WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, May 28, 2021

ಕೋವಿಡ್ ಶಮನಕ್ಕೆ ಔಷಧ, ಶುದ್ಧ ಗಾಳಿ, ಪ್ರಾರ್ಥನೆ ಆಗತ್ಯ: ಮನೋವೈದ್ಯ ಸಲಹೆ


                           

ಹೊಸಪೇಟೆ (ವಿಜಯನಗರ): 'ಕೋವಿಡ್‌ ಸಾಂಕ್ರಾಮಿಕ ರೋಗ ಶಮನಕ್ಕೆ ದವಾ-ಹವಾ-ದುವಾ (ಔಷಧ-ಶುದ್ಧ ಗಾಳಿ-ಪ್ರಾರ್ಥನೆ) ಅಗತ್ಯವಿದೆ' ಎಂದು ಹೆಸರಾಂತ ಮನೋವೈದ್ಯ ಡಾ. ಅಜಯಕುಮಾರ್‌ ತಾಂಡೂರು ಹೇಳಿದರು.

ಇಷ್ಟಲಿಂಗ ಸಂಶೋಧನಾ ಕೇಂದ್ರ ಮತ್ತು ಸಖಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕಿನ ಧರ್ಮದಗುಡ್ಡದಲ್ಲಿ ಗ್ರಾಮಸ್ಥರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಔಷಧಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

'ಉತ್ತಮ ಔಷಧಿ, ಶುದ್ಧ ಗಾಳಿ ಮತ್ತು ಶ್ರದ್ಧೆಯಿಂದ ಮಾಡುವ ಪ್ರಾರ್ಥನೆ ಇಲ್ಲದೇ ಯಾವುದೇ ರೋಗ ಗುಣವಾಗಲು ಸಾಧ್ಯವಿಲ್ಲ, ಹಾಗಾಗೀ ಎಲ್ಲರೂ ಈ ಮೂರು ಕ್ರಮಗಳನ್ನು ಅನುಸರಿಸಬೇಕು' ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯ್ತಿ ಉಪನಿರ್ದೇಶಕ ಉಮೇಶ್ ಮಾತನಾಡಿ, 'ಯುವತಿಯರು ಮತ್ತು ಮಹಿಳೆಯರ ಋತುಚಕ್ರ, ಗ್ರಾಮ ನೈರ್ಮಲ್ಯೀಕರಣದ ಬಗ್ಗೆ ಪುರುಷರಿಗೆ ಸಂಪೂರ್ಣ ಮಾಹಿತಿ ಇರಬೇಕು. ಋತುಚಕ್ರದ ಸಮಯದಲ್ಲಿ ಮನೆಯ ಗಂಡಸರು ಮಹಿಳೆಯರ ಬೇಕು ಬೇಡಗಳಿಗೆ ನೆರವಾಗಬೇಕು. ಪ್ರತಿಯೊಬ್ಬರು ಹೋಮಿಯೋಪತಿ ಔಷಧ ವಿಶ್ವಾಸದಿಂದ ಸೇವಿಸಿದರೆ ಕೋವಿಡ್-19 ಮಹಾಮಾರಿಯನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಿದೆ' ಎಂದರು.

ಕಳೆದ ವರ್ಷ ಕೊರೊನಾ ಸೈನಿಕರಿಗೆ ಔಷಧ ವಿತರಿಸಿದ್ದ ಇಷ್ಟಲಿಂಗ ಸಂಶೋಧನಾ ಕೇಂದ್ರ ಈ ಸಲ ಸಖಿ ಸಂಸ್ಥೆಯೊಂದಿಗೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪತಿ ಔಷಧ ವಿತರಿಸುತ್ತಿದೆ. ಈಗಾಗಲೇ 18 ಸಾವಿರ ಜನರಿಗೆ ಔಷಧ ವಿತರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಡಾ.ಸತ್ಯಂ ಸಿಂಗ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ, ಸಖಿ ಸಂಸ್ಥೆಯ ಭಾಗ್ಯಲಕ್ಷ್ಮಿ, ಇಷ್ಟಲಿಂಗ ಸಂಶೋಧನಾ ಕೇಂದ್ರದ ಮಾವಿನಹಳ್ಳಿ ಬಸವರಾಜ, ಪ್ರಾಧ್ಯಾಪಕ ಟಿ.ಎಚ್‌.ಬಸವರಾಜ, ಓಂಪ್ರಕಾಶ್, ದೇವರಮನಿ ಶ್ರೀನಿವಾಸ, ಮುಖಂಡರಾದ ಚಂದ್ರಶೇಖರ್, ಕಳಕಪ್ಪ, ವಡೆ ಬಸವರಾಜ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

ಹಂಪಿ ರುದ್ರಭೂಮಿಯಲ್ಲಿ ಕೋವಿಡ್‌ ಮೃತರ ಶವ ಹೂಳದಂತೆ ಗ್ರಾಮಸ್ಥರ ಒತ್ತಾಯ

 

ಹೊಸಪೇಟೆ (ವಿಜಯನಗರ): 'ಕೋವಿಡ್‌-19ನಿಂದ ಮೃತಪಟ್ಟವರ ಶವಗಳನ್ನು ತಾಲ್ಲೂಕಿನ ಹಂಪಿ ರುದ್ರಭೂಮಿಯಲ್ಲಿ ಹೂಳಲು ಅವಕಾಶ ಕಲ್ಪಿಸಬಾರದು' ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

'ಒಂದುವೇಳೆ ಕೋವಿಡ್‌ನಿಂದ ನಿಧನ ಹೊಂದಿದವರ ಅಂತ್ಯಸಂಸ್ಕಾರ ಹಂಪಿಯಲ್ಲೇ ಮಾಡುವುದೇ ಆದರೆ ಶವಗಳನ್ನು ಸುಡಬೇಕು. ಆದರೆ, ಯಾವುದೇ ಕಾರಣಕ್ಕೂ ಹೂಳಬಾರದು' ಎಂದು ಒತ್ತಾಯಿಸಿದ್ದಾರೆ.

ಗ್ರಾಮಸ್ಥರಾದ ಸಂದೇಶ, ಸುರೇಶ, ಸಿದ್ದಪ್ಪ, ರಮೇಶ, ರಾಜೇಶ, ಪರಶುರಾಮ ಮೊದಲಾದವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

Shocking news‌ : ಅಂತ್ಯಕ್ರಿಯೆ ಮುಗಿಸಿ ವಾರದ ಬಳಿಕ ಮನೆಯಲ್ಲಿ ಪ್ರತ್ಯಕ್ಷ್ಯನಾದ 'ಸತ್ತ ವ್ಯಕ್ತಿʼ : ಮುಂದೇನಾಯ್ತು ಗೊತ್ತ

 

