್ನೋದ್ರ ವಿವರ ಇಲ್ಲಿದೆ.

 


ಗುರುವಾರ ವರ್ಷದ ಮೊದಲ ಸೂರ್ಯ ಗ್ರಹಣ: ನೆರಳು-ಬೆಳಕಿನ ಆಟದ ವೇಳೆ ಏನು ಮಾಡಬೇಕು..? ಏನು ಮಾಡಬಾರದು..?
2021ರ ವರ್ಷದ ಪ್ರಪ್ರಥಮ ಸೂರ್ಯ ಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಜೂನ್ 10 ಗುರುವಾರದಂದು ಸೂರ್ಯ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಕಾಣುವುದಿಲ್ಲವಾದ್ರೂ ವಿಶ್ವದ ಹಲವು ದೇಶಗಳಲ್ಲಿ ಗ್ರಹಣದ ದರ್ಶನವಾಗಲಿದೆ.
ಸಂಪೂರ್ಣ ಸೂರ್ಯ ಗ್ರಹಣದ ಕಾಲಾವಧಿ 3 ನಿಮಿಷ, 51 ಸೆಕೆಂಡ್. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಮಧ್ಯಾಹ್ನ 1.42ಕ್ಕೆ ಗ್ರಹಣದ ಆರಂಭ ಕಾಲ ಹಾಗೂ ಸಂಜೆ 6.41ಕ್ಕೆ ಗ್ರಹಣ ಮೋಕ್ಷ ಕಾಲ ಇರಲಿದೆ.
ಕೆನಡಾ, ರಷ್ಯಾ, ಗ್ರೀನ್ ಲ್ಯಾಂಡ್‌, ಸೈಬೀರಿಯಾ, ಉತ್ತರ ಧೃವ ಪ್ರದೇಶ ಸೇರಿದಂತೆ ಯುರೋಪ್‌ & ಏಷ್ಯಾದ ಕೆಲವು ದೇಶಗಳಲ್ಲಿ ಸೂರ್ಯ ಗ್ರಹಣ ಗೋಚರವಾಗಲಿದೆ.
ಭಾರತದಲ್ಲಿ ಸೂರ್ಯಗ್ರಹಣ ಗೋಚರವಾಗುವುದಿಲ್ಲವಾದ್ರೂ, ಈಶಾನ್ಯ ರಾಜ್ಯಗಳಲ್ಲಿ ಗ್ರಹಣ ಕಾಣಸಿಗಲಿದೆ. ಲಡಾಖ್, ಅರುಣಾಚಲ ಪ್ರದೇಶದಲ್ಲಿ ಗ್ರಹಣದ ದರ್ಶನ ಆಗಲಿದೆ. ಇನ್ನುಳಿದಂತೆ ಬೇರೆ ಕಡೆ ಜನರು ಗ್ರಹಣವನ್ನು ನೋಡಲು ಲೈವ್ ಟಿವಿಯನ್ನೇ ಅವಲಂಬಿಸಬೇಕಿದೆ.
ಗ್ರಹಣ ವೀಕ್ಷಣೆಗೆಂದೇ ಸಿದ್ದಪಡಿಸಲಾದ ಕಪ್ಪು ಕನ್ನಡಕ ಬಳಸಿ ಗ್ರಹಣ ವೀಕ್ಷಿಸಿ
ತೂತು ಬಿದ್ದಿರುವ ಹಾಳಾಗಿರುವ ಕನ್ನಡಕ ಬಳಸಬೇಡಿ
ಸೂರ್ಯನನ್ನು ಯಾವುದೇ ಕಾರಣಕ್ಕೂ ಬರಿಗಣ್ಣಿನಲ್ಲಿ ನೋಡಲೇ ಬೇಡಿ
ಪಿನ್ ಹೋಲ್ ಕ್ಯಾಮರಾ ಮೂಲಕವೂ ಗ್ರಹಣ ವೀಕ್ಷಿಸಬಹುದು, ಇದಕ್ಕಾಗಿ ನೆಟ್‌ನಲ್ಲಿ ಹುಡುಕಾಟ ನಡೆಸಿ ಮಾಹಿತಿ ಸಂಗ್ರಹಿಸಬಹುದು.
ಸೋಲಾರ್ ಫಿಲ್ಟರ್‌ಗಳನ್ನು ಬಳಸುವಾಗ ಜಾಗ್ರತೆ ಇರಲಿ
ಗ್ರಹಣದ ಫೋಟೋ ತೆಗೆಯುವಾಗ ಕ್ಯಾಮರಾಗೆ ವಿಶೇಷ ಫಿಲ್ಟರ್ ಅಳವಡಿಸೋದು ಮರೆಯಬೇಡಿ
ಮಕ್ಕಳು ಗ್ರಹಣ ವೀಕ್ಷಿಸುವಾಗ ಜಾಗ್ರತೆ ವಹಿಸಿ
ಸೂರ್ಯನ ವೀಕ್ಷಣೆ ಸಂಪೂರ್ಣ ಮುಗಿದ ಬಳಿಕವೇ ಕನ್ನಡಕ ತೆಗೆಯಿರಿ
ಮಸೂರ ಇರುವ ಕನ್ನಡಕ ಧರಿಸುವವರು ಅದರ ಮೇಲೆ ಸೌರ ಕನ್ನಡಕ ಧರಿಸಬೇಕು
ಸಾಮಾನ್ಯ ಕೂಲಿಂಗ್ ಗ್ಲಾಸ್‌ಗಳ ಮೂಲಕ ಸೂರ್ಯನನ್ನು ನೋಡಬೇಡಿ, ಕಣ್ಣಿನ ರೆಟಿನಾ ಹಾಳಾಗುತ್ತದೆ.
ಸೂರ್ಯನನ್ನು ನೇರವಾಗಿ ನೋಡಬೇಡಿ
ಟೆಲಿಸ್ಕೋಪ್, ಬೈನಾಕ್ಯುಲರ್‌ಗಳಿಂದ ಸೂರ್ಯ ಗ್ರಹಣ ವೀಕ್ಷಿಸಬೇಡಿ
ಸೋಲಾರ್ ಫಿಲ್ಟರ್‌ಗಳನ್ನು ಬಳಸಿ ಗ್ರಹಣ ನೋಡಬೇಡಿ, ನಿಮ್ಮ ಕಣ್ಣಿನ ರೆಟಿನಾಗೆ ತಡೆಯುವ ಶಕ್ತಿ ಇರೋದಿಲ್ಲ
ಹೋಂ ಮೇಡ್ ಫಿಲ್ಟರ್ ಬಳಸಿ ಗ್ರಹಣ ನೋಡಬೇಡಿ
ಗ್ರಹಣದ ವೇಳೆ ಡ್ರೈವಿಂಗ್ ಮಾಡಬೇಡಿ, ಡ್ರೈವಿಂಗ್ ಮಾಡಲೇಬೇಕೆಂದಿದ್ದರೆ ಹೆಡ್‌ಲೈಟ್ ಆನ್ ಆಗಿರಲಿ.ಜೀವನದಲ್ಲಿ ಯಾವಾಗ ಏನು ಸಂಭವಿಸುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, ಸುರಕ್ಷತೆಯೊಂದಿಗೆ ಮುನ್ನಡೆಯಬೇಕಿದೆ. ಅದರಲ್ಲೂ ಸೂರ್ಯಗ್ರಹಣದಂಥಾ ನೈಸರ್ಗಿಕ ಅದ್ಭುತ, ಸುಂದರ ದೃಶ್ಯಗಳನ್ನು ನೋಡುವಾಗ ನಿಮ್ಮ ಕಣ್ಣಿನ ಆರೋಗ್ಯದ ಮೇಲೆ ಗಮನವಿರಲಿ.
(ಮಾಹಿತಿ ಕೃಪೆ vijaykarnataka)

ಏಕಾಂಗಿ ನಾನು ಏಕಾಂಗಿ.... ಏಕಾಂಗಿ ನಾನು ಏಕಾಂಗಿ....

 


👉 

 *(मोरारे घर आजारे

आजारे घर आजा)

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

ಏಕಾಂಗಿ ನಾನು ಏಕಾಂಗಿ....

ಏಕಾಂಗಿ ನಾನು ಏಕಾಂಗಿ....

ಎಲ್ಲೋ ಆಚೆಗೆ ಮರೆಯಾಗಿ...

ಎನೋ ಕಾದಿದೆ ನನಗಾಗಿ....

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

          ****MUSIC****

(ಗೋವಿಂದ ಗೋವಿಂದ ಹರೇ

ಗೋಪಾಲ ಗೋಪಾಲ ಹರೇ

ಗೋವಿಂದ ಗೋವಿಂದ ಹರೇ ಗೋಪಾಲ)

ಎಷ್ಟೊಂದು ಪಾತ್ರ ನೀಡುವಾ....

ಬದುಕೊಂದು ಧಾರವಾಹಿಯೆ....

ಈ ನಾಲ್ಕು ಗೋಡೆ ಆಚೆಗೆ....

ನಿಜವಾದ ಪಾಠಶಾಲೆಯೆ..

ಎಲೆಯ ಹಿಂದೆಯೆ ಮರೆಯಾಗಿ....

ಹೂವು ಕಾದಿದೆ ನನಗಾಗಿ....

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

(मोरारे घर आजा

आजारे घर आजा)

ಅಂಗೈಯ ಮೇಲೆ ಕೂತಿರೋ......

ಬಣ್ಣದ ಚಿಟ್ಟೆ ಈ ಕ್ಷಣಾ...

ತಲ್ಲೀನನಾಗಿ ಬಾಳಲು.....

ಇನ್ನೇನು ಬೇಕು ಕಾರಣ

ಮೋಡದಲ್ಲಿಯೆ ಮರೆಯಾಗಿ....

ಕಿರಣಾ ಕಾದಿದೆ ನನಗಾಗಿ....

ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ

ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ

ಏಕಾಂಗಿ ನಾನು ಏಕಾಂಗಿ...

ಏಕಾಂಗಿ ನಾನು ಏಕಾಂಗಿ....

ಎಲ್ಲೋ ಆಚೆಗೆ ಮರೆಯಾಗಿ.....

ಎನೋ ಕಾದಿದೆ ನನಗಾಗಿ.....


ಲಾಕ್‌ಡೌನ್; ವಶಕ್ಕೆ ಪಡೆದ ವಾಹನ ಬಿಡುಗಡೆಗೆ ಬಂತು ಹೊಸ ನಿಯಮ

 


ಬೆಂಗಳೂರು, ಜೂನ್ 09; ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿ ಅನಗತ್ಯವಾಗಿ ರಸ್ತೆಗೆ ಇಳಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಅವುಗಳನ್ನು ಬಿಡುಗಡೆ ಮಾಡಲು ಹೊಸ ನಿಯಮ ಬಂದಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ವಶಕ್ಕೆ ಪಡೆದ ವಾಹನಗಳನ್ನು ಠಾಣೆ ಹಂತದಲ್ಲಿಯೇ ದಂಡವನ್ನು ಕಟ್ಟಿಸಿಕೊಂಡು ಬಿಡುಗಡೆ ಮಾಡಿ. ಅವುಗಳನ್ನು ನ್ಯಾಯಲಯದ ತನಕ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಸೂಚನೆ ನೀಡಿದೆ.
ರಾಜ್ಯಾದ್ಯಂತ ಬೈಕ್, ಕಾರು, ಆಟೋ ಸೇರಿ ಸುಮಾರು 1.50 ಲಕ್ಷ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಜೂನ್ 14ರ ಮುಂಜಾನೆ 6 ಗಂಟೆಯ ತನಕ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.
ಎಲ್ಲಾ ವಾಹನಗಳ ಮಾಲೀಕರು ಅದನ್ನು ಬಿಡಿಸಿಕೊಳ್ಳಲು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆಗಮಿಸಿದರೆ ಜನಜಂಗುಳಿ ಏರ್ಪಡಲಿದೆ. ವಾಹನಗಳನ್ನು ನಿಲ್ಲಿಸಲು ಸಹ ಸ್ಥಳಾವಕಾಶದ ಕೊರತೆ ಎದುರಾಗಲಿದೆ. ಠಾಣೆ ಹಂತದಲ್ಲೇ ಅವುಗಳನ್ನು ಬಿಡುಗಡೆಗೊಳಿಸಲು ಅವಕಾಶ ನೀಡಿ ಎಂದು ವಕೀಲರೊಬ್ಬರು ಅರ್ಜಿ ಹಾಕಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಎಲ್ಲಾ ವಾಹನಗಳಿಗೆ ನಿಗದಿತ ದಂಡ ಪಾವತಿಸಿಕೊಂಡು ಠಾಣೆ ಹಂತದಲ್ಲಿಯೇ ಬಿಡುಗಡೆ ಮಾಡಲು ಒಪ್ಪಿಗೆ ನೀಡಿತು.
ಕಳೆದ ವರ್ಷ ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಠಾಣೆಯಲ್ಲೇ ವಾಹನ ವಿಲೇವಾರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಅದನ್ನು ರಾಜ್ಯಕ್ಕೆ ವಿಸ್ತರಣೆ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಲಾಕ್‌ಡೌನ್ ಮುಕ್ತಾಯವಾದ ಬಳಿಕ ಅವುಗಳನ್ನು ಮಾಲೀಕರಿಗೆ ವಾಪಸ್ ನೀಡಲಾಗುತ್ತದೆ.
(ಮಾಹಿತಿ ಕೃಪೆ Oneindia)

