WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, May 27, 2020

ಸತ್ತವ ಎದ್ದು ಬಂದ; ಮತ್ತೆ ಸತ್ತ!

ರಾಂಚಿ: ಆತ ಸತ್ತು ಹೋಗಿದ್ದಾನೆ ಎಂದು ಮರಣೋತ್ತರ ಪರೀಕ್ಷೆಗಾಗಿ ಆತನ ಶವವನ್ನು ಆಸ್ಪತ್ರೆಗೆ ತರಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷಾ ಕೊಠಡಿಯಿಂದ ಆ ಸತ್ತ ವ್ಯಕ್ತಿ ಎದ್ದು ಹೊರಗೆ ಬಂದ.. ಅಷ್ಟೇ ಅಲ್ಲೇ ಕುಸಿದು ಕುಳಿತ.. ಆಗ ಪ್ರಾಣಪಕ್ಷಿ ಹಾರಿತು!
ಈ ವಿಲಕ್ಷಣ ಘಟನೆ ಜಾರ್ಖಂಡ್​ನ ರಾಂಚಿಯ ರಾಜೇಂದ್ರ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸ್​ನಲ್ಲಿ ಮಂಗಳವಾರ ನಡೆದಿದೆ. ಸತ್ತು ಬದುಕಿ ಸತ್ತ ವ್ಯಕ್ತಿಯನ್ನು ಜಿತೇಂದ್ರ ಓರನ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ತಂದ ಕೂಡಲೇ ಡಾಕ್ಟರ್​ಗಳು ಪರಿಶೀಲಿಸಿ ಆಸ್ಪತ್ರೆಗೆ ಬರುವಾಗಲೇ ಪ್ರಾಣ ಹೋಗಿತ್ತು ಎಂದು ಪ್ರಮಾಣೀಕರಿಸಿ ಶವಪರೀಕ್ಷೆಗೆ ಕಳುಹಿಸುವಂತೆ ಸೂಚಿಸಿದ್ದರು. ಟೆಕ್ನೀಷಿಯನ್ಸ್​ ಈ ಶವವನ್ನು ಟ್ರಾಲಿಯಲ್ಲಿ ಹಾಕಿ ಮರಣೋತ್ತರ ಪರೀಕ್ಷಾ ಕೊಠಡಿಗೆ ಕೊಂಡೊಯದ್ದ ವೇಳೆ ಆತ ಅಲ್ಲಿಂದ ಎದ್ದು ಹೊರಗೆ ಬಂದಿದ್ದ!  ಕೂಡಲೇ ಆತನನ್ನು ಹಿಡಿದು ತುರ್ತುಚಿಕಿತ್ಸಾ ಘಟಕಕ್ಕೆ ವರ್ಗಾಯಿಸಲು ಪ್ರಯತ್ನಿಸಿದ್ದರು. ಆದರೆ, ಅಷ್ಟು ಹೊತ್ತಿಗೆ ಆತ ಕುಸಿದು ಕುಳಿತ. ಅಲ್ಲೇ ಪ್ರಾಣವಾಯು ಹೊರಟುಹೋಗಿತ್ತು.
ಘಟನೆಯ ಹಿನ್ನೆಲೆ: ಜಿತೇಂದ್ರ ಓರನ್ ಖರ್ತಾ ಗ್ರಾಮದ ನಿವಾಸಿ. ಅಲ್ಲಿ ಹಾಕಿದ್ದ ಟೆಂಟ್ ಒಂದನ್ನು ತೆಗೆಯುವ ವೇಳೆ ಹೈ ಟೆನ್ಶನ್​ ವಿದ್ಯುತ್ ತಂತಿ ತಾಗಿ ವಿದ್ಯುದಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಹೋಗಿದ್ದ. ಕೂಡಲೇ ಆತನನ್ನು ಚನ್ಹೋ ಬ್ಲಾಕ್​ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕರೆದೊಯ್ಯಲಾಗಿದೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಈ ದುರಂತ ನಡೆದಿತ್ತು ಎಂದು ಜಿತೇಂದ್ರನ ಸಹೋದರ ಸಿಕಂದರ್ ಓರನ್​ ಪೊಲೀಸರಿಗೆ ತಿಳಿಸಿದ್ದಾರೆ.
ಜಿತೇಂದ್ರನನ್ನು ಬೆಳಗ್ಗೆ 11 ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಮತ್ತೆ ಅಪರಾಹ್ನ 1 ಗಂಟೆಗೆ ರಾಂಚಿಯ ರಿಮ್ಸ್​ಗೆ ಕರೆತರಲಾಗಿತ್ತು. ಸ್ವಲ್ಪ ಮುಂಚಿತವಾಗಿಯೇ ರಿಮ್ಸ್​ಗೆ ಕರೆತಂದಿದ್ದರೆ ರಾಜೇಂದ್ರ ಬದುಕುತ್ತಿದ್ದ ಎಂದು ಡಾಕ್ಟರ್​ಗಳು ಹೇಳಿದ್ದಾರೆ ಎಂದು ಕುಟುಂಬದ ಸದಸ್ಯರು ವಿಷಾದದಿಂದ ಹೇಳುತ್ತಿದ್ದಾರೆ. (ಏಜೆನ್ಸೀಸ್​) (ಮಾಹಿತಿ ಕೃಪೆ ವಿಜಯವಾಣಿ....) 

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