ಡಿಜಿಟಲ್‌ ಡೆಸ್ಕ್:‌ ರಾಜಸ್ಥಾನದ ರಾಜ್ ಸಮಂದ್ ಎಂಬಲ್ಲಿ ಶಾಕಿಂಗ್‌ ಸಂಗಿತಿಯೊಂದು ನಡೆದಿದ್ದು, 40 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟನೆಂದು ಅಂತ್ಯಕ್ರಿಯೆ ಮಾಡಿ ಮುಗಿಸಿದ ವಾರದ ಬಳಿಕ ಆತ ತನ್ನ ಮನೆಯಲ್ಲಿ ಪ್ರತ್ಯಕ್ಷ್ಯನಾಗಿದ್ದಾನೆ.
ಓಂಕಾರ್ ಲಾಲ್ ಗಾಡುಲಿಯಾ ಅನ್ನೋ ವ್ಯಕ್ತಿಯೊಬ್ಬ ಸಾವನ್ನಾಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅದ್ರಂತೆ, ಸಂಬಂಧಿಕರು ಆಸ್ಪತ್ರೆಯಿಂದ ಮೃತದೇಹ ತಂದು ಅಂತ್ಯಕ್ರಿಯೆ ಮಾಡಿದ್ದಾರೆ. ಆದ್ರೆ, ವಾರದ ಬಳಿಕ ಓಂಕಾರ್‌ ಲಾಲ್‌ ಮನೆಗೆ ಹಿಂದಿರುಗಿದ್ದಾರೆ. ಇಷ್ಟಕ್ಕೂ ಆಸ್ಪತ್ರೆಯಲ್ಲಿ ಆಗಿದ್ದೇನು? ನಿಜವಾಗ್ಲೂ ಆತ ಮೃತಪಟ್ಟಿದ್ನಾ?
ಅಸಲಿಗೆ ಓಂಕಾರ್ ಲಾಲ್ ಗಾಡುಲಿಯಾ ಮದ್ಯ ವ್ಯಸನಿಯಾಗಿದ್ದು, ಮೇ 11ರಂದು ತನ್ನ ಕುಟುಂಬಕ್ಕೆ ತಿಳಿಸದೆ ಉದಯಪುರಕ್ಕೆ ಹೋಗಿದ್ದನಂತೆ. ಯಕೃತ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಯಿಂದಾಗಿ ಆತನನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ದಿನ, ಗೋವರ್ಧನ್ ಪ್ರಜಾಪತ್ ಎನ್ನುವವರನ್ನೂ ಆರ್ ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಆತ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾನೆ.
ಓಂಕಾರ್ ಲಾಲ್ ಕುಟುಂಬ ಸದಸ್ಯರು, ಮೃತ ದೇಹದ ಬಲಗೈ ಮತ್ತು ನೋಟದ ಮೇಲೆ ಇದೇ ರೀತಿಯ ಗಾಯದ ಗುರುತಿದೆ ಎಂದು ಹೇಳಿದ್ದು, ಮೃತದೇಹವನ್ನ ತಪ್ಪಾಗಿ ಗುರುತಿಸಿದ್ದಾರೆ. ಹಾಗಾಗಿ ಪೊಲೀಸರು ಯಾವುದೇ ಮರಣೋತ್ತರ ಮತ್ತು ಡಿಎನ್ ಎ ಪರೀಕ್ಷೆ ನಡೆಸದೆ ಶವವನ್ನು ಹಸ್ತಾಂತರಿಸಿದ್ದಾರೆ.
ಅದ್ರಂತೆ, ಆಸ್ಪತ್ರೆಯಲ್ಲಿ ಮೃತಪಟ್ಟ ಗೋವರ್ಧನ್ ಪ್ರಜಾಪತ್ ಅವ್ರ ಕೊಳೆತ ಶವವನ್ನ ತಪ್ಪಾಗಿ ಸ್ವಾಧೀನಪಡಿಸಿಕೊಂಡ ಓಂಕಾರ್‌ ಲಾಲ್‌ ಕುಟುಂಬದವ್ರು, ಮೇ 15ರಂದು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಆದ್ರೆ, ಓಂಕಾರ್ ಲಾಲ್ ಗಾಡುಲಿಯಾ ಮೇ 23ರಂದು ಮನೆಗೆ ಮರಳಿದ್ದಾನೆ. ಸತ್ತನೆಂದು ಭಾವಿಸಿ ಅಂತ್ಯಕ್ರಿಯೆ ಮಾಡಿ ಮುಗಿಸಿದ ವ್ಯಕ್ತಿ ಏಕಾಏಕಿ ಮನೆಗೆ ಬಂದಿದ್ದನ್ನ ಕಂಡು ಕುಟುಂಬದವ್ರು ಆಘಾತಕ್ಕೆ ಒಳಗಾಗಿ, ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನ ಕೈಗೆತ್ತಿಕೊಂಡು ನಿಜ ಸಂಗತಿಯನ್ನ ಬಯಲಿಗೇಳೆದಿದ್ದಾರೆ.
(ಮಾಹಿತಿ ಕೃಪೆ Kannada News Now)

ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ : ರಾಜ್ಯ ಸರಕಾರಕ್ಕೆ ಮಾಜಿ ಸಚಿವೆ ಉಮಾಶ್ರೀ ಮನವಿ

 

ಮಹಾಲಿಂಗಪುರ : ಕಾರ್ಮಿಕ ಇಲಾಖೆಯಲ್ಲಿ ನೇಕಾರರನ್ನು ಕಾರ್ಮಿಕರು ಅಂತಾ ಸೇರಿಸಿ. ಪಾವರ್‌ ಲೂಮ್ ನೇಕಾರರಿಗೆ ಕನಿಷ್ಠ ಮೂರು ವರ್ಷ ನಿರಂತರ ಉಚಿತ ವಿದ್ಯುತ್ ನೀಡಬೇಕು. ಆ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ ಎಂದು ಮಾಜಿ ಸಚಿವೆ ಉಮಾಶ್ರೀ ಸರಕಾರಕ್ಕೆ ಮನವಿ ಮಾಡಿದರು.

ಶುಕ್ರವಾರ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆ ಹೊರತುಪಡಿಸಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ನಿರ್ಜೀವವಾಗಿವೆ. ಅನೇಕರು ನೇಣಿಗೆ ಶರಣಾಗಿದ್ದಾರೆ. ಮಾಧ್ಯಮಗಳ ಮುಖಾಂತರ ಕೆಲವು ಮಾತ್ರ ಬೆಳಕಿಗೆ ಬಂದಿವೆ. ಆರ್ಥಿಕ ಹಿನ್ನೆಡೆ ದೇಶ ಮಾತ್ರ ಆನುಭವಿಸುತ್ತಿಲ್ಲ. ಜನಸಾಮಾನ್ಯರೂ ಅನುಭವಿಸುತ್ತಿದ್ದು ಅದರಲ್ಲಿ ವಿವಿಧ ನೇಕಾರರೂ ಕೂಡಾ ಇದ್ದಾರೆ. ನೇಕಾರಿಕೆ ಉದ್ಯಮ ಪುನಶ್ಚೇತನಕ್ಕೆ ಸರ್ಕಾರ ಮುಂದೆ ಬರಲಿಲ್ಲ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಚಾಲಿತ ಮಗ್ಗಗಳ ಮಾಲಿಕರು ಹಾಕಿದ ಬಂಡವಾಳ ತುಕ್ಕು ಹಿಡಿದಿದೆ. ಈಗಾಗಲೇ ನೇಯ್ದ ಬಟ್ಟೆಯನ್ನು ಯಾರೂ ಖರೀದಿಸುತ್ತಿಲ್ಲ. ಮೊದಲು ಪವರಲೂಮ್‌ನಲ್ಲಿ ದಿನಕ್ಕೆ 3 ಸೀರೆ ನೇಯುತ್ತಿದ್ದ ನೇಕಾರನಿಗೆ ಗಂಜಿಯಾದರೂ ಸಿಗಲಿ ಎಂದು ಮಾಲಿಕರು 1 ಸೀರೆಯನ್ನಾದರೂ ನೇಯಲಿ ಎಂದು ಹೇಳಬೇಕೆಂದರೆ ನೂಲು, ಚಮಕಾ, ಬಣ್ಣ ಸಿಗುತ್ತಿಲ್ಲಾ. ಇದನ್ನೇ ನಂಬಿ ಬದುಕುವ ನೇಕಾರ ಏನು ಮಾಡಬೇಕು ಎಂದು ಸರಕಾರದ ವಿರುದ್ಧ ಕಿಡಿಕಾರಿದರು.

ಅನೇಕ ಅವಕಾಶಗಳಿದ್ದರೂ ಸರ್ಕಾರ ಉದ್ಯಮವನ್ನು ಪುನ:ಶ್ಚೇತನ ಮಾಡಲು ಮುಂದೆ ಬರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಬರ, ಅತಿವೃಷ್ಠಿ, ಅನಾವೃಷ್ಠಿ ಇತ್ತಾದರೂ ಅವರು ಸಹಾಯಕ್ಕೆ ಧಾವಿಸಿದರು. ಸಾಲ ಮನ್ನಾ ಮಾಡಿದರು, ಖಾಸಗಿಯವರು ಯಾರೂ ಸಾಲ ವಾಪಸಾತಿಗೆ ಒತ್ತಾಯಿಸಬೇಡಿಯೆಂದು ತಾಕೀತು ಮಾಡಿದರು. ಆದರೆ ಇಂದು ಅದಕ್ಕಿಂತ ಕಠಿಣ ಪರಸ್ಥಿತಿ ರಾಜ್ಯದಲ್ಲಿ ಇದೆ. ಇಂದಿನ ಸರ್ಕಾರ ಏನು ಮಾಡ್ತಿದೆ. ಯಡಿಯೂರಪ್ಪನವರೆ ನೀವು ಮಹಾನ್ ನಾಯಕರು, ನೇಕಾರರ ಬಗ್ಗೆ ಬಹಳಷ್ಟು ಪ್ರೀತಿ ಉಳ್ಳವರು. ಆದರೆ ಪ್ಯಾಕೇಜ್ ಘೋಷಣೆ ಮಾಡುವಾಗ ನೇಕಾರರ ನೆನಪಾಗುವದಿಲ್ಲವೆ ಎಂದು ಸರಕಾರದ ವಿರುದ್ಧ ಗುಡುಗಿದರು. ಕಳೆದ ವರ್ಷವೂ ಹೀಗೆ ಮಾಡಿದ್ದೀರಿ. ಈ ಬಾರಿಯೂ ನೆನಪಾಗಲಿಲ್ಲ. ಶಾಸಕರು ಬಂದು ನಿಮಗೆ ನೆನಪು ಮಾಡಬೇಕು. ನಿಮ್ಮ ಭಾಷಣದಲ್ಲಿ ನೇಕಾರರ ಬಗ್ಗೆ ಎಷ್ಟು ಕನಿಕರ, ಪ್ರೀತಿ ತೋರಿಸುತ್ತೀರಿ ಅದೇ ಪ್ಯಾಕೇಜ್ ಘೋಷಣೆ ಮಾಡುವಾಗ ನೇಕಾರರ ನೆನಪಾಗಲಿಲ್ಲವೆ. ನಿಮ್ಮ ಸುತ್ತಲಿದ್ದವರು ಯಾಕೆ ನೆನಪಿಸಲಿಲ್ಲ. ಇದರ ಅರ್ಥ ಚುನಾವಣೆಯಲ್ಲಿ ಮತ ಗಳಿಸಲಿಲು ಮಾತ್ರ ನೇಕಾರರು ಬೇಕು ಆದರೆ ಕೃತಿಯಲ್ಲಿ ಅಲ್ಲ ಎಂದರು.

