WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, May 28, 2021

ಕೋವಿಡ್ ಶಮನಕ್ಕೆ ಔಷಧ, ಶುದ್ಧ ಗಾಳಿ, ಪ್ರಾರ್ಥನೆ ಆಗತ್ಯ: ಮನೋವೈದ್ಯ ಸಲಹೆ


                           

ಹೊಸಪೇಟೆ (ವಿಜಯನಗರ): 'ಕೋವಿಡ್‌ ಸಾಂಕ್ರಾಮಿಕ ರೋಗ ಶಮನಕ್ಕೆ ದವಾ-ಹವಾ-ದುವಾ (ಔಷಧ-ಶುದ್ಧ ಗಾಳಿ-ಪ್ರಾರ್ಥನೆ) ಅಗತ್ಯವಿದೆ' ಎಂದು ಹೆಸರಾಂತ ಮನೋವೈದ್ಯ ಡಾ. ಅಜಯಕುಮಾರ್‌ ತಾಂಡೂರು ಹೇಳಿದರು.

ಇಷ್ಟಲಿಂಗ ಸಂಶೋಧನಾ ಕೇಂದ್ರ ಮತ್ತು ಸಖಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕಿನ ಧರ್ಮದಗುಡ್ಡದಲ್ಲಿ ಗ್ರಾಮಸ್ಥರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಔಷಧಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

'ಉತ್ತಮ ಔಷಧಿ, ಶುದ್ಧ ಗಾಳಿ ಮತ್ತು ಶ್ರದ್ಧೆಯಿಂದ ಮಾಡುವ ಪ್ರಾರ್ಥನೆ ಇಲ್ಲದೇ ಯಾವುದೇ ರೋಗ ಗುಣವಾಗಲು ಸಾಧ್ಯವಿಲ್ಲ, ಹಾಗಾಗೀ ಎಲ್ಲರೂ ಈ ಮೂರು ಕ್ರಮಗಳನ್ನು ಅನುಸರಿಸಬೇಕು' ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯ್ತಿ ಉಪನಿರ್ದೇಶಕ ಉಮೇಶ್ ಮಾತನಾಡಿ, 'ಯುವತಿಯರು ಮತ್ತು ಮಹಿಳೆಯರ ಋತುಚಕ್ರ, ಗ್ರಾಮ ನೈರ್ಮಲ್ಯೀಕರಣದ ಬಗ್ಗೆ ಪುರುಷರಿಗೆ ಸಂಪೂರ್ಣ ಮಾಹಿತಿ ಇರಬೇಕು. ಋತುಚಕ್ರದ ಸಮಯದಲ್ಲಿ ಮನೆಯ ಗಂಡಸರು ಮಹಿಳೆಯರ ಬೇಕು ಬೇಡಗಳಿಗೆ ನೆರವಾಗಬೇಕು. ಪ್ರತಿಯೊಬ್ಬರು ಹೋಮಿಯೋಪತಿ ಔಷಧ ವಿಶ್ವಾಸದಿಂದ ಸೇವಿಸಿದರೆ ಕೋವಿಡ್-19 ಮಹಾಮಾರಿಯನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಿದೆ' ಎಂದರು.

ಕಳೆದ ವರ್ಷ ಕೊರೊನಾ ಸೈನಿಕರಿಗೆ ಔಷಧ ವಿತರಿಸಿದ್ದ ಇಷ್ಟಲಿಂಗ ಸಂಶೋಧನಾ ಕೇಂದ್ರ ಈ ಸಲ ಸಖಿ ಸಂಸ್ಥೆಯೊಂದಿಗೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪತಿ ಔಷಧ ವಿತರಿಸುತ್ತಿದೆ. ಈಗಾಗಲೇ 18 ಸಾವಿರ ಜನರಿಗೆ ಔಷಧ ವಿತರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಡಾ.ಸತ್ಯಂ ಸಿಂಗ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ, ಸಖಿ ಸಂಸ್ಥೆಯ ಭಾಗ್ಯಲಕ್ಷ್ಮಿ, ಇಷ್ಟಲಿಂಗ ಸಂಶೋಧನಾ ಕೇಂದ್ರದ ಮಾವಿನಹಳ್ಳಿ ಬಸವರಾಜ, ಪ್ರಾಧ್ಯಾಪಕ ಟಿ.ಎಚ್‌.ಬಸವರಾಜ, ಓಂಪ್ರಕಾಶ್, ದೇವರಮನಿ ಶ್ರೀನಿವಾಸ, ಮುಖಂಡರಾದ ಚಂದ್ರಶೇಖರ್, ಕಳಕಪ್ಪ, ವಡೆ ಬಸವರಾಜ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