WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, May 28, 2023

ದೆಹಲಿಯಲ್ಲಿದ್ದಂತೆ ಉಚಿತ ವಿದ್ಯುತ್‌ಗೂ ಬೀಳುತ್ತಾ ಕಂಡೀಷನ್ಸ್? ಕನ್ನಡಿಗರಿಗೆ ದುಬಾರಿಯಾಗುತ್ತಾ ಫ್ರೀ ಕರೆಂಟ್?

 


ಹೇಗೂ ಕರೆಂಟ್ ಫ್ರೀ ಸಿಗುತ್ತೆ ಅಂತ ಯೋಚನೆ ಮಾಡಿರುವ ಜನರು, ವಿದ್ಯುತ್ ಉಪಕರಣಗಳನ್ನು ಖರೀದಿ ಮಾಡಲು ಶುರು ಮಾಡಿದ್ದಾರಂತೆ.
ಬೆಂಗಳೂರು: ಗೃಹಜ್ಯೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ಉಚಿತ, ಯುವನಿಧಿ ಯೋಜನೆ ಅಡಿ ಪದವೀಧರರಿಗೆ 3000 ಸಾವಿರ, ಡಿಪ್ಲೊಮೊ ಪದವೀಧರರಿಗೆ 1500 ನಿರುದ್ಯೋಗ ಭತ್ಯೆ, ಅನ್ನಭಾಗ್ಯ ಅಡಿ 10 ಕೆಜಿ ಅಕ್ಕಿ ಉಚಿತ, ಗೃಹ ಲಕ್ಷಿ ಯೋಜನೆ ಅಡಿ ಪ್ರತಿ ಮನೆಯ ಯಜಮಾನಿಗೆ 2000 ಸಾವಿರ ರೂಪಾಯಿ ಭತ್ಯೆ ನೀಡಲಾಗುತ್ತದೆ ಎಂಬ ಭರವಸೆಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಗದ್ದುಗೆ ತಂದು ಕೊಟ್ಟಿದೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ 2019ರಿಂದ ಅಧಿಕಾರ ವಹಿಸಿಕೊಂಡ ಬಳಿಕ ಎಎಪಿ ಸರ್ಕಾರ ರಾಜ್ಯದ ಜನರಿಗೆ 200 ಯೂನಿಟ್​ ಉಚಿತ ವಿದ್ಯುತ್ ನೀಡಿತ್ತು. ಮೊದಲಿಗೆ ರಾಜ್ಯದ ಎಲ್ಲಾ ಫಲಾನುಭವಿಗಳಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡಿತ್ತು.

ಆದರೆ, ಸದ್ಯ ಉಚಿತ 200 ಯೂನಿಟ್ ವಿದ್ಯುತ್ ಯೋಜನೆಯಲ್ಲಿ ಡೆಲ್ಲಿ ಸರ್ಕಾರ ಪ್ರಮುಖ ಷರತ್ತು ಒಂದನ್ನು ಜನರಿಗೆ ವಿಧಿಸಿದೆ. ರಾಜ್ಯದ ಎಲ್ಲ ಜನರಿಗೂ ಉಚಿತವಾಗಿ ವಿದ್ಯುತ್ ನೀಡದೆ, ಅರ್ಜಿ ಸಲ್ಲಿಕೆ ಮಾಡಿದವರಿಗೆ ಮಾತ್ರ ಸಬ್ಸಿಡಿ ನೀಡುತ್ತಿದೆ. 58 ಲಕ್ಷ ಗ್ರಾಹಕರಲ್ಲಿ 48 ಲಕ್ಷ ಮಂದಿ ಉಚಿತ ವಿದ್ಯುತ್​​ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಅಂದರೆ, ದೆಹಲಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದರೆ ಮಾತ್ರ ಉಚಿತ ನೀಡಲಾಗುತ್ತಿದೆ. ಉಳಿದಂತೆ 200 ಯೂನಿಟ್ ವಿದ್ಯುತ್ ಮಾತ್ರ ಉಚಿತ ಕೊಡಲಾಗುತ್ತಿದೆ. 201 ರಿಂದ 400 ಯೂನಿಟ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಶೇಕಡಾ 50 ಡಿಸ್ಕೌಂಟ್​ ನೀಡಲಾಗುತ್ತಿದೆ. ಅದಕ್ಕಿಂತ ವಿದ್ಯುತ್ ಬಳಕೆ ಹೆಚ್ಚಾದರೆ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ದೆಹಲಿಯಲ್ಲಿ ಈ ಯೋಜನೆ ಜಾರಿ ತಂದ ಸಂದರ್ಭದಲ್ಲೂ ಬಿಜೆಪಿ ಉಚಿತ ವಿದ್ಯುತ್ ನೀಡುವುದನ್ನು ಟೀಕೆ ಮಾಡಿತ್ತು. ಈ ನಡುವೆ ಸಿಎಂ ಕೇಜ್ರಿವಾಲ್​, ಅರ್ಜಿ ಸಲ್ಲಿಕೆ ಮಾಡಬೇಕು ಎಂದು ನಿಯಮ ರೂಪಿಸಿದರು.

