WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, October 10, 2025

ದಿನಾಂಕ:- 10/10/2025 ಪೇಪರ್ ಚಿತ್ರ ನ್ಯೂಸ್

 ಈ ದಿನದ ನ್ಯೂಸ್ ಪೇಪರ್ ಇಂದ ಈ ಇಮೇಜ್ ಅನ್ನು ಕಟ್ ಮಾಡಿ ಹಾಕಲಾಗಿರುತ್ತದೆ...

ದಿನಾಂಕ:- 10/10/2025...
ನಿಮಗೂ ಈ ರೀತಿ ಪೇಪರ್ ಕಟಿಂಗ್ ಇಷ್ಟವಾದಲ್ಲಿ 
ಕಮೆಂಟ್ ಮಾಡಿ ತಿಳಿಸಿ 
ಪ್ರತಿದಿನವೂ 
ಪಾಪ್ಯುಲರ್ ನ್ಯೂಸ್ ಹಾಕಲಾಗುವುದು

ಫುಲ್ ಚಿತ್ರ ನೋಡಲು 
ಇಮೆಜಾನ್ ಕ್ಲಿಕ್ ಮಾಡಿ..




ಮಾಹಿತಿ ಹಕ್ಕು ಅಧಿನಿಯಮ - 2005 ಜಾರಿಗೆ ಬಂದು 20 ವರ್ಷಗಳೇ ಆದವು. ವ್ಯವಸ್ಥೆಗಳು ಬದಲಾದವಾ...?


ಮಾಹಿತಿ ಹಕ್ಕು ಅಧಿನಿಯಮ - 2005 ಜಾರಿಗೆ ಬಂದು 20 ವರ್ಷಗಳೇ ಆದವು. ವ್ಯವಸ್ಥೆಗಳು ಬದಲಾದವಾ...? ಭ್ರಷ್ಟಾಚಾರ ನಿರ್ಮೂಲನೆಯಾಯಿತಾ...? ಕೊನೇಪಕ್ಷ ಪಕ್ಷ ಲಂಚ ನಿಂತು ಹೋಯಿತಾ...? ಅಕ್ರಮ, ಅನಾಚಾರ, ಅಧರ್ಮ ಕೊನೆಗೊಂಡವಾ..? ಉಹ್ಞುಂ, ಯಾವುದೂ ಒಂದು ಪರ್ಸೆಂಟ್ ಕೂಡ ಕಡಿಮೆಯಾಗಲಿಲ್ಲ. ಯಾಕೆ ಹೀಗೆ...? ಲೋಪ ಆಗಿದ್ದೆಲ್ಲಿ...? ಮಾಹಿತಿ ಹಕ್ಕು ಅಧಿನಿಯಮವೇ ಸತ್ವಹೀನವಾದುದಾ...? ಇಲ್ಲ. ಅದು ಸದೃಢವಾಗಿಯೇ ಇದೆ. ಹಾಗಾದರೆ, ಸೋತದ್ದೆಲ್ಲಿ...? ಮತ್ತು ಏಕೆ...? Well, ನಾವು ಆಲೋಚಿಸಬೇಕು ಮತ್ತು ಚರ್ಚಿಸಬೇಕು. ಅದಕ್ಕಾಗಿಯೇ ಈ ಕಾರ್ಯಾಗಾರ.

ದಿ: 12-10-2005 ರಂದು ಮಾಹಿತಿ ಹಕ್ಕು ಅಧಿನಿಯಮ ಜಾರಿಗೆ ಬಂತು. Drive Against Bribe With RTI ಎಂಬ ಪ್ರಯತ್ನಗಳು ಸಾಗಿದವು. ಅನೇಕರು ಅನೇಕ ರೀತಿಗಳಲ್ಲಿ ಈ ಕಾನೂನನ್ನು ಬಳಸಿಕೊಂಡರು. ಆದರೆ, ಸಂಘಟಿತ ಪ್ರಯತ್ನ ದೊಡ್ಡ ಮಟ್ಟದಲ್ಲಿ ಆಗುತ್ತಿರುವ ಹಾಗೆ ಕಾಣುತ್ತಿಲ್ಲ. ಹಿಂದೆ ನಾನು, ರಮೇಶ ಕುಣಿಗಲ್ ಸೇರಿದಂತೆ ಒಂದಷ್ಟು ಸಮಾನ ಮನಸ್ಕರು ಸೇರಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ಎಂಬುದೊಂದು ರಚಿಸಿ, ಅದಕ್ಕೆ ರಮೇಶ ರಾಜ್ಯಾಧ್ಯಕ್ಷರಾದರು, ನಾನು ರಾಜ್ಯ ಉಪಾಧ್ಯಕ್ಷನಾದೆ. ಕಲ್ಯಾಣ ಕರ್ನಾಟಕ ಉಸ್ತುವಾರಿಯೂ ಆದೆ. ಅದಕ್ಕೂ ಮುಂಚೆ 2011 ರಿಂದ ನಾನೇ ಭ್ರಷ್ಟಾಚಾರ ಮುಕ್ತ ಕರ್ನಾಟಕ ಅಂಥ ಒಂದು ಸಂಘಟನೆ ಮಾಡಿ, ರಾಜ್ಯಾಧ್ಯಕ್ಷನೂ ಆದೆ‌. ಆದರೆ, ಎಲ್ಲೂ ಘಟಕಗಳು ತಲೆ ಎತ್ತಲಿಲ್ಲ. ಒಟ್ಟಾರೆ ವ್ಯವಸ್ಥೆಯ ಸುಧಾರಣೆಗಳಾಗಬೇಕೆಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ -ಹೀಗೊಂದು ಕನಸು ಎಂಬ ಕೃತಿಯನ್ನು ರಚಿಸಿ, ನ್ಯಾ. ಸಂತೊಕಷ ಹೆಗ್ಡೆ ಅವರಿಂದ ಬಿಡುಗಡೆಗೊಳಿಸಿದೆ. ಅದರಿಂದಲೂ ಏನಾದರೂ ಉಪಕಾರವಾಯಿತೆಂದು ಅನ್ನಿಸಲಿಲ್ಲ. ಇದರ ಮಧ್ಯೆಯೇ ಎದ್ದು ನಿಂತದ್ದು ಕರ್ನಾಟಕ ರಾಷ್ಟ್ರ ಸಮಿತಿ ( KRS ) ಪಕ್ಷ. Yes, ಇದೊಂದು ರಾಜಕೀಯ ಪಕ್ಷ. 