ಸಹಾಯ ಧನಕ್ಕೆ ಪಿಂಚಣಿದಾರರಿಂದಲೂ ಅರ್ಜಿ

 


ಬೆಂಗಳೂರು: ಸರ್ಕಾರ ಕಲಾವಿದರಿಗೆ ನೀಡುವ ಸಹಾಯ ಧನಕ್ಕಾಗಿ ಹಲವು ಮಂದಿ ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಿಂಚಣಿ ಹಣ ಪಡೆಯುತ್ತಿರುವವರು ಕೂಡ ಅರ್ಜಿ ಸಲ್ಲಿಸಿದ್ದು ಅಂತಹ ಅರ್ಜಿಗಳು ತಿರಸ್ಕಾರಗೊಂಡಿವೆ.
ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಕಲಾವಿದರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಸರ್ಕಾರ ಈಗಾಗಲೆ ಮೂರು ಸಾವಿರ ರೂ. ಸಹಾಯ ಧನ ಘೋಷಣೆ ಮಾಡಿದೆ. ಈ ಸಹಾಯ ಧನ ಪಡೆಯಲು ಕೆಲವು ಮಾನ ದಂಡಗಳನ್ನು ಕೂಡ ನಿಗದಿ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಶಾಸನ ಪಡೆಯುತ್ತಿರುವವರು, ಪಿಂಚಣಿ ಪಡೆಯುತ್ತಿರುವವರು ಮತ್ತು ಸರ್ಕಾರಿ ನೌಕರರು ಹಾಗೂ 2020-21ನೇ ಸಾಲಿನ ಘಟಕ ಯೋಜನೆಯಡಿ ಪ್ರಯೋಜನ ಪಡೆದಿರುವ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಈಗ ಸರ್ಕಾರದ ಸಹಾಯ ಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಿಂಚಣಿ ಪಡೆಯುತ್ತಿರುವವರು ಕೂಡ ಅರ್ಜಿಸಲ್ಲಿಸಿರುವುದು ಬೆಳಕಿಗೆ ಬಂದಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಬಾರಿಯ ಲಾಕ್‌ ಡೌನ್‌ ವೇಳೆ ಸರ್ಕಾರ ಎರಡು ಸಾವಿರ ರೂ.ಸಹಾಯ ಧನ ಕಲಾವಿದರಿಗೆ ನೀಡಿತ್ತು. ಆಗಲೂ ಮಾಶಾಸನ ಪಡೆಯುತ್ತಿರುವವರು ಮತ್ತು ಪಿಂಚಣಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಿದ್ದರು. ಈಗಲೂ ಕೂಡ 150ಕ್ಕೂ ಅಧಿಕ ಮಂದಿ ಪಿಂಚಣಿ ಪಡೆಯುತ್ತಿರುವವರು ಅರ್ಜಿ ಸಲ್ಲಿಸಿದ್ದು, ಆಧಾರ್‌ ಕಾರ್ಡ್‌ ಸಂಖ್ಯೆ ಪರಿಶೀಲನೆಯಿಂದ ಇದು ಬೆಳಕಿಗೆ ಬಂದಿದೆ. ಅಂತಹ ಕಲಾವಿದರ ಅರ್ಜಿ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.
26 ಸಾವಿರ ಮಂದಿ ಕಲಾವಿರಿಂದ ಅರ್ಜಿ: ಸರ್ಕಾರದ ಸಹಾಯಧನ ಪಡೆಯಲು ಈಗಾಗಲೇ ಸಾಹಿತ್ಯ, ಜಾನಪದ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸುಮಾರು 26 ಸಾವಿರಕ್ಕೂ ಅಧಿಕ ಅರ್ಜಿಗಳು ಇಲಾಖೆಗೆ ಸಲ್ಲಿಕೆಯಾಗಿದೆ. ಈಗಾಗಲೇ ಅರ್ಜಿಗಳನ್ನು ಪರಿಷ್ಕರಿಸುವ ಕಾರ್ಯ ಸಹ ನಡೆದಿದೆ. ಕೆಲವು ಅರ್ಜಿಗಳು ದೋಷಪೂರಿತವಾಗಿದ್ದು, ಸುಮಾರು 25 ಸಾವಿರ ಕಲಾವಿದರಿಗೆ ಸಹಾಯ ಧನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಹೇಳಿದ್ದಾರೆ
4.8 ಕೋಟಿ ರೂ.ಹಂಚಿಕೆ : ಕಳೆದ ಬಾರಿಗಿಂತಲೂ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಅರ್ಜಿಸಲ್ಲಿಸಿದ್ದಾರೆ. ಹೀಗಾಗಿ ಹೆಚ್ಚಿನ ಅನುದಾನ ಬೇಕಾಗಬಹುದು. ಕಳೆದ ಬಾರಿ ಸರ್ಕಾರ ಕಲಾವಿದರಿಗಾಗಿ ಸುಮಾರು 3.70 ಕೋಟಿ ರೂ. ಅನುದಾನವನ್ನು ಸಹಾಯ ಧನಕ್ಕಾಗಿ ನೀಡಿತ್ತು. ಈ ಬಾರಿ ಸುಮಾರು 4.8 ಕೋಟಿ ರೂ. ಅನುದಾನ ನೀಡಿದೆ. ಎಲ್ಲ ವಲಯಗಳ ಕಲಾವಿದರು ಅರ್ಜಿ ಸಲ್ಲಿಕೆ ಮಾಡಿದ್ದು ಅರ್ಹ ಕಲಾವಿದರಿಗೆ ಸಹಾಯಧನವನ್ನು ಬ್ಯಾಂಕ್‌ ಖಾತೆಗೆ ಹಾಕುವ ಮೂಲಕ ಕಲಾವಿದರಿಗೆ ತಲುಪಿಸುವ ಕೆಲಸ ನಡೆದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರದ ಆರ್ಥಿಕ ಸಹಾಯ ಧನಕ್ಕಾಗಿ ಅಧಿಕ ಸಂಖ್ಯೆಯಲ್ಲಿ ಈ ಬಾರಿ ವಿವಿಧ ಕ್ಷೇತ್ರದ ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮತ್ತಷ್ಟು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಎಲ್ಲರಿಗೂ ಸಹಾಯ ಧನ ತಲುಪಿಸುವ ಕೆಲಸವನ್ನು ಇಲಾಖೆ ಮಾಡಲಿದೆ.–ಎಸ್‌.ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
ದೇವೇಶ ಸೂರಗುಪ್ಪ
(ಮಾಹಿತಿ ಕೃಪೆ ಉದಯವಾಣಿ)

ಕಲಬುರಗಿ: ವರದಕ್ಷಿಣೆ ಕಿರುಕುಳ; 21 ವರ್ಷದ ಗೃಹಿಣಿ ನೇಣಿಗೆ ಶರಣು

 

ಕಲಬುರಗಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ.
21 ವರ್ಷದ ರಚಿತಾ ಎಂಬುವವರೇ ಸಾವಿಗೆ ಶರಣಾದ ಗೃಹಿಣಿ. ಕಳೆದ ಎರಡೂವರೆ ವರ್ಷದ ಹಿಂದೆಯಷ್ಟೇ ವೀರಣ್ಣ ಎಂಬುವರ ಜೊತೆ ರಚಿತಾ ಮದುವೆಯಾಗಿತ್ತು.
ಸಿವಿಲ್ ಇಂಜಿನಿಯರ್ ಆಗಿರುವ ವೀರಣ್ಣ, ಮದುವೆ ಬಳಿಕ ಹಣಕ್ಕಾಗಿ ಪೀಡಿಸಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಮಂಗಳವಾರ ಕೂಡ ಹಣ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡಿ, ಗಲಾಟೆ ಮಾಡಿದ್ದ. ಇದರಿಂದ ಬೇಸತ್ತು ಮನೆಯಲ್ಲೇ ರಚಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಚಿತಾ ಸಾವು ಸಂಬಂಧ ಪತಿ ವೀರಣ್ಣ, ಮಾವ ಚಂದ್ರಕಾಂತ, ಅತ್ತೆ ಲಕ್ಷ್ಮಿಬಾಯಿ, ಮೈದುನ ಪವನ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ)

ರೋಹಿಣಿ ಸಾಧನೆಗಳನ್ನು ಆಧರಿಸಿ 'ಭಾರತ ಸಿಂಧೂರಿ' ಚಿತ್ರ ನಿರ್ಮಾಣಕ್ಕೆ ಸಿದ್ಧತೆ

 

ಮಂಡ್ಯ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಾಧನೆಗಳನ್ನು ಆಧರಿಸಿ ನಗರದ 'ನಾಲ್ವಡಿ ಕೃಷ್ಣರಾಜ ಒಡೆಯರ್‌ ಫಿಲಮ್ಸ್‌' ಸಂಸ್ಥೆಯು 'ಭಾರತ ಸಿಂಧೂರಿ' ಚಲನಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದೆ.

ನಟಿ ಅಕ್ಷತಾ ಪಾಂಡವಪುರ 'ಸಿಂಧೂರಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಹಿತಿ, ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಲಾಕ್‌ಡೌನ್‌ ಮುಗಿದ ನಂತರ ಚಿತ್ರ ಸೆಟ್ಟೇರಲಿದೆ. ಸಿಂಧೂರಿ ಅವರು ಹುಟ್ಟಿ ಬೆಳೆದ ಆಂಧ್ರಪ್ರದೇಶ, ಕರ್ತವ್ಯ ನಿರ್ವಹಿಸಿದ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ನಟಿ ಅಕ್ಷತಾ ಪಾಂಡವಪುರ
'ಮೈಸೂರಿನಲ್ಲಿ ಈಚೆಗೆ ನಡೆದ ರೋಹಿಣಿ ಸಿಂಧೂರಿ- ಶಿಲ್ಪಾನಾಗ್‌ ನಡುವಿನ ಜಟಾಪಟಿಗೂ ಭಾರತ ಸಿಂಧೂರಿ ಚಲನಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ವರ್ಷದಿಂದಲೂ ಚಿತ್ರದ ಸಿದ್ಧತೆ ನಡೆಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಅವರು ಮಾಡಿದ ಸಾಧನೆ
ಗಳನ್ನು ಪ್ರಮುಖವಾಗಿಟ್ಟುಕೊಂಡು ಹಾಸನ, ಮೈಸೂರಿನಲ್ಲಿ ಮಾಡಿದ ಸಾಧನೆಗಳೊಂದಿಗೆ ಚಿತ್ರ ರೂಪುಗೊಳ್ಳಲಿದೆ. ಚಿತ್ರ ನಿರ್ಮಾಣಕ್ಕೆ ಸಿಂಧೂರಿ ಒಪ್ಪಿಗೆ ಸೂಚಿಸಿದ್ದಾರೆ. ಈಚೆಗೆ ಭೇಟಿಯಾಗಿದ್ದಾಗ, ಚಿತ್ರ ನೋಡಲು ಕಾತರದಿಂದ ಇರುವುದಾಗಿ ತಿಳಿಸಿದ್ದರು' ಎಂದು ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಹೇಳಿದರು.

ಸಿಂಧೂರಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ಜಿಲ್ಲೆಯನ್ನು ರಾಜ್ಯದಲ್ಲೇ ಮೊದಲ ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದರು. ರಾಷ್ಟ್ರದಲ್ಲೇ 3ನೇ ಜಿಲ್ಲೆಯಾಗಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಗೂ ಪಾತ್ರವಾಗಿತ್ತು. ರಾಷ್ಟ್ರ ಪ್ರಶಸ್ತಿಗೂ ಪಾತ್ರವಾಯಿತು. ಕೇವಲ ಒಂದು ವರ್ಷದಲ್ಲಿ (2014-15) 1.30 ಲಕ್ಷ ಶೌಚಾಲಯ ನಿರ್ಮಿಸಿದ ಕೀರ್ತಿಗೆ ಅವರು
ಪಾತ್ರರಾಗಿದ್ದರು.

ಜೊತೆಗೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಬಾಲ್ಯವಿವಾಹ ನಿರ್ಮೂಲನೆ, ಹೆಣ್ಣು ಭ್ರೂಣಹತ್ಯೆ ತಡೆಗೆ ಪ್ರಯತ್ನಿಸಿದ್ದರು. ಈ ಅಂಶಗಳನ್ನಾಧರಿಸಿ ನಿರ್ದೇಶಕರು ಕತೆ ಸಿದ್ಧಗೊಳಿಸಿದ್ದಾರೆ.

ರಾಜಕೀಯ: ಸಿಂಧೂರಿ ಸಿಇಒ ಆಗಿದ್ದಾಗ ಮಂಡ್ಯ ಜಿಲ್ಲಾ ಪಂಚಾಯಿತಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗೂ ಸಾಕ್ಷಿಯಾಗಿತ್ತು. ಅವರ ಅವಧಿಯಲ್ಲಿ 7 ಮಂದಿ ಅಧ್ಯಕ್ಷರು ಬದಲಾಗಿದ್ದರು. ಆಗಲೂ ರೋಹಿಣಿ ಒತ್ತಡದಲ್ಲಿ ಕೆಲಸ ಮಾಡಿದ್ದರು. ಈ ಅಂಶಗಳೂ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಲಿವೆ.

'ಕಾರ್ಯಕ್ರಮವೊಂದರಲ್ಲಿ ಅಂಬರೀಷ್‌ ಅವರು ರೋಹಿಣಿ ಸಿಂಧೂರಿ ಅವರನ್ನು, 'ನೀವು ಸುಂದರವಾಗಿದ್ದೀರಿ, ಚೆನ್ನಾಗಿ ಕೆಲಸವನ್ನೂ ಮಾಡುತ್ತೀರಿ' ಎಂದು ಹೊಗಳಿದಿದ್ದರು. ಚಿತ್ರದಲ್ಲಿ ಅಂಬರೀಷ್‌ ಪಾತ್ರವೂ ಪ್ರಮುಖವಾಗಿರಲಿದೆ' ಎಂದು ಕೃಷ್ಣ ತಿಳಿಸಿದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ರೋಹಿಣಿ ಸಿಂಧೂರಿ ಅವರನ್ನು ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.
* ಕೃಷ್ಣ ಸ್ವರ್ಣಸಂದ್ರ ಅವರು ಚಿತ್ರದ ಬಗ್ಗೆ ತಿಳಿಸಿದ್ದಾರೆ. ಜೀವನಾಧಾರಿತ ಕತೆಗಳಲ್ಲಿ ಅಭಿನಯಿಸುವುದು ಸವಾಲು, ಅದೃಷ್ಟವೇ ಆಗಿದೆ. ಕತೆ ಬಗ್ಗೆ ಕುತೂಹಲವಿದೆ.
-ಅಕ್ಷತಾ ಪಾಂಡವಪುರ, ನಟಿ
(ಮಾಹಿತಿ ಕೃಪೆ ಪ್ರಜಾವಾಣಿ)

ತೈಲ ಬೆಲೆ ಏರಿಕೆ; ಜೂ. 11ರಂದು ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ

 


ನವದೆಹಹಲಿ, ಜೂನ್ 09; ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ಏರಿಕೆಯನ್ನು ಕಂಡಿವೆ. ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಜನ ಸಾಮಾನ್ಯರು ಪರದಾಡುತ್ತಿದ್ದಾರೆ.
ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಜೂನ್ 11ರಂದು ದೇಶಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಕ್ಷ ಹೇಳಿದೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಮೇ 4 ರಿಂದ ಇದುವರೆಗೂ ಒಟ್ಟು 20 ಬಾರಿ ಪೆಟ್ರೋಲ್ ದರವನ್ನು ಏರಿಕೆ ಮಾಡಲಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ನಗರದಲ್ಲಿ ಕಳೆದ ವರ್ಷದ ಜೂನ್‌ ತಿಂಗಳಿನಲ್ಲಿ ಪೆಟ್ರೋಲ್ ದರ 73.55 ಆಗಿತ್ತು. ಭಾನುವಾರ ನಗರದಲ್ಲಿ ಲೀಟರ್ ಪೆಟ್ರೋಲ್ ದರ 98.26 ಆಗಿದೆ. ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದಾಗ ತೈಲ ಬೆಲೆ ಏರಿಕೆಯಾಗಿರಲಿಲ್ಲ. ಬಳಿಕ 20 ಬಾರಿ ಬೆಲೆ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿವೆ.

ತೈಲ ಬೆಲೆ ಏರಿಕೆ ಕುರಿತು ಮಾತನಾಡಿರುವ ಕೇಂದ್ರ ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, "ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ಕಚ್ಚಾತೈಲ ದರ ಹೆಚ್ಚಳವಾಗಿರುವುದೇ ಭಾರತದಲ್ಲಿ ತೈಲ ಬೆಲೆ ಏರಿಕೆಗೆ ಕಾರಣ" ಎಂದು ಹೇಳಿದ್ದಾರೆ.
"ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿರುವ ಕುರಿತು ಜಿಎಸ್‌ಟಿ ಮಂಡಳಿ ತೀರ್ಮಾನಿಸಬೇಕು. ಒಂದು ವೇಳೆ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ದರಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿವೆ" ಎಂದು ಸಚಿವರು ತಿಳಿಸಿದ್ದಾರೆ.
"ತೈಲ ದರ ಹೆಚ್ಚಳ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಪೆಟ್ರೋಲಿಂ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬರಬೇಕು ಎಂಬುದು ನನ್ನ ಆಶಯ. ಆದರೆ ಜಿಎಸ್‌ಟಿ ಮಂಡಳಿ ಸದಸ್ಯರಲ್ಲಿ ಈ ಬಗ್ಗೆ ಒಮ್ಮತ ಮೂಡಿ ಅಂತಿಮ ನಿರ್ಧಾರ ಕೈಗೊಳ್ಳಬೇಕು" ಎಂದು ಸಚಿವರು ವಿವರಿಸಿದರು.
(ಮಾಹಿತಿ ಕೃಪೆ Oneindia)

ಆಗಸವೇ ಆಸಕ್ತಿ. ಚಂದ್ರನೇ ಸ್ಫೂರ್ತಿ! ಚಂದಿರನ ಸ್ಪಷ್ಟ ಚಿತ್ರ ಸೆರೆಹಿಡಿದ ಯುವಕ

 


ಪ್ರೌಢಶಾಲೆಯಲ್ಲಿರುವ ಹದಿಹರೆಯದ ಹುಡುಗರು ಸಾಮಾನ್ಯವಾಗಿ ತಮ್ಮ ಪಾಲಕರ ಬಳಿ ಏನು ಗಿಫ್ಟ್ ಕೇಳುತ್ತಾರೆ? ಸ್ಮಾರ್ಟ್ ಫೋನ್, ಪ್ಲೇ ಸ್ಟೇಷನ್, ಬೈಕ್ ಇತ್ಯಾದಿ… ಅಲ್ಲವೇ? ಆದರೆ, ಈಗಷ್ಟೇ 10ನೇ ತರಗತಿ ಮುಗಿಸಿರುವ ಮಹಾರಾಷ್ಟ್ರದ ಪುಣೆಯ ಈ ಹುಡುಗ ಕೇಳಿದ್ದು ಹೈಎಂಡ್ ಕ್ಯಾಮರಾ ಮತ್ತು ಟೆಲಿಸ್ಕೋಪ್! ಏಕೆಂದರೆ ಆಗಸದಲ್ಲಿರುವ ಚಂದ್ರ-ತಾರೆಗಳ ಸಮೂಹವೇ ಆತನ ಆಸಕ್ತಿಯ ಕ್ಷೇತ್ರ. ಆತ ಇತ್ತೀಚೆಗೆ ತೆಗೆದ ಚಂದ್ರನ ಸ್ಪಷ್ಟ ಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿದೆ.