ನೇಕಾರರಿಗೆ ಈಗ 2 ಸಾವಿರ ಕೊಡ್ತೀನಿ ಅಂತಿರಿ. ಆದರೆ ಪ್ರತಿ ನೇಕಾರ ಕುಟುಂಬಕ್ಕೆ 10 ಸಾವಿರ ಕೊಡಬೇಕು. ನೇಕಾರರಿಗೆ ಮಾತ್ರ ಅಲ್ಲ. ಟ್ಯಾಕ್ಸಿ, ರಿಕ್ಷಾ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ ,ಸವಿತಾ ಸಮಾಜ, ಕುಂಬಾರ, ಕಮ್ಮಾರ ಸಮಾಜ ಹೀಗೆ ಎಲ್ಲ ಕಾಯಕ ಜೀವಿಗಳಿಗೆ 10 ಸಾವಿರ ರೂ.ಕೊಡಿ. ಕೈ ಮುಗಿದು ಕೇಳುತ್ತೇವೆ ಎಂದು ಮನವಿ ಮಾಡಿದರು.. ಎಲ್ಲ ತರಹದ ನೇಕಾರರಿಗೆ ಅಂದಾಜು ೮೦೦ ರಿಂದ ೯೦೦ ಕೋಟಿ ಘೋಷಣೆ ಮಾಡಿ ಅಥವಾ ಯೋಜನೆಗಳನ್ನು ಸೃಷ್ಠಿ ಮಾಡಿ, ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು, ಬಾಕಿ ಇರುವ ಸಬ್ಸಿಡಿ ಬಿಡುಗಡೆ ಮಾಡಬೇಕು. ಒಂದು ವರ್ಷದ ವರೆಗೆ ಸಾಲದ ಅಸಲು ಬಡ್ಡಿ ಕೇಳಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ರಬಕವಿಯ ವಿದ್ಯುತ್ ಚಾಲಿತ ಮಗ್ಗಗಳ ಅಧ್ಯಕ್ಷ ನೀಲಕಂಠ ಮುತ್ತೂರ, ಮಲ್ಲಪ್ಪ ಭಾವಿಕಟ್ಟಿ, ರಾಜೇಂದ್ರ ಭದ್ರನ್ನವರ, ಶಂಕರ ಸೊನ್ನದ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ,ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ,ಪುರಸಭೆ ಸದಸ್ಯ ಜಾವೇದ ಬಾಗವಾನ, ರಾಜು ಭಾವಿಕಟ್ಟಿ, ಸತ್ಯಪ್ಪ ಮಗದುಮ್, ಹೊಳೆಪ್ಪ ಬಾಡಗಿ,ವಿಠ್ಠಲ ಸಂಶಿ, ಶಿವಾನಂದ ಗಾಳಿ ಮುಂತಾದವರು ಇದ್ದರು.

(ಮಾಹಿತಿ ಕೃಪೆ ಉದಯವಾಣಿ)

ಜೂನ್ 15 ರಿಂದ ಕೋವಾಕ್ಸಿನ್ ಸರಬರಾಜಿಗೆ ಸಿದ್ದ: ಭಾರತ್ ಬಯೋಟೆಕ್

 

ನವದೆಹಲಿ:ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್) ಜೂನ್ 15 ರಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೊವಾಕ್ಸಿನ್ ತಯಾರಿಸಲು ಅಗತ್ಯವಾದ ಔಷಧ ಪದಾರ್ಥದ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದನ್ನು ಜುಲೈ ವೇಳೆಗೆ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್‌ಗೆ ಸರಬರಾಜು ಮಾಡುತ್ತದೆ.

ಭಾರತೀಯ ಇಮ್ಯುನೊಲಾಜಿಕಲ್ಸ್ ತಿಂಗಳಿಗೆ ಸುಮಾರು 10-15 ಮಿಲಿಯನ್ ಡೋಸ್‌ಗಳಿಗೆ ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಐಐಎಲ್‌ನ ಎಂಡಿ ಡಾ. ಆನಂದ್ ಕುಮಾರ್ ಹೇಳಿದರು. ಇದು ಆರಂಭದಲ್ಲಿ 2-3 ಮಿಲಿಯನ್ ಡೋಸ್ ಆಗಿರುತ್ತದೆ ಮತ್ತು ನಂತರ ತಿಂಗಳಿಗೆ 6-7 ಮಿಲಿಯನ್ ವರೆಗೆ ಅಳೆಯಲಾಗುತ್ತದೆ .
ಭಾರತ್ ಬಯೋಟೆಕ್,' ಒಂದು ಬ್ಯಾಚ್ ಕೋವಾಕ್ಸಿನ್ ತಯಾರಿಕೆ, ಪರೀಕ್ಷೆ ಮತ್ತು ಬಿಡುಗಡೆಯ ಸಮಯ ಸುಮಾರು 120 ದಿನಗಳು.ಈ ವರ್ಷದ ಮಾರ್ಚ್ನಲ್ಲಿ ಪ್ರಾರಂಭಿಸಲಾದ ಉತ್ಪಾದನಾ ಬ್ಯಾಚ್‌ಗಳು ಜೂನ್ ತಿಂಗಳಲ್ಲಿ ಮಾತ್ರ ಪೂರೈಕೆಗೆ ಸಿದ್ಧವಾಗುತ್ತವೆ. '
ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಕೋವಾಕ್ಸಿನ್‌ನ ಔಷಧಿ ವಸ್ತುವನ್ನು ತಯಾರಿಸಲು ಭಾರತ್ ಬಯೋಟೆಕ್ ಹೈದರಾಬಾದ್ ಮೂಲದ ಐಐಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ, ಇದು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಅಡಿಯಲ್ಲಿ ಸ್ಥಾಪಿಸಲಾಗಿದೆ.

(ಮಾಹಿತಿ ಕೃಪೆ Kannada News Now)

ಕೆಎಎಸ್‌ ಅಧಿಕಾರಿ ಪತಿ ಕೋವಿಡ್‌ನಿಂದ ಸಾವು

 

ಶಿವಮೊಗ್ಗ: ಮದುವೆಯ ನಂತರ ಪತ್ನಿಯನ್ನು ಓದಿಸಿ, ಅವರ ಕೆಎಎಸ್‌ ಕನಸಿಗೆ ನೀರೆರೆದಿದ್ದ ಪತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನಗರದ ಕಾಮಾಕ್ಷಿ ಬೀದಿಯ ಎಲ್‌.ಶ್ರೀನಿವಾಸ್‌ (45) ಮೃತಪಟ್ಟವರು.

ಇವರು ಅಕ್ಕನ ಮಗಳನ್ನೇ ಮದುವೆಯಾಗಿದ್ದರು. ತಮ್ಮ ಸಾಧುಶೆಟ್ಟಿ ಸಮಾಜದಲ್ಲಿ ಹೆಣ್ಣುಮಕ್ಕಳು ಓದುವುದಿಲ್ಲ ಎಂಬ ಆಪಾದನೆಯಿಂದ ಮುಕ್ತವಾಗಬೇಕು ಎಂದು ಪತ್ನಿ ಅಶ್ವಿನಿಗೆ ಓದಲು ಪ್ರೇರಣೆ ನೀಡಿದ್ದರು. ಪತಿಯ ನಿರೀಕ್ಷೆ ಹುಸಿಗೊಳಿಸದ ಅಶ್ವಿನಿ ಪದವಿ ನಂತರ ಕೆಎಎಸ್‌ ತೇರ್ಗಡೆಯಾಗಿದ್ದರು. ಪ್ರಸ್ತುತ ತುಮಕೂರಿನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ತಹಶೀಲ್ದಾರ್ ಹುದ್ದೆ ಪೂರ್ಣಪ್ರಮಾಣದಲ್ಲಿ ದೊರಕುವ ಮೊದಲೇ ಪತಿ ಶ್ರೀನಿವಾಸ್‌ ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಶ್ರೀನಿವಾಸ್‌ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

(ಮಾಹಿತಿ ಕೃಪೆ ಪ್ರಜಾವಾಣಿ )

ಬ್ಲ್ಯಾಕ್‌ ಫಂಗಸ್ ಗೆ ಕಾರಣಗಳು ಹಲವು

 

ಕೋವಿಡ್ ಸೋಂಕು ಹೆಚ್ಚುತ್ತಿದ್ದಂತೆ ಬ್ಲ್ಯಾಕ್‌ ಫ‌ಂಗಸ್‌ ಕೂಡ ಹೆಚ್ಚುತ್ತಿದೆ. ಇದು ಕೊರೊನಾಕ್ಕಿಂತ ಹೆಚ್ಚು ಅಪಾಯಕಾರಿ, ಮರಣಾಂತಿಕ. ಇದು ಬಂತೆಂದರೆ ಕಣ್ಣು, ಮೂಗು, ಮೂಗಿನ ಹತ್ತಿರದ ಮಾಂಸ, ಮೂಳೆಯನ್ನು ತೆಗೆಯಬೇಕಾದ ಅಪಾಯವಿದೆ.