ಒಟ್ಟಾರೆ ಸುಧಾರಣೆಗಳು ಸಾಧ್ಯವಾಗಬೇಕು ಎಂದರೆ ಒಂದು ಸರ್ಕಾರವೇ ಒಳ್ಳೆಯವರ ಕೈಗೆ ಸಿಗಬೇಕು. ಅವರು ಶಾಸನ ಗಳನ್ನು ರೂಪಿಸುತ್ತಾ ಹೋಗಬೇಕು. ಯಾವುದೇ ಕಾನೂನುಗಳು ಜಾರಿಗೆ ಬಂದಿದ್ದು ಕೂಡ ವ್ಯವಸ್ಥೆಯ ಸುಧಾರಣೆಗಳಿಗಾಗಿ. ಆದರೆ, ಸುಧಾರಣೆಗಳಾಗುತ್ತಲೇ ಇಲ್ಲ. ಕಳ್ಳರ ಕೈಗೆ ಅಧಿಕಾರ ಕೊಟ್ಟು ಒಳ್ಳೊಳ್ಳೆ ಕೆಲಸಗಳನ್ನು ಮಾಡುತ್ತಾರೆಂದು ನಿರೀಕ್ಷಿಸುವುದು ಮೂರ್ಖತನ ವಾಗುತ್ತದೆ. ಹಾಗಾಗಿ, ಏನೇ ಆಗಲಿ, ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ ಎನ್ನುವವರ ಕೈಗೆ ಅಧಿಕಾರ ಕೊಡಬೇಕು. ಅದೆಂದರೆ, KRS ಪಕ್ಷ. 

ಈ ನಿಟ್ಟಿನಲ್ಲಿ KRS ಪಕ್ಷ ರಾಜ್ಯ SC ST ಘಟಕ ಒಂದಷ್ಟು ಮೈಕೊಡವಿ ಎದ್ದು ನಿಂತಿದ್ದು, ಪಕ್ಷ ಸದೃಢಗೊಳ್ಳಲು ಇರುವ ಅವಕಾಶಗಳನ್ನೆಲ್ಲಾ ಬಳಸಿಕೊಳ್ಳಬೇಕು ಮತ್ತು ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ನಿಶ್ಚಿಯಿಸಿದೆ. ಅದರ ಭಾಗವೇ RTI. RTI ಅನ್ನು ಬಳಸುವುದು ತುಂಬಾ common ಎಂಬಂಥ ಹಂತಕ್ಕೆ ತಂದು ನಿಲ್ಲಿಸಿದಾಗ, ಬಳಸುವವರ ಸಂಖ್ಯೆ ಹೆಚ್ಚಾದಂತೆಲ್ಲಾ, ಸುಧಾರಣೆಗಳು ಸಾಧ್ಯವಾಗುತ್ತಾ ಹೋಗುತ್ತವೆ. ಅದರ ಮೊದಲ ಹಂತವೆಂದರೆ, ತಾವು ಭ್ರಷ್ಟಾಚಾರದಿಂದ ಬಚಾವಾಗುತ್ತಾ ಹೋಗುತ್ತಾರೆ. ಇದು ಮೊದಲ ಬೆಳವಣಿಗೆ. ನಾನು ಲಂಚ ಕೊಡಲಿಲ್ಲ; ಭ್ರಷ್ಟಾಚಾರಕ್ಕೆ ಒಳಗಾಗಲಿಲ್ಲ; ನನ್ನ ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಂಡು ಬಂದರೆ, ಈ ಸದ್ಯದ ದೊಡ್ಡ ಗೆಲುವು ಅದೇ ಆಗುತ್ತದೆ. ಹಾಗೆಂದೇ, KRS ಪಕ್ಷ ರಾಜ್ಯ SC ST ಘಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಬಂದು ಮಾಹಿತಿ ಹಕ್ಕು ತರಬೇತಿ ನೀಡಲು ಮುಂದಾಗಿದೆ. ಅದರ ಮೊದಲ ಪ್ರಯತ್ನವೇ ನಾಡಿದ್ದು ಹೊಸಪೇಟೆಯಲ್ಲಿ ಈ ಕಾರ್ಯಾಗಾರ‌. 