| ರಮೇಶ್​ಕುಮಾರ ಎಡಮೋಳೆ
ಚಂದಮಾಮನನ್ನು ತೋರಿಸಿ ತಾಯಂದಿರು ಮಕ್ಕಳಿಗೆ ಕೈತುತ್ತು ನೀಡಲು ಆರಂಭಿಸಿದಾಗಲೇ ಚಂದ್ರನ ಬಗೆಗಿನ ಕುತೂಹಲ ಹುಟ್ಟಿಕೊಂಡಿತೇನೋ? ಚಂದ್ರನನ್ನು ಹತ್ತಿರದಿಂದ ನೋಡುವ, ಭೇಟಿ ಮಾಡುವ ಕುತೂಹಲ ಎಲ್ಲರಲ್ಲೂ ಇದ್ದದ್ದೇ. ಉಪಗ್ರಹಗಳನ್ನು ಕಳಿಸಿದ್ದಾಯ್ತು, ಸ್ವತಃ ಮಾನವನೇ ಚಂದ್ರನನ್ನು ರ್ಸ³ಸಿ ಬಂದರೂ ಚಂದ್ರನ ಕುರಿತ ಅಧ್ಯಯನ ಮುಂದುವರಿದೇ ಇದೆ.
ಪುಣೆಯ ವಿದ್ಯಾಭವನ್ ಹೈಸ್ಕೂಲ್​ನಲ್ಲಿ ಈಗಷ್ಟೇ 10ನೇ ತರಗತಿ ಪೂರ್ಣಗೊಳಿಸಿರುವ ಪ್ರಥಮೇಶ್ ಜಾಜು ಕೂಡ ಎಲ್ಲ ಹುಡುಗರಂತೆ ಕಳೆದ ವರ್ಷವಿಡೀ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಕುಳಿತೂಕುಳಿತೂ ಬೇಜಾರಾಗಿ ಹೋಗಿದ್ದ. ಆದರೆ ಅದೇ ಸಮಯವನ್ನು ಆತ ತನ್ನ ಕುತೂಹಲದ ಕ್ಷೇತ್ರದಲ್ಲಿ ಕೆಲಸ ಮಾಡಲು ಬಳಸಿಕೊಂಡ. ಅಚ್ಚರಿಗಳ ಆಗರವಾದ ಸೌರಮಂಡಲದ ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ತನ್ನೆಲ್ಲಾ ಸಮಯವನ್ನು ವಿನಿಯೋಗಿಸಿದ. ಆತ ತೆಗೆದ ಫೋಟೋಗಳೆಷ್ಟು ಗೊತ್ತಾ? 55 ಸಾವಿರಕ್ಕೂ ಅಧಿಕ! ಅದರಲ್ಲೂ ಹೆಚ್ಚಿನವು ಚಂದ್ರನ ಫೋಟೋಗಳು. ಟೆಲಿಸ್ಕೋಪ್ ಮತ್ತು ಕ್ಯಾಮೆರಾವನ್ನು ಉಪಯೋಗಿಸಿ ಸ್ಪಷ್ಟವಾದ ಚಂದ್ರನ ಫೋಟೋ ಸೆರೆಹಿಡಿಯಲು ಒಂದೇ ದಿನ ಸತತ 5 ಗಂಟೆ ಪ್ರಯತ್ನಪಟ್ಟಿದ್ದ. ಮೇ 3ರಂದು ತನ್ನ ಮನೆಯ ಮೇಲೆ ಮುಂಜಾನೆ 1.30 ರಿಂದ 5.30ರವರೆಗೆ ವಿವಿಧ ಆಯಾಮಗಳಲ್ಲಿ ಚಂದ್ರನ ಚಿತ್ರಗಳನ್ನು ಪ್ರಥಮೇಶ್ ಕ್ಲಿಕ್ಕಿಸಿದ್ದಾನೆ. ಬಳಿಕ ವಿವಿಧ ಎಡಿಟಿಂಗ್ ಸಾಫ್ಟ್​ವೇರ್​ಗಳನ್ನು ಬಳಸಿಕೊಂಡು ಸ್ಪಷ್ಟವಾದ ಚಂದ್ರನ ಚಿತ್ರವನ್ನು ಪೂರ್ಣಗೊಳಿಸಿದ್ದಾನೆ. ಅದಕ್ಕೆ ತಗುಲಿದ್ದು ಬರೋಬ್ಬರಿ 40 ತಾಸು! ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಆ ಫೋಟೋಗೆ ಸಾವಿರಾರು ಮೆಚ್ಚುಗೆಗಳು ಹರಿದುಬಂದಿದ್ದು, ಒಂದೇ ಒಂದು ಫೋಟೋ, ಇಡೀ ದೇಶವೇ ಪ್ರಥಮೇಶ್ ಕಡೆ ತಿರುಗಿ ನೋಡುವಂತೆ ಮಾಡಿದೆ. ಪುಣೆಯಲ್ಲಿರುವ ಭಾರತದ ಅತ್ಯಂತ ಹಳೆಯ ಅಸ್ಟ್ರೋ ಕ್ಲಬ್ ಜ್ಯೋತಿರ್ವಿದ್ಯಾಲಯದಲ್ಲಿ 3 ವರ್ಷದಿಂದ ಪ್ರಥಮೇಶ್ ಖಗೋಳ ವಿಜ್ಞಾನ ಕಲಿಯುತ್ತಿದ್ದಾನೆ. ಇದನ್ನು ಕೇವಲ ಹವ್ಯಾಸವಾಗಿ ಉಳಿಸಿಕೊಳ್ಳದೆ, ಖಗೋಳ ಭೌತಶಾಸ್ತ್ರಜ್ಞನಾಗುವ ಬಯಕೆ ಪ್ರಥಮೇಶ್​ಗೆ ಇದೆ.


55 ಸಾವಿರ ಚಿತ್ರ ತೆಗೆದಿದ್ದೇಕೆ?
ಒಂದೇ ಶಾಟ್​ನಲ್ಲಿ ತೆಗೆಯಬಹುದಾದ ಚಂದ್ರನ ಚಿತ್ರವನ್ನು 55 ಸಾವಿರ ಬಾರಿ ಕ್ಲಿಕ್ಕಿಸಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಕಾರಣ ಹೀಗಿದೆ. ಯಾವುದೇ ಸಾಧನದಲ್ಲಿ ಚಿತ್ರವನ್ನು ನೋಡಿ, ಜೂಮ್ ಮಾಡಿದಾಗ ಚಿತ್ರ ಮಸುಕಾಗಿ ಕಾಣುತ್ತದೆ. ಅದನ್ನು ತಪ್ಪಿಸಿ, ಸ್ಪಷ್ಟವಾದ ಚಿತ್ರವನ್ನು ಪಡೆಯಲು 55 ಸಾವಿರ ಚಿತ್ರಗಳನ್ನು ತೆಗೆಯ ಲಾಗಿದೆ. ಹೀಗೆ ತೆಗೆಯುವಾಗ ಪನೋರಮಿಕ್ ಫೋಟೋಗ್ರಫಿ, ಮೊಸಾಯಿಕ್ ತಂತ್ರ ಮುಂತಾದವುಗಳನ್ನು ಪ್ರಥಮೇಶ್ ಬಳಸಿದ್ದಾನೆ.

ಒಟ್ಟುಗೂಡಿಸಿದಾಗ ಸೃಷ್ಟಿಯಾಯಿತು ಸ್ಪಷ್ಟ ಚಂದ್ರನ ಚಿತ್ರ
ಚಿತ್ರ ಸೆರೆಹಿಡಿಯಲು ಸೆಲೆಸ್ಟ್ರಾನ್ ಕಂಪನಿಯ 5 ಇಂಚಿನ ಕ್ಯಾಸ್ಸೆಗ್ರೇನ್ ಟೆಲಿಸ್ಕೋಪ್ ಜತೆಗೆ ಪ್ರತಿಷ್ಠಿತ ಕಂಪನಿಯ ಗ್ರಹ ಮತ್ತು ಚಂದ್ರನ ಇಮೇಜಿಂಗ್ ಸೂಪರ್ ಸ್ಪೀಡ್ ಕ್ಯಾಮೆರಾವನ್ನು ಪ್ರಥಮೇಶ್ ಬಳಸಿದ್ದಾನೆ. ಇದು ವಿಶಿಷ್ಟ ಕ್ಯಾಮೆರಾ. ವಿಡಿಯೋಗಳಲ್ಲಿ ಪ್ರತಿ ಭಾಗದ ಇಂಚಿಂಚೂ ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ. ಚಂದ್ರನ 38 ವಿಡಿಯೋಗಳನ್ನು ಪ್ರಥಮೇಶ್ ಚಿತ್ರೀಕರಿಸಿದ್ದಾನೆ. ಪ್ರತಿ ವಿಡಿಯೋದಲ್ಲಿ 2000 ಫ್ರೇಮ್ಳಿದ್ದು, ಒಟ್ಟು 55 ಸಾವಿರ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. ಬಳಿಕ ವಿವಿಧ ಎಡಿಟಿಂಗ್ ಸಾಫ್ಟ್​ವೇರ್ ಮೂಲಕ ಚಿತ್ರಗಳನ್ನು ಒಟ್ಟುಗೂಡಿಸಿದಾಗ ಮಸುಕಿಲ್ಲದ, ಸ್ಪಷ್ಟವಾದ ಅದ್ಭುತ ಫೋಟೋ ಲಭ್ಯವಾಗಿದೆ. ವಿಶೇಷ ವೆಂದರೆ ಚಂದ್ರನ ಮೇಲ್ಮೈನಲ್ಲಿ ನೀಲಿ ಮತ್ತು ಕಿತ್ತಳೆ ಬಣ್ಣದ ಛಾಯೆಗಳನ್ನು ಸೆರೆಹಿಡಿಯಲಾಗಿದೆ. ಇವು ಚಂದ್ರನ ಮೇಲ್ಮೈಯಲ್ಲಿನ ಹಲವಾರು ಖನಿಜ ಸಂಯೋಜನೆಗಳನ್ನು ಸೂಚಿಸುತ್ತವೆ. ವಿಭಿನ್ನ ಖನಿಜಗಳು ವಿಭಿನ್ನ ಬಣ್ಣವನ್ನು ಹೊಂದಿವೆ.
(ಮಾಹಿತಿ ಕೃಪೆ ವಿಜಯವಾಣಿ)

Tuesday, June 8, 2021

ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಮಾಡಿದ ಪರಿಹಾರ ಕಾರ್ಯಗಳ ಬಗ್ಗೆ ವಿವರ ನೀಡಿ: ಸಂಸದರಿಗೆ ಸ್ಪೀಕರ್

 

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಕ್ಷೇತ್ರಗಳಲ್ಲಿ ಮಾಡಿರುವ ಪರಿಹಾರ ಕಾರ್ಯಗಳ ಬಗ್ಗೆ ವಿವರ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಸಂಸದರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಲಹೆ ನೀಡಿದ್ದಾರೆ.
ಸಂಸದರು ನೀಡುವ ಮಾಹಿತಿಯನ್ನು ಕೋವಿಡ್-19 ನ್ನು ಎದುರಿಸುವುದಕ್ಕೆ ರಾಷ್ಟ್ರವ್ಯಾಪಿ ಅತ್ಯುತ್ತಮವಾದುದ್ದನ್ನು ಅಳವಡಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಓಂ ಬಿರ್ಲಾ ಹೇಳಿದ್ದಾರೆ.
ಈ ಸಂಬಂಧ ಎಲ್ಲಾ ಸಂಸದರಿಗೂ ಪತ್ರ ಬರೆದಿರುವ ಓಂ ಬಿರ್ಲಾ ಸಾರ್ವಜನಿಕ ಪ್ರತಿನಿಧಿಗಳಾಗಿ, ಈ ರೀತಿಯ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರೊಂದಿಗೆ ನಿಲ್ಲುವುದು ಪ್ರತಿ ವಿಷಯದಲ್ಲಿ ಸಹಕರಿಸುವುದು ಕರ್ತವ್ಯವಾಗಿದೆ.
"ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕಾಗಿ ನೀವು ನಿಮ್ಮ ಹೆಚ್ಚಿನ ಸಮಯವನ್ನು ಕಳೆದಿದ್ದೀರಿ ಎಂದು ನಂಬಿದ್ದೇನೆ. ಜನರಿಗೆ ಮನೋಸ್ಥೈರ್ಯ ತುಂಬುವುದಷ್ಟೇ ಅಲ್ಲದೇ, ಜನರ ಸಂಕಷ್ಟಗಳನ್ನು ಪರಿಹರಿಸುವುದಕ್ಕೆ ಶ್ರಮಿಸಿದ್ದೀರಿ" ಎಂದು ಪತ್ರದಲ್ಲಿ ಸಂಸದರಿಗೆ ಓಂ ಬಿರ್ಲಾ ಸಂದೇಶ ನೀಡಿದ್ದಾರೆ.
ನಿಮ್ಮ ಕ್ಷೇತ್ರಗಳಲ್ಲಿ ನೀವು ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು ಈಗಿನ ತುರ್ತು ಅವಶ್ಯಕತೆಯಾಗಿದ್ದು, ಇದು ಕೋವಿಡ್-19 ನ್ನು ಎದುರಿಸುವುದಕ್ಕೆ ರಾಷ್ಟ್ರವ್ಯಾಪಿ ಅತ್ಯುತ್ತಮವಾದುದ್ದನ್ನು ಅಳವಡಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ.
ರಾಜಸ್ಥಾನದ ಕೋಟದ ಸಂಸದರಾಗಿರುವ ಬಿರ್ಲಾ ಕೋವಿಡ್-19 ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಾಗೂ ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವುದಾಗಿ ಘೋಷಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡ ಪ್ರಭ)

ಜೂನ್ 10 ಕ್ಕೆ ಸೂರ್ಯಗ್ರಹಣ: ಭಾರತದ ಈ ಪ್ರದೇಶ ಬಿಟ್ಟು ಮತ್ತೆಲ್ಲೂ ಗೋಚರವಿಲ್ಲ

 


