WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, May 27, 2020

ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ


ರಾಮನಗರ: ಚನ್ನಪಟ್ಟಣ ನಗರದಲ್ಲಿ ಇದೇ ಮೊದಲ ಸಲ ಕರಡಿಗಳ ದಾಳಿ ನಡೆದಿದ್ದು, ಬುಧವಾರ ಬೆಳಗ್ಗೆ ರಂಗೋಲಿ ಹಾಕುತ್ತಿದ್ದ ನಗರಸಭೆಯ ಮಾಜಿ ಸದಸ್ಯೆ ಸಾಕಮ್ಮ ಅವರ ಮೇಲೆ ದಾಳಿ ಎಸಗಿವೆ. ಗಂಭೀರ ಗಾಯಗೊಂಡಿರುವ ಅವರನ್ನು ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ನಗರದ ಡೂಮ್​ಲೈಡ್ ಸರ್ಕಲ್ ಬಳಿ ಸಾಕಮ್ಮ ಅವರ ಮನೆ ಇದ್ದು, ಮುಂಜಾನೆ 5 ಗಂಟೆಗೆ ಮನೆ ಬಾಗಿಲಿಗೆ ರಂಗೋಲಿ ಹಾಕುತ್ತಿದ್ದ ವೇಳೆ ಕರಡಿಗಳು ದಾಳಿ ನಡೆಸಿವೆ. ಕೂಡಲೇ ಸಾಕಮ್ಮ ಕಿರುಚಾಡಿದ್ದು, ಜನ ಸೇರುವ ಹೊತ್ತಿಗೆ ಕರಡಿಗಳು ಬಳಿಕ ಅಲ್ಲಿಂದ ಮುಂದೆ ಯಾವ ಕಡೆ ಹೋಗಿವೆ ಎಂಬುದು ಗೊತ್ತಾಗಿಲ್ಲ. ಸಾಕಮ್ಮ ಮುಖವನ್ನು ಸಂಪೂರ್ಣ ಘಾಸಿಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಏಳು ಕರಡಿಗಳ ಗುಂಪು ಈ ದಾಳಿ ನಡೆಸಿದ್ದು ಅವು ಬಂದಿರುವುದು ಎಲ್ಲಿಂದ ಎಂಬುದೂ ಗೊತ್ತಿಲ್ಲ.
ಚನ್ನಪಟ್ಟಣ ಸುತ್ತಮುತ್ತ ದಟ್ಟಾರಣ್ಯಗಳು ಇಲ್ಲದ ಅವುಗಳ ಆಗಮನದ ಮೂಲ ಪತ್ತೆ ಕಷ್ಟವಾಗಿದೆ. ಈ ಭೀಕರ ದಾಳಿ ನಗರವಾಸಿಗಳಲ್ಲಿ ಭಯ, ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈಗ ಈ ಕರಡಿಗಳ ಸೆರೆಗಾಗಿ ಶೋಧ ಕಾರ್ಯ ಶುರುಮಾಡಿದ್ದಾರೆ.
(ಮಾಹಿತಿ ಕೃಪೆ ವಿಜಯವಾಣಿ...)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