ಹೊಸಪೇಟೆಯಲ್ಲಿ ಮಾಡುತ್ತಿರುವುದು ಸರಿ‌. ಹೊಸಪೇಟೆಯ ಯಾವ ಸ್ಥಳದಲ್ಲಿ...? ಎಂಬುದು ಇನ್ನೂ ನಿಕ್ಕಿಯಾಗಿಲ್ಲ. ಯಾಕೆಂದರೆ, ಯಾವುದೇ Hall ನಲ್ಲಿ ಕಾರ್ಯಾಗಾರ ಮಾಡಬೇಕೆಂದರೂ ಹಣ ಕೊಡಬೇಕು. ನಮ್ಮ ಘಟಕದಲ್ಲಿ ಹಣವಿಲ್ಲ. ಹಾಗಾಗಿ, ಸ್ಥಳ ಅಖೈರುಗೊಳಿಸಿಲ್ಲ. ದಾನಿಗಳು ಮುಂದೆ ಬಂದು, ಹಾಲ್ ಬುಕ್ ಮಾಡಿ ಕೊಟ್ಟರೆ ಉಪಕಾರವಾದೀತು. 

ದೇಣಿಗೆ ನೀಡುವವರು KRS ಪಕ್ಷದ QR Code ಗೆ ನೇರವಾಗಿ ದೇಣಿಗೆ ನೀಡಿ, ನನ್ನ ನಂಬರ್'ಗೆ ವಾಟ್ಸಪ್ ಮಾಡಿದರೆ ಉಪಕಾರವಾದೀತು. ದಯವಿಟ್ಟು ದೇಣಿಗೆ ನೀಡಿ. ಮತ್ತು ಮುಖ್ಯವಾಗಿ, ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ ದಯವಿಟ್ಟು ಪಾಲ್ಗೊಳ್ಳಿ... 🙏

ದಿ: 12-10-2025.
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ‌.

ಪ.ಯ. ಗಣೇಶ,
ರಾಜ್ಯಾಧ್ಯಕ್ಷ,
KRS ಪಕ್ಷ ರಾಜ್ಯ SC ST ಘಟಕ
9481 711 600.


 

Wednesday, October 8, 2025

ದಿನಾಂಕ:- 08/10/2025 ಪೇಪರ್ ಚಿತ್ರ ನ್ಯೂಸ್


ಈ ದಿನದ ನ್ಯೂಸ್ ಪೇಪರ್ ಇಂದ ಈ ಇಮೇಜ್ ಅನ್ನು ಕಟ್ ಮಾಡಿ ಹಾಕಲಾಗಿರುತ್ತದೆ...
ದಿನಾಂಕ:- 08/10/2025...
ನಿಮಗೂ ಈ ರೀತಿ ಪೇಪರ್ ಕಟಿಂಗ್ ಇಷ್ಟವಾದಲ್ಲಿ 
ಕಮೆಂಟ್ ಮಾಡಿ ತಿಳಿಸಿ 
ಪ್ರತಿದಿನವೂ 
ಪಾಪ್ಯುಲರ್ ನ್ಯೂಸ್ ಹಾಕಲಾಗುವುದು

ಫುಲ್ ಚಿತ್ರ ನೋಡಲು 
ಇಮೆಜಾನ್ ಕ್ಲಿಕ್ ಮಾಡಿ..



Saturday, March 8, 2025

ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

                             ಕಣ್ಣಿಗೆ ಕಾಣುವ ದೇವತೆ

ಗರ್ಭವೆಂಬ ಸ್ವರ್ಗದೊಳು

ನವಮಾಸ ಹೊತ್ತುಕೊಂಡು

ಧರೆಯ ನಿಸರ್ಗಕ್ಕೆ ನನ್ನ ತಂದಾಕೆ.


ತಾರೆಗಳ ಊರಿನೊಳು

ನಲಿವ ಚಂದಿರನ ತೋರಿಸಿ

ಒಡಲಿಗೆ ಕೈತುತ್ತನು, ತಿನಿಸಿದಾಕೆ.