ನವದೆಹಲಿ:ಗುರುವಾರ ಸೂರ್ಯಗ್ರಹಣ ಸಂಭವಿಸಲಿದೆ .ಆದರೆ ಸೂರ್ಯಾಸ್ತದ ಮೊದಲು ಕೆಲವು ನಿಮಿಷಗಳ ಕಾಲ ಅರುಣಾಚಲ ಪ್ರದೇಶ ಮತ್ತು ಲಡಾಖ್‌ನ ಕೆಲವು ಭಾಗಗಳನ್ನು ಹೊರತುಪಡಿಸಿ ಇದು ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಪ್ರಮುಖ ಖಗೋಳ ಭೌತಶಾಸ್ತ್ರಜ್ಞರು ತಿಳಿಸಿದ್ದಾರೆ.
ಸೂರ್ಯ, ಚಂದ್ರ ಮತ್ತು ಭೂಮಿಯು ಸರಳ ರೇಖೆಯಲ್ಲಿ ಮತ್ತು ಬಹುತೇಕ ಒಂದೇ ಸಮತಲದಲ್ಲಿ ಬಂದಾಗ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಆಕಾಶದಲ್ಲಿ ಬೆಂಕಿಯ ಉಂಗುರ ಕಾಣಿಸಿಕೊಂಡಾಗ ಅದು ಭಾಗಶಃ ಗ್ರಹಣ.ಅರುಣಾಚಲ ಪ್ರದೇಶದ ದೇಶದ ಈಶಾನ್ಯ ವಿಪರೀತ ಮತ್ತು ಲಡಾಖ್ ಅನ್ನು ಹೊರತುಪಡಿಸಿ, ಗ್ರಹಣದ ಹಾದಿಯು ಭಾರತದ ಯಾವುದೇ ಭಾಗವನ್ನು ಮುಟ್ಟುವುದಿಲ್ಲ ಎಂದು ಎಂ ಪಿ ಬಿರ್ಲಾ ತಾರಾಲಯದ ನಿರ್ದೇಶಕ ಡೆಬಿಪ್ರಸಾದ್ ಡುಯಾರಿ ಮಂಗಳವಾರ ಕೋಲ್ಕತ್ತಾದಲ್ಲಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ, ಜನರು ಸೂರ್ಯಾಸ್ತದ ಸ್ವಲ್ಪ ಮುಂಚೆ, ಚಂದ್ರನಿಂದ ಆವೃತವಾದ ಸೂರ್ಯನ ಒಂದು ಸಣ್ಣ ಭಾಗವನ್ನು ನೋಡಬಹುದು, ಅದು ದಿಗಂತದಲ್ಲಿ ತುಂಬಾ ಕಡಿಮೆಯಾಗಿದೆ, ಇದು ಸ್ಥಾನವನ್ನು ಅವಲಂಬಿಸಿ 3-4 ನಿಮಿಷಗಳ ಕಾಲ ಇರುತ್ತದೆ 'ಎಂದು ಡುಯಾರಿ ಹೇಳಿದರು.'ಉತ್ತರ ಗಡಿಗಳಲ್ಲಿ, ಲಡಾಖ್ನಲ್ಲಿ, ಗಡಿ ಪ್ರದೇಶದ ಒಂದು ಜಾರಿಕೊಳ್ಳುವಿಕೆಯು ಭಾಗಶಃ ಗ್ರಹಣದ ಕೊನೆಯ ಹಂತವನ್ನು ಅನುಭವಿಸಬಹುದು, ಮತ್ತೆ ಅಲ್ಪಾವಧಿಗೆ, ಆದರೆ ತುಲನಾತ್ಮಕವಾಗಿ ದೇಶದ ಪೂರ್ವ ಭಾಗಕ್ಕಿಂತ ಹೆಚ್ಚಿನ ಎತ್ತರದಲ್ಲಿ' ಎಂದು ಅವರು ಹೇಳಿದರು. .
ಸಂಜೆ 5:52 ರ ಸುಮಾರಿಗೆ ಅರುಣಾಚಲ ಪ್ರದೇಶದ ದಿಬಾಂಗ್ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿನಿಂದ ಸೂರ್ಯಗ್ರಹಣದ ಒಂದು ಸಣ್ಣ ಭಾಗವನ್ನು ನೋಡಬಹುದು. ಸಂಜೆ 6.15 ರ ಸುಮಾರಿಗೆ ಸೂರ್ಯ ಮುಳುಗುವ ಲಡಾಖ್‌ನ ಉತ್ತರ ಭಾಗದಲ್ಲಿ, ವಿದ್ಯಮಾನದ ಕೊನೆಯ ಹಂತಗಳನ್ನು ಸಂಜೆ 6 ಗಂಟೆಗೆ ನೋಡಬಹುದು.ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾದ ವಿಶಾಲ ಪ್ರದೇಶದಿಂದ ಗ್ರಹಣವನ್ನು ಕಾಣಬಹುದು ಎಂದು ಡುಯಾರಿ ಹೇಳಿದರು.
(ಮಾಹಿತಿ ಕೃಪೆ Kannada News Now)

ಸಿ.ಎಂ ಯಡಿಯೂರಪ್ಪ ಕಾಲಿಗೆ ಬಿದ್ದ ಶಾಸಕ ಶರಣು ಸಲಗರ

 

ಬೀದರ್‌: ಬಸವಕಲ್ಯಾಣ ಕ್ಷೇತ್ರದಿಂದ ವಿಧಾನಸಭೆಗೆ ಈಚೆಗೆ ಆಯ್ಕೆಯಾದ ಶರಣು ಸಲಗರ ಬೆಂಗಳೂರಲ್ಲಿ ಮಂಗಳವಾರ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೂ ಮುಂಚೆ ಅವರು ಮುಖ್ಯಮಂತ್ರಿ ಕಾಲಿಗೆ ಬಿದ್ದು ನಮಸ್ಕರಿಸಿದರು.
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಗೆದ್ದಿರುವ ಅವರು ಕುಟುಂಬ ಸಮೇತ ಬೆಂಗಳೂರಿಗೆ ತೆರಳಿ ಪ್ರಮಾಣವಚನ ಸ್ವೀಕರಿಸಿದರು. ಪಕ್ಷದ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹಾಗೂ ಪ್ರಮುಖರು ಇದ್ದರು.
(ಮಾಹಿತಿ ಕೃಪೆ ಪ್ರಜಾವಾಣಿ)

ಜಮ್ಮು: ವೈಷ್ಣೋದೇವಿ ದೇಗುಲದ ಸಂಕೀರ್ಣದಲ್ಲಿ ಬೆಂಕಿ ದುರಂತ, ನಗದು -ದಾಖಲೆ ಭಸ್ಮ

 

ಜಮ್ಮು: ಇಲ್ಲಿನ ರಿಯಾಸಿ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಾತಾ ವೈಷ್ಣೋದೇವಿ ದೇವಾಲಯ ಸಂಕೀರ್ಣದ ಒಳಗೆ ಇರುವ ಕಟ್ಟಡದಲ್ಲಿ ಮಂಗಳವಾರ ಸಂಜೆ ಬೆಂಕಿ ದುರಂತ ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅವಘಡ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 4.15 ರ ಸುಮಾರಿಗೆ ಗರ್ಭಗೃಹದ ಪಕ್ಕದಲ್ಲಿರುವ ಕಾಳಿಕಾ ಭವನದ ನಗದು ಎಣಿಕೆಯ ಕೋಣೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವುಗಳು ವರದಿಯಾಗಿಲ್ಲ.
ಬೆಂಕಿಯಿಂದಾಗಿ ಅಪಾರ ಪ್ರಮಾಣದ ನಗದು ಸೇರಿದಂತೆ ದಾಖಲೆಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ' ಎಂದು ರಿಯಾಸಿ ಜಿಲ್ಲೆಯ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಶೈಲೇಂದರ್‌ ಸಿಂಗ್ ತಿಳಿಸಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ)

BIGG NEWS : ಪ್ರಧಾನಿ ಮೋದಿ 'ಉಚಿತ ಲಸಿಕೆ' ಘೋಷಣೆ ಬೆನ್ನಲ್ಲೇ 74 ಕೋಟಿ ಡೋಸ್ ವ್ಯಾಕ್ಸಿನ್ ಗೆ ಆರ್ಡರ್ ನೀಡಿದ 'ಕೇಂದ್ರ'

 

ಡಿಜಿಟಲ್ ಡೆಸ್ಕ್ : ಜೂನ್ 21 ರಿಂದ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಉಚಿತ ವ್ಯಾಕ್ಸಿನ್ ನೀಡಲಿದೆ ಎಂದು ಪ್ರಧಾನಿ ಮೋದಿ ನಿನ್ನೆ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಬರೋಬ್ಬರಿ 74 ಕೋಟಿ ಡೋಸ್ ನಷ್ಟು ವ್ಯಾಕ್ಸಿನ್ ಗೆ ಆರ್ಡರ್ ಮಾಡಿದೆ ಎಂದು ಕೇಂದ್ರ ನೀತಿ ಆಯೋಗ ಮಾಹಿತಿ ನೀಡಿದೆ.
ಹೌದು, ಬರೋಬ್ಬರಿ 25 ಕೋಟಿ ಕೋವಿ ಶೀಲ್ಡ್ ಲಸಿಕೆ, 19 ಕೋಟಿ ಕೋವ್ಯಾಕ್ಸಿನ್ ಹಾಗೂ 30 ಕೋಟಿ ಬಯಾಲಾಜಿಕಲ್ ಇ ವ್ಯಾಕ್ಸಿನ್ ಗೆ ಕೇಂದ್ರ ಸರ್ಕಾರ ಆರ್ಡರ್ ನೀಡಿದೆ. ಅಲ್ಲದೇ ಶೇಕಡ 30 ರಷ್ಟು ಮುಂಗಡ ಹಣ ಪಾವತಿ ಮಾಡಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿಕೆ ಪೌಲ್ ಮಾಹಿತಿ ನೀಡಿದ್ದಾರೆ.

ಇನ್ನೂ, ಕೇಂದ್ರವು ಶೇಕಡಾ 25 ರಷ್ಟು ಪ್ರಮಾಣವನ್ನು ಲಸಿಕೆ ತಯಾರಕರಿಂದ ಖರೀದಿಸುತ್ತದೆ, ಇದರಲ್ಲಿ ಶೇಕಡಾ 25 ರಷ್ಟು ರಾಜ್ಯ ಕೋಟಾ ಸೇರಿದೆ ಮತ್ತು ಅದನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡುತ್ತದೆ.ಪ್ರಧಾನಿ ತಮ್ಮ ಸೋಮವಾರ ಭಾಷಣದಲ್ಲಿ ಹೇಳಿದಂತೆ, ಯಾವುದೇ ರಾಜ್ಯ ಸರ್ಕಾರವು ಲಸಿಕೆ ಸಂಗ್ರಹಕ್ಕಾಗಿ ಖರ್ಚು ಮಾಡಬೇಕಾಗಿಲ್ಲ.ಆದಾಗ್ಯೂ, ಪ್ರಮಾಣಗಳ ಹಂಚಿಕೆಯು ರಾಜ್ಯಗಳ ಜನಸಂಖ್ಯೆ ಮತ್ತು ಲಸಿಕೆ ವ್ಯರ್ಥ ಸೇರಿದಂತೆ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜನಸಂಖ್ಯೆ, ರೋಗದ ಹೊರೆ ಮತ್ತು ವ್ಯಾಕ್ಸಿನೇಷನ್ ಪ್ರಗತಿಯಂತಹ ಮಾನದಂಡಗಳ ಆಧಾರದ ಮೇಲೆ ಭಾರತ ಸರ್ಕಾರವು ಉಚಿತವಾಗಿ ನೀಡುವ ಲಸಿಕೆ ಪ್ರಮಾಣವನ್ನು ರಾಜ್ಯ / ಯುಟಿಗಳಿಗೆ ಹಂಚಲಾಗುತ್ತದೆ. ಲಸಿಕೆಯ ವ್ಯರ್ಥವು ಹಂಚಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ 'ಎಂದು ಅಧಿಸೂಚನೆ ಹೇಳಿದೆ.
ಎಲ್ಲಾ ನಾಗರಿಕರು ತಮ್ಮ ಆದಾಯದ ಸ್ಥಿತಿಯನ್ನು ಲೆಕ್ಕಿಸದೆ ಉಚಿತ ವ್ಯಾಕ್ಸಿನೇಷನ್ ಪಡೆಯಲು ಅರ್ಹರಾಗಿದ್ದಾರೆ. ಪಾವತಿಸುವ ಸಾಮರ್ಥ್ಯ ಹೊಂದಿರುವವರಿಗೆ ಖಾಸಗಿ ಆಸ್ಪತ್ರೆಯ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.ಇಲ್ಲಿಯವರೆಗೆ, ಭಾರತವು ಸುಮಾರು 23 ಕೋಟಿ ಡೋಸ್‌ಗಳನ್ನು ನೀಡಿದೆ. 'ಭಾರತ ಸರ್ಕಾರವು ಎಲ್ಲಾ ದೇಶವಾಸಿಗಳಿಗೆ ಉಚಿತ ಲಸಿಕೆಗಳನ್ನು ನೀಡುತ್ತದೆ' ಎಂದು ಅವರು ಹೇಳಿದರು.

