WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, June 6, 2020

ಸವದತ್ತಿ ಯಲ್ಲಮ್ಮ ದೇಗುಲ : ಜೂ. 30 ರವರೆಗೆ ಸಾರ್ವಜನಿಕ ಪ್ರವೇಶ ನಿಷೇಧ ಮುಂದುವರಿಕೆ

ಬೆಳಗಾವಿ : ರಾಜ್ಯ ಸರ್ಕಾರವು ಜೂನ್ 8 ರಿಂದ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ ಉತ್ತರ ಕರ್ನಾಟಕದ ಬೆಳಗಾವಿಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸದ್ಯಕ್ಕೆ ಭಕ್ತರಿಗೆ ಪ್ರವೇಶವಿಲ್ಲ .
ಹೌದು, ನೆರೆಯ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಸವದತ್ತಿಯ ರೇಣುಕಾ ಯಲ್ಲಮ್ಮ, ಜೋಗಳಭಾವಿ ಸತ್ತೆಮ್ಮ ಹಾಗೂ ಚಿಂಚಲಿ ಮಾಯಕ್ಕ ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶವನ್ನು ಈ ತಿಂಗಳ ಕೊನೆಯವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್ ಬಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ದೇವಸ್ಥಾನಕ್ಕೆ ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ದೃಷ್ಟಿಯಿಂದ ದೇವಸ್ಥಾನ ಓಪನ್ ಮಾಡದಿರಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
(ಮಾಹಿತಿ Kannada News Now ಕೃಪೆ )

ಮಳೆ ಮುನ್ಸೂಚನೆ ನೀಡುವ ಮೇಘ ಸಂದೇಶ ಮೊಬೈಲ್ ಆಯಪ್: ಲೋಕಾರ್ಪಣೆ ಮಾಡಿದ ಸಚಿವ ಆರ್. ಅಶೋಕ




ಬೆಂಗಳೂರು: ಕಂದಾಯ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ನಗರ ಪ್ರದೇಶ ಪ್ರವಾಹ ನಿರ್ವಹಣೆ ಸನ್ನದ್ಧತೆ ಕಾರ್ಯಾಗಾರವನ್ನು ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟಿಸಿ, ಬೆಂಗಳೂರು ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು ಮೇಘ ಸಂದೇಶ ಎಂಬ ಮೊಬೈಲ್‌ ಆಪ್‌ ಹಾಗೂ ವೆಬ್‌ಸೈಟನ್ನು ಲೋಕಾರ್ಪಣೆ ಮಾಡಿದರು. ಯಲಹಂಕದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್. ಅಶೋಕ, ಇತ್ತೀಚಿನ... 
(ಮಾಹಿತಿ ಕನ್ನಡ ಪ್ರಭ ಕೃಪೆ ) 

ಕಣ್ಣು ಅಥವಾ ಕಿವಿಗಳ ಮೂಲಕ ಕೋವಿಡ್-19 ತಗಲುವುದೇ?

ವಾಷಿಂಗ್ಟನ್: ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಕಣ್ಣುಗಳು ಅಥವಾ ಕಿವಿಗಳ ಮೂಲಕ ತಗಲುವುದೇ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ. ಮಾರಕ ಸೋಂಕು ಕಣ್ಣುಗಳಿಂದ ತಗಲುವ ಸಾಧ್ಯತೆ ಇದೆ. ಆದರೆ, ಕಿವಿಗಳ ಮೂಲಕ ಬರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಸೋಂಕಿರುವ ವ್ಯಕ್ತಿಗಳು ಕೆಮ್ಮಿದಾಗ ಅಥವಾ ಸೀನುವಾಗ ಸೋಂಕು ಕಣ್ಣಿನ ಮೂಲಕ ತಗುಲುವ ಅಪಾಯವಿರುತ್ತದೆ. ವೈರಸ್ ಇರುವ ಕೈಗಳಿಂದ ಕಣ್ಣುಗಳನ್ನು ಉಜ್ಜಿದಾಗಲೂ ಸೋಂಕು ಬರಬಹುದು, ಸೋಂಕಿತ ವ್ಯಕ್ತಿಯ ಕಣ್ಣೀರಿನಿಂದಲೂ ವೈರಸ್... 
(ಮಾಹಿತಿ ಕನ್ನಡ ಪ್ರಭ ಕೃಪೆ )  

ಕೊರೊನಾ ವಾರಿಯರ್​ಗಳಿಗೆ ಆವಾಜ್ ಹಾಕಿದ ಅಜ್ಜಿ; ಕಕ್ಕಾಬಿಕ್ಕಿಯಾದ ಅಧಿಕಾರಿಗಳ ತೊಳಲಾಟ ಕೇಳುವವರಾರು?

ವಿಜಯಪುರ(ಜೂ. 06): ಕರೋನಾ ಪಾಸಿಟಿವ್ ಬಂದವರನ್ನು ಕರೆಯಲು ಬಂದ ಅಧಿಕಾರಿಗಳಿಗೆ ವೃದ್ಧೆಯೊಬ್ಬರು ಬಾಯಿಗೆ ಬಂದಂತೆ ಆವಾಜ್ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ನಡೆದಿದೆ. ವೃದ್ಧೆಯ ಆರ್ಭಟ ಕಂಡು ತಹಸೀಲ್ದಾರ ಎಂ. ಎನ್. ಬಳಿಗಾರ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.

ಮಹಾರಾಷ್ಟ್ರದಿಂದ ಬಂದವರಿಗೆ ವಿಜಯಪುರ ಜಿಲ್ಲಾಡಳಿತ ಈ ಮೊದಲು 14 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಿತ್ತು. ಬಳಿಕ ಸರಕಾರದ ನಿರ್ದೇಶನದಂತೆ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಅವರನ್ನು ಹೋಂ ಕ್ವಾರಂಟೈನ್​ಗೆ ಕಳುಹಿಸಿತ್ತು. ಆದರೆ, ವರದಿ ಬರುವ ಮುನ್ನವೇ ಇವರು ಹೋಂ ಕ್ವಾರಂಟೈನ್​ಗೆ ತೆರಳಿದ್ದರು. ಈಗ ಅವರ ವರದಿ ಬಂದಿದ್ದು, ಅವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಕರೆದೊಯ್ಯಲು ಅಧಿಕಾರಿಗಳು ತಾಂಡಾಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ತಾಂಡಾದಲ್ಲಿನ ಆ ವ್ಯಕ್ತಿಯ ಮನೆಗೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಅಜ್ಜಿ ಆವಾಜ್ ಹಾಕುತ್ತಲೇ ಹೊರಗೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ಅವರನ್ನು ಒಯ್ಯಿರಿ, ಎರಡು ತಿಂಗಳು ಬಿಡಬೇಡಿ, ಅವರಿಗೇನು ಊಟ ಹಾಕ್ತಿರೋ ಹಾಕಿ. ನಿಮಗ ಯಾವ ಸೂ... ಮಗಾ ಹೇಳ್ಯಾನೋ ಅವನನ್ನು ಕೊಲೆ ಮಾಡ್ತಿನಿ ನಾನು. ಅವನನ್ನ ಕೊಲೆ ಮಾಡಲಿಲ್ಲ ಅಂದ್ರ ನಮ್ಮ ಅಪ್ಪನಿಗೆ ನಾನು ಹುಟ್ಟಿಲ್ಲ ಎಂದು ತಿಳಕೋರಿ ಎಂದು ಅಜ್ಜಿ ಕೂಗಾಟ, ರಂಪಾಟ ನಡೆಸಿದ್ದಾಳೆ. ಬೆಂಗಳೂರು, ಮಂಗಳೂರಲ್ಲಿ 2 ಸಾವು; ರಾಜ್ಯದಲ್ಲಿ ಒಂದೇ ದಿನ 378 ಕೇಸ್; 5 ಸಾವಿರ ಗಡಿದಾಟಿದ ಒಟ್ಟು ಪ್ರಕರಣ

ನಮ್ಮ ತಲೆ ಮೇಲೆ ರೇವಸಿದ್ದೇಶ್ವರ ದೇವರಿದ್ದಾನೆ. ನಮಗೆ ಏನೂ ಆಗೋದಿಲ್ಲ. ನಮಗೆ ಸಾವು ಬರೋದಿಲ್ಲ. ಏನೂ ಆಗೋದಿಲ್ಲ. ಮಂದಿ ಮಾತು ಕೇಳಿ ನಮಗ ಒಯ್ಯಲು ಬಂದೀರಿ. ಬರಲಿ ಕೊರೋನಾ ನಮಗ ಬರಲಿ. ಅವರಿಗೇನಾದ್ರೂ ಆದ್ರೆ ನಿಮ್ಮನ್ನ ಕೊಲೆ ಮಾಡದೆ ಬಿಡೋದಿಲ್ಲ ಎಂದು ಅಧಿಕಾರಿಗಳಿಗೆ ಈ ವೃದ್ಧೆ ಎಚ್ಚರಿಕೆ ನೀಡಿದ್ದಾರೆ.

ಕೊನೆಗೂ ಹರಸಾಹಸ ಪಟ್ಟ ಅಧಿಕಾರಿಗಳು ಮನೆಯವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಕೊರೊನಾ ಪಾಸಿಟಿವ್ ರೋಗಿಗಳನ್ನು ತರಲು ಹೋಗುವ ಮತ್ತು ಆರೋಗ್ಯ ತಪಾಸಣೆಗೆ ಹೋಗುವ ಕೊರೊನಾ ವಾರಿಯರ್ಸ್​ಗೆ ಜನರ ಅಸಹಕಾರ ಮತ್ತು ಬೈಗುಳಗಳು ನೈತಿಕ ಸ್ಥೈರ್ಯವನ್ನು ಕುಂದಿಸುವಂತೆ ಮಾಡುತ್ತಿವೆ. ಆದರೂ, ಇವರು ಸ್ವಾಭಿಮಾನವನ್ನು ಬದಿಗೊತ್ತಿ ಕಾಯಕ ಮಾಡುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಗಲಿರುಳು ಶ್ರಮಿಸುತ್ತಿರುವ ಈ ಕೊರೊನಾ ವಾರಿಯರ್ಸ್​ಗೆ ಒಂದು ಸಲಾಂ ಹೇಳಲೇಬೇಕು.
(ಮಾಹಿತಿNews18 ಕನ್ನಡಕೃಪೆ )  

ತಂದೆಯ ನೆನಪಿನಲ್ಲಿ ಕೆಜಿಎಫ್ ದೊರೆ ಅಧೀರಾ..