ಮಧುಮೇಹ ಅಧಿಕ ಇದ್ದವರಿಗೆ ಬ್ಲ್ಯಾಕ್‌ ಫ‌ಂಗಸ್‌ (ಮ್ಯೂಕರ್‌ಮೈಕೋಸಿಸ್‌) ಬರುತ್ತದೆ. ಸ್ಟಿರಾಯ್ಡ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೊನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತದೆ. ಮಧುಮೇಹ ನಿಯಂತ್ರಣದಲ್ಲಿದ್ದ ವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕ ವಾಗುತ್ತದೆ. ಕೊರೊನಾ ನಿಯಂತ್ರಿಸಲು ಸ್ಟಿರಾಯ್ಡ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್‌ ಮೈಕೋ ಸಿಸ್‌ ಫ‌ಂಗಸ್‌ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫ‌ಂಗಸ್‌ ಆಶ್ರಯಿಸುತ್ತದೆ.

ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್‌ ಅಗತ್ಯವಾಗುತ್ತದೆ. ಆಕ್ಸಿಜನ್‌ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್‌ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್‌ ಕೂಡ ಬಳಕೆಯಾಗುತ್ತಿದೆ. ಕೈಗಾರಿಕಾ ಆಕ್ಸಿಜನ್‌ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪ ಮಿಶ್ರಣ ಇರುತ್ತದೆ. ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್‌ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲ ಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿ ಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು.

ಇತ್ತೀಚೆಗಿನ ಅಧ್ಯಯನವೊಂದರ ವರದಿಯ ಪ್ರಕಾರ ಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಳ್ಳಲು ಕೊರೊನಾ ಸೋಂಕಿನ ಪರೀಕ್ಷೆಯ ವೇಳೆ ಗಂಟಲ ದ್ರವ ಸಂಗ್ರಹಿ ಸಲು ಬಳಸಲಾಗುವ ನೈರ್ಮಲ್ಯ ಯುತ ವಾಗಿರದ ನಾಳಗಳೂ ಕಾರಣವಾಗುತ್ತಿ ರುವುದು ಸಾಬೀತಾಗಿದೆ. ಅಷ್ಟು ಮಾತ್ರ ವಲ್ಲದೆ ಬ್ಲ್ಯಾಕ್‌ ಫ‌ಂಗಸ್‌ನಿಂದ ಬಾಧಿತ ರಾಗಿರುವ ಶೇ.60ರಷ್ಟು ರೋಗಿಗಳಿಗೆ ಕೋವಿಡ್‌ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟಿರಾಯ್ಡ ಅಥವಾ ಆಮ್ಲಜನಕವನ್ನು ನೀಡ ಲಾಗಿರಲಿಲ್ಲ ಎಂಬುದೂ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ. ಇವೆಲ್ಲವೂ ಗಂಟಲದ್ರವ ಸಂಗ್ರಹಕ್ಕೆ ಬಳಸಲಾಗುವ ನಾಳಗಳು ಕೂಡ ಬ್ಲ್ಯಾಕ್‌ಫ‌ಂಗಸ್‌ ಹರ ಡಲು ಕಾರಣವಾಗುತ್ತಿದೆ ಎಂಬ ಬಲವಾದ ಸಂಶಯ ಮೂಡುವಂತೆ ಮಾಡಿದೆ.

ಅಸುರಕ್ಷಿತ ಮತ್ತು ಅನೈರ್ಮಲ್ಯ ದಿಂದ ಕೂಡಿದ ಪ್ರದೇಶಗಳಲ್ಲಿ ಈ ನಾಳಗಳನ್ನು ತಯಾರಿಸಿದರೆ ಅಪಾಯ ಕಟ್ಟಿಟ್ಟಬುತ್ತಿಯೇ ಸರಿ. ದೇಶಾದ್ಯಂತ ಕೋವಿಡ್‌ ಪಸರಿಸು ತ್ತಿರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಕೊರೊನಾ ಪರೀಕ್ಷೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ನಾಳಗಳ ತಯಾರಿಕೆ ವೇಳೆ ನೈರ್ಮಲ್ಯದತ್ತ ಗಮನ ಹರಿಸಬೇಕಿದೆಯಲ್ಲದೆ ಗಂಟಲ ದ್ರವ ಸಂಗ್ರಹದ ವೇಳೆ ನಾಳದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದು ಬಲುಮುಖ್ಯ. ಗಂಟಲ ದ್ರವ ಸಂಗ್ರಹಿಸುವವರಿಗೂ ಸೂಕ್ತ ತರಬೇತಿಯನ್ನು ನೀಡುವುದು ಅತ್ಯಗತ್ಯವಾಗಿದೆ. ನಾಳವನ್ನು ಮೂಗಿಗೆ ಎರಡು ಸೆಂಟಿಮೀಟರ್‌ ಹಾಕಿದರೆ ಸಾಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾಲ್ಕು ಸೆಂಟಿಮೀಟರ್‌ ಆಳದವರೆಗೆ ಹಾಕಿ ತಿರುಗಿಸಿ ದ್ರವ ಸಂಗ್ರಹಿಸಲಾಗುತ್ತಿದೆ. ಇವೆಲ್ಲವೂ ತೀರಾ ಅಪಾಯಕಾರಿ. ಇವೆಲ್ಲದರ ಬಗೆಗೆ ನಿಗಾ ವಹಿಸುವ ಜತೆಯಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಇತ್ತ ಸರಕಾರ ಮತ್ತು ವೈದ್ಯಕೀಯ ತಜ್ಞರು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.

(ಮಾಹಿತಿ ಕೃಪೆ ಉದಯವಾಣಿ )

Wednesday, May 26, 2021

ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ 'ಕೂ'ಗೆ 30 ಮಿಲಿಯನ್ ಡಾಲರ್ ಹೂಡಿಕೆ!

 

ಬೆಂಗಳೂರು: ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ ಕೂ'ಸಾಮಾಜಿಕ ಜಾಲತಾಣದ ಆಪ್ ಗೆ ಹೂಡಿಕೆ ಹರಿದುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೂ'ಗೆ 30 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಹರಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಸೀರೀಸ್ ಸಿ ರೌಂಡ್ ನಲ್ಲಿ ಅಮೆರಿಕದ ಹೂಡಿಕೆ ಸಂಸ್ಥೆ ಟೈಗರ್ ಗ್ಲೋಬಲ್ ಈಗಿರುವ ಹೂಡಿಕೆ ಸಂಸ್ಥೆಗಳಾದ ಆಕ್ಸೆಲ್ ಪಾರ್ಟ್ನರ್ಸ್, ಕಲಾರಿ ಕ್ಯಾಪಿಟಲ್, ಬ್ಲೂಮ್ ವೆಂಚರ್ಸ್ ಹಾಗೂ ಡ್ರೀಮ್ ಇನ್ಕ್ಯುಬೇಟರ್ ಗಳೊಂದಿಗೆ ಹೂಡಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು ಎಂದು ಸಂಸ್ಥೆ ಮಾಹಿತಿ ನೀಡಿದೆ.