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಗುಡ್ ನ್ಯೂಸ್: ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

 

ಬೆಂಗಳೂರು: ಸರ್ಕಾರಿ ಜಾಗದಲ್ಲಿನ ಮನೆ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿಯನ್ನು 2022 ರ ಮಾರ್ಚ್ 31 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಸರ್ಕಾರಿ ಜಮೀನುಗಳಲ್ಲಿ 2015 ರ ಜನವರಿ 1 ರ ಮೊದಲು ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಕರ್ನಾಟಕ ಕಂದಾಯ ಕಾಯ್ದೆಯ ಕಲಂ 94 ಸಿ, 94 ಸಿಸಿ ಅನ್ವಯ ಅರ್ಜಿ ಸಲ್ಲಿಸಲು 2019 ರ ಮಾರ್ಚ್ 31 ರವರೆಗೆ ಅವಕಾಶ ನೀಡಲಾಗಿತ್ತು. ಅದನ್ನು ತಿದ್ದುಪಡಿ ಮಾಡಿ 2022 ರ ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಬಹುತೇಕ ಅರ್ಜಿಗಳ ವಿಲೇವಾರಿಯಾಗಿದ್ದು, ಬಾಕಿ ಉಳಿದವರು ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಸಚಿವರು ತಿಳಿಸಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)


EPF India: ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ?; SMS ಮೂಲಕ ತಿಳಿಯಲು ಹೀಗೆ ಮಾಡಿ

 

ಎಂಪ್ಲಾಯಿ​​​ ಪ್ರಾವಿಡೆಂಟ್ ಫಂಡ್(PF). ಉದ್ಯೋಗಿಗಳಿಗೆ ನಿವೃತ್ತಿ ನಂತರ ತಮ್ಮ ಜೀವನಕ್ಕೆ ಸಿಗುವಂತಹ ಉತ್ತಮ ಯೋಜನೆ. ಅನೇಕರಿಗೆ ತಮ್ಮ ಪಿಎಫ್ ಹಣ ಎಷ್ಟು ಹೂಡಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಅದಕ್ಕಾಗಿಯೆ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ತಕ್ಷಣವೇ ಪಿಎಫ್ ಬ್ಯಾಲೆನ್ಸ್​​​ ಪರಿಶೀಲಿಸಲು ಸುಲಭ ಕ್ರಮಗಳನ್ನು ಜಾರಿಗೆ ತಂದಿದೆ.
ಯುಎಎನ್ ಮೂಲಕ ಆನ್​​​ಲೈನ್​ನಲ್ಲಿ ಪಿಎಫ್​​ ಹಣ ಪರಿಶೀಲನೆ: ಯುಎಎನ್ ಪೋರ್ಟಲ್​ ಲಾಗಿನ್ ಆಗುವ ಮೂಲಕ ನೌಕರರು ಪಿಎಫ್​​ ಕೊಡುಗೆ ಹಾಗೂ ಸಂಗ್ರಹವಾದ ಹಣದ ಸಂಪೂರ್ಣ ವಿವರವನ್ನು ಪಾಸ್​​ಬುಕ್ ಮೂಲಕ ವೀಕ್ಷಿಸಬಹುದು. ಈ ಇಂಟರ್ಫೇಸ್ ಬಳಸಿ ಚಂದಾದಾರರು ಯುಎಎನ್ ಕಾರ್ಡ್​​ ಕೂಡ ಡೌನ್​​ಲೋಡ್​​ ಮಾಡಬಹುದು. ಎಸ್​​​​ಎಂಎಸ್​​ ಮೂಲಕ: ನಿಮ್ಮ ಪಿಎಫ್​​ ಹಣ ಎಷ್ಟು ಇವೆ ಎಂದು ಪರಿಶೀಲಿಸಲು ಎಸ್​​ಎಂಎಸ್​​ ಸುಲಭ ಉಪಾಯ. ನೀವು ಮಾಡಬೇಕಾಗಿರುವುದು ಇಷ್ಟೆ. 7738299899 ನಂಬರ್​​ಗೆ ಮೆಸೇಜ್ ಮಾಡಬೇಕು. EPFOHO UAN ENG ಎಂದು ಟೈಪ್ ಮಾಡಿ ನಿಮ್ಮ ಪಿಎಫ್​​​​ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್​​ನಿಂದ 7738299899 ನಂಬರ್​​ಗೆ ಸಂದೇಶ ರವಾನಿಸಿ. ಒಂದು ನಿಮಿಷದ ಒಳಗೆ ನಿಮ್ಮ ಪಿಎಫ್​​ ಹಣದ ಮಾಹಿತಿ ದೊರೆಯುತ್ತದೆ. ಇಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಎಸ್​​ಎಂಎಸ್​​​ ಅನ್ನೂ ಪಡೆಯಬಹುದಾಗಿದೆ. ಉದಾಹರಣೆಗೆ ಕನ್ನಡ ಭಾಷೆಯಲ್ಲಿ ಎಸ್​​​ಎಂಎಸ್​​ ಬೇಕು ಎಂದಾದರೆ EPFOHO UAN KAN ಎಂದು ಟೈಪ್ ಮಾಡಿ 7738299899 ನಂಬರ್​​ಗೆ ಸೆಂಡ್ ಮಾಡಿ. ಇನ್ನೊಂದು ಪ್ರಮುಖ ವಿಚಾರ ಎಂದರೆ ಎಎನ್​​ ಸಕ್ರಿಯಗೊಳಿಸಿರುವ ಉದ್ಯೋಗಿಗಳು ಮಾತ್ರ ಈ ಸೇವೆಯನ್ನು ಪಡೆಯಬಹುದು.

ಮಿಸ್ಟ್​​ ಕಾಲ್​​​​ ಮೂಲಕ: ಮಿಸ್ಟ್​​ ಕಾಲ್​​ ಮೂಲಕವು ನಿಮ್ಮ ಪಿಎಫ್​​​ ಹಣದ ಸಂಪೂರ್ಣ ಮಾಹಿತಿ ಪಡೆಯಬಹುದು. ನಿಮ್ಮ ರಿಜಿಸ್ಟರ್​​ ಮೊಬೈಲ್​​ ನಂಬರ್​​ನಿಂದ 01122901406 ನಂಬರ್​ಗೆ ಮಿಸ್ಡ್​​ ಕಾಲ್​​ ಕೊಟ್ಟರೆ ಸಾಕು. ಕ್ಷಣಮಾರ್ಧದಲ್ಲಿ ನಿಮ್ಮ ಪಿಎಫ್​​ ಹಣವೆಷ್ಟಿದೆ ಎಂದು ತಿಳಿಯುತ್ತದೆ. ಯುಎಎನ್ ಸಕ್ರಿಯಗೊಳಿಸಿದ ಚಂದಾದಾರರು ಮಾತ್ರ ಈ ಸೇವೆಯನ್ನು ಪಡೆಯಬಹುದು.
ಆಯಪ್​​ ಮೂಲಕ: ನಿಮ್ಮಲ್ಲಿ ಸ್ಮಾರ್ಟ್​​ಫೋನ್​​ ಇದ್ದರೆ ಆಯಪ್​​ ಒಂದನ್ನು ಡೌನ್​​ಲೋಡ್ ಮಾಡಿಕೊಂಡು ಪಿಎಫ್​​ ಹಣದ ಮಾಹಿತಿ ಪಡೆಯಬಹುದು. ಸರ್ಕಾರ ಕಳೆದ ವರ್ಷ ಬಿಡುಗಡೆ ಮಾಡಿರುವ EPF ಮೊಬೈಲ್​​ ಆಯಪ್​​​ನಲ್ಲಿ ಪರಿಶೀಲಿಸಬಹುದಾಗಿದೆ. ಇದಕ್ಕೂ ಯುಎಎನ್ ಹಾಗೂ ನೊಂದಾಯಿತ ಮೊಬೈಲ್ ಸಂಖ್ಯೆ ಮುಖ್ಯ.
(ಮಾಹಿತಿ ಕೃಪೆ News18 ಕನ್ನಡ )

SBI ಗ್ರಾಹಕರಿಗೆ ಮಹತ್ವದ ಮಾಹಿತಿ : ಚೆಕ್ ಬುಕ್, ಎಟಿಎಮ್ ಹಣ ಡ್ರಾ ಸೇರಿದಂತೆ ಬದಲಾಗಿದೆ ಈ ಎಲ್ಲಾ ನಿಯಮಗಳು

 


