WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, June 4, 2020

ಸಿದ್ಧಾರ್ಥ್​ ಹೆಗಡೆ ಪುತ್ರನ ಜೊತೆ ಪುತ್ರಿ ಮದುವೆ; ಡಿಕೆಎಸ್​​ಗೆ ಸಿಕ್ಕಿತ್ತು ವಿನಯ್​ ಗುರೂಜಿ ಆಶೀರ್ವಾದ

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ಅವರ ವಿವಾಹ ಕೆಫೆ ಕಾಫೀ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ತ್ಯ ಜೊತೆ ನಡೆಯಲಿದೆ ಅಂತಾ ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ. ವಿಶೇಷ ಅಂದ್ರೆ ಈ ಮದುವೆ ನಿಶ್ಚಿತವಾಗಿದ್ದು ವಿನಯ್​ ಗುರೂಜಿ ಅವರ ಆಶೀರ್ವಾದದಿಂದ ಅಂತ ಹೇಳಲಾಗ್ತಿದೆ
ಶಿವಕುಮಾರ್​​ಗೆ ವಿನಯ್‌ ಗುರೂಜಿ ಸಲಹೆ
ಡಿ.ಕೆ ಶಿವಕುಮಾರ್ ಅವರ ಮಗಳಿಗೆ ಕಂಕಣ ಭಾಗ್ಯ ಕಲ್ಪಿಸಿದ್ದು ವಿನಯ್ ಗುರೂಜಿ ಎಂಬ ಮಾಹಿತಿ ತಿಳಿದುಬಂದಿದೆ. ಮಾರ್ಚ್‌ 19ರಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಮಗಳ ಮದುವೆ ನಡೆದಿತ್ತು. ಅಂದು ಚಿಕ್ಕಮಗಳೂರಿಗೆ ಡಿ.ಕೆ.ಶಿವಕುಮಾರ್ ಆಗಮಿಸಿದ್ರು. ಈ ವೇಳೆ ವಿನಯ್ ಗುರೂಜಿ ಕೂಡಾ ಮದುವೆಗೆ ಆಗಮಿಸಿದ್ರು. ಈ ವೇಳೆ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಶಿವಕುಮಾರ್, ತಮ್ಮ ಮಗಳ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗ ವಿನಯ್ ಗುರೂಜಿ ಮದುವೆಗೆ ಒಪ್ಪಿಗೆ ಸೂಚಿದ್ದಾರೆ. ಹೀಗಾಗಿ ಇಂದು ಡಿ.ಕೆ.ಶಿವಕುಮಾರ್ ಮಗಳ ಮದುವೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ನಿಮ್ಮ ಸಲಹೆ ಆಶೀರ್ವಾದದಂತೆ ನಮ್ಮ ಮಗಳ ಮದುವೆ ನಿಶ್ಚಿತವಾಗಿದೆ‌ ಅಂತಾ ದೂರವಾಣಿ ಕರೆ ಮೂಲಕ ಡಿ.ಕೆ.ಶಿವಕುಮಾರ್, ವಿನಯ್ ಗುರೂಜಿಗೆ ಧನ್ಯವಾದ ತಿಳಿಸಿದ್ದಾರೆ ಎನ್ನಲಾಗಿದೆ.
 

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