ಈ ಸುತ್ತಿನಲ್ಲಿ ಐಐಎಫ್‌ಎಲ್ ಹಾಗೂ ಮಿರೀ ಅಸೆಟ್ಸ್ ಹೊಸದಾಗಿ ಹೂಡಿಕೆ ಮಾಡಿದ್ದು, ಒಟ್ಟು 30 ಮಿಲಿಯನ್ ಡಾಲರ್ ಹೂಡಿಕೆ ಹರಿದುಬಂದಿದೆ ಎಂದು ಹೇಳಿದೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಕೂ'ಆಪ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಬುಕ್ ಮೈ ಶೋ ಸ್ಥಾಪಕ ಆಶೀಶ್ ಹೇಮರಂಜನಿ, ಉಡಾನ್ ನ ಸಹ ಸಂಸ್ಥಾಪಕ ಸುಜೀತ್ ಕುಮಾರ್, ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, ಝಿರೋದಾ ಸ್ಥಾಪಕ ನಿಖಿಲ್ ಕಾಮತ್ ಚೀನಾದ ಶುನ್ವೈ ಕ್ಯಾಪಿಟಲ್ ನ ಶೇ.9 ರಷ್ಟು ಪಾಲನ್ನು ಹೂಡಿಕೆ ಮೂಲಕ ಖರೀದಿಸಿದ್ದಾರೆ.

"ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕ ಮಟ್ಟದ ಸಾಮಾಜಿಕ ಜಾಲತಾಣವಾಗಿ ಬೆಳೆಯುವುದಕ್ಕೆ ತೀವ್ರವಾದ ಯೋಜನೆಗಳನ್ನು ಹೊಂದಿದೆ ಎಂದು ಕೂ' ಸಂಸ್ಥೆ ತಿಳಿಸಿದ್ದು ಈ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಟೈಗರ್ ಗ್ಲೋಬಲ್ ಸಂಸ್ಥೆ ಸರಿಯಾದ ಪಾಲುದಾರ ಸಂಸ್ಥೆ ಎಂದು ಕೂ'ಆಪ್ ನ ಸಹ ಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡ ಪ್ರಭ )

ವಾಹನ ಸವಾರರಿಗೆ ಬಿಗ್ ಶಾಕ್ : 100 ರೂ. ಗಡಿ ಸಮೀಪ ಪೆಟ್ರೋಲ್ ಬೆಲೆ!

 

ನವದೆಹಲಿ : ತೈಲ ಮಾರಾಟ ಕಂಪನಿಗಳು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಕೆಲವು ದಿನಗಳಿಂದ ಇಂಧನ ಬೆಲೆಗಳು ಅಲ್ಲಲ್ಲಿ ಏರಿಕೆಗೆ ಸಾಕ್ಷಿಯಾಗಿವೆ.

ಇಂಧನ ದರಗಳನ್ನು ಮತ್ತೆ ಹೆಚ್ಚಿಸಿದ ನಂತರ ಮಂಗಳವಾರ ಮುಂಬೈನಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳ ಗಡಿಯತ್ತ ಏರಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 23 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ 25 ಪೈಸೆ ಹೆಚ್ಚಿಸಲಾಗಿದೆ. ಈ ತಿಂಗಳು 13ನೇ ಏರಿಕೆಯು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ದೇಶಾದ್ಯಂತ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 93.44 ರೂ.ಗೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 84.32 ರೂ.ಗೆ ಏರಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 99.71 ರೂ.ಗೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 91.57 ರೂ.ಗೆ ಏರಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ದರಗಳು 100 ರೂ.ಗಳ ಗಡಿ ಸಮೀಪಿಸಿವೆ.

(ಮಾಹಿತಿ ಕೃಪೆ Kannada News Now )

Health Tips: ಶೀತ, ಗಂಟಲು ಕಿರಿಕಿರಿ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ನೋಡಿ

 

ಕೊರೊನಾ ಸೋಂಕಿನ ಸಂದರ್ಭದಲ್ಲಿ ಸಾಮಾನ್ಯ ಶೀತ, ಸೀನು ಬರುವುದು, ಗಂಟಲು ಕಿರಿಕಿರಿ ಸಮಸ್ಯೆಗಳು ಕೂಡ ಬಹಳ ಕಾಡಬಲ್ಲದು. ಭಯ, ಆತಂಕ ಸೃಷ್ಟಿಮಾಡಬಹುದು. ಕೊರೊನಾ ಸೋಂಕಿನ ಲಕ್ಷಣಗಳಿಲ್ಲದೆ ಅಥವಾ ಕೊರೊನಾ ಅಲ್ಲ ಎಂದು ವರದಿ ಬಂದ ನಂತರವೂ ಸಣ್ಣ ಪುಟ್ಟ ಶೀತ, ಗಂಟಲು ಕೆರೆತ ನಮ್ಮನ್ನು ಚಿಂತೆಗೀಡುಮಾಡಬಹುದು. ಅಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ನಾವು ಆತಂಕ ಪಡಬೇಕಾಗಿಲ್ಲ. ಮನೆಮದ್ದುಗಳ ಮೂಲಕವೇ ಕೆಲವೇ ದಿನಗಳಲ್ಲಿ ಸಮಸ್ಯೆಯಿಂದ ಪಾರಾಗಬಹುದು.

ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೆ ಶುರುವಾಗುವ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಗಂಟಲು ಕಿರಿಕಿರಿಯಂತಹ ಸಣ್ಣ ತೊಂದರೆಯಿಂದ ಆರಂಭವಾಗುತ್ತದೆ. ಇದು ಸಣ್ಣ ಸಮಸ್ಯೆಯೇ ಆದರೂ ಹಲವರಿಗೆ ಬಹಳ ಕಷ್ಟ ಎಂದು ಅನಿಸಬಹುದು. ಇಂತಹ ತೊಂದರೆಗಳಿಗೆ ಮನೆಮದ್ದು ವಿವರ ಇಲ್ಲಿದೆ.

ಬಿಸಿನೀರ ಪಾನೀಯ ಕುಡಿಯಿರಿ
ಶೀತ ಅಥವಾ ಗಂಟಲು ಕಿರಿಕಿರಿ ಉಂಟಾದರೆ ಸಾದಾ ಬಿಸಿನೀರು ಕುಡಿಯುವುದು ಕೂಡ ಉತ್ತಮವೇ ಆಗಿದೆ.

ಕುದಿಸಿದ ಹದವಾದ ಬೆಚ್ಚಗಿನ ನೀರನ್ನು ಕಾಫಿ ಸೇವಿಸಿದಂತೆ ಸ್ವಲ್ಪಸ್ವಲ್ಪವೇ ಸೇವಿಸಬಹುದು. ಅಥವಾ ಏಲಕ್ಕಿ, ಲವಂಗ, ಲಿಂಬು ರಸ, ದಾಲ್ಚಿನ್ನಿ ಸೇರಿಸಿ ಕುದಿಸಿದ ನೀರಿಗೆ ಹಾಕಿ, ಸ್ವಲ್ಪ ಹೊತ್ತು ಹಾಗೇ ಬಿಟ್ಟು ನಂತರ ಬಿಸಿಬಿಸಿಯಾಗಿ ಕುಡಿಯಬಹುದು.

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ
ಇದು ಕೂಡ ಬಹಳ ಪರಿಣಾಮಕಾರಿ ಮದ್ದು. ಗಂಟಲು ಕಿರಿಕಿರಿ ಅಥವಾ ಗಂಟಲು ನೋವಿನಂತ ಸಮಸ್ಯೆಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಸಮಸ್ಯೆಯು ಬಹು ಬೇಗನೇ ಶಮನವಗುತ್ತದೆ. ದಿನಕ್ಕೆ ಒಂದು ಬಾರಿ ಅಂದರೆ, ರಾತ್ರಿ ಮಲಗುವುದಕ್ಕೆ ಮುಂಚೆ ಅಥವಾ ಅಗತ್ಯವಿದ್ದರೆ ಬೆಳಗ್ಗೆಯೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು. ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಉಪ್ಪನ್ನು ಬೆರೆಸಿ, ಗಂಟಲು ಮತ್ತು ಬಾಯಿ ಮುಕ್ಕಳಿಸಬೇಕು. ನಂತರ ಅದನ್ನು ಸೇವಿಸುವುದು ಒಳ್ಳೆಯದಲ್ಲ. ಉಗುಳಬೇಕು.

ಜೇನು ಅಥವಾ ಕಲ್ಲುಸಕ್ಕರೆ ಸೇವಿಸಿ
ಗಂಟಲು ಸಮಸ್ಯೆಗೆ ಜೇನು ಸವಿಯುವುದು ಅಥವಾ ಕಲ್ಲುಸಕ್ಕರೆ ತಿನ್ನುವುದು ಉಪಕಾರಿ. ದಿನಕ್ಕೆ ಎರಡು ಬಾರಿ ಒಂದೊಂದು ಚಮಚ ಜೇನು ಸವಿಯಬಹುದು. ಕಲ್ಲುಸಕ್ಕರೆಯನ್ನು ಬಾಯಲ್ಲಿಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಗಂಟಲು ಕೆರೆತದಿಂದ ಕೆಮ್ಮು ಬರುವುದು ಕಡಿಮೆ ಆಗುತ್ತದೆ.