ಡಿಜಿಟಲ್ ಡೆಸ್ಕ್ : ಭಾರತದ ಉನ್ನತ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ತನ್ನ ಎಟಿಎಂಗಳು ಮತ್ತು ಬ್ಯಾಂಕ್ ಶಾಖೆಗಳಿಂದ ನಗದು ಹಿಂಪಡೆಯುವಿಕೆಯ ನಿಯಮಗಳು ಮತ್ತು ಶುಲ್ಕಗಳನ್ನು ಬದಲಾಯಿಸಲು ಸಜ್ಜಾಗಿದೆ. ಹೊಸ ನಿಯಮವು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು SBI ಈ ಹಿಂದೆ ತಿಳಿಸಿದ್ದಾರೆ. ಹೊಸ ಶುಲ್ಕಗಳು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್ ಬಿಡಿ) ಖಾತೆದಾರರಿಗೆ ಅನ್ವಯವಾಗುತ್ತವೆ. ಎಟಿಎಂ ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕಗಳಿಂದ ಹಿಡಿದು ಚೆಕ್ ಬುಕ್ ಗಳು ಮತ್ತು ಹಣಕಾಸು-ಅಲ್ಲದ ಟ್ಯಾನ್ ಕ್ರಿಯೆಗಳವರೆಗೆ, ಹೊಸ ನಿಬಂಧನೆಗಳ ಬಗ್ಗೆ ತಿಳಿಯಿರಿ…
SBI ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆ ಎಂದರೇನು?
ಎಸ್ ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಯು ಸಮಾಜದ ಬಡ ವರ್ಗಗಳಿಗೆ ಯಾವುದೇ ಶುಲ್ಕ ಗಳು ಅಥವಾ ಶುಲ್ಕಗಳ ಹೊರೆಯಿಲ್ಲದೆ ಉಳಿತಾಯವನ್ನು ಪ್ರಾರಂಭಿಸಲು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ಎಂದು ಕರೆಯಲ್ಪಡುವ, ಬಿಎಸ್ ಬಿಡಿ ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್ ಅಥವಾ ಗರಿಷ್ಠ ಬ್ಯಾಲೆನ್ಸ್ ಅವಶ್ಯಕತೆ ಇಲ್ಲ. ಬಿಎಸ್ ಬಿಡಿ ಖಾತೆದಾರರಿಗೆ ಎಸ್ ಬಿಐ ಮೂಲ ರೂಪೇ ಎಟಿಎಂ ಮತ್ತು ಡೆಬಿಟ್ ಕಾರ್ಡ್ ನೀಡುತ್ತದೆ. ಮಾನ್ಯ ಕೆವೈಸಿ ದಾಖಲೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು, ಎಸ್ ಬಿಐನಲ್ಲಿ ಬಿಬಿಎಸ್ ಡಿ ಖಾತೆಯನ್ನು ತೆರೆಯಬಹುದು
SBI ಎಟಿಎಂಗಳಲ್ಲಿ ನಗದು ಹಿಂಪಡೆಯುವ ನಿಯಮಗಳು:
ಬಿಎಸ್ ಬಿಡಿ ಖಾತೆದಾರರಿಗೆ, ಪ್ರತಿ ತಿಂಗಳು ಎಟಿಎಂಗಳು ಮತ್ತು ಬ್ಯಾಂಕ್ ಶಾಖೆಗಳು ಸೇರಿದಂತೆ ನಾಲ್ಕು ಉಚಿತ ನಗದು ಹಿಂಪಡೆಯುವಿಕೆಗಳು ಲಭ್ಯವಿವೆ. ಉಚಿತ ಮಿತಿಯನ್ನು ಮೀರಿದ ಪ್ರತಿ ವಹಿವಾಟಿಗೆ ಬ್ಯಾಂಕ್ ೧೫ ರೂ. ಮತ್ತು ಜಿಎಸ್ಟಿ ಶುಲ್ಕವನ್ನು ವಿಧಿಸುತ್ತದೆ. ನಗದು ಹಿಂಪಡೆಯುವಿಕೆಯ ಶುಲ್ಕಗಳು ಗೃಹ ಶಾಖೆ ಮತ್ತು ಎಟಿಎಂಗಳು ಮತ್ತು ಎಸ್ ಬಿಐ ಅಲ್ಲದ ಎಟಿಎಂಗಳಲ್ಲಿ ಅನ್ವಯವಾಗುತ್ತವೆ.
ಚೆಕ್ ಬುಕ್ ಶುಲ್ಕಗಳು:
ಬಿಬಿಎಸ್ ಡಿ ಖಾತೆದಾರರಿಗೆ ಬ್ಯಾಂಕ್ ಒಂದು ಆರ್ಥಿಕ ವರ್ಷದಲ್ಲಿ 10 ಚೆಕ್ ಲೀವ್ ಗಳನ್ನು ಒದಗಿಸಲಿದೆ. ಅದರ ನಂತರ, ಚೆಕ್ ಗಳನ್ನು ಒದಗಿಸಲು ಎಸ್ ಬಿಐ ಸೆರ್ಟೈಲ್ ಮೊತ್ತವನ್ನು ವಿಧಿಸುತ್ತದೆ.
1) 10 ಚೆಕ್ ಲೀವ್ ಗಳಿಗೆ, ಬ್ಯಾಂಕ್ ರೂ 40 ಮತ್ತು ಜಿಎಸ್ಟಿ ಯನ್ನು ವಿಧಿಸುತ್ತದೆ.
2) 25 ಚೆಕ್ ಲೀವ್ ಗಳಿಗೆ, ಬ್ಯಾಂಕ್ ರೂ 75 ಮತ್ತು ಜಿಎಸ್ಟಿ ಯನ್ನು ವಿಧಿಸುತ್ತದೆ.
3) ತುರ್ತು ಚೆಕ್ ಬುಕ್ ಗೆ ರೂ 50 ಮತ್ತು 10 ಲೀವ್ , ಜಿಎಸ್ಟಿ ವೆಚ್ಚವಾಗಲಿದೆ.
ಆದಾಗ್ಯೂ, ಹಿರಿಯ ನಾಗರಿಕರಿಗೆ ಚೆಕ್ ಪುಸ್ತಕದ ಮೇಲೆ ಈ ಹೊಸ ಸೇವಾ ಶುಲ್ಕಗಳಿಂದ ವಿನಾಯಿತಿ ನೀಡಲಾಗುವುದು.
ಮನೆ ಮತ್ತು ಗೃಹೇತರ ಶಾಖೆಗಳಲ್ಲಿ ಬಿಬಿಎಸ್ ಡಿ ಖಾತೆದಾರರು ಹಣಕಾಸುಯೇತರ ವಹಿವಾಟುಗಳಿಗೆ ಬ್ಯಾಂಕ್ ಯಾವುದೇ ಶುಲ್ಕಗಳನ್ನು ವಿಧಿಸುವುದಿಲ್ಲ. ಬಿಎಸ್ ಬಿಡಿ ಖಾತೆದಾರರಿಗೆ ಶಾಖೆ ಮತ್ತು ಪರ್ಯಾಯ ಚಾನೆಲ್ ಗಳಲ್ಲಿ ವರ್ಗಾವಣೆ ವಹಿವಾಟುಗಳು ಉಚಿತವಾಗಿರುತ್ತವೆ ಎಂದು SBI ತಿಳಿಸಿದ್ದಾರೆ.
ಇತರ ಶಾಖೆಗಳಲ್ಲಿ ಗ್ರಾಹಕರು ನಗದು ಹಿಂಪಡೆಯುವ ಮಿತಿಯನ್ನು ಬ್ಯಾಂಕ್ ಹೆಚ್ಚಿಸಿದೆ. 'ಈ ಸಾಂಕ್ರಾಮಿಕ ರೋಗದಲ್ಲಿ ನಮ್ಮ ಗ್ರಾಹಕರಿಗೆ ಬೆಂಬಲ ನೀಡಲು, ಎಸ್ ಬಿಐ ಚೆಕ್ ಮತ್ತು ವಿತ್ ಡ್ರಾ ಫಾರ್ಮ್ ಮೂಲಕ ಇತರ ಬ್ರಾಂಚ್ ಗಳಲ್ಲಿ ನಗದು ಹಿಂಪಡೆಯುವ ಮಿತಿಗಳನ್ನು ಹೆಚ್ಚಿಸಿದೆ' ಎಂದು ಬ್ಯಾಂಕ್ ಟ್ವಿಟರ್ ನಲ್ಲಿ ತಿಳಿಸಿದೆ.
ಎಸ್ ಬಿಐ ಇತ್ತೀಚೆಗೆ ಚೆಕ್ ಬಳಸಿ ನಗದು ಹಿಂಪಡೆಯುವಿಕೆಯನ್ನು ದಿನಕ್ಕೆ ₹೧ ಲಕ್ಷಕ್ಕೆ ಹೆಚ್ಚಿಸಿದೆ. ಉಳಿತಾಯ ಬ್ಯಾಂಕ್ ಪಾಸ್ ಬುಕ್ ಜೊತೆಗೆ ವಿತ್ ಡ್ರಾ ಫಾರ್ಮ್ ಬಳಸಿ ನಗದು ಹಿಂಪಡೆಯುವಿಕೆಯನ್ನು ದಿನಕ್ಕೆ ₹25,000 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಮೂರನೇ ಪಕ್ಷದ ನಗದು ಹಿಂಪಡೆಯುವಿಕೆಯನ್ನು ತಿಂಗಳಿಗೆ ₹50,000 ಕ್ಕೆ ನಿಗದಿಪಡಿಸಲಾಗಿದೆ (ಚೆಕ್ ಬಳಸಿ ಮಾತ್ರ).
'ಹಿಂಪಡೆಯುವ ನಮೂನೆಗಳ ಮೂಲಕ ಥರ್ಡ್ ಪಾರ್ಟಿ ಗೆ ಯಾವುದೇ ನಗದು ಪಾವತಿಗಳನ್ನು ಅನುಮತಿಸಲಾಗುವುದಿಲ್ಲ,' ಎಂದು ಬ್ಯಾಂಕ್ ಹೇಳಿದೆ. ಪರಿಷ್ಕೃತ ಮಿತಿಗಳು ಸೆಪ್ಟೆಂಬರ್ ೩೦ ರವರೆಗೆ ಮಾನ್ಯವಾಗಿರುತ್ತವೆ.
(ಮಾಹಿತಿ ಕೃಪೆ Kannada News Now )

ಕೊರೋನಾದಿಂದ ಮೃತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕುಟುಂಬಸ್ಥರೇ ಗಮನಿಸಿ : ರಾಜ್ಯ ಸರ್ಕಾರದಿಂದ ಈ ಎಲ್ಲಾ ಆರ್ಥಿಕ ನೆರವು ಲಭ್ಯ.!

 

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೊದಲ ಹಾಗೂ 2ನೇ ಅಲೆಯ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವಂತ ಅನೇಕ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸೋಂಕಿಗೆ ಬಲಿಯಾಗಿದ್ದಾರೆ. ಹೀಗೆ ಕರ್ತವ್ಯದಲ್ಲಿ ಇದ್ದಾಗಲೇ ಮೃತಪಟ್ಟಂತ ಅಧಿಕಾರಿ, ಸಿಬ್ಬಂದಿಗಳ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ಯಾವೆಲ್ಲಾ ಆರ್ಥಿಕ ಸಹಾಯ ದೊರೆಯಲಿದೆ ಎನ್ನುವ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಈ ಕುರಿತಂತೆ ರಾಜ್ಯದ ಡಿಜಿ ಮತ್ತು ಐಡಿಪಿ ಪ್ರವೀಣ್ ಸೂದ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದು, ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಕುಟುಂಬಸ್ಥರ ಬಗ್ಗೆ ಸರ್ಕಾರದ ಹೆಮ್ಮೆ ಪಡುತ್ತಿದೆ. ಸೋಂಕಿನ ಈ ಸಂದರ್ಭದಲ್ಲೂ ಹಗಲಿರುಳು ದುಡಿಯುತ್ತಿದ್ದಾರೆ. ಇದರ ಮಧ್ಯೆ ಸೋಂಕಿನಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಾವನ್ನಪ್ಪಿದ್ದು ದುಖದ ಸಂಗತಿಯಾಗಿದೆ ಎಂದಿದ್ದಾರೆ.
ಹೀಗೆ ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮೃತಪಟ್ಟಂತ ಅಧಿಕಾರಿ, ಸಿಬ್ಬಂದಿಗಳ ಕುಟುಂಬಸ್ಥರೊಂದಿಗೆ ಪೊಲೀಸ್ ಇಲಾಖೆ, ಸರ್ಕಾರವಿದೆ. ಮೃತ ಕುಟುಂಬಸ್ಥರಿಗೆ ಈ ಕೆಳಗಿನಂತೆ ಆರ್ಥಿಕ ಸಹಾಯವನ್ನು ಸರ್ಕಾರದಿಂದ ನೀಡಲಿದ್ದು, ಉಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ
(ಮಾಹಿತಿ ಕೃಪೆ Kannada News Now )

ಸಿಡಿಲು ಬಡಿದು ಒಂದೇ ದಿನ 20 ಮಂದಿ ಸಾವು! ಮೃತರ ಕಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ

 


ಕೋಲ್ಕತ್ತ: ಒಮ್ಮೊಮ್ಮೆ ಗುಡುಗು-ಸಿಡಿಲು, ಧಾರಾಕಾರ ಮಳೆ, ಗಾಳಿ ಬಂದ ವೇಳೆ ಸಾವು-ನೋವು ಕೂಡ ಸಂಭವಿಸುತ್ತೆ. ಸೋಮವಾರ ಒಂದೇ ದಿನ ಸಿಡಿಲು ಬಡಿದು 20 ಮಂದಿ ಸತ್ತಿದ್ದಾರೆ! ಇಂತಹ ಘಟನೆ ಪಶ್ಚಿಮ ಬಂಗಳಾದಲ್ಲಿ ಸಂಭವಿಸಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್​, ಹೂಗ್ಲಿ, ಪುರ್ಬಾ ಮೆದಿನಿಪುರ ಸೇರಿ ಮೂರು ಜಿಲ್ಲೆಗಳಲ್ಲಿ ಸೋಮವಾರ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಮುರ್ಷಿದಾಬಾದ್​ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ತಲಾ 9 ಜನರು ಸಿಡಿಲಿಗೆ ಬಲಿಯಾದರೆ, ಪುರ್ಬಾ ಮೆದಿನಿಪುರ ಜಿಲ್ಲೆಯಲ್ಲಿ ಇಬ್ಬರು ಸತ್ತಿದ್ದಾರೆ ಎಂದು ಪಶ್ಚೊಮ ಬಂಗಾಳದ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುರ್ಷಿದಾಬಾದ್​ನಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಡಿಲು ಬಡಿದು ಮೃತಪಟ್ಟವರ ಕುಟಂಬಸ್ಥರಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ.
(ಮಾಹಿತಿ ಕೃಪೆ ವಿಜಯವಾಣಿ )

