WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, April 9, 2020

ಬಳ್ಳಾರಿ: 8 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕರ್ಬೂಜಾ ಹಣ್ಣನ್ನು ಜನರಿಗೆ ದಾನ ಮಾಡಿದ ರೈತ

ಬಳ್ಳಾರಿ, ಎ.9: ತನ್ನ ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕರ್ಬೂಜಾ ಹಣ್ಣನ್ನು ಕೊರೋನ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಾಗಾಟ ಮಾಡಲಾಗದೆ ರೈತರೊಬ್ಬರು ಕೊನೆಗೆ ಅದನ್ನು ಜನರಿಗೆ ಉಚಿತವಾಗಿ ನೀಡಿದ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೊಡಾಲು ಗ್ರಾಮದ ರೈತ ತಿಮ್ಮನಗೌಡ ಅವರು ತನ್ನ ಎಂಟು ಎಕರೆ ಪ್ರದೇಶದಲ್ಲಿ ಕರ್ಬೂಜಾ ಹಣ್ಣನ್ನು ಬೆಳೆದಿದ್ದರು. ಆದರೆ ಕೊರೋನ ಭೀತಿ ಹಿನ್ನೆಲೆಯಲ್ಲಿ ಅದನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಕರ್ಬೂಜಾ ಹಣ್ಣನ್ನು ಸುತ್ತಮುತ್ತಲಿನ ಗ್ರಾಮಗಳಾದ ಕೊಡಾಲು, ಚಿಕ್ಕಂತಾಪುರ, ಸುಲ್ತಾನಪುರ ತೋರಣಗಲ್ಲು ಗ್ರಾಮಗಳ ಪ್ರತಿ ಮನೆಮನೆಗೆ ಹಂಚಿದ್ದಾರೆ.
ತಿಮ್ಮನಗೌಡರು 8 ಲಕ್ಷ ರೂ. ಸಾಲ ಮಾಡಿ ತನ್ನ 8 ಎಕರೆ ಪ್ರದೇಶದಲ್ಲಿ ಕರ್ಬೂಜಾ ಹಣ್ಣನ್ನು ಬೆಳೆದಿದ್ದರು.



ಉತ್ತಮ ಫಸಲು ಕೂಡಾ ಬಂದಿತ್ತು. ಆದರೆ, ಫಸಲು ಕೈಗೆ ಬಂದರೂ ಅದನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಲಾಗದ ಪರಿಸ್ಥಿತಿ ಬಂದಿರುವುದರಿಂದ ಜನರಿಗೆ ಉಚಿತವಾಗಿ ಹಂಚಿದ್ದಾರೆ.

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