 ಇಂದು ಬೆಳಗ್ಗೆ ಬಾಲಿವುಡ್ ನಟ ಸಂಜಯ್ ದತ್ ಅವರು ಅವರ ತಂದೆಯ 91 ನೇ ಜನ್ಮದಿನದ ವಿಶೇಷವಾಗಿ ತಮ್ಮ ದಿವಂಗತ ತಂದೆ ಸುನಿಲ್ ದತ್ ಅವರ ನೆನಪಿನಲ್ಲಿ ಬಾಲ್ಯದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಅಧಿರಾ. ಈ ಕಪ್ಪು ಮತ್ತು ಬಿಳಿ ಚಿತ್ರದಲ್ಲಿ ತಂದೆ-ಮಗನ ಜೋಡಿಯ ನಗು ಬಹಳ ಆಕರ್ಷಕವಾಗಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಸಂಜಯ್ ದತ್, "ನೀವು ಯಾವಾಗಲೂ ನನ್ನ ಶಕ್ತಿ ಮತ್ತು ಸಂತೋಷದ ಮೂಲವಾಗಿ ಇದ್ದೀರಿ. ಜನ್ಮದಿನದ ಶುಭಾಶಯಗಳು ಅಪ್ಪ! ❤ " ಎಂದು ಶೀರ್ಷಿಕೆ ನೀಡಿದ್ದಾರೆ. 
ಸಂಜಯ್ ದತ್ ಫೋಟೋ ಪೋಸ್ಟ್ ಮಾಡಿದ ಕೂಡಲೇ, ಅವರ ಪತ್ನಿ ಮಾನ್ಯತಾ ಮತ್ತು ಮಗಳು ತ್ರಿಶಾಲಾ ಅವರು ಕಮೆಂಟ್ ಮಾಡಿದರು. ಈ ಅಮೂಲ್ಯವಾದ ಫೋಟೋ ನೋಡಿ, ಅವರ ಪತ್ನಿ ಎಲ್ಲ, ಆದರೆ ಅವರ ಮಗಳು "ಜನ್ಮದಿನದ ಶುಭಾಶಯಗಳು ದಾದಾಜಿ " ಎಂದು ಕಮೆಂಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಜೂನ್ 1 ರಂದು ಸಂಜಯ್ ತಮ್ಮ ದಿವಂಗತ ತಾಯಿ ನರ್ಗಿಸ್ ದತ್ ಅವರ ನೆನಪಿಗಾಗಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. "ಹ್ಯಾಪಿ ಬರ್ತ್‌ಡೇ ಮಾ, ಮಿಸ್ ಯು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದ್ದರು..
(ಮಾಹಿತಿ ಬಾಲ್ಕನಿ ನ್ಯೂಸ್ಕೃಪೆ ) 

Friday, June 5, 2020

ನಾಯಿ ಬೇಟೆಯಾಡಿ ಹೊತ್ತೊಯ್ಯುತ್ತಿದ್ದ ಚಿರತೆ ಸಾವು!


ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸಾವನ್ನಪ್ಪಿದೆ.  ಶುಕ್ರವಾರ ನಸುಕಿನ ವೇಳೆ ನಾಯಿ ಬೇಟೆಯಾಡಿರುವ ಚಿರತೆ ಅದನ್ನು ಹೊತ್ತು ರಸ್ತೆ ದಾಟುವಾಗ ಲಾರಿಯೊಂದು ವೇಗವಾಗಿ ಬಂದು ಚಿರತೆಗೆ ಗುದ್ದಿದ ಪರಿಣಾಮ ಚಿರತೆ ಸ್ಥಳದಲ್ಲೇ ಸತ್ತು ಬಿದ್ದರೆ, ನಾಯಿ ಸುಮಾರು 100 ಮೀಟರ್ ದೂರದಲ್ಲಿ ಸತ್ತು ಬಿದ್ದಿದೆ. ಬೆಳಗಿನ ಜಾವ ರಸ್ತೆ ಪಕ್ಕದಲ್ಲಿ ಸತ್ತು ಬಿದ್ದ ಚಿರತೆಯನ್ನು ಕಂಡು ಬೆಚ್ಚಿ ಬಿದ್ದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಅಪಘಾತದಿಂದ ನಡೆದ ಘಟನೆ ಎಂದು ತಿಳಿಸಿದ್ದಾರೆ. ಹೇಮಗುಡ್ಡದ ಗುಡ್ಡ ಗಾಡು ಪ್ರದೇಶದಲ್ಲಿ ಚಿರತೆಗಳು ಹೆಚ್ಚು ವಾಸವಾಗಿದ್ದು ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ. 
(ಮಾಹಿತಿ News18 ಕನ್ನಡಕೃಪೆ ) 

ಆನ್​ಲೈನ್​ ಕ್ಲಾಸ್​ ತೆಗೆದುಕೊಂಡಿದ್ದ ಶಿಕ್ಷಕಿ ವಿರುದ್ಧ ಅಸಭ್ಯ ಕಾಮೆಂಟ್: ಜಾಲತಾಣದಲ್ಲಿ ಫೋಟೋ ವೈರಲ್​​


ತಿರುವನಂತಪುರಂ: ಆನ್​ಲೈನ್​ನಲ್ಲಿ ತರಗತಿ ನಡೆಸುತ್ತಿದ್ದ ಶಿಕ್ಷಕಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಾಮೆಂಟ್​ ಮಾಡಿದವರ ವಿರುದ್ಧ ಕೇರಳದ ಸೈಬರ್​ ಕ್ರೈಂ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇರಳದ ಶಿಕ್ಷಣಕ್ಕಾಗಿ ಮೂಲಭೂತ ಸೌಕರ್ಯ ಮತ್ತು ತಂತ್ರಜ್ಞಾನ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರು ಎಡಿಜಿಪಿ ಮನೋಜ್​ ಅಬ್ರಾಹಂ ಅವರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಕ್ರಮ ತೆಗದುಕೊಳ್ಳಲಾಗಿದೆ.
ಫೇಸ್​ಬುಕ್​, ಇನ್​ಸ್ಟಾಗ್ರಾಂ, ಯೂಟ್ಯೂಬ್​ ಮತ್ತು ವಾಟ್ಸ್​ಆಯಪ್​ಗಳಲ್ಲಿ ಶಿಕ್ಷಕಿ ವಿರುದ್ಧ ಅವಹೇಳನಕಾರಿಯಾಗಿ ಕಾಮೆಂಟ್​ ಮಾಡಿದ್ದು, ರಾಜ್ಯ ಯುವ ಆಯೋಗವು ಸಹ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದೆ. ಯುವ ಆಯೋಗದ ಚೇರ್​ ಪರ್ಸನ್​ ಚಿಂಥ ಜೆರೊಮ್​ ಘಟನೆ ಸಂಬಂಧ ಕಿಡಿಕಾರಿದ್ದು, ಶಿಕ್ಷಕಿ ವಿರುದ್ಧ ಅಸಭ್ಯ ಕಾಮೆಂಟ್​ ಮಾಡಿದವರು ವಿಕೃತ ಮನಸ್ಸಿನವರು ಹಾಗೂ ಇದನ್ನು ಕೇರಳ ಒಪ್ಪುವುದಿಲ್ಲ. ಮತ್ತಿದು ನಮ್ಮ ಸಂಸ್ಕೃತಿಗೆ ವಿರುದ್ಧ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರ ಮತ್ತು ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವಾಗ ಅವರನ್ನು ಅವಮಾನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಬೇಗ ಅಪರಾಧಿಗಳನ್ನು ಬಂಧಿಸಿ ಕಾನೂನು ಕ್ರಮಗಳನ್ನು ತೆಗದುಕೊಳ್ಳಬೇಕೆಂದು ಯುವ ಆಯೋಗ ಆಗ್ರಹಿಸುತ್ತದೆ. ಕ್ರಮ ತೆಗೆದುಕೊಂಡ ಬಗ್ಗೆ ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಆಯೋಗ ಕೇಳಿದೆ.
ಶಿಕ್ಷಕಿಯನ್ನು ಟ್ರೋಲ್​ ಮಾಡಿದ್ದಲ್ಲದೆ ಅವರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿ ಅಸಭ್ಯವಾಗಿ ಕಾಮೆಂಟ್​ ಮಾಡಿರುವುದು ಗಮನಕ್ಕೆ ಬಂದಿದೆ. ಇದರೊಂದಿಗೆ ಶಿಕ್ಷಕಿಯ ಹೆಸರಿನಲ್ಲಿ ಅನೇಕ ನಕಲಿ ಖಾತೆಯು ಸಹ ಸೃಷ್ಟಿಸಲಾಗಿದೆ. ವಿಕ್ಟರ್​ ಚಾನಲ್​ ಹೆಸರಿನ ಯೂಟ್ಯೂಬ್​ ಚಾನಲ್​ನಲ್ಲೂ ಸಹ ಶಿಕ್ಷಕಿಯ ವಿಡಿಯೋಗೆ ಅಶ್ಲೀಲವಾಗಿ ಕಾಮೆಂಟ್​ ಮಾಡಿದ್ದಾರೆ. ಅನೇಕ ಕಾಮೆಂಟ್​ಗಳನ್ನು ವಿಕ್ಟರ್ಸ್​ ಚಾನಲ್​ ತೆಗೆದು ಹಾಕಿದೆ. (ಏಜೆನ್ಸೀಸ್​)
(ಮಾಹಿತಿ 
ವಿಜಯವಾಣಿ ಕೃಪೆ )  

ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ ಡಿ ಬಾಸ್



ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಲಾಕ್‌ ಡೌನ್‌ ಸಮಯದಲ್ಲಿ ತಮ್ಮ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಡಿ ಬಾಸ್. ಅಲ್ಲದೆ ತಮ್ಮ ನೆಚ್ಚಿನ ಕುದುರೆ ಸವಾರಿ ಮಾಡಿದ್ದಾರೆ.
ಇನ್ನೊಂದು ವಿಶೇಷವೆಂದರೆ ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ಕೆಲವು ಸೆಲೆಬ್ರಿಟಿಗಳು ಅವರನ್ನು ಭೇಟಿ ಮಾಡಿದ್ದಾರೆ. ನಟ ದೇವರಾಜ್ ಹಾಗೂ ಅವರ ಪುತ್ರರಾದ ಪ್ರಜ್ವಲ್ ದೇವರಾಜ್, ಪ್ರಣವ್ ದೇವರಾಜ್, ಹಾಸ್ಯ ಕಲಾವಿದ ಚಿಕ್ಕಣ್ಣ. ನಟ ಯಶಸ್ ಸೂರ್ಯ ಸೇರಿದಂತೆ ಹಲವರು ಭೇಟಿ ಮಾಡಿದ್ದಾರೆ.
(ಮಾಹಿತಿ ಕನ್ನಡದುನಿಯಾಕೃಪೆ )

ಮಿಡತೆ ಹಾವಳಿ ತಡೆಗಟ್ಟಲು ಹೊಸ ಮಾರ್ಗ ಹುಡುಕಿದ ತುಮಕೂರಿನ ಯುವ ರೈತರು



ತುಮಕೂರು(ಜೂ.05): ಪಾಕಿಸ್ತಾನದ ಗಡಿಯಿಂದ ಬಂದು ಭಾರತದ ಅನೇಕ ಭಾಗಗಳಲ್ಲಿ ಅಹಾರ ಬೆಳೆಗಳನ್ನು ನಾಶ ಮಾಡುತ್ತಿರುವ ಮಿಡತೆಗಳ ಹಾವಳಿ ತಪ್ಪಿಸಲು ತುಮಕೂರಿನ ಯುವಕರು ಸರಳ ರೀತಿಯ ಮಾರ್ಗೋಪಾಯ ಕಂಡು ಹಿಡಿದಿದ್ದಾರೆ. ಯಾವುದೇ ರಾಸಾಯನಿಕ ಬಳಸದೆ ಕಂಡು ಹಿಡಿದಿರುವ ಈ ಔಷಧ ಮಿಡತೆ ದಾಳಿಯನ್ನ ಸಮಗ್ರವಾಗಿ ಬೆನ್ನಟ್ಟುವಲ್ಲಿ ಸಹಕಾರಿಯಾಗಿದೆ.