ನನ್ನ ವರ್ಗಾವಣೆ ಹಿಂದೆ ಭೂಮಾಫಿಯಾ ಪಿತೂರಿ: ಸರ್ಕಾರಿ ಜಮೀನು, ಕೆರೆಗಳ ರಕ್ಷಣೆ ನನ್ನ ಮುಖ್ಯ ಗುರಿ; ರೋಹಿಣಿ ಸಿಂಧೂರಿ

 


ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಜೊತೆಗಿನ ಜಟಾಪಟಿ ನಂತರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದ್ದು, ಇದರ ಹಿಂದೆ ಕಣ್ಣಿಗೆ ಕಾಣುವುದಕ್ಕಿಂತ ಬಹುದೊಡ್ಡ ಪಿತೂರಿ ನಡೆದಿದೆ ಎಂಬ ಸುಳಿವು ನೀಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರೋಹಿಣಿ ಸಿಂಧೂರಿ, ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಪಿತೂರಿಯಿದೆ ಎಂದು ಹೇಳಿದ್ದಾರೆ. ಎಲ್ಲಾದಕ್ಕೂ ಜನರು ಸಾಕ್ಷಿಯಾಗಿದ್ದಾರೆ, ಎಲ್ಲಾ ಕಡೆ ಇದು ಸಾಮಾನ್ಯವಾಗಿದೆ. ಏನೇನು ನಡೆದಿದೆ ಎಂಬುದನ್ನು ಅಧಿಕಾರಿಗಳು ಎಲ್ಲವನ್ನು ಹೇಳಲು ಸಾಧ್ಯವಿಲ್ಲ, ಸರ್ಕಾರಿ ಭೂಮಿ ಮತ್ತು ಕೆರೆಗಳನ್ನು ರಕ್ಷಿಸುವುದಷ್ಟೇ ನನ್ನ ಗುರಿ ಎಂದು ಹೇಳಿದ್ದಾರೆ.
ಅಯ್ಯಜನಹುಂಡಿ ಮತ್ತು ಕೀರ್ಗಳ್ಳಿ ಕೆರೆಗಳ ಸುತ್ತಲಿನ ಒತ್ತುವರಿಯನ್ನು ತೆರವುಗೊಳಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಕುರುಬರಹಳ್ಳಿಯಲ್ಲಿ ಸರ್ವೆ ಸಂಖ್ಯೆಯಲ್ಲಿ ಕೆಲವು ಸಮಸ್ಯೆಗಳಿದ್ದು ಅದು ಸುಪ್ರೀಂ ಕೋರ್ಟ್‌ಗೆ ಹೋಯಿತು. ಕೋರ್ಟ್ ನಲ್ಲಿ ಪ್ರಕರಣವನ್ನು ಚೆನ್ನಾಗಿ ಸಮರ್ಥಿಸಿಕೊಂಡಿದ್ದೇವೆ ಎಂದು ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆಯಾಗಿರುವ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ರೋಹಿಣಿ ಸಿಂಧೂರಿ ಭೂ ಮಾಫಿಯಾವನ್ನು ವಿರುದ್ಧ ಕ್ರಮ ಕೈಗೊಳ್ಳಲು ಎಂಟು ತಿಂಗಳು ಸಮಯ ತೆಗೆದುಕೊಂಡಿದ್ದಾರೆ, ಈ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಹೀಗೆ ಯಾವ ಜಿಲ್ಲೆಯಲ್ಲಿ, ಸಂಸ್ಥೆಯಲ್ಲಿ ನಡೆದರೂ ಸಂಸ್ಥೆ ನಡೆಸುವುದು ಕಷ್ಟವಾಗುತ್ತದೆ, ಆದರೆ ನನಗೆ ಶಿಲ್ಪಾ ನಾಗ್ ಅವರ ಹತಾಶೆ, ಅಭದ್ರತೆ ಬಗ್ಗೆ ಅನುಕಂಪವಿದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ. ಈಗ ಜನರಿಗೆ ಬೇಕಿರುವುದು ಕೋವಿಡ್ ನಿರ್ವಹಣೆ, ಅದು ಆಗಲಿ ಎಂದು ಆಶಿಸುತ್ತೇನೆ ಎಂದರು.
ಮೈಸೂರಿನಲ್ಲಿ ರಾಜಕಾರಣಿಗಳನ್ನು ಒಳಗೊಂಡ ಭೂ ಅಕ್ರಮಗಳ ಬಗ್ಗೆ ನೀಡಿದ ದೂರುಗಳ ಬಗ್ಗೆ ತನಿಖೆ ತ್ವರಿತಗೊಳಿಸಲು ಡಿಸಿಗೆ ಒತ್ತಾಯಿಸಿದ್ದೇನೆ ಎಂದು ಆರ್‌ಟಿಐ ಕಾರ್ಯಕರ್ತ ಎಂ.ಗಂಗರಾಜು ಹೇಳಿದ್ದಾರೆ.
(ಮಾಹಿತಿ ಕೃಪೆ ಕನ್ನಡ ಪ್ರಭ )

ರಾಜ್ಯದ ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್ : ಇಂದಿನಿಂದ ಲಾಕ್ ಡೌನ್ ವಿಶೇಷ ಆರ್ಥಿಕ ಪ್ಯಾಕೇಜ್ ನಿಮ್ಮ ಖಾತೆಗೆ ಜಮೆ

 


ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೂನ್.14ರವರೆಗೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿದ್ದಲ್ಲದೇ, 500 ಕೋಟಿ ವಿಶೇಷ 2ನೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದರಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೂ 2 ಸಾವಿರ ರೂಪಾಯಿ ಆರ್ಥಿಕ ಪರಿಹಾರವನ್ನು ಘೋಷಿಸಿದ್ದರು. ಇಂತಹ ವಿಶೇಷ ಆರ್ಥಿಕ ಪ್ಯಾಕೇಜ್ ಹಣ, ಬೀದಿ ಬದಿಯ ವ್ಯಾಪಾರಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಇಂದಿನಿಂದ ಜಮೆ ಆಗಲಿದೆ.
ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ, ಬೀದಿ ಬದಿಯ ವ್ಯಾಪಾರಿಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಹಣ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ 2.20 ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಡಿಬಿಟಿ ಮೂಲಕ, ನೇರವಾಗಿ ಅವರ ಬ್ಯಾಂಕ್ ಖಾತೆಗೆ ಇಂದಿನಿಂದ ಜಮೆಗೊಳ್ಳಲಿದೆ.
ಅಂದಹಾಗೇ, ಸಿಎಂ ಯಡಿಯೂರಪ್ಪ ಬೀದಿ ಬದಿಯ ವ್ಯಾಪಾರಿಗಳಿಗೂ ವಿಶೇಷ ಆರ್ಥಿಕ ಪ್ಯಾಕೇಜ್ ಆಗಿ 2 ಸಾವಿರ ನೀಡೋದಾಗಿ ಘೋಷಣೆಯನ್ನು ಮಾಡಿದ್ದರು. ಇದರಿಂದಾಗಿ 2.20 ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಸಹಾಯ ಆಗಲಿದೆ. ಇದಕ್ಕಾಗಿ 44 ಕೋಟಿ ಹಣ ವ್ಯಯವಾಗಲಿದೆ ಎಂದಿದ್ದರು. ಇಂತಹ ಹಣವನ್ನು ಬೀದಿ ಬದಿಯ ವ್ಯಾಪಾರಿಗಳ ಖಾತೆಗೆ ಡಿಬಿಟಿ ಮೂಲಕ, ಇಂದಿನಿಂದ ಜಮೆ ಮಾಡೋದಕ್ಕೆ ಶುರುವಾಗಲಿದೆ. ಈ ಮೂಲಕ ಸಿಹಿಸುದ್ದಿ ದೊರೆಯಲಿದೆ.
(ಮಾಹಿತಿ ಕೃಪೆ Kannada News Now )

ಶಿವಮೊಗ್ಗ: ಕೋವಿಡ್‌ನಿಂದ ಪಿಎಸ್‌ಐ ಕೆ.ಬಿ.ರಮೇಶ್ ಸಾವು

 


ಶಿವಮೊಗ್ಗ: ಕೋವಿಡ್‌ನಿಂದ ಬಳಲುತ್ತಿದ್ದ ಭದ್ರಾವತಿ ಸಂಚಾರ ಠಾಣೆ ಪಿಎಸ್‌ಐ ಕೆ.ಬಿ.ರಮೇಶ್ ಶುಕ್ರವಾರ ನಿಧನರಾದರು.
ಕರ್ತವ್ಯದಲ್ಲಿದ್ದಾಗಲೇ ಮೇ 14ರಂದು ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಾಗರ ತಾಲ್ಲೂಕು ಬಾಳೆಗುಂಡಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
(ಮಾಹಿತಿ ಕೃಪೆ ಪ್ರಜಾವಾಣಿ )

ಪ್ರಕೃತಿಪ್ರಿಯರ ಹುಚ್ಚು ಹಿಡಿಸುತ್ತಿದೆ ಅರುಣಾಚಲ ಸೌಂದರ್ಯ ಸಾರುವ ಫೋಟೋ

 

ಹಿಮಾಲಯದ ಪೂರ್ವದ ತಪ್ಪಲಿನಲ್ಲಿರುವ ಅರುಣಾಚಲ ಪ್ರದೇಶ ಯಾವಾಗಲೂ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ.

ಇದೀಗ ರಾಜ್ಯದ ಉಪಮುಖ್ಯಮಂತ್ರಿ ಚೌನಾ ಮೇಯ್ನ್‌ ಅಲ್ಲಿನ ಅಪ್ಪರ್‌ ಸಿಯಾಂಗ್‌ ಜಿಲ್ಲೆಯ ಸೌಂದರ್ಯ ಸಾರುವ ಅನೇಕ ಚಿತ್ರಗಳನ್ನು ಶೇರ್‌ ಮಾಡಿದ್ದು, ನೆಟ್ಟಿಗರಿಗೆ ಇವು ಹುಚ್ಚು ಹಿಡಿಸಿವೆ.

"ಕಣ್ಮನ ಸೆಳೆಯುವ ಈ ಚಿತ್ರ ಕಾಶ್ಮೀರದಲ್ಲೆಲ್ಲೋ ಇಲ್ಲ ಆದರೆ ಇದು ಅರುಣಾಚಲ ಪ್ರದೇಶದ ಅಪ್ಪರ್‌ ಸಿಯಾಂಗ್. ಎಕೋ ಡಂಬಿಂಗ್ ಎಂದು ಸ್ಥಳೀಯರಿಂದ ಕರೆಯಲ್ಪಡುವ ಈ ಸ್ಥಳ ತಲುಪಲು, ಚೀನಾ ಗಡಿ ಬಳಿ ಇರುವ ರಸ್ತೆಯೊಂದರಿಂದ ಟ್ರೆಕ್ಕಿಂಗ್ ಮಾಡಿಕೊಂಡು ಸಾಗಿದಲ್ಲಿ 3-4 ದಿನಗಳು ಬೇಕು" ಎಂದು ಮೇಯ್ನ್‌ ಟ್ವಿಟ್ಟರ್‌ನ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

This picturesque place is not somewhere in Kashmir but in Upper Siang District of Arunachal Pradesh. Called Eko Dumbing by the locals, it takes 3-4 days trekking from the last motorable road near China border. #dekhoapnapradesh
Source: FB post by #ArunachalWildlifeExplorative pic.twitter.com/jqNTK7Z2dl

- Chowna Mein (@ChownaMeinBJP)

ImageImageImage

(ಮಾಹಿತಿ ಕೃಪೆ ಕನ್ನಡದುನಿಯಾ )