ಇನ್ನು, ಕರ್ನಾಟಕ್ಕೆ ಹೊಲಿಕೆ ಮಾಡಿಕೊಳ್ಳುವುದಾದರೆ ದೆಹಲಿ ಚಿಕ್ಕ ರಾಜ್ಯವಾಗಿದ್ದು, ಜನ ಸಂಖ್ಯೆಯೂ ಕಡಿಮೆ ಇದೆ. ಆದರೆ ನಮ್ಮ ರಾಜ್ಯದಲ್ಲಿ ಯಾವುದೇ ಷರತ್ತು ಇಲ್ಲದೇ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಕೊಡುವುದು ಕಷ್ಟ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಏನೆಲ್ಲಾ ಷರತ್ತುಗಳನ್ನು ಮುಂದಿಡಲಿದೆ ಅಂತ ನಿರೀಕ್ಷೆಯ ಕಣ್ಗಗಳಲ್ಲಿ ಜನರು ಕಾಯುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ನೂತನ ಸಂಪುಟ ರಚನೆ ಬೆನ್ನಲ್ಲೇ ಎಲ್ಲಾ ಕಡೆಯೂ ಕಾಂಗ್ರೆಸ್ ಗ್ಯಾರಂಟಿಗಳದ್ದೆ ಮಾತಾಗಿದ್ದು, ಅದರಲ್ಲೂ ಹಳ್ಳಿಗಳಲ್ಲಿ ಉಚಿತ ಕರೆಂಟ್ ಕೊಡ್ತೀವಿ ಅಂತ ಸರ್ಕಾರ, ನಮ್ಮ ಶಾಸಕರು ಹೇಳಿದ್ದಾರೆ. ಆದ್ದರಿಂದ ನಾವು ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದು ವಿದ್ಯುತ್ ಇಲಾಖೆಯ ಸಿಬ್ಬಂದಿಯೊಂದಿಗೆ ವಾದ ಮಾಡುತ್ತಿರುವ ಹಲವು ಘಟನೆಗಳು ವರದಿಯಾಗಿದೆ.

ಇದರ ನಡುವೆಯೇ ಕೆಲವರು ಹೇಗೂ ಕರೆಂಟ್ ಫ್ರೀ ಸಿಗುತ್ತೆ ಅಂತ ಯೋಚನೆ ಮಾಡಿರುವ ಜನರು, ವಿದ್ಯುತ್ ಉಪಕರಣಗಳನ್ನು ಖರೀದಿ ಮಾಡಲು ಶುರು ಮಾಡಿದ್ದಾರಂತೆ. ವಿದ್ಯುತ್ ಉಪಕರಗಣಗಳ ಬೇಡಿಕೆಯೂ ಶಾಪ್​​ಗಳಲ್ಲಿ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 200 ಯೂನಿಟ್ ವಿದ್ಯುತ್ ಬಳಸಿಕೊಳ್ಳಲು ಜನರ ಪ್ಲ್ಯಾನ್ ಮಾಡಿ ಕರೆಂಟ್ ಸ್ಟೌ, ಎಸಿ, ಫ್ಯಾನ್ ಸೇರಿದಂತೆ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಖರೀದಿ ಮಾಡ್ತಿದ್ದಾರಂತೆ.


No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