ಕಲ್ಲು ದೇವರಿಗಿಂತ

ಕಲ್ಲು ಸಕ್ಕರೆಯಂತ ಸಿಹಿ

ಗುಣದ ಮೃದು ಮನಸ್ಸುಳ್ಳಾಕೆ


ಕೆಟ್ಟ ದೃಷ್ಟಿಯ ಕಣ್ಣು

ಕಂದನಿಗೆ ಕಾಡದಿರಲೆಂದು

ಸೆರಗಿನ ಮರೆ ಅಮೃತ ಕೊಟ್ಟಾಕೆ


ಅತ್ತಾಗ ರಮಿಸಲು ನಡು

ಇರುಳು ನಿದ್ರೆಯ ತೊರೆದು

ಮಲ ಮೂತ್ರವನ್ನ ತೊಳೆದಾಕೆ


ಮನೆಯನ್ನು, ಶಾಲೆ ಮಾಡಿ

ಕಂದಗೆ ಮೊದಲ ಗುರುವಾಗಿ

ಈ. ಜಗದಿ ನಗುನಗುತ ಮೆರೆದಾಕೆ


ಎಷ್ಷೇ ಹುಟ್ಟು ತಾಳಿದರು

ಈ.ನಿನ್ನ ಮಮತೆ ಋಣವು

ತೀರಿಸಲಾಗದು ನಮ್ಮ ಜನುಮಕೆ.!


ಎಲ್ಲರಿಗೂ ವಿಶ್ವ ಮಹಿಳಾ

ದಿನಾಚರಣೆಯ ಶುಭಾಶಯಗಳು


Thursday, March 6, 2025

ನಲ್ಲಾಪುರ ಗ್ರಾಮದ ಸಮಸ್ಯೆ ಕುರಿತು ಜನರ ಮಾತು

ನಮ್ಮ ಸೀತಾರಾಮ ತಾಂಡ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ನಲ್ಲಾಪುರ ಗ್ರಾಮದಲ್ಲಿ ... ( ಓವರ್‌ಹೆಡ್‌ ಟ್ಯಾಂಕ್‌) ಏರ್ ಟ್ಯಾಂಕ್ ನೀರಿನ ಸಮಸ್ಯೆ , ನೀರು ಬಿಡುವ ಗ್ರಾಮಪಂಚಾಯತ್ ಆಪರೇಟರ್ ಸರಿಯಾದ ರೀತಿಯಲ್ಲಿ ನೀರು ಬಿಡುತ್ತಿಲ್ಲ ಹಾಗೂ ಚರಂಡಿಯ ಸಮಸ್ಸೆ  ಬಹಳ ಇದೆ  ಸಾರ್ವಜನಿಕ ಮಹಿಳಾ ಶೌಚಾಲಯ ಅದಗ್ಗೆಟ್ಟಿರುವುದರ ಕುರಿತು ನಿಮ್ಮಲ್ಲಿ ಮನವಿ ಮಾಡಿ ಹೇಳು ತಿದ್ದೇವೆ.. ಇದರ ಬೆನ್ನಲ್ಲೇ, ದಯವಿಟ್ಟು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಶೀಘ್ರ ಕ್ರಮ ಕೈಗೊಳ್ಳಲ್ಲು ಮನವಿ ಮಾಡುತ್ತೇನೆ. ಹಳ್ಳಿಯ ಜನತೆಗೆ ಉತ್ತಮ ಸೌಲಭ್ಯ ಒದಗಿಸಲು ನಿಮ್ಮ ಸಹಕಾರ ಬಹಳ ಮುಖ್ಯವಾಗಿದೆ..


 

Monday, February 24, 2025

ಚಲನಚಿತ್ರೋತ್ಸವಕ್ಕೆ ತಿರಸ್ಕೃತಗೊಂಡ ಪಪ್ಪಿ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ

           

ಲೈಟ್ ಬಾಯ್ ಆಗಿದ್ದ ಆಯುಷ್ ಮಲ್ಲಿ ಸಿನಿಮಾ ಸಾಹಸ

ಉತ್ತರ ಕರ್ನಾಟಕದ ಜನಜೀವನ ಕುರಿತ ಪಪ್ಪಿ ಸಿನಿಮಾ ಟ್ರೇಲರ್ ಬಹಳ ಸದ್ದು ಮಾಡುತ್ತಿದೆ. ಈ ಸಿನಿಮಾದ ನಿರ್ದೇಶಕ ಆಯುಷ್ ಮಲ್ಲಿ ತನ್ನ  ಬದುಕಿನ ಕಥೆ, ಸಿನಿಮಾ ಮಾಡಿದ ಸಾಹಸಗಳನ್ನಿಲ್ಲಿ ವಿವರಿಸಿದ್ದಾರೆ.

* ಪ್ರಿಯಾ ಕೆರ್ವಾಶೆ


* ನನ್ನ ಹುಟ್ಟೂರು ಉತ್ತರ ಕರ್ನಾಟಕದ ಸಿಂಧನೂರು. ಪಿಯುಸಿಯಲ್ಲಿ ಡುಮ್ಮಿ ಹೊಡೆದೆ. ಆಮೇಲೆ ಸಿನಿಮಾ ಮಾಡಬೇಕು ಅಂತ ಬೆಂಗಳೂರಿ ಗೇನೋ ಬಂದೆ. ಐಬಿಎಂನಲ್ಲಿ ಇಟ್ಟಿಗೆ ಶಿಫ್ಟ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸೀರಿಯಲ್ ಸೆಟ್‌ನಲ್ಲಿ ಲೈಟ್ ಬಾಯ್ ಕೆಲಸ ಸಿಕ್ಕಿತು. ಆಮೇಲೆ ಅಲ್ಲೇ ಪ್ರೊಡಕ್ಷನ್ ಬಾಯ್, ಅಸಿಸ್ಟೆಂಟ್ ಡೈರೆಕ್ಟರ್‌ ತನಕ ಕೆಲಸ ಸಿಕ್ಕಿತು.