ಇವೆಲ್ಲಾ ಮನೆಯಲ್ಲೇ ಮಾಡಬಹುದಾದ ಸರಳ ಮತ್ತು ಸಾಧ್ಯವಿರುವ ಮದ್ದಾಗಿದೆ. ಸಣ್ಣಪುಟ್ಟ ಶೀತ, ಗಂಟಲು ಕೆರೆತಕ್ಕೆ ಇವನ್ನು ಬಳಸಬಹುದು. ಹಾಗೆಂದು ಸಮಸ್ಯೆ ಬಿಗಡಾಯಿಸಿದಾಗಲೂ ಮನೆಯಲ್ಲೇ ಮದ್ದು ಪ್ರಯೋಗಿಸುತ್ತಾ ಕೂರಲು ಇದು ಸೂಕ್ತ ಸಮಯವಲ್ಲ. ಕೊರೊನಾದ ಲಕ್ಷಣಗಳು ಕೂಡ ಶೀತ, ಜ್ವರದಂತಹ ಸಮಸ್ಯೆಗಳೇ ಆಗಿರುವುದರಿಂದ ಲಕ್ಷಣಗಳು ಗಂಭೀರ ಹಂತಕ್ಕೆ ಹೋಗದಂತೆ ನೋಡಿಕೊಳ್ಳುವುದು ಅವಶ್ಯಕ. ಕೊರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್ ಎಂದಾದರೆ ಅಥವಾ ಸಾಮಾನ್ಯ ಶೀತ ಎಂದು ಖಚಿತವಿದ್ದರೆ ಅದಕ್ಕೆ ಈ ಪರಿಹಾರೋಪಾಯಗಳನ್ನು ಬಳಸಬಹುದು. ಕೊರೊನಾ ಎಂದಾದರೂ ಸೋಂಕಿಗೆ ಹೆದರಬೇಕಾದ ಅಗತ್ಯವಿಲ್ಲ. ಧೈರ್ಯದಿಂದ, ಜವಾಬ್ದಾರಿಯಿಂದ ಚಿಕಿತ್ಸೆಗೆ ಒಳಗಾದರೆ ಸೋಂಕು ಗೆಲ್ಲಬಹುದು.

(ಮಾಹಿತಿ ಕೃಪೆ ಕನ್ನಡTv9)


ಇಂದಿನಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ! ಮುಟ್ಟಿದ್ದೆಲ್ಲ ಚಿನ್ನ!

ಈ ಹುಣ್ಣಿಮೆಯ ಬಳಿಕ ಈ ರಾಶಿಗಳು ಗಜಕೇಸರಿ ಯೋಗವನ್ನು ಪಡೆಯುತ್ತವೆ. ಇದರಿಂದ ಕೆಲಸ ಕಾರ್ಯಗಳಲ್ಲಿನ ಜಯ ಮತ್ತು ಜೀವನದಲ್ಲಿ ಗುರಿ ತಲುಪುವ ಸಾಮರ್ಥ್ಯ ತುಂಬುತ್ತದೆ.

ಸೂರ್ಯ, ಭೂಮಿ ಮತ್ತು ಚಂದ್ರ ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಇದ್ದಾಗ ಮಾತ್ರ ಗ್ರಹಣಗಳು ಉಂಟಾಗುತ್ತವೆ. ಅಮಾವಾಸ್ಯೆಯ ಬಳಿ ಚಂದ್ರನು ಸೂರ್ಯ ಮತ್ತು ಭೂಮಿಗಳ ನಡುವೆ ಇದ್ದಾಗ ಸೂರ್ಯ ಗ್ರಹಣಗಳು ಉಂಟಾಗಬಹುದು. ಹೋಲಿಕೆಯಲ್ಲಿ ಚಂದ್ರ ಗ್ರಹಣಗಳು ಹುಣ್ಣಿಮೆಯ ಬಳಿ, ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಇರುವಾಗ ಚಂದ್ರ ಗ್ರಹಣಗಳು ಉಂಟಾಗುತ್ತವೆ.

ಚಂದ್ರನ ಕಕ್ಷೆಯು ಭೂಮಿಯ ಕಕ್ಷೆಯ ಸಮತಳಕ್ಕೆ ಸುಮಾರು 5 ಓರೆಯಲ್ಲಿ ಇರುವುದರಿಂದ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಗ್ರಹಣಗಳು ಉಂಟಾಗುವುದಿಲ್ಲ. ಗ್ರಹಣವಾಗಲು ಚಂದ್ರನು ಈ ಎರಡು ಕಕ್ಷಾ ಸಮತಳಗಳನ್ನು ಛೇದಿಸುವ ಬಿಂದುಗಳ ಬಳಿ ಇರಬೇಕು.

ಇಂತಹ ಗ್ರಹಣಗಳ ಕಾಲದ ನಂತರ ಮನುಷ್ಯರ ರಾಶಿಯ ಮೇಲೆ ಅನೇಕ ಬದಲಾವಣೆಗಳು ಕೂಡ ಆಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ.

ಜನಮನ್ನಣೆಗಳಿಸಿರುವ 22 ವರ್ಷಗಳಿಂದ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಖಂಡಿತ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ತೇಜಸ್ವಿ ನಾರಾಯಣ್ ಭಟ್ Call/WhatsApp Ph:- 9945665025

ಮಾರ್ಚ್ 26 2021ರ ನಡೆಯುವ ಚಂದ್ರಗ್ರಹಣದ ನಂತರ ಆರು ರಾಶಿಯವರು ಗಜಕೇಸರಿ ಯೋಗವನ್ನು ಪಡೆಯುತ್ತಾರೆ ಎಂದು ಜ್ಯೋತಿಷ್ಯವು ಹೇಳುತ್ತದೆ. ಈ ದಿನವು ವ್ಯಾಪಾರಸ್ಥರಿಗೆ ಅದ್ಭುತವಾದಂತಹ ದಿನವಾಗಿರುತ್ತದೆ.

ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ. ಉದ್ಯೋಗದಲ್ಲಿರುವ ಜನರಿಗೆ ಬೆಳವಣಿಗೆ ಅವಕಾಶವು ಕೂಡ ಇರುತ್ತದೆ. ವಿಶೇಷವಾಗಿ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅವರ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶವು ದೊರೆಯುತ್ತದೆ. ಹಣ ದೃಷ್ಟಿಯಿಂದ ಚಂದ್ರ ಗ್ರಹಣದ ಈದಿನ ಮಿಶ್ರ ಫಲಿತಾಂಶವನ್ನು ನೀಡುತ್ತದೆ.

ವೆಚ್ಚಗಳು ಕಡಿಮೆಯಾಗಿರುತ್ತದೆ ಆದರೆ ಸಿಗಬೇಕಾದ ಹಣವು ಸಿಗದೆ ಚಿಂತೆ ಮಾಡುತ್ತಾರೆ. ಉದ್ಯೋಗಸ್ಥರು ಅತ್ಯುತ್ತಮ ಅವಕಾಶವನ್ನು ಪಡೆಯಬಹುದಾಗಿದೆ. ವ್ಯಾಪಾರಿಗಳು ದೊಡ್ಡ ಹೂಡಿಕೆಯನ್ನು ಮಾಡುವ ಪೂರ್ವದಲ್ಲಿ ಸರಿಯಾದ ಸಲಹೆಯನ್ನು ತೆಗೆದುಕೊಂಡು ಮಾಡುವುದು ಉತ್ತಮವಾಗಿರುತ್ತದೆ. ಮನೆಯ ವಾತಾವರಣವು ಶಾಂತವಾಗಿರುತ್ತದೆ. ಪ್ರೀತಿಪಾತ್ರರಾದಂತವರ ಬೆಂಬಲವನ್ನು ಪಡೆಯುತ್ತಾರೆ. ದಂಪತಿಗಳ ಮಧ್ಯೆ ವೈಮನಸ್ಸು ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು ಉತ್ತಮ ದಿನವಾಗಿದೆ.

ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಉಳಿತಾಯದ ಕಡೆಗೆ ಹೆಚ್ಚು ಮನವನ್ನು ಹರಿಸಬೇಕಾಗುತ್ತದೆ. ಇಂತಹ ಎಲ್ಲ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ. ಈ ರಾಶಿಯವರು ಮಾರ್ಚ್ 26 2021 ರ ಚಂದ್ರ ಗ್ರಹಣದ ನಂತರ ಇಂತಹ ಅನೇಕ ಲಾಭಗಳನ್ನು ಪಡೆದುಕೊಳ್ಳುತ್ತಾರೆ ಎಂದು ಈ ಹುಣ್ಣಿಮೆಯ ವಿಶೇಷ ಮೂಲಗಳು ಹೇಳುತ್ತದೆ.

ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ತೇಜಸ್ವಿ ನಾರಾಯಣ್ ಭಟ್ Call/WhatsApp Ph:- 9945665025

(ಮಾಹಿತಿ ಕನ್ನಡ ವಾಹಿನಿ)

 

Tuesday, May 25, 2021

ಆಮ್ಲಜನಕ ಪ್ರಮಾಣ ಅಳೆಯಲು ಆಕ್ಸಿಮೀಟರ್ ಸಿಗುತ್ತಿಲ್ಲವೇ? ಸ್ಮಾರ್ಟ್ ಫೋನ್ ಇದೆಯಲ್ಲ!

ಕೋವಿಡ್-19 ಸಂಕಷ್ಟದ ಈ ಕಾಲದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಉಂಟಾದ ಸಾವುನೋವುಗಳ ಬಗ್ಗೆ ಕೇಳಿದ್ದೇವೆ. ಸದಾ ಕಾಲವೂ ನಮ್ಮ ರಕ್ತದ ಆಮ್ಲಜನಕವನ್ನು ಪರಿಶೀಲಿಸುತ್ತಿರಬೇಕು ಎಂಬ ವೈದ್ಯರ ಸಲಹೆಯಿಂದಾಗಿ, ಆಕ್ಸಿಮೀಟರ್ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆಯಾಗಿದೆ. ಇದೇ ನೆಪವನ್ನಾಗಿಸಿ ಹೇಳಹೆಸರಿಲ್ಲದ ಕಂಪನಿಗಳೆಲ್ಲವೂ ಆಕ್ಸಿಮೀಟರ್ ಹೆಸರಿನಲ್ಲಿ ಕೆಲವು ನಕಲಿ ಯಂತ್ರಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡಿವೆ. ಆಕ್ಸಿಮೀಟರ್ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ, ಚಿಕಿತ್ಸೆಗಾಗಿ ಮೊದಲೇ ಹೈರಾಣಾಗಿರುವ ಜನಸಾಮಾನ್ಯರೇನು ಮಾಡಬೇಕು? ಅದಕ್ಕೆ ಪರ್ಯಾಯವಾಗಿ ಮೊಬೈಲ್ ಫೋನ್‌ನಲ್ಲೇ ನಮ್ಮ ದೇಹದ ರಕ್ತದ ಆಮ್ಲಜನಕದ ಪ್ರಮಾಣವೆಷ್ಟೆಂಬುದನ್ನು ತಿಳಿದುಕೊಳ್ಳಬಹುದು. ಅದೂ ಉಚಿತವಾಗಿ.

ಈ ಆಯಪ್ ವಿಶೇಷತೆ ಏನು?
ಕೇರ್‌ಪ್ಲಿಕ್ಸ್ ವೈಟಲ್ಸ್ (CarePlix Vitals) ಹೆಸರಿನ ಈ ಆಯಪ್ ಅನ್ನು ಅಭಿವೃದ್ದಿಪಡಿಸಿದ್ದು ಕೇರ್‌ಪ್ಲಿಕ್ಸ್ ಹೆಲ್ತ್‌ಕೇರ್‌ನ ಅಮೆರಿಕ ಮತ್ತು ಕೇರ್‌ನೌ ಹೆಲ್ತ್‌ಕೇರ್‌ನ ಕೋಲ್ಕತಾ ಘಟಕ. ಈ ಆಯಪ್ ಮೂಲಕ ನಮ್ಮ ದೇಹದಲ್ಲಿರುವ ರಕ್ತದ ಆಮ್ಲಜನಕ ಪ್ರಮಾಣ, ಹೃದಯ ಬಡಿತದ ವೇಗ ಮತ್ತು ಉಸಿರಾಟದ ವೇಗವನ್ನು ಅಳೆಯಬಹುದಾಗಿದೆ. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ ಇಂಟರ್‌ನೆಟ್ ಸಂಪರ್ಕವಿದ್ದರೆ ಸಾಕಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ಸ್ಮಾರ್ಟ್ ಫೋನ್‌ಗಳಲ್ಲಿರುವ ಕ್ಯಾಮೆರಾ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಫ್ಲ್ಯಾಶ್ ಲೈಟ್ ಬಳಸಿಕೊಂಡು ಈ ಆಯಪ್ ಕೆಲಸ ಮಾಡುತ್ತದೆ. ನಾವು ಮಾಡಬೇಕಾದುದಿಷ್ಟೇ. ಆಯಪ್ ತೆರೆದು, ಹೆಸರು, ಜನ್ಮದಿನಾಂಕ ಹಾಗೂ ಇಮೇಲ್ ವಿಳಾಸದೊಂದಿಗೆ ನೋಂದಣಿ ಮಾಡಿಕೊಂಡು, ಪಾಸ್‌ವರ್ಡ್ ಸೆಟ್ ಮಾಡಿಕೊಂಡರಾಯಿತು. ನಂತರ, ತೆರೆಯುವ ಸ್ಕ್ರೀನ್ ಮೇಲೆ, ನಾಲ್ಕು ಆಯ್ಕೆಗಳು ಗೋಚರಿಸುತ್ತವೆ. ವೈಟಲ್ಸ್ (ಜೀವಚೈತನ್ಯಗಳ) ರೆಕಾರ್ಡ್, ವೈಟಲ್ಸ್ ಚರಿತ್ರೆ, ವೈಟಲ್ಸ್ ಅನಲಿಟಿಕ್ಸ್ (ವಿಶ್ಲೇಷಣೆ) ಹಾಗೂ ಅಪ್‌ಗ್ರೇಡ್ ಮಾಡುವ ಆಯ್ಕೆ (ಇದನ್ನು ಕೋವಿಡ್-19 ಸಂಕಷ್ಟಗಳಿಂದಾಗಿ ಈಗ ಉಚಿತವಾಗಿಯೇ ಒದಗಿಸಲಾಗುತ್ತಿದೆ).

ಆಕ್ಸಿಮೀಟರ್ ಅಥವಾ ಸ್ಮಾರ್ಟ್ ವಾಚ್‌ಗಳಂತಹಾ ಸಾಧನಗಳು ಬಳಸುವ ಫೋಟೋಪ್ಲೆಥಿಸ್ಮೋಗ್ರಫಿ ಅಥವಾ ಪಿಪಿಜಿ ತಂತ್ರಜ್ಞಾನವನ್ನು ಈ ಆಯಪ್ ಬಳಸುತ್ತದೆ. ಕೇವಲ ವ್ಯತ್ಯಾಸವೆಂದರೆ, ಆ ಸಾಧನಗಳು ಇನ್‌ಫ್ರಾರೆಡ್ ಕಿರಣಗಳನ್ನು ಬಳಸಿ ರಕ್ತದ ಆಮ್ಲಜನಕ ಮುಂತಾದವುಗಳನ್ನು ಅಳೆದರೆ, ಆಯಪ್ ಬಳಸುವುದು ಫ್ಲ್ಯಾಶ್ ಬೆಳಕನ್ನು. ಬೆರಳಿನ ಮೂಲಕ ಹಾದುಹೋಗುವ ಬೆಳಕಿನ ತೀಕ್ಷ್ಣತೆ ಆಧಾರದಲ್ಲಿ ಈ ಅಳತೆಗಳು ದೊರೆಯುತ್ತವೆ. ಕ್ಯಾಮೆರಾ ಹಾಗೂ ಫ್ಲ್ಯಾಶ್ ಲೈಟಿನ ಮೇಲೆ ಕೈಬೆರಳು ಇರಿಸಿ, ಈ ಆಯಪ್‌ನಲ್ಲಿ 'ರೆಕಾರ್ಡ್ ವೈಟಲ್ಸ್' ಎಂಬ ಬಟನ್ ಒತ್ತಿದರಾಯಿತು. ಬೆರಳು ಸರಿಯಾಗಿ ಇರಿಸಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನೆರವಾಗುತ್ತದೆ. ಒಟ್ಟಿನಲ್ಲಿ 30-40 ಸೆಕೆಂಡುಗಳಲ್ಲಿ ಆಮ್ಲಜನಕ, ಹೃದಯಬಡಿತ, ಉಸಿರಾಟದ ಪ್ರಮಾಣವು ಅಲ್ಲೇ ಕಾಣಿಸಿಕೊಳ್ಳುತ್ತದೆ. ಹೆಚ್ಚು ನಿಖರವಾಗಿ ತಿಳಿದುಕೊಳ್ಳಲು, ಕುಳಿತುಕೊಂಡು, ನಿಂತುಕೊಂಡು, ನಡೆಯುವಾಗ, ಓಡುವಾಗ ಕೂಡ ಇದನ್ನು ಪರೀಕ್ಷಿಸಿಕೊಳ್ಳಬಹುದು.

ಇದರಿಂದ ಲಭ್ಯವಾಗುವ ಅಂಕಿ-ಅಂಶಗಳೆಲ್ಲವನ್ನೂ ಆಯಪ್ ದಾಖಲಿಸಿಕೊಂಡು, ಬಳಿಕ ಅದನ್ನು ವಿಶ್ಲೇಷಣೆ ಮಾಡಿ ವರದಿ ಒಪ್ಪಿಸುತ್ತದೆ.

ಮಿತಿಗಳು
ಕೆಲವು ಒಂದು ಅಥವಾ ಎರಡು ಕ್ಯಾಮೆರಾ ಲೆನ್ಸ್ ಇರುವ ಫೋನ್‌ಗಳಲ್ಲಿ ಸುಲಭವಾಗಿ ಬೆರಳು ಇರಿಸಬಹುದು. ಆದರೆ, ಈಗಿನ ಹೊಸ ಮೊಬೈಲ್‌ಗಳಲ್ಲಿರುವ ತ್ರಿವಳಿ ಅಥವಾ ನಾಲ್ಕು ಲೆನ್ಸ್‌ಗಳಿರುವ ಕ್ಯಾಮೆರಾ ಮತ್ತು ಫ್ಲ್ಯಾಶ್ ಮೇಲೆ ಬೆರಳು ಇರಿಸುವುದು ಕಷ್ಟವಾದರೂ, ಮೊದಲ (ಪ್ರಧಾನ) ಕ್ಯಾಮೆರಾ ಲೆನ್ಸ್ ಕವರ್ ಆದರೆ ಸಾಕಾಗುತ್ತದೆ. ಇನ್ನು ಕೆಲವು ಮೊಬೈಲ್‌ನಲ್ಲಿ ಫ್ಲ್ಯಾಶ್ ಬೆಳಕಿನ ಪ್ರಖರತೆಯಿಂದ ಉಂಟಾಗುವ ಬಿಸಿ ಎಷ್ಟಿತ್ತೆಂದರೆ, ಐದೇ ಸೆಕೆಂಡುಗಳಲ್ಲಿ ಬೆರಳನ್ನು ಹಿಂತೆಗೆದುಕೊಳ್ಳಬೇಕಾಗಿ ಬಂತು.

ಎಚ್ಚರಿಕೆ ಬೇಕು
ಈ ಆಯಪ್ ಜೀವಚೈತನ್ಯಗಳ ಒಂದು ಅಂದಾಜು ನೋಟವನ್ನಷ್ಟೇ ನೀಡುತ್ತದೆ (ಶೇ.95ರಷ್ಟು ನಿಖರವಾಗಿರುತ್ತದೆ) ಮತ್ತು ಹೆಚ್ಚೇನೂ ಸಮಸ್ಯೆಯಿಲ್ಲದ ರೋಗಿಗಳಷ್ಟೇ ತಪಾಸಣೆಗಾಗಿ ಬಳಸಿಕೊಳ್ಳಬಹುದು. ಆಕ್ಸಿಮೀಟರ್ ರೀಡಿಂಗ್‌ಗೂ ಈ ಆಯಪ್ ಮೂಲಕ ದೊರೆತ ಫಲಿತಾಂಶಕ್ಕೂ ಹೆಚ್ಚೇನೂ ವ್ಯತ್ಯಾಸ ಕಂಡಿಲ್ಲ. ಆದರೆ, ತೀವ್ರತಮ ಕಾಯಿಲೆಯಿದ್ದವರು ಇದನ್ನು ಅವಲಂಬಿಸಬಾರದು. ಯಾವುದಕ್ಕೂ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆಯಪಲ್ ಐಫೋನ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದ್ದ ಈ ಆಯಪ್, ಈಗ ಆಂಡ್ರಾಯ್ಡ್ ಫೋನ್‌ಗಳಿಗೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆತಿದ್ದು, ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ.

ಎಚ್ಚರಿಕೆ

ಆಕ್ಸಿಮೀಟರ್ ಆಯಪ್ ಹೆಸರುಗಳಲ್ಲಿಯೂ ಸೈಬರ್ ವಂಚಕರು ತಮ್ಮ ಕೈಚಳಕ ಮೆರೆಯಲಾರಂಭಿಸಿದ್ದಾರೆ. ಇದರಲ್ಲಿ ಕ್ಯಾಮೆರಾ ಹಾಗೂ ಫ್ಲ್ಯಾಶ್ ಮೂಲಕವಾಗಿ ನಮ್ಮ ಬಯೋಮೆಟ್ರಿಕ್ ಮಾಹಿತಿಯೂ ಒಳಗೊಂಡಿರುವುದರಿಂದ, ವಂಚಕರು ನಕಲಿ ಆಯಪ್‌ಗಳ ಮೂಲಕ ಖಾಸಗಿ ಮಾಹಿತಿ ಸಂಗ್ರಹಿಸುವ ಅಪಾಯವಿದೆ. ಹೀಗಾಗಿ, ಬಳಕೆಯಲ್ಲಿ ಎಚ್ಚರಿಕೆ ಅತ್ಯಗತ್ಯ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬಯೋಮೆಟ್ರಿಕ್ ಮಾಹಿತಿಯ ಗೋಪ್ಯತೆ ಬಗ್ಗೆ ಎಚ್ಚರ ವಹಿಸಬೇಕಿದ್ದರೆ, ಈ ರೀತಿಯ ಆಯಪ್‌ಗಳನ್ನು ಬಳಸಬಾರದು ಎಂಬುದು ಅವರ ಸಲಹೆ.

(ಮಾಹಿತಿ ಕೃಪೆ ಪ್ರಜಾವಾಣಿ)


ಕಮಲಾಪುರದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ

 

ಹೊಸಪೇಟೆ ಮೇ 24:ಹೊಲ ಗದ್ದೆಗಳಿಗೆ ಹೋಗೋ ರೈತರಿಗೆ ವಿನಾ ಕಾರಣ ಕಿರಿ, ಕಿರಿ ಮಾಡ್ತಿರಿ ಎಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ರೈತರು,ಸಾರ್ವಜನಿಕರ ಪೂಲೀಸರ ಮದ್ಯ ವಾಗ್ವಾದ ವಾದ ಘಟನೆ ಜರುಗಿದೆ. 

ಬೆಳಗ್ಗೆ ಪೂಲೀಸರು ಕಾರ್ಯಾಚರಣೆ ಆರಂಭವಾಗುತ್ತದ್ದಂತೆ ಈ ವಾಗ್ವಾದದ ಘಟನೆ ನಡೆದಿದೆ. ಹೊಲ ಗದ್ದೆಗೆ ಹೋಗೋ ರೈತರನ್ನು ಪೊಲೀಸ್ ಠಾಣೆಗೆ ಕರ್ಕೊಂಡು ಹೋಗಿ ಕೂಡಿಸ್ತಿರಿ ರೈತರ ಬೈಕ್ ಗಳನ್ನ ಸೀಜ್ ಮಾಡ್ತಿರಿ ಎಂದು ಕಮಲಾಪುರ PSI ಅರುಣ್ ಕುಮಾರ್ ಅವರೊಂದಿಗೆ ಸಾರ್ವಜನಿಕರು ವಾಗ್ವಾದಕ್ಕಿಳಿದರು. 

ಕೆಟ್ಟ ಶಬ್ಧಗಳಲ್ಲಿ ಬಯ್ಯೋದು, ಲಾಠಿ ಬೀಸೋದನ್ನ ನಿಲ್ಲಿಸಿ, ಮುನೆಮುಂದೆ ಕುಳಿತವ್ರನ್ನು ಸ್ಟೇಷನ್ ಕರೆದುಕೊಂಡು ಹೋಗೋದು ಯಾವ ನ್ಯಾಯ ಎಂದು ಪೋಲೀಸರೂಂದಿಗೆ ಮಾತಿನ ಚಕಮಕಿ ಆದಪರಿಣಾಮ ಮಾತಿಗೆ ಮಾತು ಬೆಳದ ಪರಿಣಾಮ ವಾಗ್ವಾದ, ಮಾತಿನ ಚಕಮಕಿ ನಡೆಯಿತು. 

ಇಂದು ಅಗತ್ಯ ವಸ್ತುಗಳ ಖರೀದಿಗೆ 12 ಗಂಟೆಯವರೆಗೆ ಅವಕಾಶ ಇದ್ರೂ ಬೆಳಗ್ಗೆಯಿಂದಲೇ ಬೈಕ್ ಏಕೆ ಸೀಜ್ ಮಾಡುತ್ತೀದ್ದಿರಿ, ವಿನಾ ಕಾರಣ ಕಿರಿ, ಕಿರಿ ನೀಡುತ್ತಿರಿ ಎಂದು ಆರೋಪಿಸಿದ ಜನರ ಜೊತೆಗೆ ಜನಪ್ರತಿನಿಧಿಗಳು ಸಹ ವಾಗ್ವಾದಕ್ಕಿಳಿದರು.

(ಮಾಹಿತಿ ಕೃಪೆ ಈ ಸಂಜೆ)