ಭಾರತದ ಜನರು ಕೊರೋನಾ ನಂತರ ಹೆಚ್ಚು ಭಯ ಬೀಳುತ್ತಿರುವುದು ಮಿಡತೆಯ ಹೆಸರು ಕೇಳಿ. ರಾತ್ರೋ ರಾತ್ರಿ ದಾಳಿ ಮಾಡಿ ಬೆಳಗಾಗುವ ವೇಳೆಗೆ ಸಂಪೂರ್ಣ ಬೆಳೆಯನ್ನ ಮುಕ್ಕಿ ಸಂಪೂರ್ಣವಾಗಿ ನಾಶ ಮಾಡುತ್ತವೆ. ಈ ಮಾರಿ ಮಿಡತೆ ಈಗ ತುಮಕೂರಿಗೂ ಕಾಲಿಟ್ಟು ಬೆಳೆನಾಶ ಮಾಡುವ ಭೀತಿ ಶುರುವಾಗಿದೆ. ಜಿಲ್ಲೆಯ ಮಧುಗಿರಿ ಭಾಗ ಹಾಗೂ ತುಮಕೂರು ಗ್ರಾಮಾಂತರ ಭಾಗದಲ್ಲಿಯೂ ಮಿಡತೆಗಳು ಬಿಡಿ ಬಿಡಿಯಾಗಿ ಸಂಚರಿಸಿ ಬೆಳೆ ನಾಶಮಾಡುತ್ತಿವೆ. ಗ್ರಾಮಾಂತರದ ಬ್ಯಾಲ್ಯ ಗ್ರಾಮದಲ್ಲಿ ಮಿಡತೆಗಳಿಂದ ಜೋಳದ ಬೆಳೆ ನಾಶವಾಗಿದೆ. ಇದಕ್ಕಾಗಿ ಅಲ್ಲಿಯ ಯುವಕರು ಶೂನ್ಯ ಬಂಡವಾಳದಲ್ಲಿ ಔಷಧಿ ಕಂಡು ಹಿಡಿದಿದ್ದಾರೆ. ಇದ್ದಿಲು ಮರಳು ಹಾಗೂ ಸೀಮೆಸುಣ್ಣ ಬಳಸಿ ಕಂಡು ಹಿಡಿದಿರುವ ಔಷಧಿಯು ಬೆಳೆಯನ್ನು ಸಂರಕ್ಷಿಸುತ್ತಿದೆ. ಕೊರೋನಾ ಮುಕ್ತ ಚಾಮರಾಜನಗರ: ಕೇಂದ್ರ ಆರೋಗ್ಯ ಸಚಿವರಿಂದ ಜಿಲ್ಲಾಡಳಿತಕ್ಕೆ ಶಹಬ್ಬಾಸ್ ಗಿರಿ

ಎಕರೆಗೆ 40 ಲೀ ನೀರಿನಲ್ಲಿ ತಲಾ ಅರ್ಧ ಕೆಜಿ ಮರಳು ಮಿಶ್ರಿತ ಮಣ್ಣು ಹಾಗೂ ಇದ್ದಿಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ 15-20 ಮಿಲಿಯಷ್ಟು ಸುಣ್ಣದ ದ್ರಾವಣ ಮಿಶ್ರಣ ಮಾಡಬೇಕು. ಬಳಿಕ ಎರಡು ಬಾರಿ ಬೆಳೆಗೆ 15 ದಿನಗಳಿಗೆ ಒಮ್ಮೆ ಸಿಂಪಡನೆ ಮಾಡಬೇಕು. ಇದರಿಂದ ಮಿಡತೆ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಿದ್ದು, ಇಲ್ಲಿಯ ರೈತರು ಯಶಸ್ವಿಯಾಗಿದ್ದಾರೆ.

ಬೆಳೆಗಳ ಮೇಲೆ ಬೀಳುವ ಈ ಮಿಶ್ರಣವನ್ನ ಸೇವಿಸಿದ ಮಿಡತೆ ಸಂಪೂರ್ಣವಾಗಿ ನಾಶವಾಗುತ್ತವೆ. ಮರಳು‌ ಮಿಶ್ರಿತ ಮಣ್ಣು ಮಿಡಿತೆಯ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರಿದರೆ, ಇದ್ದಿಲು ಹಾಗೂ ಸುಣ್ಣ ಅವು ಹಾರದಂತೆ ಮಾಡುತ್ತವೆ.

ಒಟ್ಟಾರೆ ಈ ಮಿಶ್ರಣವನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು, ರೈತರು ಮಿಡತೆ ಹಾವಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ತುಮಕೂರಿನ ರೈತರಾದ ಪ್ರತಾಪ್ ಹಾಗೂ ಸ್ನೇಹತರಾದ ಸುರೇಶ್ ಅಭಿಲಾಷ್ ತಂಡ ಈ ದ್ರಾವಣದಲ್ಲಿ ಯಶಸ್ವಿಯಾಗಿದ್ದು ಇತರೆ ರೈತರು ಇದನ್ನ ಬಳಸಬಹುದಾಗಿದೆ
(ಮಾಹಿತಿ News18 ಕನ್ನಡಕೃಪೆ ) 

Thursday, June 4, 2020

Lunar Eclipse 2020; ನಾಳೆ ಸಂಭವಿಸಲಿರುವ ಚಂದ್ರ ಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನನ್ನು ತಪ್ಪಿಸಬೇಕು?

ಜೂನ್ 5 ಮತ್ತು ಜೂನ್ 6 ರ ಮಧ್ಯರಾತ್ರಿ ಜರುಗಲಿರುವ2020 ರ ಎರಡನೇ ಪೆನಂಬ್ರಲ್ ಚಂದ್ರ ಗ್ರಹಣಕ್ಕೆ ಇಡೀ ಜಗತ್ತು ಸಾಕ್ಷಿಯಾಗಲಿದೆ. ಪೆನಂಬ್ರಲ್ ಚಂದ್ರ ಗ್ರಹಣವು ಭಾಗಶಃ ಮತ್ತು ಒಟ್ಟು ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿರಲಿದೆ. ಸೂರ್ಯ, ಭೂಮಿ ಮತ್ತು ಚಂದ್ರರು ಒಂದು ಸಾಲಿನಲ್ಲಿರುವಾಗ ಈ ಗ್ರಹಣ ಸಂಭವಿಸುತ್ತಿದೆ. ಇದರಿಂದ ಭೂಮಿಯು ಸೂರ್ಯನ ಬೆಳಕನ್ನು ಚಂದ್ರನ ಮೇಲೆ ಬೀಳದಂತೆ ತಡೆಯಲು ಸಾಧ್ಯವಾಗುತ್ತದೆ. ಪರಿಣಾಮ ಹೊರಗಿನ ನೆರಳು ರೂಪುಗೊಳ್ಳುತ್ತದೆ. ಹೀಗಾಗಿ ಇದನ್ನು ಪೆನಂಬ್ರಾ ಚಂದ್ರ ಗ್ರಹಣ ಎಂದೂ ಕರೆಯಲಾಗುತ್ತದೆ.

ಪೆನಂಬ್ರಲ್ ಚಂದ್ರ ಗ್ರಹಣವು ಭಾರತದಲ್ಲಿ ಶುಕ್ರವಾರ 3 ಗಂಟೆ 18 ನಿಮಿಷಗಳ ಕಾಲ ಗೋಚರಿಸುತ್ತದೆ. ಇದು ಜೂನ್ 5 ರಂದು ರಾತ್ರಿ 11: 15 ಕ್ಕೆ ಪ್ರಾರಂಭವಾಗಲಿದ್ದು, ಜೂನ್ 6 ರಂದು ಮುಂಜಾನೆ 2:34 ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 6 ರಂದು ಬೆಳಿಗ್ಗೆ 12:54 ಕ್ಕೆ ಅತಿ ಹೆಚ್ಚು ಶಿಖರ ಅಥವಾ ಗರಿಷ್ಠ ಗ್ರಹಣವನ್ನು ಕಾಣಬಹುದು.

ಚಂದ್ರ ಗ್ರಹಣ 2020: ಚಂದ್ರ ಗ್ರಹಣದ ದಿನದಂದು ಏನು ಮಾಡಬೇಕು ಮತ್ತು ತಪ್ಪಿಸಬೇಕು? ವಿಜ್ಞಾನದ ಪ್ರಕಾರ ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದು. ಹೀಗಾಗಿ ಚಂದ್ರ ಗ್ರಹಣಕ್ಕೆ ಸಾಕ್ಷಿಯಾಗಲು ಯಾವುದೇ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯ ಇಲ್ಲ.

ಆದಾಗ್ಯೂ, ಭಾರತೀಯ ಪುರಾಣವು ಚಂದ್ರ ಗ್ರಹಣದ ಸಮಯದಲ್ಲಿ ಕೆಲವು ವಿಚಾರಗಳನ್ನು ಮಾಡಬಹುದು ಮತ್ತು ಕೆಲವನ್ನು ಮಾಡಬಾರದು ಎಂದು ವ್ಯಾಖ್ಯಾನಿಸುತ್ತದೆ.

ಚಂದ್ರಗ್ರಹಣದ ಸಂದರ್ಭದಲ್ಲಿ ಮಹಾಮೃತ್ಯಂಜಯ ಮಂತ್ರದಂತೆ ಪವಿತ್ರ ಮಂತ್ರಗಳನ್ನು ಪಠಿಸಬೇಕು ಎಂದು ಹೇಳಲಾಗುತ್ತದೆ. ಇದು ಗ್ರಹಣದಿಂದ ಉಂಟಾಗುವ ನಕಾರಾತ್ಮಕ ಶಕ್ತಿಯ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಆಹಾರ ಪದಾರ್ಥಗಳಿಗೆ ತುಳಸಿ (ತುಳಸಿ) ಎಲೆಯನ್ನು ಸೇರಿಸುವುದು ಮತ್ತು ಅಗತ್ಯವಿರುವವರಿಗೆ ದಾನ ಮಾಡುವುದು ಉತ್ತಮ ಎಂದು ಹೇಳಲಾಗಿದೆ.

ಇದಕ್ಕೆ ವಿರುದ್ಧವಾಗಿ, ಗ್ರಹಣದ ಸಮಯದಲ್ಲಿ ಯಾರೂ ಕಚ್ಚಾ ಆಹಾರವನ್ನು ಸೇವಿಸಬಾರದು. ಭಾರತದಲ್ಲಿ ಜನಪ್ರಿಯ ಸಂಪ್ರದಾಯಗಳು ಹಾನಿಕಾರಕ ಕಿರಣಗಳನ್ನು ಹೊರಸೂಸುವ ಗ್ರಹಣದ ಸಮಯದಲ್ಲಿ ಯಾರು ಮನೆಯಿಂದ ಹೊರ ಬರಬಾರದು ಎಂದು ಸಲಹೆ ನೀಡುತ್ತದೆ. : Lunar Eclipse 2020: ನಾಳೆ ಸಂಭವಿಸಲಿದೆ ವರ್ಷದ ಎರಡನೇ ಚಂದ್ರಗ್ರಹಣ; ಇದರ ವಿಶೇಷತೆ ಏನು ಗೊತ್ತೇ?
(ಮಾಹಿತಿ News18 ಕನ್ನಡಕೃಪೆ ) 

BIG NEWS: ಮಕ್ಕಳ ಜೀವದೊಂದಿಗೆ ಚೆಲ್ಲಾಟ - ಆದೇಶ ಧಿಕ್ಕರಿಸಿ ಆರಂಭವಾದ ಶಾಲೆಗೆ ಸರ್ಕಾರದಿಂದ ಬಿಗ್ ಶಾಕ್

ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪೋಷಕರು ಮತ್ತು ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸದ್ಯಕ್ಕೆ ಶಾಲೆ ಆರಂಭಿಸಲ್ಲ ಎಂದು ಹೇಳಿದ್ದಾರೆ.
ಹೀಗಿದ್ದರೂ ಕೂಡ ಸರ್ಕಾರದ ಆದೇಶ ಧಿಕ್ಕರಿಸಿ ವಿಜಯಪುರದಲ್ಲಿ ಖಾಸಗಿ ಶಾಲೆಯೊಂದು ಆರಂಭವಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಶಾಲೆಯ ಮಾನ್ಯತೆಯನ್ನೇ ರದ್ದುಗೊಳಿಸಿದ್ದಾರೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಆರಂಭಿಸದಿರಲು ಚಿಂತನೆ ನಡೆದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಆದೇಶವನ್ನು ಧಿಕ್ಕರಿಸಿ ವಿಜಯಪುರದ ರಹೀಂ ನಗರದ ಖಾಸಗಿ ಶಾಲೆಯ ಆಡಳಿತ ಮಂಡಳಿ ಮಕ್ಕಳನ್ನು ಶಾಲೆಗೆ ಕರೆಸಿಕೊಂಡು ತರಗತಿಗಳನ್ನು ಆರಂಭಿಸಿದೆ. ಅಲ್ಲದೆ ಮಕ್ಕಳ ಪೋಷಕರಿಂದ ದುಬಾರಿ ಶುಲ್ಕವನ್ನು ಕೂಡ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಎಲ್ಲಾ ಶಾಲೆಗಳು ಬಂದ್ ಆಗಿದ್ದರೂ ಈ ಶಾಲೆಯಲ್ಲಿ ಮಕ್ಕಳು ಇರುವ ಬಗ್ಗೆ ಸ್ಥಳೀಯರೊಬ್ಬರು ವಿಡಿಯೋ ಮಾಡಿಕೊಂಡು ಶಿಕ್ಷಣ ಇಲಾಖೆಗೆ ನೀಡಿದ್ದು, ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊರೋನಾ ಆತಂಕದ ಹೊತ್ತಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದೆ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿದ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದು, ಶಿಕ್ಷಣ ಇಲಾಖೆಯಿಂದ ಶಾಲೆಯ ಮಾನ್ಯತೆಯನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.
(ಮಾಹಿತಿ ಕೃಪೆಕನ್ನಡದುನಿಯಾ ) 

ಸಿದ್ಧಾರ್ಥ್​ ಹೆಗಡೆ ಪುತ್ರನ ಜೊತೆ ಪುತ್ರಿ ಮದುವೆ; ಡಿಕೆಎಸ್​​ಗೆ ಸಿಕ್ಕಿತ್ತು ವಿನಯ್​ ಗುರೂಜಿ ಆಶೀರ್ವಾದ

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ಅವರ ವಿವಾಹ ಕೆಫೆ ಕಾಫೀ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ತ್ಯ ಜೊತೆ ನಡೆಯಲಿದೆ ಅಂತಾ ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ವಿಶೇಷ ಅಂದ್ರೆ ಈ ಮದುವೆ ನಿಶ್ಚಿತವಾಗಿದ್ದು ವಿನಯ್​ ಗುರೂಜಿ ಅವರ ಆಶೀರ್ವಾದದಿಂದ ಅಂತ ಹೇಳಲಾಗ್ತಿದೆ
ಶಿವಕುಮಾರ್​​ಗೆ ವಿನಯ್‌ ಗುರೂಜಿ ಸಲಹೆ
ಡಿ.ಕೆ ಶಿವಕುಮಾರ್ ಅವರ ಮಗಳಿಗೆ ಕಂಕಣ ಭಾಗ್ಯ ಕಲ್ಪಿಸಿದ್ದು ವಿನಯ್ ಗುರೂಜಿ ಎಂಬ ಮಾಹಿತಿ ತಿಳಿದುಬಂದಿದೆ. ಮಾರ್ಚ್‌ 19ರಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಮಗಳ ಮದುವೆ ನಡೆದಿತ್ತು. ಅಂದು ಚಿಕ್ಕಮಗಳೂರಿಗೆ ಡಿ.ಕೆ.ಶಿವಕುಮಾರ್ ಆಗಮಿಸಿದ್ರು. ಈ ವೇಳೆ ವಿನಯ್ ಗುರೂಜಿ ಕೂಡಾ ಮದುವೆಗೆ ಆಗಮಿಸಿದ್ರು. ಈ ವೇಳೆ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಶಿವಕುಮಾರ್, ತಮ್ಮ ಮಗಳ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗ ವಿನಯ್ ಗುರೂಜಿ ಮದುವೆಗೆ ಒಪ್ಪಿಗೆ ಸೂಚಿದ್ದಾರೆ. ಹೀಗಾಗಿ ಇಂದು ಡಿ.ಕೆ.ಶಿವಕುಮಾರ್ ಮಗಳ ಮದುವೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ನಿಮ್ಮ ಸಲಹೆ ಆಶೀರ್ವಾದದಂತೆ ನಮ್ಮ ಮಗಳ ಮದುವೆ ನಿಶ್ಚಿತವಾಗಿದೆ‌ ಅಂತಾ ದೂರವಾಣಿ ಕರೆ ಮೂಲಕ ಡಿ.ಕೆ.ಶಿವಕುಮಾರ್, ವಿನಯ್ ಗುರೂಜಿಗೆ ಧನ್ಯವಾದ ತಿಳಿಸಿದ್ದಾರೆ ಎನ್ನಲಾಗಿದೆ.
 

ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಗೆ ಬಿಗ್ ಶಾಕ್..!



ಬೆಂಗಳೂರು : ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, ಟ್ರಾಕ್ಟರ್, ಇತರೆ ವಾಹನ ಹೊಂದಿರುವವರು ತಮ್ಮ ಕಾರ್ಡುಗಳನ್ನು ಕೂಡಲೇ ಹಿಂತಿರುಗಿಸಿ, ರದ್ದುಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಅರ್ಹ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಮರ್ಪಕವಾಗಿ ತಲುಪಬೇಕು. ಜೊತೆಗೆ ಅನರ್ಹರು ಈ ಸೌಲಭ್ಯ ದುರುಪಯೋಗ ಪಡಿಸಿಕೊಳ್ಳದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಪ್ರಾರಂಭಕ್ಕೆ ಮೊದಲು 63 ಸಾವಿರ ಪಡಿತರ ಕಾರ್ಡುಗಳನ್ನು ರದ್ದುಪಡಿಸಲಾಗಿತ್ತು. ಈಗ ಮತ್ತೆ ಅನರ್ಹ ಮತ್ತು ನಕಲಿ ಪಡಿತರ ಚೀಟಿಗಳ ರದ್ದುಪಡಿಸಲು ಅಭಿಯಾನ ನಡೆಸುವಂತೆ ಸೂಚಿಸಿದರು. ರಾಜ್ಯದ ಬೊಕ್ಕಸಕ್ಕೆ ಆಗುವ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಅಭಿಯಾನ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆಹಾರ ಮತ್ತು ನಾಗರಿಕರ ಸರಬರಾಜು ನಿಗಮಕ್ಕೆ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿಗೆ ರೈತರಿಗೆ ಹಣ ಪಾವತಿಸಲು ಬಾಕಿ ಇರುವ 240 ಕೋಟಿ ರೂ. ಆವರ್ತ ನಿಧಿಯಿಂದ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಡಿತರ ವಿತರಣೆ ಮಾಡಲಾಗಿದೆ. ಶೇ. 95ರಷ್ಟು ಪಡಿತರಚೀಟಿದಾರರು ಪಡಿತರ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆ ಅಡಿ 98,079 ಫಲಾನುಭವಿಗಳಿಗೆ 3 ಅನಿಲ ಸಿಲಿಂಡರುಗಳನ್ನು ಉಚಿತವಾಗಿ ವಿತರಿಸಲು ಕ್ರಮ ವಹಿಸಲಾಗಿದೆ.
ನಿಗಮದ 53 ಗೋದಾಮುಗಳು ಶಿಥಿಲಾವಸ್ಥೆಯಲ್ಲಿದ್ದು, 42 ಖಾಲಿ ನಿವೇಶನಗಳು ನಿಗಮದ ಒಡೆತನದಲ್ಲಿದೆ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ 95 ಗೋದಾಮುಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ..ಎಂ. ವಿಜಯಭಾಸ್ಕರ್, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
(ಮಾಹಿತಿ ಕೃಪೆ ಈ ಸಂಜೆ) 

ಹೊಸಪೇಟೆ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು



ಹೊಸಪೇಟೆ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಗಾಳೆಮ್ಮನಗುಡಿ ಗ್ರಾಮದ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಭೀಕರ ಅಪಘಾತ ನಡೆದಿದ್ದು, ಬೈಕ್ ಸವಾರ ಹಗರಿಬೊಮ್ಮನಹಳ್ಳಿ ಪಟ್ಟಣದ 22 ವರ್ಷದ ಜಮಾಲ್ ಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದ್ದ ಕಾರಿಗೆ ಏಕ ಮುಖ ರಸ್ತೆಯಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ... (ಮಾಹಿತಿ ಕೃಪೆ ಕನ್ನಡ ಪ್ರಭ)  

ಇಂದಿರಾ ಕ್ಯಾಂಟೀನ್‌ ಅಕ್ರಮ ಆರೋಪ : ಸಿದ್ದರಾಮಯ್ಯ, ಜಾರ್ಜ್‌ ವಿರುದ್ಧದ ಅರ್ಜಿ ವಜಾ


ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಮಾಡಿದ ಜನರ ಸಂಖ್ಯೆಗಿಂತ ಹೆಚ್ಚು ಹಣ ಬಿಡುಗಡೆ ಮಾಡುವ ಮೂಲಕ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್‌ ಶೆಟ್ಟಿ ವಜಾ ಮಾಡಿದ್ದಾರೆ.
ಗಣೇಶ್‌ ಸಿಂಗ್‌ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ, ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ನಗರಾಭಿವೃದ್ಧಿ ಸಚಿವರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾ ಮಾಡಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ಬಿಬಿಎಂಪಿ ಅಂದಿನ ಕಮಿಷನರ್‌ ಹಾಗೂ ಇಂದಿರಾ ಕ್ಯಾಂಟೀನ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಆಗಿನ ವಿಶೇಷ ಕಮಿಷನರ್‌ ವಿರುದ್ಧದ ವಿಚಾರಣೆಯನ್ನು ಲೋಕಾಯುಕ್ತರು ಮುಂದುವರಿಸಲಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಜುಲೈ 15ರವರೆಗೆ ಅವರಿಗೆ ಕಾಲಾವಕಾಶ ನೀಡಲಾಗಿದೆ.
ಇಂದಿರಾ ಕ್ಯಾಂಟೀನ್‌ಗೆ ಹಣ ಬಿಡುಗಡೆ ಮಾಡುವ ತೀರ್ಮಾನ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ. ಈ ತೀರ್ಮಾನದ ಬಳಿಕ ಜವಾಬ್ದಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ನಿರ್ವಹಿಸಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಮತ್ತು ಜಾರ್ಜ್‌ ಪಾತ್ರವೇನೂ ಇದರಲ್ಲಿ ಇದ್ದಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಸಿದ್ದರಾಮಯ್ಯ ಮತ್ತು ಜಾರ್ಜ್‌ ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಪೂರಕವಾಗಿ ಅರ್ಜಿದಾರರು ಯಾವುದೇ ದಾಖಲೆ ಅಥವಾ ಆಧಾರ ಒದಗಿಸಿಲ್ಲ. ಇಬ್ಬರೂ ಈಗ ಅಧಿಕಾರದಲ್ಲಿ ಇಲ್ಲದಿರುವುದರಿಂದ ವಿಚಾರಣೆ ಮುಂದುವರಿಸಲು ಯಾವುದೇ ಕಾರಣವೂ ಕಾಣುತ್ತಿಲ್ಲ ಎಂದು ಲೋಕಾಯಕ್ತ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಇಂದಿರಾ ಕ್ಯಾಂಟೀನ್‌ ಅಕ್ರಮಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ದೂರುಗಳು ಲೋಕಾಯುಕ್ತರ ಮುಂದಿದ್ದು, ವಿಚಾರಣೆ ನಡೆಯುತ್ತಿದೆ.(ಮಾಹಿತಿ ಕೃಪೆ ಪ್ರಜಾವಾಣಿ...)   