* ಕಳೆದ ನಾಲೈದು ವರ್ಷಗಳಿಂದ ಸರಿಯಾದ ಅವಕಾಶ ಸಿಗದೆ ಊರು, ಬೆಂಗಳೂರಿನ ನಡುವೆ ಅಲೆದಾಡುತ್ತಿದ್ದೆ. ತುಂಬಿದ ಬಸ್ಸಿನಲ್ಲಿ ನಮ್ಮೂರ ಜನರ ಜೊತೆ ಓಡಾಟ. ಡಾಬಾದಲ್ಲಿ ಊಟಕ್ಕೆ ಅಂತ ಬಸ್ ನಿಲ್ಲಿಸಿದರೆ ಜನ ಅಲ್ಲಿ ಊಟ ಮಾಡಲು ದುಡ್ಡಿಲ್ಲದೆ, ದೂರದಲ್ಲಿ ಕೂತು ತಾವು ಮನೆಯಿಂದ ಕಟ್ಟಿಕೊಂಡು ಬಂದ ಒಣರೊಟ್ಟಿ, ಖಾರಪುಡಿ ತಿನ್ನುತ್ತಿದ್ದರು. ಕೆಲವರು ಬಸ್ಸಿಗೂ ಕಾಸಿಲ್ಲದೆ ಟ್ರಕ್‌ನಲ್ಲಿ ಓಡಾಡುತ್ತಿದ್ದರು. ಆದರೂ ಬೆಂಗಳೂರಿಗೆ ಬಂದಿಳಿದಾಗ ಅವರ ಮುಖದಲ್ಲೊಂದು ಹುಮ್ಮಸ್ಸು, ವಿಧಾನಸೌಧ ಕಂಡಾಗ ಆಗುವ ಖುಷಿ ಇವೆಲ್ಲ ನನ್ನನ್ನು ಬಹಳ ಕಾಡಿಸಿತ್ತು. ಇದನ್ನೆಲ್ಲ ಸಿನಿಮಾ ಮೂಲಕ ಹೇಳಬೇಕು ಅಂತ ತೀವ್ರವಾಗಿ ಅನಿಸುತ್ತಿತ್ತು.


* ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್

ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ. ಜೊತೆಗೆ ದೊಡ್ಡವರ ಮೂಲಕ ಕಥೆ ಹೇಳೋದಕ್ಕಿಂತ ಹುಡುಗರ ಮೂಲಕ ಹೇಳಿದರೆ ಪರಿಣಾಮಕಾರಿ ಅನಿಸಿತು. ಹಾಗೆ ರೀಲ್ಸ್ ಮಾಡುತ್ತಿದ್ದ ಕೊಪ್ಪಳದ ಹುಡುಗ ಜಗದೀಶ ಮತ್ತು ನನ್ನ ಸಂಬಂಧಿ ಆದಿ

ಎಂಬ ಹುಡುಗನನ್ನು ಹಾಕಿಕೊಂಡು ಸಿನಿಮಾ ಕೆಲಸ ಶುರು ಮಾಡಿದೆ. 15 ದಿನದಲ್ಲಿ ಸಿನಿಮಾ ಶೂಟಿಂಗ್ ಕೆಲಸ ಮುಗಿಸಿದ್ದೇವೆ.

* ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕಳಿಸಿದ್ದೆ. ತಿರಸ್ಕೃತಗೊಂಡಿತು. ಕಾರಣ ಕೇಳಿದಾಗ ಒಂದು ಲೆಟರ್‌ಹೆಡ್‌ ನೀಡಿದರು. ಅದರಲ್ಲಿ ನಿರ್ದೇಶನ, ಸಿನಿಮಾಟೋಗ್ರಫಿ, ನಟನೆ ಸೇರಿ ಎಲ್ಲಾ ವಿಭಾಗಕ್ಕೂ ಅತ್ಯಂತ ಕನಿಷ್ಠ ಸಿ ಗ್ರೇಡ್ ಕೊಟ್ಟಿದ್ದರು. ಜೊತೆಗೆ ಮಕ್ಕಳ ಅಭಿನಯ ಮನಮುಟ್ಟುವಂತಿಲ್ಲ, ಚಲನಚಿತ್ರೋತ್ಸವಕ್ಕೆ ಈ ಸಿನಿಮಾ ಅನರ್ಹ ಎಂದು ಷರಾ ಬರೆದಿದ್ದರು. ನನ್ನ ಕೆಲಸಕ್ಕೆ ಏನಾದ್ರೂ ಹೇಳಲಿ, ಆದರೆ ಮಕ್ಕಳ ನಟನೆಗೆ ಹೀಗಂದರಲ್ಲ ಅಂತ ಬಹಳ ನೋವಾಯ್ತು. ನಾಲ್ಕು ಜನರಿಗಾದರೂ ನಮ್ಮ ಸಿನಿಮಾ ಮುಟ್ಟಲಿ ಎಂದು ಟ್ರೇಲರ್ ಕಟ್ ಮಾಡಿ ರಿಲೀಸ್ ಮಾಡಿದೆ.

