
ಈ ಮೂಲಕ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಆದೇಶದ ಅನ್ವಯ ಜಿಂದಾಲ್ ಟೌನ್ ಶಿಪ್ ನಲ್ಲಿ ಇರುವ ಉದ್ಯೋಗಿಗಳಿಂದ ಮಾತ್ರ ಕಂಪನಿ ನಡೆಸುವಂತೆ ಆದೇಶದಲ್ಲಿತ್ತು. ಆದರೆ ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಆದೇಶ ಮೀರಿ ಜಿಂದಾಲ್ ನ ಇಸಿಪಿಎಲ್ ಸಿಬ್ಬಂದಿ ಗೇಟ್ ಮೂಲಕ ಕೆಲಸಕ್ಕೆ ಒಳ ಹೋಗುವುದು ಮತ್ತು ಹೊರ ಬರುವುದು ಮಾಡುತ್ತಿದ್ದಾರೆ.
ಜಿಂದಾಲ್ ಕಾರ್ಖಾನೆಯಲ್ಲಿ 178 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ, ಬಳ್ಳಾರಿ ಜಿಲ್ಲಾಡಳಿತದಿಂದ ಜಿಂದಾಲ್ ನ್ನು ಲಾಕ್ ಡೌನ್ ಮಾದರಿ ಅನುಸರಿಸಲು ಆದೇಶ ಮಾಡಿತ್ತು. ಜಿಂದಾಲ್ ಸುತ್ತಲಿನ ವಾಸವಾಗಿರುವ ಕಾರ್ಮಿಕರು ಟೌನ್ ಶಿಪ್ ಹೊರತುಪಡಿಸಿ ಬೇರೆ ಗ್ರಾಮದ ಕಾರ್ಮಿಕರು ಯಾರೂ ಹೊರ ಹೋಗಬಾರದು, ಒಳ ಬರಬಾರದೆಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿತ್ತು.
ಆದರೆ ಜಿಲ್ಲಾಡಳಿತದ ಆದೇಶ ಮೀರಿ ಜಿಂದಾಲ್ ಕಾರ್ಮಿಕರು ಕಾರ್ಖಾನೆಗೆ ಬರುತ್ತಿದ್ದಾರೆ. ಹೂವು ತರಲು ಹೊರಗಡೆಯಿಂದ ಒಳಗಡೆ, ಒಳಗಡೆಯಿಂದ ಹೊರಗಡೆ ಹೋಗರಬಾರದೆಂಬ ನಿಯಮ ಕೇವಲ ಆದೇಶ ಸೀಮಿತವಾಯಿತಾ? ಎನ್ನುವ ಅನುಮಾನ ಕಾಡುತ್ತಿದೆ. ರಾಜಾರೋಷವಾಗಿ ಸಂಡೂರು ತಾಲೂಕಿನ ಸುಲ್ತಾನಪುರದ ಬಳಿ ಇರೋ ECPL ಗೇಟಿನಿಂದ ಕಾರ್ಮಿಕರು ಒಳ ಪ್ರವೇಶ ಮಾಡುತ್ತಿದ್ದಾರೆ.

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