ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹಿಸಿ ವಿಜಯನಗರದ ಹೊಸಪೇಟೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಹೊಸಪೇಟೆಯ ಪುನೀತ್ ಸರ್ಕಲ್ ನಲ್ಲಿ ಧರಣಿ ನಡೆಸಿ, ಜಮೀರ್ ಅಹ್ಮರ್ ಪರ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಮುಸ್ಲಿಂ ಮುಖಂಡರಾದ ಇಮಾಮ್ ನಯಾಜ್ ಅವರು, ಜಮೀರ್ ಅಹ್ಮದ್ ಅವರು ಎಲ್ಲ ಸಮುದಾಯದವರ ಪರವಾಗಿ ಕೆಲಸ ಮಾಡಿದವರು. ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತವಾಗಿ ಕೆಲಸ ಮಾಡಿದವರಲ್ಲ. ಅಲ್ಲದೇ, ಜಮೀರ್ ಅವರು ಈ ಹಿಂದೆ ಸಚಿವ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಹೀಗಾಗಿ, ಜಮೀರ್ ಅಹ್ಮದ್ ಖಾನ್ ಸೇವೆ ಪರಿಗಣಿಸಿ, ಹೈಕಮಾಂಡ್ ನಾಯಕರು ಡಿಸಿಎಂ ಹುದ್ದೆ ಕೊಡಬೇಕು ಅಂತಾ ಆಗ್ರಹಿಸಿದರು.
ಇನ್ನು, ನಮಗಿಂತ ಕಡಿಮೆ ಇರುವ ಒಕ್ಕಲಿಗ, ಲಿಂಗಾಯತರಿಗೆ ಹೆಚ್ಚು ಸ್ಥಾನ ಕೊಟ್ಟಿದ್ದಾರೆ. ಆದರೆ ಅವರಲ್ಲಿ ಅರ್ಧದಷ್ಟು ಜನರೂ ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ. ಆದರೆ ನಾವು ಶೇಕಡಾ 15ರಷ್ಟು ಜನರಿದ್ದು, ಎಲ್ಲರೂ ಕಾಂಗ್ರೆಸ್ ಗೆ ವೋಟ್ ಹಾಕುತ್ತೇವೆ. ಆದರೂ ಮುಸ್ಲಿರಿಗೆ ಕ್ಯಾಬಿನೆಟ್ ನಲ್ಲಿ ಎಷ್ಟು ಸೀಟ್ ಸಿಕ್ಕಿದೆ? ಉದ್ದೇಶಪೂರ್ವಕವಾಗಿ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ತಪ್ಪಿದೆ ಅಂತಾ ಸಮಾಜ ಸೇವಕರಾದ ನಜೀರ್ ಅಹ್ಮದ್ ಆಕ್ರೋಶ ಹೊರಹಾಕಿದರು. ಅಲ್ಲದೇ ಜಮೀರ್ ಅವರಿಗೆ ಕ್ಯಾಬಿನೆಟ್ ಸ್ಥಾನ ತಪ್ಪಲು ಶಾಮನೂರು ಕುಟುಂಬದ ಕೈವಾಡವಿದೆ ಅಂತಾ ಆರೋಪಿಸಿದರು.
.jpeg)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