* ಹಲವು ಮಂದಿ ಇಂಡಸ್ಟ್ರಿಯ ದಿಗ್ಗಜರು ಫೋನ್ ಮಾಡಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಸಾಕಷ್ಟು ಮಂದಿ ಸೋಷಲ್ ಮೀಡಿಯಾದಲ್ಲಿ ಟ್ರೇಲರ್‌ಶೇ‌ರ್ ಮಾಡಿಕೊಂಡರು.

:-ಕನ್ನಡಪ್ರಭ






Friday, February 21, 2025

ವಿಶ್ವ ಮಾತೃ ಬಾಷಾ ದಿನ ಶುಭಾಶಯಗಳು


ವಿಶ್ವ ಮಾತೃ ಬಾಷಾ ದಿನ (Internationl Mother Language Day  ) ಅನ್ನು ಪ್ರತಿ ವರ್ಷ ಫೆಬ್ರವರಿ 21 ರಂದು ಆಚರಿಸಲಾಗುತ್ತದೆ.

ಈ ದಿನವನ್ನು ಯುನೆಸ್ಕೋ ( UNESCO ) 1999 ರಲ್ಲಿ ಘೋಷಿಸಿ, 2000 ರಿಂದ

ಅಧಿಕೃತವಾಗಿ ಆಚರಿಸಲಾಗುತ್ತಿದೆ.

ಉದ್ದೇಶ:- ಮಾತೃಭಾಷೆಗಳ ಸಂರಕ್ಷಣೆ ಮತ್ತು ಪ್ರಚಾರ.

ಭಾಷಾ ವೈವಿಧ್ಯತೆ ಮತ್ತು ಬಹುಭಾಷ ಸಂಸ್ಕೃತಿಯನ್ನು ಉತ್ತೇಜಿಸಲು.

ವಿಶ್ವದಾದ್ಯಂತ ಭಾಷೆಗಳ ಮೌಲ್ಯವನ್ನು ಒತ್ತಿ ಹೇಳಲು.

ಇತಿಹಾಸ:- ಈದಿನದ ಹಿಂದೆ 1952 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾಷಾ ಚಳುವಳಿ

(Language Movement ) ಕೀಳಾಗಿದೆ. ಪಾಕಿಸ್ತಾನ ಸರ್ಕಾರ ಬಾಂಗ್ಲಾ ಭಾಷೆಗೆ ವಿರೋಧ ವ್ಯಕ್ತಪಡಿಸಿದಾಗ, ವಿದ್ಯಾರ್ಥಿಗಳು ಆಪತ್ತಿನ ವಿರುದ್ದ ಹೋರಾಟ ನಡೆಸಿದರು. ಫೆಬ್ರವರಿ 21, 1952 ರಂದು ಕೆಲ ವಿದ್ಯಾರ್ಥಿಗಳು ಪೊಲೀಸರ ಗುಂಡಿಗೆ ಬಲಿಯಾದರು. ಅವರ ಬಲಿದಾನವನ್ನು ಗೌರವಿಸಲು, ಈ ದಿನವನ್ನು ಮಾತೃಭಾಷ ದಿನವಾಗಿ ಘೋಷಿಸಲಾಯಿತು.





Friday, January 31, 2025

ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ

 ಜೆ. ಕಾರ್ತಿಕ್‌

            ಪುಣ್ಯಸ್ಮರಣೆ ಕಾರ್ಯಕ್ರಮ




ವಿಜಯನಗರ ಹೊಸಪೇಟೆ 
ಸ್ಥಳ: ಮಹಾತ್ಮಾ ಗಾಂದಿ ವೃತ್ತ
ಸಮಯ ಬೆಳಿಗ್ಗೆ 11:00 ಗಂಟೆಗೆ
ದಿನಾಂಕ: 31-01-2025 ಅವರು ನಿಧಾನರಾಗಿ 1 ವರ್ಷವಾಗಿರುತ್ತದೆ ಅದರ ನೆನಪಿನಾರ್ಥವಾಗಿ ಶುಕ್ರವಾರದಂದು ಇದೆ ತಿಂಗಳು ಮಹತ್ಮಾ ಗಾಂದಿ ವೃತ್ತದಬಳಿ ಹೊಸಪೇಟೆಯಲ್ಲಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಲ್ಲಾ ರೈತರು ಹಾಗು ಸಾರ್ವಜನಿಕರು ಬಾಗವಹಿಸಿ ಈ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು...