ಕೊರೋನಾ ವೈರಸ್ ಮೇಲೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪ್ರಯೋಗ ಆರಂಭ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ: ಕೊರೋನಾ ವೈರಸ್ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ವೈದ್ಯಕೀಯ ಪ್ರಯೋಗಗಳನ್ನು ಆರಂಭಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
ಸುರಕ್ಷತಾ ಪರಾಮರ್ಶೆಯನ್ನು ನಡೆಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ಮೇಲೆ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗುವುದು ಎಂದು ಕಳೆದ ತಿಂಗಳು 25ರಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ಇದೀಗ ತನ್ನ ಅಭಿಪ್ರಾಯ ಮತ್ತು ನಿರ್ಧಾರಗಳನ್ನು ಬದಲಾಯಿಸಿದ್ದು ಪ್ರಯೋಗಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಕಾರಣಗಳಿಲ್ಲ ಎಂದು ಹೇಳಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯಿಂದ ಕೋವಿಡ್-19 ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ದ ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆ ಪ್ರಕಟಿಸಿದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಸಾಮಾನ್ಯವಾಗಿ ಮಲೇರಿಯಾ ಜ್ವರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರು ಕೋವಿಡ್-19 ಚಿಕಿತ್ಸೆಗಾಗಿ ಬಳಸಲು ಶಿಫಾರಸು ಮಾಡಿ ಭಾರತದಿಂದ ತರಿಸಿಕೊಂಡಿದ್ದರು. ಹಲವು ದೇಶಗಳ ಸರ್ಕಾರಗಳು ಈ ಔಷಧಿ ಬಳಕೆಯನ್ನು ಬೆಂಬಲಿಸಿವೆ.
ಕಳೆದ ವಾರ, ಸಾಲಿಡಾರಿಟಿ ಟ್ರಯಲ್‌ನ ಕಾರ್ಯನಿರ್ವಾಹಕ ಗುಂಪು ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಹೆಚ್ಚಾಗಿ ಮಾಡುವುದಕ್ಕೆ ತಡೆ ತಂದಿತ್ತು. ಔಷಧದ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ....)

Wednesday, June 3, 2020

ಫೇಸ್‌ಬುಕ್‌ನಲ್ಲಿ ರಮ್ಯಾ ಪ್ರತ್ಯಕ್ಷ.. ಕೇರಳದ ಆನೆ ಹತ್ಯೆಗೆ ಮರುಗಿದ 'ಪದ್ಮಾವತಿ'


ಕಳೆದ ಲೋಕಸಭೆ ಚುನಾವಣೆ ಮುಗಿದು ನರೇಂದ್ರ ಮೋದಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ, ನಟಿ ರಮ್ಯಾ ತಮ್ಮ ಎಲ್ಲಾ ಸೋಶಿಯಲ್​ ಮೀಡಿಯಾ ಅಕೌಂಟ್​ಗಳನ್ನು ಇದ್ದಕ್ಕಿದ್ದಂತೆಯೇ ಡಿ-ಆಯಕ್ಟಿವೇಟ್​ ಮಾಡಿ ಅಜ್ಞಾತವಾಸಕ್ಕೆ ಜಾರಿ ಬಿಟ್ಟಿದ್ದರು.
ಕನ್ನಡಿಗರ ಹೃದಯ ಕದ್ದ ಮೋಹಕ ತಾರೆ, ಸಕ್ಕರೆ ನಾಡು ಮಂಡ್ಯದ ಮಾಜಿ ಸಂಸದೆಯೂ ಆಗಿದ್ದ ರಮ್ಯಾ ಎಲ್ಲಿಗೆ ಹೋದ್ರು? ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಅನ್ನೋ ಸಾಲು ಸಾಲು ಪ್ರಶ್ನೆಗಳು ಅವರ ಅಭಿಮಾನಿಗಳ ವಲಯದಲ್ಲಿ ಕೇಳಿ ಬರ್ತಾನೇ ಇತ್ತು. ಇದೀಗ ರಮ್ಯಾ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ.
ರಮ್ಯಾ ಫೇಸ್‌ಬುಕ್‌ ಆಯಕ್ಟಿವೇಟ್!
ಕಳೆದ ಕೆಲದಿನಗಳ ಹಿಂದೆ ತಮ್ಮ ಟ್ವಿಟರ್‌ಅನ್ನು ರಮ್ಯಾ ಆಯಕ್ಟಿವೇಟ್ ಮಾಡಿದ್ದರು. ಇದೀಗ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ರಮ್ಯಾ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಕಳೆದ ವರ್ಷ ಮೇ 29ರಂದು ಕೊನೆ ಪೋಸ್ಟ್ ಹಾಕಿದ್ದ ರಮ್ಯಾ, ಬಳಿಕ ಯಾವುದೇ ರೀತಿಯ ಪೋಸ್ಟ್‌ಗಳನ್ನು ಶೇರ್ ಮಾಡಿರಲಿಲ್ಲ. ಇದೀಗ ಸಡನ್‌ ಎಂಟ್ರಿ ಕೊಟ್ಟಿರೋ ಸ್ಯಾಂಡಲ್‌ವುಡ್ ಪದ್ಮಾವತಿ, ಕೇರಳದಲ್ಲಿ ಆನೆಯೊಂದಕ್ಕೆ ಸಿಡಿಮದ್ದು ತಿನ್ನಿಸಿ ಹತ್ಯೆಗೈದ ಪ್ರಕರಣದ ಬಗ್ಗೆ ಫೇಸ್‌ಬುಕ್‌ ಪೋಸ್ಟ್ ಹಾಕಿದ್ದಾರೆ.
ನೀವೆಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಮತ್ತು ಸುರಕ್ಷಿತವಾಗಿರುತ್ತೀರಿ ಎಂದು ಭಾವಿಸುತ್ತೇನೆ. ಅದರ ಜೊತೆಗೆ ಸ್ವಲ್ಪ ಸಮಯ ತೆಗೆದುಕೊಂಡು ಈ ಅರ್ಜಿಗೆ ಸಹಿ ಹಾಕಿ ಅಂತಾ ಮನವಿ ಮಾಡಿದ್ದಾರೆ. ಆನೆಗೆ ಸಿಡಿಮದ್ದು ತಿನ್ನಿಸಿ ಹತ್ಯೆಗೈದಿರುವ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸಲು ಇರುವ ಲಿಂಕ್‌ ಒಂದನ್ನು ಶೇರ್‌ ಮಾಡಿದ್ದಾರೆ. ಈ ಮೂಲಕ ಆನೆಯ ಸಾವಿಗೆ ಮರುಗಿರುವ ರಮ್ಯಾ, ಆನೆ ಹತ್ಯೆಗೈದ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲಿಸಲು ಅರ್ಜಿಗೆ ಎಲ್ಲರೂ ಸಹಿ ಮಾಡಿ ಎಂದಿದ್ದಾರೆ.
ತೆರೆ ಮರೆಗೆ ಸರಿದಿದ್ದ 'ಪದ್ಮಾವತಿ'
ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಡು ಟ್ವೀಟಾಸ್ತ್ರ ಪ್ರಯೋಗಿಸುತ್ತಿದ್ದ ರಮ್ಯಾರನ್ನ ನಂತರದಲ್ಲಿ ಕಾಂಗ್ರೆಸ್​ ಪಕ್ಷ, ಸೋಶಿಯಲ್​ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದಲೂ ಗೇಟ್​ಪಾಸ್​ ನೀಡಿತ್ತು. ಆಗೆಲ್ಲ.. ಕನ್ನಡದ ಪದ್ಮಾವತಿ ಮತ್ತೆ ಬಣ್ಣ ಹಚ್ಚಬಹುದು ಅನ್ನೋ ಆಸೆ ಅವರ ಅಭಿಮಾನಿಗಳಲ್ಲಿ ಚಿಗುರೊಡೆದಿತ್ತು. ಆದ್ರೆ, ರಮ್ಯಾ ಮಾತ್ರ ಏಗ್ದಂ ಸೈಲೆಂಟ್​ ಆಗಿಬಿಟ್ಟಿದ್ದರು. ತಮ್ಮನ್ನು ತಾವು ದೀರ್ಘಕಾಲದ ಅಜ್ಞಾತವಾಸಕ್ಕೆ ದೂಡಿಕೊಂಡಿದ್ದ ರಮ್ಯಾ ಇಂದು ಸಡನ್​ ಆಗಿಯೇ ಬಿಗ್​ ಸರ್​ಪ್ರೈಸ್ ಕೊಟ್ಟಿದ್ದಾರೆ.
(ಮಾಹಿತಿ ಕೃಪೆNews First Live...) 

ದ್ವಿತೀಯ ಪಿಯುಸಿ 'ಇಂಗ್ಲೀಷ್' ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!


ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಜೂನ್ 18 ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಮತ್ತು ಅವರ ಪರೀಕ್ಷಾ ಕೇಂದ್ರದ ವಿವರವುಳ್ಳು ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿಗಳು ತಾವು ಇರುವ ಜಿಲ್ಲೆಯಲ್ಲೇ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಇದೀಗ ವಿದ್ಯಾರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಸಂಬಂಧ ಕಾಲೇಜುಗಳ ಪ್ರಾಚಾರ್ಯರ ಮೂಲಕ ತಿದ್ದುಪಡಿಗೆ ಜೂನ್ 5 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಜೂನ್ 7 ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು www.pue.kar.nic.in ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಬಹುದು ಎಂದು ಇಲಾಖೆ ತಿಳಿಸಿದೆ. 
(ಮಾಹಿತಿ ಕೃಪೆ  Kannada News...) 

ಅನಾನಸಿನಲ್ಲಿ ಪಟಾಕಿಯಿಟ್ಟದ್ದು ಗರ್ಭಿಣಿ ಆನೆಗಲ್ಲ, ತಾಯ್ತನಕ್ಕೆ..!