Tuesday, January 14, 2025

ಮಕರ ಸಂಕ್ರಾಂತಿ ಭಾರತೀಯ ಹಬ್ಬವಾಗಿದೆ


ಮಕರ ಸಂಕ್ರಾಂತಿ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖ ಹಬ್ಬವಾಗಿದೆ, ಮತ್ತು ಇದು ಮುಖ್ಯವಾಗಿ ಉತ್ತರ ಭಾರತ ಮತ್ತು ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ. ಹಬ್ಬವು ಪ್ರತ್ಯೇಕ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ, ಆದರೆ ಅದಾದ ಮೂಲ ಉದ್ದೇಶ ಒಂದು – ಇಂದಿನ ದಿನದಿಂದ ಸೂರ್ಯನ transiting Capricorn (ಮಕರ) ರಾಶಿಗೆ ಪ್ರವೇಶಿಸುವುದು.

ಈ ದಿನವೇ ನೂತನ ಕೃಷಿ ಚಕ್ರ ಆರಂಭವಾಗುತ್ತದೆ, ಹೀಗಾಗಿ ಇದು ಹೊಸದಾಗಿ ಬೆಳೆಯುವ ಸಮಯ, ಧಾನ್ಯಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಶುಭಾರಂಭವಾಗುತ್ತದೆ. ಮಕರ ಸಂಕ್ರಾಂತಿ ಆಚರಣೆಗೆ ಸಂಬಂಧಿಸಿದಂತೆ ಕೆಲ ಪ್ರಮುಖ ಆಚರಣೆಗಳು ಮತ್ತು ಅಭ್ಯಾಸಗಳು:

1. **ತಿನ್ನುವಂತಹ ಸಿಹಿ ಪದಾರ್ಥಗಳು:** ಈ ದಿನದಂದು ಮುಕ್ತಾಯವನ್ನು ಮೆತ್ತನೆ, ತಳೆ, ಪೊಹಾ, ಟಿಲಗುಡು (ತಿಲ ಎಲೆ ಮತ್ತು ಜೇನು) ಇತ್ಯಾದಿ ಸಿಹಿ ಆಹಾರಗಳನ್ನು ತಿನ್ನುವುದು ಸಾಧಾರಣವಾಗಿದೆ. ಇದು ವಾತಾವರಣವನ್ನು ಶುದ್ಧಗೊಳಿಸಲು ಹಾಗೂ ದೇಹಕ್ಕೆ ತಾಜಾ ಶಕ್ತಿ ನೀಡಲು ಎಂದು ನಂಬಲಾಗಿದೆ.

2. **ಹೂವಿನ ಹಬ್ಬ:** ಸಂಕ್ರಾಂತಿಯ ಸಂದರ್ಭದಲ್ಲಿ ಹಕ್ಕಿಯ ಹಾರಾಟಗಳು, ವಿಶೇಷವಾಗಿ ಗಾಳಿಪಟಗಳನ್ನು ಹಾರಿಸುವವು ಬಹುಮಾನವಾಗಿದೆ. ಗಾಳಿಪಟ ಹಾರಿಸುವುದು ಆಯುಷ್ಯ ಮತ್ತು ದೈವಿಕ ಶಕ್ತಿಯ ಬೆಳವಣಿಗೆಗಾಗಿ ಮುಂಚೂಣಿಯ ವಿಧಾನವಾಗಿದೆ.

3. **ಪೂಜಾ ಕಾರ್ಯಕ್ರಮಗಳು:** ಸಂಕ್ರಾಂತಿ ದಿನ ವಿಶೇಷವಾಗಿ ವಿದೇಶಿ ದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿ ಮುಖ್ಯವಾಗಿ ಸೂರ್ಯನನ್ನು ಆರಾಧನೆ ಮಾಡಲು ಹಲವು ಯತ್ನಗಳು ನಡೆಯುತ್ತವೆ. 

4. **ಮಕರ ಸಂಕ್ರಾಂತಿಯ ಹಬ್ಬದೊಂದಿಗೆ ಬಟ್ಟೆಗಳನ್ನು ಹಾಗೂ ಆಹಾರವನ್ನು ಹಂಚಿಕೊಳ್ಳುವುದು** ಬದ್ಧತೆ ಹಾಗೂ ಒಟ್ಟುಗೂಡಲು ಇದು ಚಟುವಟಿಕೆಯಾಗಿರುತ್ತದೆ.

ಸಾಮಾನ್ಯವಾಗಿ, ಈ ಹಬ್ಬವು ಕುಟುಂಬ ಮತ್ತು ಸ್ನೇಹಿತರಿಂದ ಒಟ್ಟುಗೂಡಲು, ಸಂತೋಷವನ್ನು ಹಂಚಿಕೊಳ್ಳಲು, ಮತ್ತು ಹಬ್ಬವನ್ನು ಹರ್ಷವಾಗಿ ಆಚರಿಸಲು ಒಂದು ಸಮಯವಾಗಿದೆ.


 

Friday, January 10, 2025

ನಲ್ಲಾಪುರ ಗ್ರಾಮದ ಚರಂಡಿಗಳ ಸ್ಥಿತಿ|| ಅನಾರೋಗ್ಯಕ್ಕೆ ತುತ್ತಾಗುವ ಜನರು...


 

ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ. ವ್ಯಾಪ್ತಿಯಲ್ಲಿ ಬರುವ ನಲ್ಲಾಪುರ  ಗ್ರಾಮ...
ಇಲ್ಲಿ ಚರಂಡಿಗಳು ಸ್ಥಿತಿ ಅಡಿಗಟ್ಟು ಹೋಗಿರುವುದು ಸಂಬಂಧಪಟ್ಟ ಅಧಿಕಾರಿಗಳು
ಕೂಡಲೇ ಗಮನಹರಿಸ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ...

Thursday, October 31, 2024

ಸು ವಿಚಾರ I ಮಾಧುರಿ


ನಮ್ಮ ಆತ್ಮವಿಶ್ವಾಸ, ನಮ್ಮ ನಂಬಿಕೆಯನ್ನು
ಬೇರೆಯವರ ಸಲುವಾಗಿ ಬದಲು ಮಾಡಿಕೊಳ್ಳ
ಬಾರದು ಐದು ಬೆರಳು ಐದು ರೀತಿಯಲ್ಲಿ
ಇರುವಂತೆ ಜೀವನದಲ್ಲಿ ಬರುವ ಜನರೂ
ಬಗೆಬಗೆಯಾಗಿ ಇರುತ್ತಾರೆ. ನಮ್ಮ ವಿಶ್ವಾಸ
ಮತ್ತು ನಂಬಿಕೆ ಜನರು ನಮ್ಮ ಜೊತೆಗೆ ಹೇಗೆ
ಇದ್ದಾರೆ ಎಂಬುದರ ಮೇಲೆ
ನಿರ್ಧಾರವಾಗಿರುತ್ತದೆ. ಒಬ್ಬರು ನಮ್ಮೊಂದಿಗೆ
ಬಹಳ ಒಳ್ಳೆಯವರಾಗಿದ್ದಾರೆ ಎಂದರೆ ಎಲ್ಲರಿಗೂ
ಒಳ್ಳೆಯವರೇ ಎಂದಲ್ಲ. ಕೆಟ್ಟವರಾಗಿದ್ದಾರೆ
ಎಂದರೆ ಕೆಟ್ಟವರಲ್ಲ. ಸಮಯ ಪರಿಸ್ಥಿತಿ ಮತ್ತು
ಸಂದರ್ಭ ಮನುಷ್ಯನ ನಡವಳಿಕೆಯನ್ನು
ಬದಲಿಸಬಹುದು.
ನಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ
ಕಳೆದುಕೊಳ್ಳದೆ, ನಮಗೆ ಪ್ರೀತಿ ವಿಶ್ವಾಸ
ತೋರಿದವರಿಗೆ ಪ್ರೀತಿ, ಅವಮಾನ
ಮಾಡಿದವರಿಗೆ ನಿರ್ಲಕ್ಷ್ಯ, ನೋವು
ಕೊಟ್ಟವರನ್ನು ದೂರ ಇಡುವುದು, ಸಂಶಯ
ಪಡುವವರು ಮತ್ತು ಕೆಡಕುಬಯಸುವವರಿಂದ
ಅಂತರ ಕಾಯ್ದುಕೊಂಡರೆ ಜೀವನದಲ್ಲಿ
ನೆಮ್ಮದಿಯಾಗಿರಬಹುದು. ನಮಗೆ
ದೊರೆತದ್ದನ್ನು ಹಿಂದಿರುಗಿಸಿ ಕೊಡುವ ಅಭ್ಯಾಸ
ಇಟ್ಟುಕೊಳ್ಳಬೇಕು. ಮೋಸ ವಂಚನೆ ಬಿಟ್ಟು,
ಮಿಕ್ಕೆಲ್ಲವನ್ನು ಸಿಕ್ಕದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ

ಪ್ರಚಲಿತಗಳ ಅರಿವು

                             

ಅಸಕ್ತಿ ಇರುವ ಕಡೆ ಒಲವು ತೋರಿಸಬೇಕು. ಇದಕ್ಕೆ ಪಾಲಕರ, ಗುರುಗಳ ಮಾರ್ಗದರ್ಶನ, ಸಹಕಾರ ಬಹಳ ಮುಖ್ಯ,

 ಕಠಿಣ ಪರಿಶ್ರಮ : ಶ್ರದ್ದೆ, ಬದ್ಧತೆಯಿರಬೇಕು, ಮೊದಲು ಕನಸು ಕಾಣಬೇಕು ನಂತರ ಅದನ್ನು ನನಸು *

 ಮಾಡಿಕೊಳ್ಳಲು ಹೋರಾಟ ಮಾಡಬೇಕು.  ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು 

ಪಡೆದುಕೊಳ್ಳಬೇಕು. ಅಧ್ಯಯನದತ್ತ ಒಲವು ತೋರಿದಾಗ ಯಶಸ್ಸು ಸಾಧ್ಯ.