  • ಸಿದ್ದು ಸತ್ಯಣ್ಣನವರ್
ವರು ಅವಳ ಅನ್ನ ಕಸಿದುಕೊಂಡರು. ಅವಳು ಅನ್ನ ಅರಸಿ ಇವರಿದ್ದಲ್ಲಿಗೆ ಬಂದಳು. ಅನ್ನ ಅರಸಿ ಹಸಿದು ಬಂದ ಆ ಗರ್ಭಿಣಿಗೆ ಮನುಷ್ಯನೆಂಬ ನೀಚ ಪ್ರಾಣಿ ಅನಾನಸ್ ಹಣ್ಣಿನಲ್ಲಿ ಪಟಾಕಿ ತುಂಬಿಸಿ ನೀಡಿದ. ಹಾಗೇ ಅನ್ನವೆಂದುಕೊಂಡೇ ಅದನ್ನು ತಿಂದವಳು ಹಸಿವೆಗೆ ನರಳಿ ನಾಡಿನತ್ತ ಬಂದ ಗರ್ಭಿಣಿ ಆನೆ. ಮನುಷ್ಯನ ಕ್ರೂರತನ ಯಾವ ಮಟ್ಟದ್ದು? ಯೋಚಿಸಿದರೆ ಆ ಆನೆಯ ನೋವಿನ ಸಂಕಟಕ್ಕೆ ಅದು ನೀರಲ್ಲಿ ನಿಂತ ಚಿತ್ರ ಕಾಡುತ್ತದಷ್ಟೆ‌.
ಕೇರಳದ ವೆಲ್ಲಿಯಾರ್ ಎಂಬಲ್ಲಿನ ಈ ಅಮಾನವೀಯ ಘಟನೆಯನ್ನು ಮಾನವ ಸಂಘಜೀವಿ ಎಂಬ ನೆಲೆಗಟ್ಟಿನಲ್ಲಿ ನೋಡುವುದಾದರೆ, ಗ್ರಹಿಸುವುದೇಗೆ ಅವನ ರಾಕ್ಷಸಿತನವನ್ನು. ಕೇರಳದ ವೆಲ್ಲಿಯಾರ್ ಎಂಬಲ್ಲಿನ ಅರಣ್ಯಾಧಿಕಾರಿ ಮೋಹನ್ ಕೃಷ್ಣ ಎಂಬುವವರು ಆ ಗರ್ಭಿಣಿ ಆನೆಯ ಸ್ಥಿತಿ ನೆನೆದು ತಮ್ಮ ನೋವನ್ನು ಬರೆದುಕೊಳ್ಳದೆ ಹೋಗಿದ್ದರೆ ಇದಾವುದು ಬೆಳಕಿಗೆ ಬರುತ್ತಲೇ ಇರಲಿಲ್ಲ.
ಪಟಾಕಿ ತುಂಬಿದ ಅನಾನಸ್ ತಿಂದ ಮೇಲೆ ಆನೆ ಊರ ತುಂಬಾ ಓಡಾಡಿದರೂ ಯಾರಿಗೂ ಸಣ್ಣ ಹಾನಿಯನ್ನೂ ಮಾಡಿಲ್ಲ. ಗಂಟಲು ಹಾಗೂ ದೇಹದೊಳಗಿನ ಉರಿಗೆ ನಡು ನೀರಿನಲ್ಲಿ ನಿಂತ ಆ ಆನೆ ಅಲ್ಲೇ ಅಸುನೀಗುವಾಗ ಎಷ್ಟು ಸಂಕಟಪಟ್ಟಿರಬಹುದು. ಕಳೆದ ಕೆಲ ದಿನಗಳ ಹಿಂದೆ ನಾಯಿಯೊಂದರ ನಾಲ್ಕು ಕಾಲೂ ಕಟ್ಟಿ ನೀರಿಗೆ ಎಸೆದವರು, ಖುಷಿಪಡುವುದು ವಿಡಿಯೋವೊಂದರಲ್ಲಿ ಸೆರೆಯಾಗಿತ್ತು.
ಈಗ ಆನೆಯ ಅನ್ನದಲ್ಲಿ ಪಟಾಕಿ ಇಟ್ಟು ಕೊಂದದ್ದು. ಮಾಂಸಾಹಾರಿ ಪ್ರಾಣಿಗಳು ಸಹ ದುರ್ಬಲ ಪ್ರಾಣಿಗಳನ್ನು ಕೊಂದು ಆಹಾರ ಕ್ರಮ ಅನುಸರಿಸಿದರೂ, ಮನುಜನ ನೀಚತನದ ಸಮೀಪಕ್ಕೂ ಸುಳಿಯಲಾರವು. ಹೆಣ್ತನದ ಭಿಕ್ಷೆಯಲ್ಲೇ ಬದುಕುವ ಈ ಗಂಡಸೆಂಬ ಯಕಶ್ಚಿತ್ ಪ್ರಾಣಿಯ ನೀಚತನ ಯಾವ ಮೇರೆಯದ್ದು. ಥತ್ !
(ಮಾಹಿತಿ ಕೃಪೆ
ಸುದ್ದಿದಿನ...)

ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ: ಬದಲಾದೀತೆ ರೈತರ ಬದುಕು?

ದಶಕಗಳಷ್ಟು ಹಳೆಯದಾದ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಈ ತಿದ್ದುಪಡಿಯಿಂದಾಗಿ ಕೃಷಿ ವಲಯಕ್ಕೆ ಬಂಡವಾಳ ಆಕರ್ಷಿಸಬಹುದು. ಈ ಹೊಸ ನಡೆಯಿಂದ ಧಾನ್ಯಗಳು, ಅಡುಗೆ ಎಣ್ಣೆ, ಎಣ್ಣೆ ಕಾಳುಗಳು, ದ್ವಿದಳ ಧಾನ್ಯ, ಈರುಳ್ಳಿ ಹಾಗೂ ಆಲೂಗಡ್ಡೆಯಂಥದ್ದರ ಮೇಲೆ ಇರುವ ನಿಯಂತ್ರಣ ಹೋಗುತ್ತದೆ ಎಂದಿದ್ದಾರೆ.
ಇನ್ನು ಮುಂದೆ ವರ್ತಕರಿಗೆ ಇಷ್ಟು ಪ್ರಮಾಣದಲ್ಲಿ ಮಾತ್ರ ದಾಸ್ತಾನು ಇಟ್ಟುಕೊಳ್ಳಬೇಕು ಎಂಬ ಮಿತಿ ಇರುವುದಿಲ್ಲ. ಈ ದಿನ ಐತಿಹಾಸಿಕವಾದದ್ದು. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿದ್ದರೆ, ದೇಶದ ರೈತರಿಗೆ ಈ ದಿನ ಸ್ವಾತಂತ್ರ್ಯ ಸಿಕ್ಕಂತಾಯಿತು ಎಂದು ತೋಮರ್ ಹೇಳಿದ್ದಾರೆ. ಇನ್ನು ಮುಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಮಸ್ಯೆಗಳು ಸಹ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ರೈತರು ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಎಲ್ಲಾದರೂ ಮಾರಾಟ ಮಾಡಬಹುದು. ರೈತರೇ ಎಲೆಕ್ಟ್ರಾನಿಕ್ ಪ್ಲಾಟ್ ಫಾರ್ಮ್ ಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಬಹುದು ಎಪಿಎಂಸಿಯಿಂದ ಹೊರಗೆ ಮಾರುವ ಯಾವುದೇ ಉತ್ಪನ್ನಗಳ ಮೇಲೆ ತೆರಿಗೆ ಹಾಕುವುದಿಲ್ಲ ಒಂದು ದೇಶ, ಒಂದು ಮಾರುಕಟ್ಟೆ ಎಂಬ ದೂರದೃಷ್ಟಿಯೊಂದಿಗೆ ಭಾರತ ಮುಂದುವರಿಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಮತ್ತೊಂದು ಮಹತ್ವದ ತೀರ್ಮಾನದಲ್ಲಿ, ರೈತರ ಭೂಮಿ ವ್ಯಾಜ್ಯಗಳ ನಿವಾರಣೆಗೆ ಎಸ್ ಡಿಎಂ ಅಥವಾ ಡಿಸಿ ಜವಾಬ್ದಾರರು ಎನ್ನಲಾಗಿದೆ. ಭಾರತದಲ್ಲಿ ಶೇಕಡಾ ಎಂಬತ್ತೈದರಷ್ಟು ಸಣ್ಣ ಹಿಡುವಳಿ ರೈತರು ಇದ್ದಾರೆ. ಇಂದಿನ ಕ್ರಮದಿಂದ ವರ್ತಕರು, ಬಂಡವಾಳ, ತಂತ್ರಜ್ಞಾನ ಹೀಗೆ ಎಲ್ಲ ಅಗತ್ಯವೂ ರೈತರಿಗೆ ದೊರೆತಂತೆ ಆಗುತ್ತದೆ ಎಂದು ತೋಮರ್ ಹೇಳಿದ್ದಾರೆ.
ಮೋದಿ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಒಪ್ಪಿಕೊಂಡಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಲು ವ್ಯವಸ್ಥೆ ಮಾಡಿದೆ. ಸರ್ಕಾರದ ಇಂದಿನ ನಿರ್ಧಾರವು ಕೃಷಿ ವಲಯವನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ಭಾರತದ ಕೃಷಿಕರ ಜೀವನ ಮಟ್ಟವು ಇದರಿಂದ ಸುಧಾರಣೆ ಕಾಣುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
(ಮಾಹಿತಿ ಕೃಪೆ ಒನ್ ಇಂಡಿಯಾ ಕನ್ನಡ...)

ಬಿಎಸ್‌ವೈ ಭೇಟಿ ಮಾಡಿದ ಕತ್ತಿ: ಸಚಿವ ಸ್ಥಾನದ ಭರವಸೆ ಕೊಟ್ಟ ಸಿಎಂ

ಬೆಂಗಳೂರು: ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಆದಷ್ಟು ಬೇಗ ಸಚಿವರನ್ನಾಗಿ ಮಾಡುತ್ತೇನೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕಳೆದ ವಾರ ಭೋಜನ ಕೂಟ ನಡೆಸಿದ ಉಮೇಶ್ ಕತ್ತಿ ಇಂದು ಮುಖ್ಯಮಂತ್ರಿಯವರ ಜತೆ ಸುಮಾರು 20 ನಿಮಿಷ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಕಳೆದ ವಾರದ ಸಭೆಯಲ್ಲಿ ಶಾಸಕರು ಮತ್ತು ತಮ್ಮ ಮಧ್ಯೆ ನಡೆದ ಮಾತುಕತೆಯ ವಿವರಗಳನ್ನು ನೀಡಿದರು. ಪ್ರತಿಯೊಬ್ಬ ಶಾಸಕನ ಅಭಿಪ್ರಾಯವನ್ನೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಕತ್ತಿ ತಮ್ಮ ಸಹೋದರ ರಮೇಶ್‌ ಕತ್ತಿ ಅವರಿಗೆ ರಾಜ್ಯಸಭೆಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದರು. ಟಿಕೆಟ್‌ ಕೊಡುವ ಅಥವಾ ಬಿಡುವ ವಿಚಾರ ವರಿಷ್ಠರಿಗೆ ಸೇರಿದ್ದು, ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ. ಆದರೆ, ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಿಸಿ, ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.
(ಮಾಹಿತಿ ಕೃಪೆ ಪ್ರಜಾವಾಣಿ...)  

ಕೊವಿಡ್-19 ಪರಿಹಾರದ ಹಣ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗಿದೆ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೆರವು ನೀಡಿದ್ದು, ಅವರ ಖಾತೆಗಳಿಗೆ ಒಟ್ಟು 619 ಕೋಟಿ ರೂ. ಜಮಾ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್ ಗೆ ತಿಳಿಸಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲರು, 12.39 ಲಕ್ಷ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ತಲಾ 5 ಸಾವಿರ ರೂ... (ಮಾಹಿತಿ ಕೃಪೆ ಕನ್ನಡ ಪ್ರಭ)

1 ಲಕ್ಷಕ್ಕೂ ಹೆಚ್ಚು ಭಾರತೀಯರ ರಾಷ್ಟ್ರೀಯ ಗುರುತುಚೀಟಿಗಳು 'ಡಾರ್ಕ್ ವೆಬ್' ನಲ್ಲಿ ಮಾರಾಟಕ್ಕೆ!



ಹೊಸದಿಲ್ಲಿ,ಜೂ.3: ಆಧಾರ್, ಪಾನ್‌ಕಾರ್ಡ್ ಮತ್ತು ಪಾಸ್‌ ಪೋರ್ಟ್ ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಭಾರತೀಯರ ರಾಷ್ಟ್ರೀಯ ಗುರುತು ಚೀಟಿ (ಐಡಿ)ಗಳ ಸ್ಕ್ಯಾನ್ಡ್ ಪ್ರತಿಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಬಲ್ ಬುಧವಾರ ತಿಳಿಸಿದೆ. ಥರ್ಡ್ ಪಾರ್ಟಿಯಿಂದ ಈ ಮಾಹಿತಿಗಳು ಸೋರಿಕೆಯಾಗಿರುವಂತೆ ಕಂಡು ಬರುತ್ತಿದ್ದು, ಸರಕಾರದ ವ್ಯವಸ್ಥೆಯ ಮೂಲಕವಲ್ಲ ಎಂದು ಸೈಬಲ್ ತನ್ನ ವರದಿಯಲ್ಲಿ ಹೇಳಿದೆ.
ಈ ಮಾಹಿತಿಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕಿರಿಸಿರುವ ಹ್ಯಾಕರ್ ಇವುಗಳನ್ನು ಭಾರತದ ವಿವಿಧ ಸ್ಥಳಗಳಿಂದ ಪಡೆದುಕೊಂಡಿದ್ದಾನೆ ಎನ್ನಲಾಗಿದೆ ಎಂದಿರುವ 'ಸೈಬಲ್', ಸೈಬರ್ ಕ್ರಿಮಿನಲ್‌ಗಳಿಂದ ವೈಯಕ್ತಿಕ ಮಾಹಿತಿಗಳ ಸೋರಿಕೆಯು ಗುರುತು ಕಳ್ಳತನ, ಹಗರಣಗಳು ಮತ್ತು ಕಾರ್ಪೊರೇಟ್ ಬೇಹುಗಾರಿಕೆಯಂತಹ ವಿವಿಧ ದುಷ್ಕೃತ್ಯಗಳಿಗೆ ಕಾರಣವಾಗುತ್ತದೆ. ಹಲವಾರು ಕ್ರಿಮಿನಲ್‌ಗಳು ವಂಚಕ ಚಟುವಟಿಕೆಗಳಿಗಾಗಿ ದೂರವಾಣಿ ಕರೆಯ ಮೂಲಕ ಜನರ ವಿಶ್ವಾಸವನ್ನು ಗಳಿಸಲು ಐಡಿಗಳಲ್ಲಿಯ ವೈಯಕ್ತಿಕ ವಿವರಗಳನ್ನು ಬಳಸಿಕೊಳ್ಳುತ್ತಾರೆ ಎಂದು ಕಳವಳವನ್ನು ವ್ಯಕ್ತಪಡಿಸಿದೆ.
'ಸೈಬಲ್‌' ನ ಸಂಶೋಧಕರು ಹ್ಯಾಕರ್‌ನಿಂದ ಸುಮಾರು 1,000 ಸ್ಕಾನ್ಡ್ ಐಡಿಗಳನ್ನು ಖರೀದಿಸಿದ್ದು,ಇವು ಭಾತೀಯರಿಗೆ ಸೇರಿದ್ದು ಎನ್ನುವುದು ದೃಢಪಟ್ಟಿದೆ. ಥರ್ಡ್ ಪಾರ್ಟಿಯಿಂದ ಈ ಮಾಹಿತಿಗಳು ಸೋರಿಕೆಯಾಗಿವೆ ಎನ್ನುವುದನ್ನು ಪ್ರಾಥಮಿಕ ವಿಶ್ಲೇಷಣೆಗಳು ಸೂಚಿಸಿವೆ. ಸರಕಾರಿ ದತ್ತಾಂಶ ಕೋಶಗಳಿಂದ ಈ ಮಾಹಿತಿಗಳು ಸೋರಿಕೆಯಾಗಿರುವ ಯಾವುದೇ ಸುಳಿವು ಕಂಡು ಬಂದಿಲ್ಲ. ಯಾವುದೋ ಕಂಪನಿಯ ಡಾಟಾಬೇಸ್‌ನ 'ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ)'ವಿಭಾಗದಿಂದ ಈ ಮಾಹಿತಿಗಳು ಸೋರಿಕೆಯಾಗಿರಬಹುದು ಎನ್ನುವುದನ್ನು ಸ್ಕಾನ್ಡ್ ಐಡಿ ದಾಖಲೆಗಳು ಬೆಟ್ಟುಮಾಡುತ್ತಿವೆ ಎಂದು 'ಸೈಬಲ್' ಹೇಳಿದೆ.
ದೂರವಾಣಿ, ಇ-ಮೇಲ್ ಅಥವಾ ಎಸ್‌ಎಂಎಸ್ ಮೂಲಕ ವೈಯಕ್ತಿಕ ವಿವರಗಳನ್ನು,ವಿಶೇಷವಾಗಿ ಹಣಕಾಸು ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸೈಬಲ್ ಸಾರ್ವಜನಿಕರಿಗೆ ಸೂಚಿಸಿದೆ.(ಮಾಹಿತಿ ಕೃಪೆ ವಾರ್ತಾಭಾರತಿ)

Tuesday, June 2, 2020

ಕೊರೊನಾ ಪತ್ತೆಹಚ್ಚುವಲ್ಲಿ ಮೈಲಿಗಲ್ಲು: ರೋಗ ಪತ್ತೆ ಹಚ್ಚಲು ಜಸ್ಟ್​ 10 ನಿಮಿಷ ಸಾಕು

 ಕೊರೊನಾದ ಜೊತೆ ಬದುಕುವುದು ಕಲಿಯಬೇಕು ಎನ್ನುತ್ತಿರುವಾಗಲೇ ಕೊರೊನಾವನ್ನು ಮೆಟ್ಟಿ ನಿಲ್ಲುವ ಪ್ರಯತ್ನಗಳು ಕೂಡ ಯಶಸ್ಸಿನ ದಿಕ್ಕನ್ನು ಫಾಲೋ ಮಾಡುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ವಾಷಿಂಗ್ಟನ್​ನ ವಿಜ್ಞಾನಿಗಳು ಕೇವಲ 10 ನಿಮಿಷದಲ್ಲಿ ಕೊರೊನಾ ಇದೆಯಾ ಇಲ್ಲವಾ ಎಂದು ಕಂಡುಹಿಡಿಯುವ ಟೆಸ್ಟಿಂಗ್​ ಕಿಟ್​ ರೆಡಿಮಾಡಿದ್ದಾರೆ.
ದೇಹದಲ್ಲಿ ಕೊರೊನಾ ಸೋಂಕು ಇದೆಯಾ ಎನ್ನುವುದನ್ನು ಈ ಯಂತ್ರ ಕೇವಲ 10 ನಿಮಿಷದಲ್ಲಿ ಕಂಡುಹಿಡಿಯಬಲ್ಲದಂತೆ. ಕೊರೊನಾ ವೈರಸ್​ ಇದ್ದಾಗ ಆಗುವ ಬಣ್ಣ ಬದಲಾವಣೆಯನ್ನು ಪತ್ತೆಹಚ್ಚಬಲ್ಲ ಪರೀಕ್ಷಾ ಸಾಧನವನ್ನು ಸಂಶೋಧಕರು ತಯಾರಿಸಿದ್ದಾರೆ. ಇಲ್ಲಿನ ಎಸಿಎಸ್​ ನ್ಯಾನೋ ಪತ್ರಿಕೆಯಲ್ಲಿ , ಯೂನಿವರ್ಸಿಟಿ ಆಫ್​ ಮರ್ಯಲ್ಯಾಂಡ್​ ಸ್ಕೂಲ್​ ಆಫ್​ ಮೆಡಿಸಿನ್​ ನ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
ನಮ್ಮ ಪ್ರಾಯೋಗಿಕ ಸಂಶೋಧನೆಯ ಪ್ರಕಾರ, ಈ ಪರೀಕ್ಷೆಯು ವ್ಯಕ್ತಿಯ ಸ್ವ್ಯಾಬ್​ನ ಸ್ಯಾಂಪಲ್​ನಲ್ಲಿ ಇರಬಹುದಾದ ವೈರಸ್​ನ ಆರ್​ಎನ್​ಎ ಮೆಟಿರಿಯಲ್​ನ್ನು ಪತ್ತೆ ಹಚ್ಚಲಿದೆ. ಸೋಂಕು ತಗುಲಿದ ಮೊದಲನೇ ದಿನದಂದೆ, ಸೋಂಕಿನ ಇರುವಿಕೆಯನ್ನು ಪತ್ತೆ ಹಚ್ಚಬಲ್ಲದು. ಆದಾಗ್ಯೂ ಈ ಸಂಬಂಧ ಇನ್ನೊಂದಿಷ್ಟು ಅಧ್ಯಯನದ ಅಗತ್ಯವಿದೆ ಅಂತ ಸಂಶೋಧನೆಯ ಮುಖ್ಯಸ್ಥರಾದ ಡೀಪಾಂಜನ್​ ಪಾನ್ ಹೇಳಿದ್ದಾರೆ​.
(ಮಾಹಿತಿ ಕೃಪೆ ನ್ಯೂಸ್ ಫಾಸ್ಟ್ ಲೈವ್)

ವ್ಯಕ್ತಿಯ ಕಾಮದಾಟಕ್ಕೆ ಅಪ್ರಾಪ್ತೆ ಜೀವನ ಬಲಿ: ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲಕಿ

ವಿಜಯಪುರ: ವ್ಯಕ್ತಿಯೊಬ್ಬನ ಕಾಮದಾಟದಿಂದ ಅಪ್ರಾಪ್ತ ಬಾಲಕಿಯ ಜೀವನ ನರಕದಲ್ಲಿ ಸಿಲುಕಿದಂತಾಗಿದೆ. 13 ವರ್ಷದ ಬಾಲಕಿ ಮೇಲಿನ ನಿರಂತರ ಅತ್ಯಾಚಾರದಿಂದಾಗಿ ಇದೀಗ ಆಕೆ ಹೆಣ್ಣು ಮಗುವಿನ ತಾಯಿಯಾಗಿದ್ದಾಳೆ.
ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ ಶರಣಬಸು ಅವರಾದಿ (35) ನೀಚ ಕೃತ್ಯವೆಸಗಿದ ಕಾಮುಕ. ಬಸವನ‌ ಬಾಗೇವಾಡಿ ಮೂಲದ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಕೆಂಗೇರಿ ಬಳಿಯ ಅನಿಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಳು. ಇತ್ತ ತಾಯಿ‌ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಆರೋಪಿ ಶರಣಬಸು ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ.
ಅಲ್ಲದೆ, ಮದುವೆಯಾಗುವುದಾಗಿ ನಂಬಿಸಿ, ನಿರಂತರವಾಗಿ ಒಂದು ವರ್ಷದಿಂದ ಅತ್ಯಾಚಾರ ಎಸಗಿದ್ದಾನೆಂದು ಆರೋಪ ಕೇಳಬಂದಿದೆ.
ಅತ್ಯಾಚಾರದ ವಿಚಾರ ಯಾರಿಗೂ ಹೇಳದಂತೆ ಅಪ್ರಾಪ್ತೆಗೆ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಆದರೆ, ಈ‌ ವಿಚಾರ ತಾಯಿಗೆ ಗೊತ್ತಾದ ಬಳಿಕವೂ ಶರಣಬಸು ಆಕೆಗೂ ಬೆದರಿಕೆಯೊಡ್ಡಿದ್ದಾನೆ. ಆದರೆ, ಸತ್ಯ ಎಷ್ಟು ದಿನ ಅಂತ ಮರೆಮಾಚಲು ಸಾಧ್ಯ. ಹೆರಿಗೆ ಬಳಿಕ ಶರಣಬಸು ಕರ್ಮಕಾಂಡವೆಲ್ಲವೂ ಬಟಾಬಯಲಾಗಿದೆ. ನಿರಂತರ ಅತ್ಯಾಚಾರ ಪರಿಣಾಮ ಮೇ 30ರಂದು ಬಾಲಕಿ ವಿಜಯಪುರದ ಸಿಂದಗಿ ತಾಲೂಕು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದಾಳೆ.
ಇದೀಗ ಸಿಂದಗಿ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಬಸು ಅವರಾದಿಯ ಪತ್ತೆಗೆ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)
(ಮಾಹಿತಿ ಕೃಪೆ ವಿಜಯವಾಣಿ....)

ಶಾಲೆ ಪುನಾರಂಭ: ಎಸ್ ಡಿ ಎಂಸಿ , ಪೋಷಕರ ಜೊತೆ ಚರ್ಚಿಸಿ ತೀರ್ಮಾನ: ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವ ಸಾಧಕ- ಬಾಧಕಗಳ ಕುರಿತು ಪೋಷಕರು ಮತ್ತು ಸಂಬಂಧಿಸಿದ ಪಾಲುದಾರರ ಸಭೆಗಳನ್ನು ಪ್ರತಿ ಶಾಲೆಯ ಮಟ್ಟದಲ್ಲಿ ಆಯೋಜಿಸಿ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಮೇ 30ರಂದು ಹೊರಡಿಸಿರುವ ಮಾರ್ಗಸೂಚಿಯಂತೆ ಶಾಲಾಗಳ ಪುನರಾರಂಭಕ್ಕೆ ಸೂಕ್ತ ಸಮಾಲೋಚನೆ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಇದೇ ತಿಂಗಳ 10 ರಿಂದ 12ರ ಒಳಗಾಗಿ ಪೋಷಕರು_ಮತ್ತು_ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಸಭೆ ನಡೆಸಿ ಚರ್ಚೆ ನಡೆಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.  ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಲೆಗಳನ್ನು ಪುನರಾರಂಭ ಮಾಡಬಹುದಾದ ದಿನಾಂಕ, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನ, ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಚರ್ಚೆ ನಡೆಸಿ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವಂತೆ ಮುಖ್ಯೋಪಧ್ಯಾಯರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ...)

ಕೊರೋನಾ ಲಾಕ್ ಡೌನ್ ಗೆ 'ಬಾಡಿ ಹೋದ ಹೂಗಳು': ಕೊಳ್ಳುವವರಿಲ್ಲದೆ 360 ಕೋಟಿ ರೂ. ನಷ್ಟ

ಬೆಂಗಳೂರು: ಕೋವಿಡ್-19 ಹೂ ಬೆಳೆಗಾರರನ್ನು ಮತ್ತು ಮಾರಾಟಗಾರರನ್ನು ನಿಜಕ್ಕೂ ಸಂಕಷ್ಟಕ್ಕೆ ತಳ್ಳಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 2 ಸಾವಿರ ಹೂ ಬೆಳೆಗಾರರು ಕಳೆದ ಮೂರು ತಿಂಗಳಿನಿಂದ ಸುಮಾರು 360 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಮದುವೆ ಇನ್ನಿತರ ಶುಭ ಸಮಾರಂಭಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ರದ್ದಾಗಿರುವುದರಿಂದ ಮಾರ್ಚ್ ತಿಂಗಳಿನಿಂದ ಬೆಳೆದ ಹೂವುಗಳನ್ನು ಕೊಳ್ಳುವವರಿಲ್ಲದಾಗಿದೆ. ಇನ್ನು ಸರ್ಕಾರ ಮದುವೆ ಮಾಡಲು ಅನುಮತಿ ಕೊಟ್ಟರೂ ಸಹ 50ಕ್ಕಿಂತ ಹೆಚ್ಚು ಅತಿಥಿಗಳನ್ನು ಸೇರಿಸುವಂತಿಲ್ಲ,ಸರಳವಾಗಿ ಮಾಡಬೇಕು ಎಂದು ಹೇಳಿರುವುದು, ಅನೇಕ ಕಡೆಗಳಲ್ಲಿ ಉತ್ಸವ, ಜಾತ್ರೆ, ಇನ್ನಿತರ ಕಾರ್ಯಕ್ರಮಗಳನ್ನು ರದ್ದುಪಡಿಸಿರುವುದು ಹೂ ಬೆಳೆಗಾರರು, ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ.  ಒಂದು ಎಕರೆ ಪ್ರದೇಶದಲ್ಲಿ 2 ಲಕ್ಷ ಹಣ ಹಾಕಿ ಹೂ ಬೆಳೆದರೆ ಬೇರೆ ಸಮಯಗಳಲ್ಲಾದರೆ ಅದನ್ನು ಮಾರಾಟ ಮಾಡಿ ಕೈಗೆ 4ರಿಂದ 5 ಲಕ್ಷ ರೂಪಾಯಿ ಸಿಗುತ್ತಿತ್ತು. ಆದರೆ ಈಗ ಕಳೆದ ಎರಡು-ಮೂರು ತಿಂಗಳಿನಿಂದ ಕೊಳ್ಳುವವರಿಲ್ಲದೆ ಹಲವು ರೈತರು ಬೆಳೆದ ಹೂಗಳನ್ನು ಕಿತ್ತು ಬಿಸಾಕಿದರೆ ಇನ್ನು ಹಲವರು ಅದರ ಮೇಲೆ ಟ್ರ್ಯಾಕ್ಟರ್ ಹರಿಸಿ ನಾಶಪಡಿಸಿದ್ದಾರೆ.ಕಳೆದ ಎರಡು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಹೂ ಬೆಳೆಗಾರರು ಬಾಗಿಲು ಹಾಕಿದ್ದಾರೆ ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಒಕ್ಕೂಟದ ನಿರ್ದೇಶಕ ಶ್ರೀಕಾಂತ್ ಬೊಲಪಳ್ಳಿ ಹೇಳುತ್ತಾರೆ.
ಬೆಂಗಳೂರು ಸುತ್ತಮುತ್ತ 2,500 ಎಕರೆ ಪ್ರದೇಶದಲ್ಲಿ ಬೆಳೆಗಾರರು ಬೆಳೆದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ, ಜರ್ಬೆರಾ ಮೊದಲಾದವುಗಳನ್ನು ಖರೀದಿಸುವವರೇ ಇಲ್ಲವಾಗಿದೆ. ಲಾಭ ಸಿಗುವುದು ಬಿಡಿ, ಹಾಕಿದ ಬಂಡವಾಳ ವಾಪಸ್ ಬಂದಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರದ ರೈತ ಮಹಿಳೆ ಮಂಜುಶ್ರೀ.
ಬಹುತೇಕ ರೈತರಿಗೆ ನಷ್ಟವಾಗಿದೆ, ರೈತರ ವಿದ್ಯುತ್ ಬಿಲ್ ಪಾವತಿ ಮನ್ನಾ ಮಾಡಿ ಎಂದು ಹೂ ಬೆಳೆಗಾರರ ಒಕ್ಕೂಟ ಡಿಸಿಎಂ ಅಶ್ವಥನಾರಾಯಣ ಮತ್ತು ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ ಅವರಿಗೆ ಮನವಿ ಮಾಡಿತ್ತು.
(ಮಾಹಿತಿ ಕೃಪೆ ಕನ್ನಡಪ್ರಭ....)

ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡಬೇಕು: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತಾಲ್ಲೂಕುಗಳನ್ನು ವಿಭಾಗಿಸಿಕೊಂಡು ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದರು.
ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅವರು ಇಂದು ಕಲಬುರ್ಗಿ, ವಿಜಯಪುರ, ಉಡುಪಿ, ಯಾದಗಿರಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದಲ್ಲಿ ಮಾತನಾಡಿದರು.
ತಾಲ್ಲೂಕು ಕೇಂದ್ರಗಳಲ್ಲಿಯೇ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ ಮುಖ್ಯಮಂತ್ರಿಗಳು ಜೂನ್ 08 ರಿಂದ ಸಡಲಿಕೆಗಳನ್ನು ಮಾಡುತ್ತಿರುವುದರಿಂದ ಕಟ್ಟೆಚ್ಚರ ವಹಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು. ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ವಲಸಿಗರಿಂದ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕೋವಿಡ್ 19 ಪರೀಕ್ಷಾ ಕಿಟ್‍ಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಬಾರದು. ಗೃಹ ಬಂಧನದಲ್ಲಿದ್ದವರು (ಹೋಮ್ ಕ್ವಾರಂಟೈನ್) ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು. ಪೋಲೀಸ್ ಇಲಾಖೆ ವತಿಯಿಂದ ಗೃಹ ಬಂಧನದಲ್ಲಿರುವವರ ಮನೆಯ ಬಳಿ ಪೇದೆಗಳನ್ನು ನಿಯೋಜಿಬೇಕಲ್ಲದೆ. ಗ್ರಾಮ ಪಂಚಾಯತಿಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಇವರ ಬಗ್ಗೆ ನಿಗಾ ವಹಿಸಬೇಕು. ಗ್ರಾಮ ಪಂಚಾಯತಿಗಳ ಸದಸ್ಯರಿಗೆ ಈ ಬಗ್ಗೆ ತರಬೇತಿಯನ್ನೂ ನೀಡಲಾಗಿದ್ದು, ಬೂತ್ ಮಟ್ಟದ ತಂಡಗಳೂ ಪ್ರತಿ ದಿನ ವರದಿ ಸಲ್ಲಿಸುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ವಾರ್ಡ್ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ರಚಿಸಬೇಕಲ್ಲದೆ, ಈ ಸಮಿತಿಗಳು ಕ್ರಿಯಾಶೀಲವಾಗಿದ್ದು, ಹೋಮ್ ಕ್ವಾರಂಟೈನ್ ಉಲ್ಲಂಘನೆಯಾದರೆ ಎಫ್.ಐ.ಆರ್ ದಾಖಲಿಸಬೇಕು ಎಂದು ನಿರ್ದೇಶಿಸಿದರು. ಗಡಿ ಭಾಗಗಳಿರುವ ಜಿಲ್ಲೆಗಳು ಕಟ್ಟುನಿಟ್ಟಾಗಿ ಗಡಿ ಪ್ರದೇಶಗಳನ್ನು ಕಾಯ್ದು, ಅಕ್ರಮ ಪ್ರವೇಶವನ್ನು ತಡೆಯಬೇಕು. ಮೃತ ದೇಹಗಳನ್ನು ಯಾವುದೇ ಕಾರಣಕ್ಕೂ ರಾಜ್ಯದೊಳಗೆ ತರದಂತೆ ನೋಡಿಕೊಳ್ಳಬೇಕೆಂದು ನಿರ್ದೇಶಿಸಿದರು.
ಎಸ್.ಎಸ್.ಎಲ್.ಸಿ / ಪಿ.ಯು.ಸಿ ಪರೀಕ್ಷಾ ದಿನಾಂಕಗಳು ನಿಗದಿಯಾಗಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ ಅಖ್ತರ್ ಹಾಗೂ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಉಪಸ್ಥಿತರಿದ್ದರು.
(ಮಾಹಿತಿ ಕೃಪೆ ಉದಯವಾಣಿ)

Sunday, May 31, 2020

ಹಾಲು ಕರೆಯುವಾಗ ಸಿಡಿಲು ಬಡಿದು ಹಸು ಸೇರಿದಂತೆ ತಂದೆ, ಇಬ್ಬರು ಪುತ್ರಿಯರ ದುರ್ಮರಣ

ಕೋಲಾರ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾರಿ ಮಳೆಗೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಧಾರುಣವಾಗಿ ಸಾವಿಗೀಡಾಗಿದ್ದಾರೆ.
ಕೋಲಾರ ಸಮೀಪದ ಆಂಧ್ರ ಗಡಿ ಚಿತ್ತೂರು ಜಿಲ್ಲೆಯ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ದುರಂತ ಸಂಭವಿಸಿದೆ. ಸಿಡಿಲು ಬಡಿದು ತಂದೆ ಹಾಗೂ ಇಬ್ಬರು ಪುತ್ರಿಯರು ಮತ್ತು ಒಂದು ಹಸು ಮೃತಪಟ್ಟಿದೆ.
ತಂದೆ ರಾಮಕೃಷ್ಣ (52) ಮಕ್ಕಳಾದ ರಮಾದೇವಿ (24) ಹಾಗೂ ಮೀನಾ (22) ಮೃತ ದುರ್ದೈವಿಗಳು. ತೋಟದ ಬಳಿ ಹಸುವಿನಲ್ಲಿ ಹಾಲು ಕರೆಯುತ್ತಿದ್ದ ವೇಳೆ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಿಡಿಲಾಘಾತದಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. (ದಿಗ್ವಿಜಯ ನ್ಯೂಸ್​)
(ಮಾಹಿತಿ ಕೃಪೆ ಪ್ರಜಾವಾಣಿ...)